AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್ ಮೇಲೆ ಬಿದ್ದಿದೆ ಹ್ಯಾಕರ್​​ಗಳ ಕಣ್ಣು: ಮಾಹಿತಿ ಕದಿಯಲು ಬಿಡುವ ʼಬಗ್ʼ ಬಗ್ಗೆ ಎಚ್ಚರ

ಬಳಕೆದಾರರಿಗೆ ಹಾನಿಯುಂಟು ಮಾಡುತ್ತಿದ್ದ ವಾಟ್ಸ್​ಆ್ಯಪ್​​ ಇಮೇಜ್ ಫಿಲ್ಟರ್‌ ಒಂದನ್ನು ಸೈಬರ್‌ ಭದ್ರತಾ ಕಂಪನಿಯೊಂದು ಬಿಡುಗಡೆ ಮಾಡಿದೆ. ಚೆಕ್‌ ಪಾಯಿಂಟ್‌ ರೀಸರ್ಚ್ ಪ್ರಕಾರ, ಬಳಕೆದಾರರ ಸೂಕ್ಷ್ಮ ವಿವರಗಳನ್ನು ಓದಲು ಹ್ಯಾಕರ್‌ಗಳಿಗೆ ಈ ಫಿಲ್ಟರ್ ಅನುವಾಗುತ್ತಿತ್ತು.

WhatsApp: ವಾಟ್ಸ್​ಆ್ಯಪ್ ಮೇಲೆ ಬಿದ್ದಿದೆ ಹ್ಯಾಕರ್​​ಗಳ ಕಣ್ಣು: ಮಾಹಿತಿ ಕದಿಯಲು ಬಿಡುವ ʼಬಗ್ʼ ಬಗ್ಗೆ ಎಚ್ಚರ
WhatsApp
TV9 Web
| Edited By: |

Updated on:Sep 06, 2021 | 12:55 PM

Share

ವಿಶ್ವದಲ್ಲಿ ಕೋಟ್ಯಾಂತರ ಜನರು ಬಳಕೆ ಮಾಡುವ ಜನಪ್ರಿಯ ಆ್ಯಪ್​ಗಳ ಮೇಲೆ ಹ್ಯಾಕರ್​ಗಳ ಕಣ್ಣು ಇದ್ದೇ ಇರುತ್ತದೆ. ಭದ್ರತೆಯನ್ನು ಎಷ್ಟೇ ಬಲ ಪಡಿಸಿದರು ಹ್ಯಾಕರ್​ಗಳು ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯಲು ಪ್ರಯತ್ನ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್​​ನಲ್ಲೂ (WhatsApp) ಬಳಕೆದಾರರ ಖಾಸಗಿ ಸಂದೇಶಗಳು ಹಾಗೂ ಮಾಹಿತಿ ಸೋರಿಕೆಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ.

ಈ ಪೈಕಿ ಬಳಕೆದಾರರಿಗೆ ಹಾನಿಯುಂಟು ಮಾಡುತ್ತಿದ್ದ ವಾಟ್ಸ್​ಆ್ಯಪ್​​ ಇಮೇಜ್ ಫಿಲ್ಟರ್‌ ಒಂದನ್ನು ಸೈಬರ್‌ ಭದ್ರತಾ ಕಂಪನಿಯೊಂದು ಬಿಡುಗಡೆ ಮಾಡಿದೆ. ಚೆಕ್‌ ಪಾಯಿಂಟ್‌ ರೀಸರ್ಚ್ ಪ್ರಕಾರ, ಬಳಕೆದಾರರ ಸೂಕ್ಷ್ಮ ವಿವರಗಳನ್ನು ಓದಲು ಹ್ಯಾಕರ್‌ಗಳಿಗೆ ಈ ಫಿಲ್ಟರ್ ಅನುವಾಗುತ್ತಿತ್ತು. ಆದರೆ, ಇದು ಗಮನಕ್ಕೆ ಬಂದ ಕೂಡಲೆ ಈ ದೋಷವನ್ನು ವಾಟ್ಸ್​ಆ್ಯಪ್​ ಸರಿಪಡಿಸಿದೆ.

ಈ  ನ್ಯೂನತೆ ಹ್ಯಾಕರ್​ ಕೈಗೆ ಸಿಕ್ಕರೆ ವಾಟ್ಸ್​ಆ್ಯಪ್​ ಮೆಮೊರಿಯಿಂದ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಅನುಕೂಲವಾಗುತ್ತದೆ. ಆಕ್ರಮಣಕಾರರು ದುರುದ್ದೇಶಪೂರಿತ ಫೋಟೋವನ್ನು ಕಳುಹಿಸುವ ಮೂಲಕ ಬಳಕೆದಾರರ ಸ್ಮಾರ್ಟ್​ಫೋನ್​ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

ಸೆಕ್ಯುರಿಟಿ ಸಂಸ್ಥೆಯ ಸಂಶೋಧಕರಾದ ಡಿಕ್ಲಾ ಬರ್ದಾ ಮತ್ತು ಗಾಲ್ ಎಲ್ಬಾಜ್ ಅವರು ಬಳಕೆದಾರರು ವಾಟ್ಸ್​ಆ್ಯಪ್ ಫೋಟೋಗೆ ಫಿಲ್ಟರ್  ಬಳಸಿದರೆ ಹ್ಯಾಕರ್​ಗಳು ಇದನ್ನೇ ದಾರಿಯೆಂದುಕೊಂಡು ಬಳಕೆದಾರರನ ವಾಟ್ಸ್​ಆ್ಯಪ್ ಮೆಮೊರಿಗೆ ಪ್ರವೇಶವನ್ನು ಪಡೆಯಬಹುದು ಎಂದು ತಿಳಿಸದ್ದಾರೆ. ಕೊನೆಗೆ ಇದೇ ತಂಡ ನ್ಯೂನತೆಯನ್ನು ಸರಿ ಪಡಿಸಿದೆ.

ಭದ್ರತಾ ಸಂಸ್ಥೆ ನ್ಯೂನತೆಯನ್ನು ನವೆಂಬರ್ 10, 2020 ರಂದು ವಾಟ್ಸ್​ಆ್ಯಪ್ ‌ಗೆ ತಿಳಿಸಿದೆ. ವಾಟ್ಸ್​ಆ್ಯಪ್ ನಂತರ ಈ ಸಮಸ್ಯೆಯನ್ನು ಒಪ್ಪಿಕೊಂಡಿತು. ಈ ವರ್ಷ ಜನವರಿಯಲ್ಲಿ ಲಭ್ಯವಾದ ವಾಟ್ಸ್ಆ್ಯಪ್ ಆವೃತ್ತಿ 2.21.1.13 ರಲ್ಲಿ ನ್ಯೂನತೆ ಕಾಣಿಸಿಕೊಂಡಿತು. ಆದರೆ ವಾಟ್ಸ್​ಆ್ಯಪ್ ಇತ್ತೀಚಿನ ಆವೃತ್ತಿಯನ್ನು ನ್ಯೂನತೆಯನ್ನು ಸರಿಪಡಿಸಿಕೊಂಡಿದ್ದು,  ಬಳಕೆದಾರರು ಈ ನ್ಯೂನತೆಯಿಂದ ರಕ್ಷಿಸಲ್ಪಟ್ಟಿದ್ದಾರೆ.

ಸ್ಮಾರ್ಟ್​ಫೋನ್​ಗಳ ಮೇಲೆ ಭಾರೀ ಡಿಸ್ಕೌಂಟ್: ಕಡಿಮೆ ಬೆಲೆಗೆ ಮೊಬೈಲ್ ಖರೀದಿಸುವ ಅವಕಾಶ

Amazon Quiz: ಅಮೆಜಾನ್​ನ ಈ 5 ಪ್ರಶ್ನೆಗಳಿಗೆ ಉತ್ತರಿಸಿದ್ರೆ 20 ಸಾವಿರ ರೂ. ಬಹುಮಾನ: ಇಲ್ಲಿದೆ ಉತ್ತರ

(WhatsApp Hacks THIS WhatsApp bug allows hackers to steal sensitive details from your phone)

Published On - 12:55 pm, Mon, 6 September 21

Follow Us
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ