AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ನಾನು ಕೊಳವೆಬಾವಿಯಲ್ಲಿ ಇಳಿಯುತ್ತೇನೆ’ 14 ವರ್ಷದ ಬಾಲಕ ಮಗುವನ್ನೆತ್ತಿಕೊಂಡು ಹೊರಬಂದ

Humanity : ಇದನ್ನು ನೋಡಿದರೆ ನಿಮ್ಮ ಮೈ ನವಿರೇಳುತ್ತದೆ, ಆತಂಕಕ್ಕೆ ತಳ್ಳುತ್ತದೆ, ಕೊನೆಗೆ ನಿಮ್ಮೆದೆಯನ್ನು ಮೃದುಗೊಳಿಸುತ್ತದೆ, ಮನುಷ್ಯತ್ವದಲ್ಲಿ ಮರಳಿ ನಂಬಿಕೆ ಬರುವಂತೆ ಮಾಡುವ ಈ ಘಟನೆ ನಡೆದದ್ದು ಪೂರ್ವ ಯೂರೋಪಿನ ರೊಮೇನಿಯಾದಲ್ಲಿ.

Viral Video: 'ನಾನು ಕೊಳವೆಬಾವಿಯಲ್ಲಿ ಇಳಿಯುತ್ತೇನೆ' 14 ವರ್ಷದ ಬಾಲಕ ಮಗುವನ್ನೆತ್ತಿಕೊಂಡು ಹೊರಬಂದ
ಮಗುವನ್ನು ಕೊಳವೆಬಾವಿಯಿಂದ ಎತ್ತಿಕೊಂಡು ಬಂದ 14 ವರ್ಷದ ಬಾಲಕ
ಶ್ರೀದೇವಿ ಕಳಸದ
|

Updated on:Jul 01, 2023 | 2:09 PM

Share

Baby falls into borewell : ಈ ಘಟನೆ ನಡೆದಿದ್ದು 2017ರಲ್ಲಿ. ಮೂರು ವರ್ಷದ ಹಸುಳೆಯೊಂದು ಸುಮಾರು 50 ಅಡಿ ಆಳದ ಕೊಳವೆಬಾವಿಯೊಳಗೆ ಬಿದ್ದುಬಿಟ್ಟಿದೆ. ಸುತ್ತಲೂ ಜನ ನೆರೆದಿದ್ದಾರೆ. ತಲೆ ಮೇಲೆ ಕೈಹೊತ್ತ ತಂದೆಯ ಆಘಾತ ಅಸಹಾಯತೆಗಳು ಅಲ್ಲಿನ ಇಡೀ ವಾತಾವರಣದಲ್ಲಿ ಕೈಚಾಚಿದರೆ ಮುಟ್ಟಬಹುದಾದಷ್ಟು ಸ್ಪಷ್ಟವಾಗಿವೆ. ರಕ್ಷಣಾ ದಳದವರು ಬಂದು ಹತ್ತು ಗಂಟೆಗಳ ಕಾಲ ಸತತ ಪ್ರಯತ್ನ ಪಟ್ಟರೂ ಆ ಕೂಸನ್ನು ಹೊರತೆಗೆಯಲಾಗುತ್ತಿಲ್ಲ. ಕೊಳವೆಯುದ್ದಕ್ಕೂ ಹಗ್ಗ ಇಳಿಸಿದರೆ ಅದನ್ನು ಹಿಡಿದುಕೊಂಡು ಮೇಲೆ ಬರಬಹುದು ಎಂದು ಅಷ್ಟು ಸಣ್ಣ ಮಗುವಿಗೆ (Baby) ತಿಳಿಯುವುದಾದರೂ ಹೇಗೆ? ಮತ್ತಿನ್ನು ಕೊಳವೆಯ ಬಾಯಿ ತೀರ ಚಿಕ್ಕದು, ದೊಡ್ಡವರು ಇಳಿಯುವಂತಿಲ್ಲ. ಮುಂದೇನಾಗುತ್ತದೆ? ಮತ್ತೆ ವೈರಲ್ ಆದ ಈ ವಿಡಿಯೋ ನೋಡಿ.

ಆಗ ಇದನ್ನೆಲ್ಲ ನೋಡುತ್ತಿದ್ದ 14 ವರ್ಷದ ತೆಳ್ಳಗಿನ ಬಾಲಕನೊಬ್ಬ ತನ್ನ ದೇಹ ಕೊಳವೆಯಲ್ಲಿ ನುಸುಳಬಹುದು ನಾನು ಸಹಾಯ ಮಾಡುತ್ತೇನೆ ಎಂದು ಮುಂದೆ ಬಂದ. ಅವನ ತಲೆಗೆ ಟಾರ್ಚ್ ಕಟ್ಟಿ, ಮೈಸುತ್ತ ಹಗ್ಗ ಬಿಗಿದು ಅವನನ್ನು ತಲೆಕೆಳಗು ಮಾಡಿ ಇಳಿಸಿದರು. ನಂತರ ಆತ ಮೇಲೆ ಬರುತ್ತಿದ್ದಂತೆ ಮೊದಲಿಗೆ ಹುಡುಗನ ಕಾಲುಗಳು ಕಾಣುತ್ತವೆ, ಅರೆಕ್ಷಣಕ್ಕೆ ಅವನ ತಲೆ ಕೈ ಕಂಡು ಅವನ ಕೈಯ್ಯಲ್ಲಿ ಆ ಪುಟ್ಟ ಮಗು ಬದುಕಿದ್ದು ಅಳುತ್ತಿರುವುದನ್ನು ಕಂಡು ನಿಟ್ಟುಸಿರು ಬಿಡುತ್ತೀರಿ.

ಇದನ್ನೂ ಓದಿ : Viral Video:’ನಿನ್ನ ಮಗೂನ್ನೂ ಎತ್ಕೋ!’ ನಾಯಿಯನ್ನು ಒದ್ದವಳ ಮೇಲೆ ಕೋಪಗೊಂಡ ನೆಟ್ಟಿಗರು

ನಮ್ಮಲ್ಲೂ ಮಕ್ಕಳು ಕೊಳವೆ ಬಾವಿಗಳಿಗೆ ಬಿದ್ದು ಅನೇಕ ಸಲ ಮೇಲೆತ್ತಲಾಗದೇ ಅಸುನೀಗಿ ಒಮ್ಮೊಮ್ಮೆ ಪವಾಡಸದೃಶವಾಗಿ ಬದುಕುಳಿದ ಉದಾಹರಣೆಗಳು ಎಷ್ಟೋ ಇವೆ. ಇದು ನಡೆದದ್ದು ದೂರದ ಯಾವುದೋ ದೇಶದಲ್ಲಾದರೂ ದುರಂತ ಮತ್ತು ಮಾನವ ಸಾಹಸದ ಗೆಲುವುಗಳು ನಮ್ಮನ್ನೆಲ್ಲ ತಟ್ಟಿಯೇ ತಟ್ಟುತ್ತವಲ್ಲವೇ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:06 pm, Sat, 1 July 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?