AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸದ ತೊಟ್ಟಿಯಿಂದ ಮೊಸಳೆ ಹಿಡಿದ ಮಾಜಿ ಯೋಧ; ವಿಡಿಯೋ ವೈರಲ್

ಮಾಜಿ ಯೋಧ ಯುಜೀನ್ ಬೊಝಿ ತನ್ನ ತೋಟದಲ್ಲಿ ಮೊಸಳೆಯಿಂದ ಪಾರಾಗಲು ಡಸ್ಟ್ ಬಿನ್ ಬಳಸುತ್ತಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೀವ ರಕ್ಷಣೆಗಾಗಿ ಕಸದ ತೊಟ್ಟಿ ಸಹಾಯದಿಂದ 6 ಅಡಿ ಮೊಸಳೆಯನ್ನು ಸೆರೆಹಿಡಿದಿದ್ದಾರೆ.

ಕಸದ ತೊಟ್ಟಿಯಿಂದ ಮೊಸಳೆ ಹಿಡಿದ ಮಾಜಿ ಯೋಧ; ವಿಡಿಯೋ ವೈರಲ್
ಮೊಸಳೆಯನ್ನು ಹಿಡಿಯುತ್ತಿರುವ ದೃಶ್ಯ
TV9 Web
| Updated By: sandhya thejappa|

Updated on: Oct 03, 2021 | 11:07 AM

Share

ಮೊಸಳೆಯನ್ನು ದೂರದಿಂದ ನೋಡಿದರೆ ಸಾಕು ನಿಂತಲ್ಲೆ ಕೈ ಕಾಲುಗಳು ನಡುಗುವುದಕ್ಕೆ ಶುರು ಮಾಡುತ್ತವೆ. ಹೀಗಿರುವಾಗ ಫ್ಲೋರಿಡಾದಲ್ಲಿ ಮಾಜಿ ಯೋಧನೊಬ್ಬ ಮೊಸಳೆಯನ್ನು ಹಿಡಿಯುವ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ಮೊಸಳೆಯನ್ನು ಹಿಡಿದು ಕೆರೆ ಬಳಿ ಬಿಟ್ಟಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಡಸ್ಟ್ ಬಿನ್ ಸಹಾಯದಿಂದ ಮಾಜಿ ಯೋಧ ಯುಜೀನ್ ಬೊಝಿ ಎಂಬುವವರು ಮೊಸಳೆಯನ್ನು ಸೆರೆಹಿಡಿದಿದ್ದಾರೆ. ಮೊಸಳೆಯನ್ನು ಸೆರೆಹಿಡಿಯಲು ಕೆಲ ಸಮಯ ಡಸ್ಟ್ ಬಿನ್ ಹಿಡಿದು ಪರದಾಡುತ್ತಾರೆ.

ಮಾಜಿ ಯೋಧ ಯುಜೀನ್ ಬೊಝಿ ತನ್ನ ತೋಟದಲ್ಲಿ ಮೊಸಳೆಯಿಂದ ಪಾರಾಗಲು ಡಸ್ಟ್ ಬಿನ್ ಬಳಸುತ್ತಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜೀವ ರಕ್ಷಣೆಗಾಗಿ ಕಸದ ತೊಟ್ಟಿ ಸಹಾಯದಿಂದ 6 ಅಡಿ ಮೊಸಳೆಯನ್ನು ಸೆರೆಹಿಡಿದಿದ್ದಾರೆ. ಡಸ್ಟ್ ಬಿನ್ ಹತ್ತಿರ ಇಟ್ಟಾಗ ಮೊಸಳೆ ಜೋರಾಗಿ ಸದ್ದು ಮಾಡಿ ಹಿಂದಕ್ಕೆ ಚಲಿಸುತ್ತದೆ. ಕೆಲ ಸೆಕೆಂಡುಗಳ ಕಾಲ ಕೋಪದಿಂದ ಒದ್ದಾಡುತ್ತದೆ. ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ ಪ್ರಯತ್ನ ಬಿಡದ ಮಾಜಿ ಯೋಧ ಕೊನೆಗೂ ಕಸದ ತೊಟ್ಟಿ ಸಹಾಯದಿಂದ ಮೊಸಳೆಯನ್ನು ಹಿಡಿಯುತ್ತಾರೆ.

ಮೊಸಳೆ ಒಳಗೆ ಹೋಗುತ್ತಿದ್ದಂತೆ ಕಸದ ತೊಟ್ಟಿಯನ್ನು ನೇರವಾಗಿ ಇಡುತ್ತಾರೆ. ತಕ್ಷಣ ಡಸ್ಟ್ ಬಿನ್ ಮುಚ್ಚಳವನ್ನು ಮುಚ್ಚುತ್ತಾರೆ. ನಂತರ ಮೊಸಳೆಯನ್ನು ಬಿಡಲು ಕೆರೆಯ ಬಳಿ ಕಸದ ತೊಟ್ಟಿಯನ್ನು ತರುತ್ತಾರೆ. ಕಸದ ತೊಟ್ಟಿಯನ್ನು ಕೆಳಗೆ ಇಡುತ್ತಿದ್ದಂತೆ ಭಯದಿಂದ ಹಿಂದಕ್ಕೆ ಓಡಿ ಬರುತ್ತಾರೆ. ಈ ಎಲ್ಲಾ ದೃಶ್ಯಗಳನ್ನು ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ಇದನ್ನೂ ಓದಿ

Viral Video: ಎಟಿಎಂನಿಂದ ಹಣ ಪಡೆದು ಖುಷಿಯಿಂದ ಕುಣಿದು ಕುಪ್ಪಳಿಸಿದ ಹುಡುಗಿ; ಭರ್ಜರಿ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್

ಶ್ವೇತಾ ಚಂಗಪ್ಪ ಮನೆಯಲ್ಲಿ ರವಿಚಂದ್ರನ್​; ಮಜಾ ಟಾಕೀಸ್​ ರಾಣಿ ಮಗನ ಜತೆ ‘ಕ್ರೇಜಿ ಸ್ಟಾರ್​’ ವಿಡಿಯೋ ವೈರಲ್​

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!