AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100ನೇ ವರ್ಷದ ಹುಟ್ಟುಹಬ್ಬದಂದು 90 ವರ್ಷದ ಹೆಂಡತಿಯನ್ನು ಮರುಮದುವೆಯಾದ ವೃದ್ಧ

ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ತನ್ನ 100ನೇ ವರ್ಷದ ಜನ್ಮದಿನದ ಆಚರಣೆ ವೇಳೆ ತನ್ನ 90 ವರ್ಷದ ಹೆಂಡತಿಯನ್ನು ಮರು ಮದುವೆಯಾಗಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದೆ. 

100ನೇ ವರ್ಷದ ಹುಟ್ಟುಹಬ್ಬದಂದು 90 ವರ್ಷದ ಹೆಂಡತಿಯನ್ನು ಮರುಮದುವೆಯಾದ ವೃದ್ಧ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Feb 18, 2022 | 5:18 PM

Share

ಒಬ್ಬ ಮನುಷ್ಯನಿಗೆ 100ನೇ ವರ್ಷದ ಜನ್ಮದಿನವನ್ನು ತನ್ನ ತುಂಬು ಕುಟುಂಬದೊಂದಿಗೆ ಆಚರಿಸಿಕೊಳ್ಳುವುದು ವಿಶೇಷವೇ ಆಗಿರುತ್ತದೆ.  ಒಂದು ಶತಮಾನದ ಏಳು ಬೀಳುಗಳನ್ನು ದಾಟಿ ಕುಟುಂಬವನ್ನು ಕಟ್ಟಿ ನಿಲ್ಲಿಸುವುದು ಸುಲಭದ ಮಾತಲ್ಲ. ಹೀಗಿದ್ದಾಗ ಪಶ್ಚಿಮ ಬಂಗಾಳದ (West Bengal) ವ್ಯಕ್ತಿಯೊಬ್ಬ ತನ್ನ 100ನೇ ವರ್ಷದ ಜನ್ಮದಿನದ ಆಚರಣೆ ವೇಳೆ ತನ್ನ 90 ವರ್ಷದ ಹೆಂಡತಿಯನ್ನು ಮರು ಮದುವೆಯಾಗಿದ್ದಾರೆ (Re-marriage).  100 ವರ್ಷದ ಬಿಸ್ವಂತ್​ ಸರ್ಕಾರ್​​ ತನ್ನ 90 ವರ್ಷದ ಪತ್ನಿ ಸೌರ್ಧವನಿ ಸರ್ಕಾರ್​ ಅವರನ್ನು ಅದ್ದೂರಿಯಾಗಿ ಮತ್ತೆ ಮದುವೆಯಾಗಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ (Viral)​ ಆಗಿದೆ.

ಬಿಸ್ವಂತ್​ ಸರ್ಕಾರ್​  6 ಮಕ್ಕಳು, 23 ಮೊಮ್ಮಕ್ಕಳು, 10 ಮಂದಿ ಮರಿ ಮೊಮ್ಮಕ್ಕಳ ಹಾಗೂ 6 ಮಂದಿ ಸೊಸೆಯಂದಿರನ್ನು ಹೊಂದಿದ್ದಾರೆ. ಬಿಸ್ವಂತ್​ ಅವರ ಮರು ಮದುವೆ ಮದುವೆ ಮತ್ತು 100ನೇ ವರ್ಷದ ಜನ್ಮದಿನವನ್ನು ಕುಟುಂಬ ಅದ್ದೂರಿಯಾಗಿ ಆಚರಿಸಿದೆ.  ಬಿಸ್ವಂತ್​ ಅವರ ಮಕ್ಕಳು ಮತ್ತು ಅವರ ಕುಟುಂಬ ಪಶ್ಚಿಮ ಬಂಗಾಳ ಬಿಟ್ಟು ಬೇರೆ ರಾಜ್ಯಗಳಲ್ಲಿ ನೆಲೆಸಿದ್ದು ಇ ವಿಶೇಷ ದಿನವನ್ನು ಆಚರಿಸಲು ಹಳ್ಳಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಇಂಡಿಯಾ.ಕಾಮ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿಶೇಷ ಅಚರಣೆಯ ಕುರಿತು ಬಿಸ್ವಂತ್​ ಅವರ ಕುಟುಂಬ ಮಾತನಾಡಿದ್ದು, ನಿಜವಾದ ಮದುವೆಯಲ್ಲಿ ಹೇಗೆ ವಧು ಗಂಡನ ಮನೆಗೆ ಪ್ರವೇಶಿಸುತ್ತಾಳೋ ಅದೆ ರೀತಿ ಮದುವೆಯನ್ನು ಮಾಡಲಾಗಿದೆ.  ವರನ ಮನೆಯಿಂದ 5 ಕಿಮೀ ದೂರದಿಂದ ವಧುವನ್ನು ಕರೆದುಕೊಂಡು ಬರುವಂತೆ ಮಾಡಿ, ಎಲ್ಲಾ ರೀತಿಯ ಸಂಪ್ರದಾಯಗಳನ್ನು ಆಚರಣೆ ಮಾಡುವ ಮೂಲಕ ಮದುವೆಯನ್ನು ಮಾಡಲಾಗಿದೆ. ವರನನ್ನು ಕುದುರೆಗಾಡಿಯಲ್ಲಿ ಕರೆತಂದು, ಹಾರ ಬದಲಾಯಿಸಿಕೊಳ್ಳುವ ರೀತಿಯಲ್ಲಿಯೇ ಆಚರಿಸಲಾಗಿದೆ ಎಂದಿದ್ದಾರೆ. ಸದ್ಯ ಈ ವಿಚಾರ  ಎಲ್ಲೆಡೆ ವೈರಲ್​ ಆಗಿದೆ.

 ಇದನ್ನೂ ಓದಿ:

Viral Story: ಬುಟ್ಟಿಗಟ್ಟಲೆ ನಾಣ್ಯಗಳನ್ನು ನೀಡಿ ಸ್ಕೂಟರ್​ ಖರೀದಿಸಿದ ವ್ಯಕ್ತಿ

Published On - 5:11 pm, Fri, 18 February 22

ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಭಾರತ ಹಿಂದೂ ರಾಷ್ಟ್ರ, ಅದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ಅಪ್ಪನೇ ಗರ್ಭಿಣಿ ಮಗಳ ಕುರಿ ಕಡಿದಂಗೆ ಕಡಿದವ್ನೆ: ಭೀಕರತೆ ಬಿಚ್ಚಿಟ್ಟ ಮಹಿಳೆ
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ILT20: ಸೋತರೂ ಪ್ಲೇಆಫ್​ಗೇರಿದ ಡೆಸರ್ಟ್ ವೈಪರ್ಸ್
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಕುಕ್ಕೆ ಕಿರುಷಷ್ಠಿ: ಖಾದರ್ ಸೇರಿ ಅನ್ಯಧರ್ಮದ ನಾಯಕರ ಕರೆಸಿದ್ದಕ್ಕೆ ಆಕ್ರೋಶ
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
ಅಶ್ವಿನಿ-ಗಿಲ್ಲಿ ಮಧ್ಯೆ ಮತ್ತೆ ಶುರುವಾಯ್ತು ಮುನಿಸಿ; ಆರಂಭವಾಯ್ತು ಫೈಟ್
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
4719 ಎಸೆತಗಳಲ್ಲಿ ನಿರ್ಧಾರವಾದ ಆ್ಯಶಸ್ ಸರಣಿ ಫಲಿತಾಂಶ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ಹುಬ್ಬಳ್ಳಿ ಮಂದಿಗೆ ಸುದೀಪ್ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಸ್ಲಾಮಿಸ್ಟ್​ಗಳು, ಇಸ್ಲಾಮಿಸಂ ಇಡೀ ವಿಶ್ವಕ್ಕೆ ದೊಡ್ಡ ಬೆದರಿಕೆ: ತುಳಸಿ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಇತರರನ್ನು ನಂಬಿ ಮೋಸ ಹೋಗುವ ಸಾಧ್ಯತೆ