AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

100ನೇ ವರ್ಷದ ಹುಟ್ಟುಹಬ್ಬದಂದು 90 ವರ್ಷದ ಹೆಂಡತಿಯನ್ನು ಮರುಮದುವೆಯಾದ ವೃದ್ಧ

ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬ ತನ್ನ 100ನೇ ವರ್ಷದ ಜನ್ಮದಿನದ ಆಚರಣೆ ವೇಳೆ ತನ್ನ 90 ವರ್ಷದ ಹೆಂಡತಿಯನ್ನು ಮರು ಮದುವೆಯಾಗಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್​ ಆಗಿದೆ. 

100ನೇ ವರ್ಷದ ಹುಟ್ಟುಹಬ್ಬದಂದು 90 ವರ್ಷದ ಹೆಂಡತಿಯನ್ನು ಮರುಮದುವೆಯಾದ ವೃದ್ಧ
ಪ್ರಾತಿನಿಧಿಕ ಚಿತ್ರ
TV9 Web
| Updated By: Pavitra Bhat Jigalemane|

Updated on:Feb 18, 2022 | 5:18 PM

Share

ಒಬ್ಬ ಮನುಷ್ಯನಿಗೆ 100ನೇ ವರ್ಷದ ಜನ್ಮದಿನವನ್ನು ತನ್ನ ತುಂಬು ಕುಟುಂಬದೊಂದಿಗೆ ಆಚರಿಸಿಕೊಳ್ಳುವುದು ವಿಶೇಷವೇ ಆಗಿರುತ್ತದೆ.  ಒಂದು ಶತಮಾನದ ಏಳು ಬೀಳುಗಳನ್ನು ದಾಟಿ ಕುಟುಂಬವನ್ನು ಕಟ್ಟಿ ನಿಲ್ಲಿಸುವುದು ಸುಲಭದ ಮಾತಲ್ಲ. ಹೀಗಿದ್ದಾಗ ಪಶ್ಚಿಮ ಬಂಗಾಳದ (West Bengal) ವ್ಯಕ್ತಿಯೊಬ್ಬ ತನ್ನ 100ನೇ ವರ್ಷದ ಜನ್ಮದಿನದ ಆಚರಣೆ ವೇಳೆ ತನ್ನ 90 ವರ್ಷದ ಹೆಂಡತಿಯನ್ನು ಮರು ಮದುವೆಯಾಗಿದ್ದಾರೆ (Re-marriage).  100 ವರ್ಷದ ಬಿಸ್ವಂತ್​ ಸರ್ಕಾರ್​​ ತನ್ನ 90 ವರ್ಷದ ಪತ್ನಿ ಸೌರ್ಧವನಿ ಸರ್ಕಾರ್​ ಅವರನ್ನು ಅದ್ದೂರಿಯಾಗಿ ಮತ್ತೆ ಮದುವೆಯಾಗಿದ್ದಾರೆ. ಸದ್ಯ ಈ ಸುದ್ದಿ ಎಲ್ಲೆಡೆ ವೈರಲ್ (Viral)​ ಆಗಿದೆ.

ಬಿಸ್ವಂತ್​ ಸರ್ಕಾರ್​  6 ಮಕ್ಕಳು, 23 ಮೊಮ್ಮಕ್ಕಳು, 10 ಮಂದಿ ಮರಿ ಮೊಮ್ಮಕ್ಕಳ ಹಾಗೂ 6 ಮಂದಿ ಸೊಸೆಯಂದಿರನ್ನು ಹೊಂದಿದ್ದಾರೆ. ಬಿಸ್ವಂತ್​ ಅವರ ಮರು ಮದುವೆ ಮದುವೆ ಮತ್ತು 100ನೇ ವರ್ಷದ ಜನ್ಮದಿನವನ್ನು ಕುಟುಂಬ ಅದ್ದೂರಿಯಾಗಿ ಆಚರಿಸಿದೆ.  ಬಿಸ್ವಂತ್​ ಅವರ ಮಕ್ಕಳು ಮತ್ತು ಅವರ ಕುಟುಂಬ ಪಶ್ಚಿಮ ಬಂಗಾಳ ಬಿಟ್ಟು ಬೇರೆ ರಾಜ್ಯಗಳಲ್ಲಿ ನೆಲೆಸಿದ್ದು ಇ ವಿಶೇಷ ದಿನವನ್ನು ಆಚರಿಸಲು ಹಳ್ಳಿಗೆ ಮರಳಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಇಂಡಿಯಾ.ಕಾಮ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿಶೇಷ ಅಚರಣೆಯ ಕುರಿತು ಬಿಸ್ವಂತ್​ ಅವರ ಕುಟುಂಬ ಮಾತನಾಡಿದ್ದು, ನಿಜವಾದ ಮದುವೆಯಲ್ಲಿ ಹೇಗೆ ವಧು ಗಂಡನ ಮನೆಗೆ ಪ್ರವೇಶಿಸುತ್ತಾಳೋ ಅದೆ ರೀತಿ ಮದುವೆಯನ್ನು ಮಾಡಲಾಗಿದೆ.  ವರನ ಮನೆಯಿಂದ 5 ಕಿಮೀ ದೂರದಿಂದ ವಧುವನ್ನು ಕರೆದುಕೊಂಡು ಬರುವಂತೆ ಮಾಡಿ, ಎಲ್ಲಾ ರೀತಿಯ ಸಂಪ್ರದಾಯಗಳನ್ನು ಆಚರಣೆ ಮಾಡುವ ಮೂಲಕ ಮದುವೆಯನ್ನು ಮಾಡಲಾಗಿದೆ. ವರನನ್ನು ಕುದುರೆಗಾಡಿಯಲ್ಲಿ ಕರೆತಂದು, ಹಾರ ಬದಲಾಯಿಸಿಕೊಳ್ಳುವ ರೀತಿಯಲ್ಲಿಯೇ ಆಚರಿಸಲಾಗಿದೆ ಎಂದಿದ್ದಾರೆ. ಸದ್ಯ ಈ ವಿಚಾರ  ಎಲ್ಲೆಡೆ ವೈರಲ್​ ಆಗಿದೆ.

 ಇದನ್ನೂ ಓದಿ:

Viral Story: ಬುಟ್ಟಿಗಟ್ಟಲೆ ನಾಣ್ಯಗಳನ್ನು ನೀಡಿ ಸ್ಕೂಟರ್​ ಖರೀದಿಸಿದ ವ್ಯಕ್ತಿ

Published On - 5:11 pm, Fri, 18 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ