AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Monday Motivation: 7 ಸೇನಾ ಜನರಲ್​ಗಳಿಗೆ ಇನ್ಸ್​​​ಟ್ರಕ್ಟರ್​ ಆಗಿದ್ದ 100 ವರ್ಷದ ಯೋಧ ಬೆಂಗಳೂರಿನ ಸ್ವಾಮಿ ಎದೆಸೆಟೆಸಿ ಸೆಲ್ಯೂಟ್​ ಹೊಡೆದಾಗ! ವಿಡಿಯೊ ನೋಡಿ

Anand Mahindra: ಇನ್ನು ಜಗತ್ತಿನ ಇಂತಹ ಆಗುಹೋಗುಗಳಿಗೆ ಸಕಾಲಿಕವಾಗಿ ಪ್ರತಿಕ್ರಿಯಿಸುವ, ಪ್ರತಿಸ್ಪಂದಿಸುವ ಖ್ಯಾತ ಉದ್ಯಮಿ ಆನಂದ ಮಹೀಂದ್ರ ಅವರು ಶತಾಯುಷಿ ಯೋಧನ ಹುಟ್ಟುಹಬ್ಬ ಆಚರಣೆಯ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ವಾರಾರಂಭಕ್ಕೆ ಇದು ಪ್ರೇರಣಾದಾಯಕ ಎಂದು ಷರಾ ಬರೆದಿದ್ದಾರೆ.

Monday Motivation: 7 ಸೇನಾ ಜನರಲ್​ಗಳಿಗೆ ಇನ್ಸ್​​​ಟ್ರಕ್ಟರ್​ ಆಗಿದ್ದ 100 ವರ್ಷದ ಯೋಧ ಬೆಂಗಳೂರಿನ ಸ್ವಾಮಿ  ಎದೆಸೆಟೆಸಿ ಸೆಲ್ಯೂಟ್​ ಹೊಡೆದಾಗ! ವಿಡಿಯೊ ನೋಡಿ
7 ಸೇನಾ ಜನರಲ್​ಗಳಿಗೆ ಇನ್ಸ್​​​ಟ್ರಕ್ಟರ್​ ಆಗಿದ್ದ 100 ವರ್ಷದ ಯೋಧ ಮೇಜರ್ ಸ್ವಾಮಿ ಎದೆಸೆಟೆಸಿ ಸೆಲ್ಯೂಟ್​ ಹೊಡೆದಾಗ! ವಿಡಿಯೊ ನೋಡಿ
TV9 Web
| Updated By: ಸಾಧು ಶ್ರೀನಾಥ್​|

Updated on: Oct 03, 2022 | 12:09 PM

Share

ಅವರು ಬರೋಬ್ಬರಿ ಏಳು ಸೇನಾ ಜನರಲ್​ಗಳಿಗೆ ಇನ್ಸ್​​​ಟ್ರಕ್ಟರ್ (Drill Instructor)​ ಆಗಿದ್ದವರು. ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಲು ವೀಲ್​ ಚೇರಿನಲ್ಲಿ ಬಂದಿದ್ದರು. ಆದರೆ ತಾವು ಎದೆಯಾಳದಿಂದ ಪ್ರೀತಿಸುವ ಯೋಧರನ್ನು ಕಂಡವರೆ ಆ ಯೋಧರ ಎದುರು ಎದೆಯುಬ್ಬಿಸಿ ಜೈ ಹಿಂದ್​ ಎಂದು ಅದೇ ಗತ್ತು ಗಾಂಭೀರ್ಯದಿಂದ ಸೆಲ್ಯೂಟ್​ ಹೊಡೆದರು. ಹಾಗೆ ಎದೆಸೆಟೆಸಿ ಸೆಲ್ಯೂಟ್​ ಹೊಡೆದವರು ಮಾಜಿ ಯೋಧ, ವಿಶಿಷ್ಟ ಸೇವಾ ಮೆಡಲ್ ಪುರಸ್ಕೃತ ಗೋವಿಂದ ಸ್ವಾಮಿ ಅವರು (VSM Govinda Swami)

ಹೌದು ಮೇಜರ್ ಸ್ವಾಮಿ ಅವರ 100ನೇ ಹುಟ್ಟುಹಬ್ಬವನ್ನು ನ್ಯಾಷನಲ್ ಡಿಫೆನ್ಸ್​ ಅಕಾಡೆಮಿ (National Defence Academy) ಔಪಚಾರಿಕವಾಗಿ ಆಚರಿಸಿದೆ. ಅವರು ವೀಲ್​ ಚೇರಿನಲ್ಲಿ ಬಂದು ಗೌರವ ವಂದನೆ ಸ್ವೀಕರಿಸಲು ನಡುಗುವ ದೇಹವನ್ನು ಆರ್ಮಿ ಪೊಸಿಷನ್ ನಲ್ಲಿ ನಿಲ್ಲಿಸಿ, ಸೆಲ್ಯೂಟ್​ ಹೊಡೆದಾಗ ಎಂತಹವರ ಎದೆಯಲ್ಲೇ ಆಗಲಿ ದೇಶಭಕ್ತಿಯ ಕಿಚ್ಚು ಹಬ್ಬುವುದು ಖಚಿತ. ಹಾಗಿತ್ತು ಅವರ ಗಾರ್ಡ್​​ ಆಫ್​ ಆನರ್!

ಇನ್ನು ಜಗತ್ತಿನ ಇಂತಹ ಆಗುಹೋಗುಗಳಿಗೆ ಸಕಾಲಿಕವಾಗಿ ಪ್ರತಿಕ್ರಿಯಿಸುವ, ಪ್ರತಿಸ್ಪಂದಿಸುವ ಖ್ಯಾತ ಉದ್ಯಮಿ ಆನಂದ ಮಹೀಂದ್ರ ಅವರು (Anand Mahindra) ಶತಾಯುಷಿ ಯೋಧನ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ವಾರಾರಂಭಕ್ಕೆ ಇದು ಪ್ರೇರಣಾದಾಯಕ ಎಂದು (#MondayMotivation) ಷರಾ ಬರೆದಿದ್ದಾರೆ. ನಿಮಗೂ ಇದು ಮಂಡೆ ಮೋಟಿವೇಶನ್​ ಆಗಬಹುದು ವಿಡಿಯೋ ನೋಡಿ.

Anand Mahindra ಟ್ವೀಟ್ ಸಾರಾಂಶ ಹೀಗಿದೆ:

“Sub Major Swamy, ex Drill Instructor of the National Defence Academy being felicitated on his 100th birthday. He Instructed 7 Indian Army Generals” Army as well as Indian tradition of enduring respect for our Gurus. I had goosebumps when he saluted.This is my #MondayMotivation

ಕಾರ್ಯಕ್ರಮ ನಡೆದಿದ್ದು ಬೆಂಗಳೂರಿನ MEG ಕೇಂದ್ರದಲ್ಲಿ! ಅದರ ವಿಶೇಷತೆ ಏನು ಗೊತ್ತಾ!?

ಈ ಕಾರ್ಯಕ್ರಮ ಆಯೋಜಿಸಿದ್ದ ಮೆಡ್ರಾಸ್​ ಎಂಜಿನಿಯರಿಂಗ್ ಗ್ರೂಪ್ (MEG – Madras Sappers Bangalore) ಮತ್ತು ಭಾರತೀಯ ಸೇನೆಯ (ಸದರನ್ ಕಮಾಂಡ್ -Southern Command Indian Army) ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು ಬೆಂಗಳೂರಿನಲ್ಲಿರುವ MEG ಕೇಂದ್ರದಲ್ಲಿ! Madras Sappers ವಿಭಾಗದವರ 242ನೇ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಗಮನಾರ್ಹವೆಂದರೆ ಗೌರವಾನ್ವಿತ ಕ್ಯಾಪ್ಟನ್ ಗೋವಿಂದ ಸ್ವಾಮಿ ಅವರ ಪ್ರತಿಮೆಯನ್ನು ಬೆಂಗಳೂರಿನ MEG ಕೇಂದ್ರದಲ್ಲಿ ಇದೇ ವೇಳೆ ಸ್ಥಾಪಿಸಲಾಗಿದೆ. ಕುತೂಹಲದ ಸಂಗತಿಯೆಂದರೆ ಇನ್ನು ಅನಾವರಣ ಮಾಡಿದ್ದು ಸ್ವತಃ ಗೋವಿಂದ ಸ್ವಾಮಿ ಅವರೇ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ