AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೌನ್ ಆಯಿತೇ ಟ್ವಿಟರ್: ನೆಟ್​ ಜಗತ್ತಿನಲ್ಲಿ ಮೆಸೇಜ್​ಗಳ ಮಹಾಪೂರ

ಟ್ವಿಟರ್​ ಡೌನ್ ಆಗಿದೆ ಎಂದು ಕೆಲವೇ ನಿಮಿಷಗಳಲ್ಲಿ 4,500 ಪೋಸ್ಟ್​ಗಳು ಬಂದಿವೆ ಎಂದು ಡೌನ್​ಡಿಟೆಕ್ಟರ್ ವರದಿ ತಿಳಿಸಿದೆ

ಡೌನ್ ಆಯಿತೇ ಟ್ವಿಟರ್: ನೆಟ್​ ಜಗತ್ತಿನಲ್ಲಿ ಮೆಸೇಜ್​ಗಳ ಮಹಾಪೂರ
ಟ್ವಿಟರ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 17, 2022 | 11:04 PM

Share

ಟ್ವಿಟರ್ ವೆಬ್​ಸೈಟ್ ಮತ್ತು ಆ್ಯಪ್​ ಕೆಲ ಸಮಯ ಡೌನ್ ಇತ್ತು ಎಂದು ಸಾವಿರಾರು ಜನರು ಆನ್​ಲೈನ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಡೌನ್​ಡಿಟೆಕ್ಟರ್ (www.downdetector.com) ವೆಬ್​ಸೈಟ್ ವರದಿ ಮಾಡಿದೆ. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಆಗುವ ಪೋಸ್ಟ್​ಗಳು ಮತ್ತು ಸ್ವತಃ ತನಗೆ ಬರುವ ದೂರುಗಳನ್ನು ಆಧರಿಸಿ ಡೌನ್​ಡಿಟೆಕ್ಟರ್ ವೆಬ್​ಸೈಟ್​ ವರದಿಯನ್ನು ಪ್ರಕಟಿಸಿದೆ. ಟ್ವಿಟರ್​ ಡೌನ್ ಆಗಿದೆ ಎಂದು ಕೆಲವೇ ನಿಮಿಷಗಳಲ್ಲಿ 4,500 ಪೋಸ್ಟ್​ಗಳು ಬಂದಿವೆ ಎಂದು ಡೌನ್​ಡಿಟೆಕ್ಟರ್ ವರದಿ ತಿಳಿಸಿದೆ. ಯಾವುದೇ ಟ್ವೀಟ್ ಲೋಡ್ ಮಾಡಲು, ಹೊಸದಾಗಿ ಟ್ವೀಟ್ ಮಾಡಲು ಅಥವಾ ಬೇರೆಯವರ ಪ್ರೊಫೈಲ್​ಗಳನ್ನು ನೋಡಲು ಅವಕಾಶ ಸಿಗುತ್ತಿಲ್ಲ. ಲಿಂಕ್​ಗಳೂ ಕೆಲಸ ಮಾಡುತ್ತಿಲ್ಲ ಎಂದು ಜನರು ದೂರುತ್ತಿದ್ದರು.

ಕೆಲವರಿಗೆ ಸಮ್​ಥಿಂಗ್ ವೆಂಟ್ ರಾಂಗ್ ಮತ್ತು ಟ್ರೈ ರಿಲೋಡಿಂಗ್ (Something went wrong and Try reloading) ಮೆಸೇಜ್​ಗಳು ಹಲವರಿಗೆ ಕಾಣಿಸಿದವು ಎಂದು ಹಲವರು ವರದಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದ ಈ ದೈತ್ಯ ಕಂಪನಿಯಲ್ಲಿ ಸಮಸ್ಯೆ ಆಗಿದೆ ಎನ್ನುವುದು ಇದೇ ಮೊದಲ ಬಾರಿಗೆ ಹೊರಗೆ ಬಂದಿದ್ದಲ್ಲ. ಕಳೆದ ಶುಕ್ರವಾರವು ಟ್ವಿಟರ್​ನಲ್ಲಿ ತಾಂತ್ರಿಕ ಸಮಸ್ಯೆ ವರದಿಯಾಗಿತ್ತು. ಅದನ್ನು ಸರಿಪಡಿಸಿದ್ದಾಗಿ ಕಂಪನಿಯು ಹೇಳಿಕೆ ನೀಡಿತ್ತು.

ತೊಂದರೆಯಾಗಿರುವುದರ ಬಗ್ಗೆ ಒಪ್ಪಿಕೊಂಡು ಟ್ವಿಟರ್ ತನ್ನ ಅಧಿಕೃತ ಖಾತೆಯಿಂದ ಕ್ಷಮೆಯಾಚಿಸಿದೆ. ‘ಈಗ ಎಲ್ಲವೂ ಸರಿಯಾಗಿದೆ’ ಎಂದು ಟ್ವಿಟರ್ ಟ್ವೀಟ್ ಮಾಡಿದೆ. 2021ರ ಸತತ ನಾಲ್ಕನೇ ತ್ರೈಮಾಸಿಕದಲ್ಲಿ ವಿಶ್ವದಲ್ಲಿ ಟ್ವಿಟರ್​ನ ಸಕ್ರಿಯ ಬಳಕೆದಾರರ ಸಂಖ್ಯೆಯು 2.17 ಕೋಟಿಗೆ ಏರಿಕೆಯಾಗಿತ್ತು. ಟ್ವಿಟರ್​ನ ಬೆಳವಣಿಗೆಯು ವಾರ್ಷಿಕ ಸರಾಸರಿ ಶೇ 13ರಷ್ಟು ಹೆಚ್ಚಾಗುತ್ತಿದೆ. ಇದು ಅಮೆರಿಕ ಷೇರುಪೇಟೆ ಹೂಡಿಕೆದಾರರ ನಿರೀಕ್ಷೆಗಳಿಗಿಂತಲೂ ಕಡಿಮೆ ಎಂದು ಅಮೆರಿಕದ ಷೇರು ದಲ್ಲಾಳಿಗಳು ಹೇಳಿದ್ದಾರೆ. ಟ್ವಿಟರ್​ನ ತಾಂತ್ರಿಕ ಸಮಸ್ಯೆ ಬಹಿರಂಗಗೊಂಡ ನಂತರ ಟ್ವಿಟರ್ ಕಂಪನಿಯ ಷೇರುಗಳ ಮೌಲ್ಯ ನ್ಯೂಯಾರ್ಕ್ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಶೇ 0.21ರಷ್ಟು ಕುಸಿತ ಕಂಡಿತ್ತು.

ಇದನ್ನೂ ಓದಿ: ಕೇಂದ್ರ ಸಚಿವ, ರಾಜಸ್ಥಾನ ರಾಜ್ಯಪಾಲರ ಟ್ವಿಟರ್ ಅಕೌಂಟ್​ಗಳೆಲ್ಲ ಹ್ಯಾಕ್​; ಅರೇಬಿಕ್​, ಉರ್ದು ಭಾಷೆಯಲ್ಲಿ ಪೋಸ್ಟ್​ ಮಾಡಿದ ಕಿಡಿಗೇಡಿಗಳು

ಇದನ್ನೂ ಓದಿ: IPL 2021 Auction: ಟ್ವಿಟರ್​ನಲ್ಲಿ ಅರ್ಜುನ್ ತೆಂಡೂಲ್ಕರ್ ಟ್ರೆಂಡಿಂಗ್, ಯಾವ ತಂಡಕ್ಕೆ ಸಚಿನ್ ಪುತ್ರ?

ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ವಿಷ್ಣು ಸಮಾಧಿ ಮರು ನಿರ್ಮಾಣಕ್ಕೆ ಬಾಲಣ್ಣ ಪುತ್ರಿ ಗೀತಾ ಜಾಗ ಕೊಡ್ತಾರಾ?
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಮೃತ ಮತದಾರರ ಜತ ಟೀ ಕುಡಿಯುವಂತೆ ಮಾಡಿದ ಆಯೋಗಕ್ಕೆ ಧನ್ಯವಾದ:ರಾಹುಲ್​
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಶಿವಕುಮಾರ್ ಸಿಎಂ ಆಗ್ತಾರಾ ಅಂತ ಕೇಳಿದರೆ ಇಕ್ಬಾಲ್ ಹುಸ್ಸೇನ್ ಮುಗುಳ್ನಕ್ಕರು
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಯಾಕೆ ಜೋತು ಬಿದ್ದಿದ್ದಾರೋ? ಇಬ್ರಾಹಿಂ
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಲಿವಿಂಗ್​ಸ್ಟೋನ್ ಅಬ್ಬರಕ್ಕೆ ಸ್ಟನ್ ಆದ ರಶೀದ್ ಖಾನ್
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಯಶ್ ಬಗ್ಗೆ ಬಾಲಿವುಡ್ ನಿರ್ಮಾಪಕ ಹೇಳಿದ್ದೇನು: ಕೆ ಮಂಜು ಹೇಳಿದ್ದಾರೆ ನೋಡಿ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಭ್ರಷ್ಟಾಚಾರದ ಪಿತಾಮಹ ನಾನಾ ನೀನಾ ಅಂತ ಕೂಗಾಟ, ಸ್ಪೀಕರ್ ಪ್ರೇಕ್ಷಕ
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ