AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮನೆಯಲ್ಲಿ ಫ್ರಿಡ್ಜ್ ಅನ್ನು ಎಲ್ಲಿ ಇಟ್ಟಿದ್ದೀರಿ?: ಈ ಜಾಗದಲ್ಲಿದ್ದರೆ ತಕ್ಷಣವೇ ಸ್ಥಳ ಬದಲಾಯಿಸಿ

ಫ್ರಿಡ್ಜ್ ಅಥವಾ ರೆಫ್ರಿಜರೇಟರ್ ಇಂದು ಎಲ್ಲರ ಮನೆಯಲ್ಲೂ ಇವೆ. ಆದರೆ, ಕೆಲವರು ಇದನ್ನು ಸರಿಯಾದ ಜಾಗದಲ್ಲಿ ಇರಿಸಿರುವುದಿಲ್ಲ. ಎಲ್ಲಿ ಜಾಗ ಇದೆಯೊ ಅಲ್ಲಿ ಫಿಕ್ಸ್ ಮಾಡುತ್ತಾರೆ. ಆದರೆ, ಹೀಗೆ ಮಾಡುವುದರಿಂದ ಮುಂದೆ ದೊಡ್ಡ ಅಪಾಯಕ್ಕೆ ನೀವೇ ದಾರಿ ಮಾಡಿ ಕೊಟ್ಟಂತಾಗುತ್ತದೆ. ಹಾಗಾದರೆ, ಫ್ರಿಡ್ಜ್ ಇಡಲು ಸೂಕ್ತ ಸ್ಥಳ ಯಾವುದು?.

ನೀವು ಮನೆಯಲ್ಲಿ ಫ್ರಿಡ್ಜ್ ಅನ್ನು ಎಲ್ಲಿ ಇಟ್ಟಿದ್ದೀರಿ?: ಈ ಜಾಗದಲ್ಲಿದ್ದರೆ ತಕ್ಷಣವೇ ಸ್ಥಳ ಬದಲಾಯಿಸಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Sep 26, 2024 | 2:48 PM

Share

ರೆಫ್ರಿಜರೇಟರ್ ಬಹಳ ಅಗತ್ಯವಿರುವ ಎಲೆಕ್ಟ್ರಾನಿಕ್ ವಸ್ತಾಗಿದ್ದು ಇಂದು ಹೆಚ್ಚಿನ ಮನೆಗಳಲ್ಲಿ ಉಪಯೋಗಿಸುತ್ತಾರೆ. ಆಹಾರವನ್ನು ತಾಜಾ ಮತ್ತು ಸುರಕ್ಷಿತವಾಗಿಡಲು ಇದನ್ನು ಬಳಸಲಾಗುತ್ತದೆ. ಹಣ್ಣುಗಳು, ತರಕಾರಿಗಳು, ಹಾಲು, ಮೊಸರು ಮುಂತಾದ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಹಾಳಾಗದಂತೆ ರಕ್ಷಿಸಲು ಇದರೊಳಗೆ ಇಡಲಾಗುತ್ತದೆ. ಹಾಗೆಯೆ ರೆಫ್ರಿಜರೇಟರ್ ಅನ್ನು ಸರಿಯಾದ ಸ್ಥಳದಲ್ಲಿ ಇಡುವುದು ಬಹಳ ಮುಖ್ಯ. ತಪ್ಪಾದ ಸ್ಥಳದಲ್ಲಿ ಇಟ್ಟರೆ ಅದು ಸ್ಫೋಟಗೊಳ್ಳುವ ಅಪಾಯವಿದೆ.

ರೆಫ್ರಿಜರೇಟರ್ ಅನ್ನು ಎಲ್ಲಿ ಇಡಬಾರದು?

ರೆಫ್ರಿಜರೇಟರ್ ಅನ್ನು ಮುಚ್ಚಿದ ಕೋಣೆಯಲ್ಲಿ ಇಡಬಾರದು. ಗಾಳಿ ಇಲ್ಲದ ಕೋಣೆಯಲ್ಲಿ ಇಡಬಾರದು. ಹಾಗೆಯೆ ಸಾಕಷ್ಟು ವಿದ್ಯುತ್ ವೈರಿಂಗ್ ಇರುವ ಕೋಣೆಯಲ್ಲಿ ರೆಫ್ರಿಜರೇಟರ್ ಅನ್ನು ಇಡುವುದು ಸೂಕ್ತವಲ್ಲ. ಅಲ್ಲದೆ, ರೆಫ್ರಿಜರೇಟರ್ ಅನ್ನು ಸಣ್ಣ ಮತ್ತು ಪ್ಯಾಕ್ ಮಾಡಿದ ಕೋಣೆಯಲ್ಲಿ ಇಡುವುದು ತುಂಬಾ ಅಪಾಯಕಾರಿ. ಇಂತಹ ಕೊಠಡಿಗಳಲ್ಲಿ ರೆಫ್ರಿಜರೇಟರ್ ಇಡುವುದು ಸರಿಯಲ್ಲ, ಇದಕ್ಕೆ ಹಲವು ಕಾರಣಗಳಿವೆ.

ರೆಫ್ರಿಜರೇಟರ್ ಅನ್ನು ಮುಚ್ಚಿದ ಕೋಣೆಯಲ್ಲಿ ಏಕೆ ಇಡಬಾರದು?

ಶಾಖ – ಫ್ರಿಜ್ ಅನ್ನು ತಂಪಾಗಿರಿಸಲು ನಿರಂತರ ವಿದ್ಯುತ್ ಅಗತ್ಯವಿರುತ್ತದೆ. ಈ ಪ್ರಕ್ರಿಯೆಯಲ್ಲಿ ರೆಫ್ರಿಜರೇಟರ್ ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತದೆ. ಮುಚ್ಚಿದ ಕೋಣೆಯಲ್ಲಿ ಫ್ರಿಡ್ಜ್ ಇರಿಸಿದರೆ, ಕೋಣೆಯ ಉಷ್ಣತೆಯು ಹೆಚ್ಚಾಗಬಹುದು, ಇದು ವಿದ್ಯುತ್ ಬಳಕೆಯನ್ನು ಕೂಡ ಹೆಚ್ಚಿಸುತ್ತದೆ.

ಕಂಪನ – ಫ್ರಿಡ್ಜ್ ಒಳಗೆ ಕಂಪ್ರೆಸರ್ ನಿರಂತರವಾಗಿ ಚಾಲನೆಯಲ್ಲಿರುತ್ತದೆ ಮತ್ತು ಇದು ಕಂಪನವನ್ನು ಉಂಟುಮಾಡುತ್ತದೆ. ಹೀಗಿರುವಾಗ ಇದನ್ನು ಮುಚ್ಚಿದ ಕೋಣೆಯಲ್ಲಿ ಇರಿಸಿದರೆ, ಈ ಕಂಪನವು ಸುತ್ತಮುತ್ತಲಿನ ವಸ್ತುಗಳ ಮೇಲೆ ಪರಿಣಾಮ ಬೀಳುತ್ತದೆ, ಸಾಕಷ್ಟು ಶಬ್ದವನ್ನು ಸಹ ಉಂಟುಮಾಡಬಹುದು.

ತೇವಾಂಶ – ರೆಫ್ರಿಜರೇಟರ್ ಒಳಗೆ ತೇವಾಂಶವಿದೆ. ಇದನ್ನು ತುಂಬಿರುವ ಕೋಣೆಯಲ್ಲಿ ಇರಿಸಿದರೆ, ಈ ತೇವಾಂಶವು ಕೋಣೆಯಲ್ಲಿ ಹರಡಿ ಗೋಡೆಗಳ ಮೇಲೆ ಕಲೆ ಮೂಡುತ್ತದೆ.

ಅಪಾಯ – ರೆಫ್ರಿಜರೇಟರ್‌ನಲ್ಲಿ ವಿದ್ಯುತ್ ತಂತಿಗಳಿದ್ದು, ಅವು ಹಾನಿಗೊಳಗಾದರೆ ಶಾರ್ಟ್ ಸರ್ಕ್ಯೂಟ್ ಅಪಾಯವಿದೆ. ರೆಫ್ರಿಜರೇಟರ್ ಅನ್ನು ಮುಚ್ಚಿದ ಕೋಣೆಯಲ್ಲಿ ಇರಿಸಿದರೆ, ಬೆಂಕಿಯ ಅಪಾಯವೂ ಹೆಚ್ಚಾಗಬಹುದು.

ಗಾಳಿಯ ಹರಿವು – ಫ್ರಿಜ್ ಅನ್ನು ತಂಪಾಗಿರಿಸಲು ಗಾಳಿಯ ಹರಿವು ಅಗತ್ಯ. ಮುಚ್ಚಿದ ಕೋಣೆಯಲ್ಲಿ ಇರಿಸಿದರೆ, ಗಾಳಿಯ ಹರಿವಿಗೆ ಅಡಚಣೆಯಾಗಬಹುದು, ಇದರಿಂದಾಗಿ ರೆಫ್ರಿಜರೇಟರ್ ಹಾನಿಗೊಳಗಾಗಬಹುದು.

ಇದನ್ನೂ ಓದಿ: ಫೇಕ್ ಮೊಬೈಲ್ ಚಾರ್ಜರ್ ಕಂಡುಹಿಡಿಯಲು ಬಂದಿದೆ ಹೊಸ ಸರ್ಕಾರಿ ಆ್ಯಪ್: ಕೂಡಲೇ ನಿಮ್ಮ ಚಾರ್ಜರ್ ಚೆಕ್ ಮಾಡಿ

ರೆಫ್ರಿಜರೇಟರ್ ಅನ್ನು ಎಲ್ಲಿ ಇಡಬೇಕು?

ರೆಫ್ರಿಜರೇಟರ್ ಅನ್ನು ಯಾವಾಗಲೂ ಅಡುಗೆಮನೆಯಲ್ಲಿ ಅಥವಾ ಉತ್ತಮ ಗಾಳಿಯ ಹರಿವು ಇರುವ ಯಾವುದೇ ಕೋಣೆಯಲ್ಲಿ ಇರಿಸಬೇಕು. ಗೋಡೆಯಿಂದ ಸ್ವಲ್ಪ ದೂರದಲ್ಲಿ ಇರಿಸಿದರೆ ಉತ್ತಮ, ಇದರಿಂದ ಗಾಳಿಯು ಸುಲಭವಾಗಿ ಫ್ರಿಜ್ ಒಳಗೆ ಮತ್ತು ಹೊರಗೆ ಹೋಗಬಹುದು. ಇದು ಫ್ರಿಜ್‌ನ ಜೀವಿತಾವಧಿ ಮತ್ತು ಸಾಮರ್ಥ್ಯ ಎರಡನ್ನೂ ಹೆಚ್ಚಿಸುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ