AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ನಾನು ಕೊಳವೆಬಾವಿಯಲ್ಲಿ ಇಳಿಯುತ್ತೇನೆ’ 14 ವರ್ಷದ ಬಾಲಕ ಮಗುವನ್ನೆತ್ತಿಕೊಂಡು ಹೊರಬಂದ

Humanity : ಇದನ್ನು ನೋಡಿದರೆ ನಿಮ್ಮ ಮೈ ನವಿರೇಳುತ್ತದೆ, ಆತಂಕಕ್ಕೆ ತಳ್ಳುತ್ತದೆ, ಕೊನೆಗೆ ನಿಮ್ಮೆದೆಯನ್ನು ಮೃದುಗೊಳಿಸುತ್ತದೆ, ಮನುಷ್ಯತ್ವದಲ್ಲಿ ಮರಳಿ ನಂಬಿಕೆ ಬರುವಂತೆ ಮಾಡುವ ಈ ಘಟನೆ ನಡೆದದ್ದು ಪೂರ್ವ ಯೂರೋಪಿನ ರೊಮೇನಿಯಾದಲ್ಲಿ.

Viral Video: 'ನಾನು ಕೊಳವೆಬಾವಿಯಲ್ಲಿ ಇಳಿಯುತ್ತೇನೆ' 14 ವರ್ಷದ ಬಾಲಕ ಮಗುವನ್ನೆತ್ತಿಕೊಂಡು ಹೊರಬಂದ
ಮಗುವನ್ನು ಕೊಳವೆಬಾವಿಯಿಂದ ಎತ್ತಿಕೊಂಡು ಬಂದ 14 ವರ್ಷದ ಬಾಲಕ
ಶ್ರೀದೇವಿ ಕಳಸದ
|

Updated on:Jul 01, 2023 | 2:09 PM

Share

Baby falls into borewell : ಈ ಘಟನೆ ನಡೆದಿದ್ದು 2017ರಲ್ಲಿ. ಮೂರು ವರ್ಷದ ಹಸುಳೆಯೊಂದು ಸುಮಾರು 50 ಅಡಿ ಆಳದ ಕೊಳವೆಬಾವಿಯೊಳಗೆ ಬಿದ್ದುಬಿಟ್ಟಿದೆ. ಸುತ್ತಲೂ ಜನ ನೆರೆದಿದ್ದಾರೆ. ತಲೆ ಮೇಲೆ ಕೈಹೊತ್ತ ತಂದೆಯ ಆಘಾತ ಅಸಹಾಯತೆಗಳು ಅಲ್ಲಿನ ಇಡೀ ವಾತಾವರಣದಲ್ಲಿ ಕೈಚಾಚಿದರೆ ಮುಟ್ಟಬಹುದಾದಷ್ಟು ಸ್ಪಷ್ಟವಾಗಿವೆ. ರಕ್ಷಣಾ ದಳದವರು ಬಂದು ಹತ್ತು ಗಂಟೆಗಳ ಕಾಲ ಸತತ ಪ್ರಯತ್ನ ಪಟ್ಟರೂ ಆ ಕೂಸನ್ನು ಹೊರತೆಗೆಯಲಾಗುತ್ತಿಲ್ಲ. ಕೊಳವೆಯುದ್ದಕ್ಕೂ ಹಗ್ಗ ಇಳಿಸಿದರೆ ಅದನ್ನು ಹಿಡಿದುಕೊಂಡು ಮೇಲೆ ಬರಬಹುದು ಎಂದು ಅಷ್ಟು ಸಣ್ಣ ಮಗುವಿಗೆ (Baby) ತಿಳಿಯುವುದಾದರೂ ಹೇಗೆ? ಮತ್ತಿನ್ನು ಕೊಳವೆಯ ಬಾಯಿ ತೀರ ಚಿಕ್ಕದು, ದೊಡ್ಡವರು ಇಳಿಯುವಂತಿಲ್ಲ. ಮುಂದೇನಾಗುತ್ತದೆ? ಮತ್ತೆ ವೈರಲ್ ಆದ ಈ ವಿಡಿಯೋ ನೋಡಿ.

ಆಗ ಇದನ್ನೆಲ್ಲ ನೋಡುತ್ತಿದ್ದ 14 ವರ್ಷದ ತೆಳ್ಳಗಿನ ಬಾಲಕನೊಬ್ಬ ತನ್ನ ದೇಹ ಕೊಳವೆಯಲ್ಲಿ ನುಸುಳಬಹುದು ನಾನು ಸಹಾಯ ಮಾಡುತ್ತೇನೆ ಎಂದು ಮುಂದೆ ಬಂದ. ಅವನ ತಲೆಗೆ ಟಾರ್ಚ್ ಕಟ್ಟಿ, ಮೈಸುತ್ತ ಹಗ್ಗ ಬಿಗಿದು ಅವನನ್ನು ತಲೆಕೆಳಗು ಮಾಡಿ ಇಳಿಸಿದರು. ನಂತರ ಆತ ಮೇಲೆ ಬರುತ್ತಿದ್ದಂತೆ ಮೊದಲಿಗೆ ಹುಡುಗನ ಕಾಲುಗಳು ಕಾಣುತ್ತವೆ, ಅರೆಕ್ಷಣಕ್ಕೆ ಅವನ ತಲೆ ಕೈ ಕಂಡು ಅವನ ಕೈಯ್ಯಲ್ಲಿ ಆ ಪುಟ್ಟ ಮಗು ಬದುಕಿದ್ದು ಅಳುತ್ತಿರುವುದನ್ನು ಕಂಡು ನಿಟ್ಟುಸಿರು ಬಿಡುತ್ತೀರಿ.

ಇದನ್ನೂ ಓದಿ : Viral Video:’ನಿನ್ನ ಮಗೂನ್ನೂ ಎತ್ಕೋ!’ ನಾಯಿಯನ್ನು ಒದ್ದವಳ ಮೇಲೆ ಕೋಪಗೊಂಡ ನೆಟ್ಟಿಗರು

ನಮ್ಮಲ್ಲೂ ಮಕ್ಕಳು ಕೊಳವೆ ಬಾವಿಗಳಿಗೆ ಬಿದ್ದು ಅನೇಕ ಸಲ ಮೇಲೆತ್ತಲಾಗದೇ ಅಸುನೀಗಿ ಒಮ್ಮೊಮ್ಮೆ ಪವಾಡಸದೃಶವಾಗಿ ಬದುಕುಳಿದ ಉದಾಹರಣೆಗಳು ಎಷ್ಟೋ ಇವೆ. ಇದು ನಡೆದದ್ದು ದೂರದ ಯಾವುದೋ ದೇಶದಲ್ಲಾದರೂ ದುರಂತ ಮತ್ತು ಮಾನವ ಸಾಹಸದ ಗೆಲುವುಗಳು ನಮ್ಮನ್ನೆಲ್ಲ ತಟ್ಟಿಯೇ ತಟ್ಟುತ್ತವಲ್ಲವೇ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:06 pm, Sat, 1 July 23

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಬಿಗ್​​ಬಾಸ್​​ ಶೋನಲ್ಲಿ ಈ ವಾರ ಏನು ಮಾಡ್ತೀನಿ ನೋಡ್ತಿರಿ: ಸುದೀಪ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು