AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೌನ್ ಆಯಿತೇ ಟ್ವಿಟರ್: ನೆಟ್​ ಜಗತ್ತಿನಲ್ಲಿ ಮೆಸೇಜ್​ಗಳ ಮಹಾಪೂರ

ಟ್ವಿಟರ್​ ಡೌನ್ ಆಗಿದೆ ಎಂದು ಕೆಲವೇ ನಿಮಿಷಗಳಲ್ಲಿ 4,500 ಪೋಸ್ಟ್​ಗಳು ಬಂದಿವೆ ಎಂದು ಡೌನ್​ಡಿಟೆಕ್ಟರ್ ವರದಿ ತಿಳಿಸಿದೆ

ಡೌನ್ ಆಯಿತೇ ಟ್ವಿಟರ್: ನೆಟ್​ ಜಗತ್ತಿನಲ್ಲಿ ಮೆಸೇಜ್​ಗಳ ಮಹಾಪೂರ
ಟ್ವಿಟರ್
TV9 Web
| Edited By: |

Updated on: Feb 17, 2022 | 11:04 PM

Share

ಟ್ವಿಟರ್ ವೆಬ್​ಸೈಟ್ ಮತ್ತು ಆ್ಯಪ್​ ಕೆಲ ಸಮಯ ಡೌನ್ ಇತ್ತು ಎಂದು ಸಾವಿರಾರು ಜನರು ಆನ್​ಲೈನ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಡೌನ್​ಡಿಟೆಕ್ಟರ್ (www.downdetector.com) ವೆಬ್​ಸೈಟ್ ವರದಿ ಮಾಡಿದೆ. ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಆಗುವ ಪೋಸ್ಟ್​ಗಳು ಮತ್ತು ಸ್ವತಃ ತನಗೆ ಬರುವ ದೂರುಗಳನ್ನು ಆಧರಿಸಿ ಡೌನ್​ಡಿಟೆಕ್ಟರ್ ವೆಬ್​ಸೈಟ್​ ವರದಿಯನ್ನು ಪ್ರಕಟಿಸಿದೆ. ಟ್ವಿಟರ್​ ಡೌನ್ ಆಗಿದೆ ಎಂದು ಕೆಲವೇ ನಿಮಿಷಗಳಲ್ಲಿ 4,500 ಪೋಸ್ಟ್​ಗಳು ಬಂದಿವೆ ಎಂದು ಡೌನ್​ಡಿಟೆಕ್ಟರ್ ವರದಿ ತಿಳಿಸಿದೆ. ಯಾವುದೇ ಟ್ವೀಟ್ ಲೋಡ್ ಮಾಡಲು, ಹೊಸದಾಗಿ ಟ್ವೀಟ್ ಮಾಡಲು ಅಥವಾ ಬೇರೆಯವರ ಪ್ರೊಫೈಲ್​ಗಳನ್ನು ನೋಡಲು ಅವಕಾಶ ಸಿಗುತ್ತಿಲ್ಲ. ಲಿಂಕ್​ಗಳೂ ಕೆಲಸ ಮಾಡುತ್ತಿಲ್ಲ ಎಂದು ಜನರು ದೂರುತ್ತಿದ್ದರು.

ಕೆಲವರಿಗೆ ಸಮ್​ಥಿಂಗ್ ವೆಂಟ್ ರಾಂಗ್ ಮತ್ತು ಟ್ರೈ ರಿಲೋಡಿಂಗ್ (Something went wrong and Try reloading) ಮೆಸೇಜ್​ಗಳು ಹಲವರಿಗೆ ಕಾಣಿಸಿದವು ಎಂದು ಹಲವರು ವರದಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದ ಈ ದೈತ್ಯ ಕಂಪನಿಯಲ್ಲಿ ಸಮಸ್ಯೆ ಆಗಿದೆ ಎನ್ನುವುದು ಇದೇ ಮೊದಲ ಬಾರಿಗೆ ಹೊರಗೆ ಬಂದಿದ್ದಲ್ಲ. ಕಳೆದ ಶುಕ್ರವಾರವು ಟ್ವಿಟರ್​ನಲ್ಲಿ ತಾಂತ್ರಿಕ ಸಮಸ್ಯೆ ವರದಿಯಾಗಿತ್ತು. ಅದನ್ನು ಸರಿಪಡಿಸಿದ್ದಾಗಿ ಕಂಪನಿಯು ಹೇಳಿಕೆ ನೀಡಿತ್ತು.

ತೊಂದರೆಯಾಗಿರುವುದರ ಬಗ್ಗೆ ಒಪ್ಪಿಕೊಂಡು ಟ್ವಿಟರ್ ತನ್ನ ಅಧಿಕೃತ ಖಾತೆಯಿಂದ ಕ್ಷಮೆಯಾಚಿಸಿದೆ. ‘ಈಗ ಎಲ್ಲವೂ ಸರಿಯಾಗಿದೆ’ ಎಂದು ಟ್ವಿಟರ್ ಟ್ವೀಟ್ ಮಾಡಿದೆ. 2021ರ ಸತತ ನಾಲ್ಕನೇ ತ್ರೈಮಾಸಿಕದಲ್ಲಿ ವಿಶ್ವದಲ್ಲಿ ಟ್ವಿಟರ್​ನ ಸಕ್ರಿಯ ಬಳಕೆದಾರರ ಸಂಖ್ಯೆಯು 2.17 ಕೋಟಿಗೆ ಏರಿಕೆಯಾಗಿತ್ತು. ಟ್ವಿಟರ್​ನ ಬೆಳವಣಿಗೆಯು ವಾರ್ಷಿಕ ಸರಾಸರಿ ಶೇ 13ರಷ್ಟು ಹೆಚ್ಚಾಗುತ್ತಿದೆ. ಇದು ಅಮೆರಿಕ ಷೇರುಪೇಟೆ ಹೂಡಿಕೆದಾರರ ನಿರೀಕ್ಷೆಗಳಿಗಿಂತಲೂ ಕಡಿಮೆ ಎಂದು ಅಮೆರಿಕದ ಷೇರು ದಲ್ಲಾಳಿಗಳು ಹೇಳಿದ್ದಾರೆ. ಟ್ವಿಟರ್​ನ ತಾಂತ್ರಿಕ ಸಮಸ್ಯೆ ಬಹಿರಂಗಗೊಂಡ ನಂತರ ಟ್ವಿಟರ್ ಕಂಪನಿಯ ಷೇರುಗಳ ಮೌಲ್ಯ ನ್ಯೂಯಾರ್ಕ್ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಶೇ 0.21ರಷ್ಟು ಕುಸಿತ ಕಂಡಿತ್ತು.

ಇದನ್ನೂ ಓದಿ: ಕೇಂದ್ರ ಸಚಿವ, ರಾಜಸ್ಥಾನ ರಾಜ್ಯಪಾಲರ ಟ್ವಿಟರ್ ಅಕೌಂಟ್​ಗಳೆಲ್ಲ ಹ್ಯಾಕ್​; ಅರೇಬಿಕ್​, ಉರ್ದು ಭಾಷೆಯಲ್ಲಿ ಪೋಸ್ಟ್​ ಮಾಡಿದ ಕಿಡಿಗೇಡಿಗಳು

ಇದನ್ನೂ ಓದಿ: IPL 2021 Auction: ಟ್ವಿಟರ್​ನಲ್ಲಿ ಅರ್ಜುನ್ ತೆಂಡೂಲ್ಕರ್ ಟ್ರೆಂಡಿಂಗ್, ಯಾವ ತಂಡಕ್ಕೆ ಸಚಿನ್ ಪುತ್ರ?

Follow Us
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ