AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ನಂಬರ್ ಸೇವ್ ಮಾಡದೆ ವಾಟ್ಸ್ಆ್ಯಪ್​ನಲ್ಲಿ ಕಾಲ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್

WhatsApp Tips: ಮೊಬೈಲ್ ಫೋನ್‌ನಲ್ಲಿ ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಕರೆ ಮಾಡುವಂತೆಯೇ, ಈಗ ನೀವು ನಂಬರ್ ಅನ್ನು ಸೇವ್ ಮಾಡದೆ ನೇರವಾಗಿ ವಾಟ್ಸ್ಆ್ಯಪ್ ನಿಂದ ಕರೆ ಮಾಡಬಹುದು. ಈ ಹಿಂದೆ ವಾಟ್ಸ್ಆ್ಯಪ್ನಲ್ಲಿ ನಂಬರ್ ಸೇವ್ ಮಾಡದೆ ಕಾಲ್ಗಳನ್ನು ಮಾಡುವಲ್ಲಿ ತೊಂದರೆಗಳಿದ್ದವು. ಈಗ ವಾಟ್ಸ್ಆ್ಯಪ್ ಈ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ.

Tech Tips: ನಂಬರ್ ಸೇವ್ ಮಾಡದೆ ವಾಟ್ಸ್ಆ್ಯಪ್​ನಲ್ಲಿ ಕಾಲ್ ಮಾಡುವುದು ಹೇಗೆ?: ಇಲ್ಲಿದೆ ನೋಡಿ ಟ್ರಿಕ್
Whatsapp Call Dial
ಮಾಲಾಶ್ರೀ ಅಂಚನ್​
| Edited By: |

Updated on: Mar 11, 2025 | 12:06 PM

Share

(ಬೆಂಗಳೂರು ಮಾ, 11): ವಿಶ್ವದಾದ್ಯಂತ ಇಂದು ವಾಟ್ಸ್​ಆ್ಯಪ್​ (WhatsApp) ಬಳಸುವವರ ಸಂಖ್ಯೆ ಕೋಟಿಯಲ್ಲಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಆಕರ್ಷಕ ಫೀಚರ್​ಗಳನ್ನು ತರುವ ಕಾರಣ ಈ ಆ್ಯಪ್ ಜನಸ್ನೇಹಿ ಆಗಿಬಿಟ್ಟಿದೆ. ಈ ಹಿಂದೆ ವಾಟ್ಸ್​ಆ್ಯಪ್​ನಲ್ಲಿ ನಂಬರ್ ಸೇವ್ ಮಾಡದೆ ಕಾಲ್​ಗಳನ್ನು ಮಾಡುವಲ್ಲಿ ತೊಂದರೆಗಳಿದ್ದವು. ಇದಕ್ಕಾಗಿ, ನೀವು ಮೊದಲು ನಿಮ್ಮ ಫೋನ್‌ನಲ್ಲಿ ಸಂಖ್ಯೆಯನ್ನು ಸೇವ್ ಮಾಡಬೇಕಾಗಿತ್ತು, ನಂತರವೇ ನೀವು ವಾಟ್ಸ್​ಆ್ಯಪ್​ ಕರೆಗಳು ಅಥವಾ ಸಂದೇಶಗಳನ್ನು ಕಳುಹಿಸಬೇಕಾಗುತ್ತದೆ. ಆದರೆ ಈಗ ವಾಟ್ಸ್​ಆ್ಯಪ್ ​ಈ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಮೊಬೈಲ್ ಫೋನ್‌ನಲ್ಲಿ ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ಕರೆ ಮಾಡುವಂತೆಯೇ, ಈಗ ನೀವು ನಂಬರ್ ಅನ್ನು ಸೇವ್ ಮಾಡದೆ ನೇರವಾಗಿ ವಾಟ್ಸ್​ಆ್ಯಪ್​ ನಿಂದ ಕರೆ ಮಾಡಬಹುದು.

  • ಇದಕ್ಕಾಗಿ, ಮೊದಲು ವಾಟ್ಸ್​ಆ್ಯಪ್​ ತೆರೆಯಿರಿ. ಈಗ ಕರೆ ವಿಭಾಗಕ್ಕೆ ಹೋಗಿ. ಇದಾದ ನಂತರ, ಮೇಲಿನ ‘+’ ಐಕಾನ್ ಮೇಲೆ ಟ್ಯಾಪ್ ಮಾಡಿ. ಈಗ ‘ಕಾಲ್ ಎ ನಂಬರ್’ ಆಯ್ಕೆಯನ್ನು ಆರಿಸಿ. ಈಗ ಡಿಸ್ ಪ್ಲೇ ಮೇಲೆ ಡಯಲಿಂಗ್ ಪ್ಯಾಡ್ ತೆರೆಯುತ್ತದೆ.
  • ಸಂಖ್ಯೆಯನ್ನು ನಮೂದಿಸಿದ ನಂತರ, ಅದು ವಾಟ್ಸ್​ಆ್ಯಪ್​ ನಲ್ಲಿ ಲಭ್ಯವಿದೆಯೇ ಎಂದು ನೀವು ಪರಿಶೀಲಿಸಬಹುದು. ಇದರ ನಂತರ ನೀವು ನೇರವಾಗಿ ಕರೆ ಮಾಡಬಹುದು.
  • ಇದರ ಹೊರತಾಗಿ, ನೀವು ಇನ್ನೊಂದು ವಿಧಾನವನ್ನು ಸಹ ಬಳಸಬಹುದು. ನೀವು ಒಂದು ಸಂಖ್ಯೆಯನ್ನು ಹೊಂದಿದ್ದರೆ ಮತ್ತು ಅದನ್ನು ಸೇವ್ ಮಾಡದೆ ಕರೆ ಮಾಡಲು ಬಯಸಿದರೆ, ಇದು ಬ್ರೌಸರ್ ಮೂಲಕವೂ ಸಾಧ್ಯ.
  • ಮೊದಲಿಗೆ, ನಿಮ್ಮ ಫೋನ್‌ನ ಬ್ರೌಸರ್ ಅನ್ನು ತೆರೆಯಿರಿ, ಉದಾಹರಣೆಗೆ ಕ್ರೋಮ್ ಬೌಸರ್. ಇದಾದ ನಂತರ, ಅಡ್ರಸ್ ಲಿಸ್ಟ್​ನಲ್ಲಿ https://wa.me/91XXXXXXXXXX ಎಂದು ಟೈಪ್ ಮಾಡಿ. ಈಗ ಗೋ ಒತ್ತಿ ವಾಟ್ಸ್​ಆ್ಯಪ್​ ತೆರೆಯಿರಿ. ಈಗ ನೀವು ಕರೆ ಮಾಡಬಹುದು ಅಥವಾ ಸಂದೇಶ ಕಳುಹಿಸಬಹುದು.
  • ವಾಟ್ಸ್​ಆ್ಯಪ್​ನ ಈ ಹೊಸ ವೈಶಿಷ್ಟ್ಯವು ಹೊಸ ನಂಬರ್ ಗಳಿಗೆ ಆಗಾಗ್ಗೆ ಚಾಟ್ ಮಾಡಲು ಅಥವಾ ಕರೆ ಮಾಡಲು ಬಯಸುವವರಿಗೆ ಉಪಯುಕ್ತವಾಗಿದೆ.
  • ಈ ವೈಶಿಷ್ಟ್ಯವು ಸೇಲ್ಸ್ ಏಜೆಂಟ್‌ಗಳು, ಹೋಟೆಲ್‌ಗಳು, ಗ್ರಾಹಕ ಬೆಂಬಲ ಅಥವಾ ಇತರ ತಾತ್ಕಾಲಿಕ ಸಂಖ್ಯೆಗಳಿಗೆ ತುಂಬಾ ಉಪಯುಕ್ತವಾಗಿರುತ್ತದೆ. ವಾಟ್ಸ್​ಆ್ಯಪ್​ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮೂಲಕ ಬಳಕೆದಾರರ ಅನುಭವವನ್ನು ನಿರಂತರವಾಗಿ ಸುಧಾರಿಸುತ್ತಿದೆ.

iPhone: ಟ್ರಂಪ್ ನಿರ್ಧಾರಕ್ಕೆ ಬೆಚ್ಚಿಬಿದ್ದ ಟೆಕ್ ಜಗತ್ತು: ಭಾರತದಲ್ಲಿ ಐಫೋನ್‌ಗಳ ಬೆಲೆ ದುಬಾರಿ?

AI ಸಹಾಯದಿಂದ ಗ್ರೂಪ್ ಐಕಾನ್

ಗ್ರೂಪ್ ಚಾಟ್‌ಗಳಿಗಾಗಿ ವಾಟ್ಸ್​ಆ್ಯಪ್ ಹೊಸ AI-ಆಧಾರಿತ ಪ್ರೊಫೈಲ್ ಪಿಕ್ಚರ್ ಜನರೇಟರ್ ಅನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ ಎಂದು ಬಹು ವರದಿಗಳು ಬಹಿರಂಗಪಡಿಸಿದೆ. ಈ ವೈಶಿಷ್ಟ್ಯವನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದೆ ಮತ್ತು ಸೀಮಿತ ಬೀಟಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಮೆಟಾ AI ಬಳಸಿ ವೈಯಕ್ತಿಕಗೊಳಿಸಿದ, ವಿಶಿಷ್ಟ ಗ್ರೂಪ್ ಐಕಾನ್‌ಗಳನ್ನು ರಚಿಸಬಹುದು. ಈ ನವೀಕರಣವು ಐಫೋನ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಯಾವಾಗ ಲಭ್ಯವಿರುತ್ತದೆ? ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಇದು ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ
Image
ಟ್ರಂಪ್ ನಿರ್ಧಾರಕ್ಕೆ ಬೆಚ್ಚಿಬಿದ್ದ ಟೆಕ್ ಜಗತ್ತು: ಐಫೋನ್‌ಗಳ ಬೆಲೆ ದುಬಾರಿ?
Image
ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ನಿಧಾನವಾಗಿ ಚಾರ್ಜ್ ಆಗುತ್ತಿದೆಯೇ?: ಈ ಟ್ರಿಕ್
Image
ಫ್ಯಾನ್​ನಲ್ಲಿ ಆಗಾಗ್ಗೆ ಶಬ್ದ ಬರುತ್ತಾ?: ಈ ಟ್ರಿಕ್ ಮೂಲಕ ಸಮಸ್ಯೆ ಬಗೆಹರಿಸಿ
Image
ರ್ಬಲ ಪಾಸ್‌ವರ್ಡ್‌ಗಳ ಪಟ್ಟಿ ಬಿಡುಗಡೆ: ನಿಮ್ಮ ಪಾಸ್‌ವರ್ಡ್‌ ಇದರಲ್ಲಿದೆಯೇ?

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ