Viral News: 4 ಕಾಲಿನೊಂದಿಗೆ ಜನಿಸಿದ 9 ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಾಲ್ಕು ಕಾಲುಗಳೊಂದಿಗೆ ಜನಿಸಿದ ಮಗುವಿಗೆ ರಿಷಿಕೇಶದ AIIMS ನಲ್ಲಿ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಅಸಹಜ ಕಾಲುಗಳನ್ನು ಯಶಸ್ವಿಯಾಗಿ ತೆಗೆಯಲಾಗಿದೆ. ಇದಲ್ಲದೇ ಮಗುವಿನ ಬೆನ್ನಿನ ಮೇಲೆ ದೊಡ್ಡ ಊತ ಮತ್ತು ಒಂದೇ ಮೂತ್ರಪಿಂಡ ಇರುವುದು ಶಸ್ತ್ರಚಿಕಿತ್ಸೆಯನ್ನು ಹೆಚ್ಚು ಸವಾಲಿನನ್ನಾಗಿ ಮಾಡಿತ್ತು ಎಂದು ವೈದ್ಯರ ತಂಡ ತಿಳಿಸಿದೆ.

Viral News: 4 ಕಾಲಿನೊಂದಿಗೆ ಜನಿಸಿದ  9 ತಿಂಗಳ ಮಗುವಿಗೆ ಯಶಸ್ವಿ  ಶಸ್ತ್ರಚಿಕಿತ್ಸೆ
ಸಾಂದರ್ಭಿಕ ಚಿತ್ರ

Updated on: Dec 04, 2024 | 11:01 AM

ನಾಲ್ಕು ಕಾಲುಗಳೊಂದಿಗೆ ಜನಿಸಿದ್ದ 9 ತಿಂಗಳ ಮಗುವಿಗೆ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಅಸಹಜ ಸ್ಥಿತಿಯಲ್ಲಿದ್ದ ಎರಡು ಕಾಲನ್ನು ರಿಷಿಕೇಶದ ಏಮ್ಸ್ ವೈದ್ಯರು ಯಶಸ್ವಿಯಾಗಿ ತೆಗೆದಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಮಗುವೊಂದು ನಾಲ್ಕು ಕಾಲುಗಳು ಮತ್ತು ಬೆನ್ನುಮೂಳೆಯ ಮೇಲ್ಭಾಗದಲ್ಲಿ ಭಾರಿ ಊತದೊಂದಿಗೆ ಜನಿಸಿತ್ತು. ತಮ್ಮ ಮಗುವಿನ ವಿಕಾರ ರೂಪವನ್ನು ಕಂಡು ಪೋಷಕರು ಆತಂಕಗೊಂಡಿದ್ದರು. ಹೆಣ್ಣು ಮಗುವಿನ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ತಮ್ಮ ಮಗುವನ್ನು ಮಾರ್ಚ್ 6 ರಂದು ರಿಷಿಕೇಶದ ಏಮ್ಸ್‌ಗೆ ಕರೆದೊಯ್ದಿದ್ದಾರೆ.

ಮಗುವನ್ನು ಪರೀಕ್ಷೆ ಮಾಡಿದ ಏಮ್ಸ್ ನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ, ಪ್ರೊ. ಸತ್ಯಶ್ರೀ “ಮಗುವಿನ ಎರಡು ಕಾಲುಗಳು ನಾರ್ಮಲ್ ಆಗಿದ್ದು, ಇನ್ನೆರಡು ಕಾಲುಗಳು ಅಸಹಜ ಸ್ಥಿತಿಯಲ್ಲಿವೆ. ಇದಲ್ಲದೆ, ಮಗುವಿನ ಬೆನ್ನಿನ ಮೇಲೆ ದೊಡ್ಡ ಊತ ಮತ್ತು ಒಂದೇ ಒಂದು ಕಿಡ್ನಿ ಕಂಡುಬಂದಿದೆ. ಮಗುವಿಗೆ ಆಪರೇಷನ್ ಮಾಡಿಸಬೇಕು ಎಂದು ಪೋಷಕರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಜೀವಕ್ಕೆ ಕುತ್ತು ತಂದ ಗಾಳಿಪಟ, ಬೈಕ್‌ ಚಲಾಯಿಸುತ್ತಿದ್ದ ವೇಳೆ ಕುತ್ತಿಗೆಗೆ ಗಾಳಿಪಟ ದಾರ ಸಿಲುಕಿ ಪ್ರಾಣ ಕಳೆದುಕೊಂಡ ವ್ಯಕ್ತಿ

ಪೀಡಿಯಾಟ್ರಿಕ್ ಸರ್ಜರಿ ವಿಭಾಗದ ಡಾ.ಇನೋನೊ ಯೋಶು ಅವರು ಎಲ್ಲಾ ರೀತಿಯ ಪರೀಕ್ಷೆ ಮಗುವನ್ನು ಶಸ್ತ್ರಚಿಕಿತ್ಸೆಗೆ ಸಿದ್ಧಪಡಿಸಿದ್ದಾರೆ. ಮಗುವಿನ ಕಾರ್ಯಾಚರಣೆ 8 ಗಂಟೆಗಳ ಕಾಲ ಮುಂದುವರೆದಿತ್ತು, ಹಿಂಭಾಗದಲ್ಲಿ ದೊಡ್ಡ ಊತ ಮತ್ತು ಒಂದೇ ಮೂತ್ರಪಿಂಡದ ಕಾರಣದಿಂದ ಶಸ್ತ್ರಚಿಕಿತ್ಸೆ ತುಂಬಾ ಜಟಿಲವಾಗಿದೆ ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಕೊನೆಗೂ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿತು. ವಿವಿಧ ವಿಭಾಗಗಳ ವೈದ್ಯರು ಇದಕ್ಕೆ ಸಹಕರಿಸಿದ್ದಾರೆ. ಮಗುವನ್ನು ಮೂರು ವಾರಗಳ ಕಾಲ ನಿಗಾ ಇರಿಸಲಾಗಿದೆ. ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಮೀನೂ ಸಿಂಗ್ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡವನ್ನು ಶ್ಲಾಘಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us