AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

93 ಮಿಲಿಯನ್​ ವರ್ಷಗಳ ಹಿಂದಿನ ಮೊಸಳೆಯ ಪಳಯುಳಿಕೆಯ ಹೊಟ್ಟೆಯಲ್ಲಿ ಡೈನೋಸರ್​ ಮರಿ ಪತ್ತೆ

ಪಳಯುಳಿಕೆ ಮೊಸಳೆಯ ಹೊಟ್ಟೆಯಲ್ಲಿ ಡೈನೋಸರ್ ​ ಮರಿ ಇರುವುದುನ್ನು ವಿಜ್ಞಾನಿಗಳು ಇತ್ತೀಚೆಗೆ ಪತ್ತೆ ಮಾಡಿದ್ದಾರೆ. 93 ಮಿಲಿಯನ್​ ವರ್ಷಗಳ ಹಿಂದಿನ ಮೊಸಳೆಯ ಪಳಯುಳಿಕೆಯಲ್ಲಿ ಡೈನೋಸರ್​ ಮರಿ ಇರುವುದನ್ನು ಕಂಡುಹಿಡಿಯಲಾಗಿದೆ.

93 ಮಿಲಿಯನ್​ ವರ್ಷಗಳ ಹಿಂದಿನ ಮೊಸಳೆಯ ಪಳಯುಳಿಕೆಯ ಹೊಟ್ಟೆಯಲ್ಲಿ ಡೈನೋಸರ್​ ಮರಿ ಪತ್ತೆ
pic: Indiatimes.com ಪ್ರಾತಿನಿಧಿಕ ಚಿತ್ರ
TV9 Web
| Updated By: Pavitra Bhat Jigalemane|

Updated on:Feb 18, 2022 | 1:15 PM

Share

ಪಳಯುಳಿಕೆ ಮೊಸಳೆಯ (Fossil Crocodile) ಹೊಟ್ಟೆಯಲ್ಲಿ ಡೈನೋಸರ್  ​ ಮರಿ (Baby Dinosaur )ಇರುವುದುನ್ನು ವಿಜ್ಞಾನಿಗಳು ಇತ್ತೀಚೆಗೆ ಪತ್ತೆ ಮಾಡಿದ್ದಾರೆ. 93 ಮಿಲಿಯನ್​ ವರ್ಷಗಳ ಹಿಂದಿನ ಮೊಸಳೆಯ ಪಳಯುಳಿಕೆಯಲ್ಲಿ ಡೈನೋಸರ್​ ಮರಿ ಇರುವುದನ್ನು ಕಂಡುಹಿಡಿಯಲಾಗಿದೆ.  ಈ ಮೊಸಳೆಯ ಪಳಯುಳಿಕೆಯನ್ನು 2010ರಲ್ಲಿ ಪತ್ತೆ ಮಾಡಲಾಗಿತ್ತು. ಅದರ ಮೇಲೆ ಅಧ್ಯಯನ ನಡೆಸಿದ ಆಸ್ಟ್ರೇಲಿಯನ್​  ಏಜ್​ ಆಫ್​ ಡೈನಾಸರಸ್​ ಮ್ಯೂಸಿಯಂ ಮತ್ತು ಯುನಿವರ್ಸಿಟಿ ಆಫ್​ ನ್ಯೂ ಇಂಗ್ಲೆಂಡ್​​ ನ ವಿಜ್ಞಾನಿಗಳು  ಡೈನೋಸರ್​ ಮರಿ ಇರುವುದನ್ನು ಪತ್ತೆ ಮಾಡಿದ್ದಾರೆ. ಅದನ್ನು ಅಧಿಕೃತವಾಗಿ ಕಾನ್ಫ್ರಾಕ್ಟೋಸುಚಸ್ ಸೌರೋಕ್ಟೋನೋಸ್ (Confractosuchus sauroktonos) ಎಂದು ಕರೆಯಲಾಗಿದೆ.  ಇದನ್ನು ಮಧ್ಯ ಕ್ವೀನ್ಸ್​ಲ್ಯಾಂಡ್​ನಲ್ಲಿ ಕಂಡುಹಿಡಿಯಲಾಗಿದೆ.

ಪಳಯುಳಿಕೆ ಮೊಸಳೆಯ ಹೊಟ್ಟೆಯಲ್ಲಿರುವ ಕೊನೆಯ ಆಹಾರವಾದ ಡೈನೋಸಾರ್​ ಮರಿಯ ಆಧಾರದ ಮೇಲೆ ಪಳಯುಳಿಕೆಯು 93 ಮಿಲಿಯನ್​ ವರ್ಷಗಳಷ್ಟು ಹಿಂದಿನದು ಎಂದು ಗುರುತಿಸಿದ್ದಾರೆ.  ಕಾನ್ಫ್ರಾಕ್ಟೋಸುಚಸ್ ಸೌರೋಕ್ಟೋನೋಸ್ ಎನ್ನುವುದನ್ನು ಡೈನೋಸಾರ್​ಅನ್ನು ಕೊಲೆ ಮಾಡಿದ ಮೊಸಳೆ ಎಂದು ಅನುವಾದಿಸಲಾಗಿದೆ.  2 ರಿಂದ 2.5 ಮೀ ಉದ್ದದ ಜೀವಿಯನ್ನು ಮುರಿದ ಮೊಸಳೆ ಎಂದು ಹೇಳಲಾಗಿದೆ.

ಚಿಕ್ಕ ಡೈನೋಸಾರ್​ ಮೊಸಳೆಯ ಹೊಟ್ಟೆಗೆ ಕೊನೆಯ ಆಹಾರವಾಗಿದೆ. ಆದರೆ ಅಷ್ಟು ಸ್ವಲ್ಪ ಆಹಾರ ಮೊಸಳೆಯ ಹೊಟ್ಟೆಗೆ ಸಾಕಾಗುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಸದ್ಯ ಈ ವಿಚಾರ ಜಗತ್ತಿನೆಲ್ಲೆಡೆ ಕುತೂಹಲವನ್ನು ಮೂಡಿಸಿದೆ. ಈ ಬಗ್ಗೆ ವಿಜ್ಞಾನಿಗಳು ಅಧ್ಯಯನವನ್ನು ಮುಂದುವರೆಸಿದ್ದಾರೆ ಎಂದು ಇಂಡಿಯಾ ಟೈಮ್ಸ್​​. ಕಾಮ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ:

ಜಗತ್ತಿನ ಅತಿ ಹೆಚ್ಚು ತೂಕದ ಸ್ಟ್ರಾಬೆರಿ ಬೆಳೆದು ಗಿನ್ನಿಸ್​ ದಾಖಲೆ ಮಾಡಿದ ವ್ಯಕ್ತಿ

Published On - 1:11 pm, Fri, 18 February 22

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ