Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮೀನುಗಾರರ ಬಲೆಗೆ ಬಿದ್ದ 1,500 ಕೆಜಿ ತೂಕದ ಎರಡು ತಿಮಿಂಗಿಲ; ವಿಡಿಯೋ ಇಲ್ಲಿದೆ ನೋಡಿ

ಆಂಧ್ರಪ್ರದೇಶದ ವಿಶ್ವನಾಥಪಲ್ಲಿ ವೀರಬಾಬು ಎಂಬ ಸ್ಥಳೀಯ ಮೀನುಗಾರನ ಬಲೆಗೆ 1,500 ಕೆಜಿ ತೂಕದ ಎರಡು ತಿಮಿಂಗಿಲ ಸಿಕ್ಕಿಬಿದ್ದಿದೆ. ಅದರಲ್ಲಿ ಒಂದು ಸತ್ತಿದ್ದು, ಕ್ರೇನ್​​ ಮೂಲಕ ದಡಕ್ಕೆ ತರಲಾಗಿದೆ. ಜೀವಂತವಾಗಿದ್ದ ಮತ್ತೊಂದು ಮೀನನ್ನು ಮತ್ತೆ ಸಾಗರಕ್ಕೆ ಬಿಡಲಾಗಿದೆ ಎಂದು ವರದಿಯಾಗಿದೆ.

Viral Video: ಮೀನುಗಾರರ ಬಲೆಗೆ ಬಿದ್ದ 1,500 ಕೆಜಿ ತೂಕದ ಎರಡು ತಿಮಿಂಗಿಲ; ವಿಡಿಯೋ ಇಲ್ಲಿದೆ ನೋಡಿ
Follow us
ಅಕ್ಷತಾ ವರ್ಕಾಡಿ
|

Updated on:Jul 30, 2024 | 12:55 PM

ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣದ ಗಿಲಕಲದಿಂಡಿಯ ಕರಾವಳಿ ಕುಗ್ರಾಮದಲ್ಲಿ ಸುಮಾರು 1,500 ಕೆಜಿ ತೂಕದ ಎರಡು ತಿಮಿಂಗಿಲ ಶಾರ್ಕ್ ಮೀನುಗಾರರ ಬಲೆಗೆ ಸಿಕ್ಕಿಬಿದ್ದಿದೆ. ಬೃಹತ್​​ ಗ್ರಾತ್ರದ ಮೀನನ್ನು ದಡಕ್ಕೆ ತರಲು ಕ್ರೇನ್ ಅನ್ನು ಬಳಸಲಾಗಿದೆ. ಕ್ರೇನ್​​ ಮೂಲಕ ಮೀನನ್ನು ಹೊರತರುವ ದೃಶ್ಯವನ್ನು ಸ್ಥಳೀಯರು ಪೋನಿನಲ್ಲಿ ಸೆರೆಹಿಡಿದು, ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗುತ್ತಿದೆ.

ತಿಮಿಂಗಿಲ ಶಾರ್ಕ್‌ಗಳನ್ನು ಸ್ಥಳೀಯವಾಗಿ ಚುಕ್ಕಾ ಸೊರ ಮೀನುಗಳು ಎಂದು ಕರೆಯಲಾಗುತ್ತದೆ. ವರದಿಗಳ ಪ್ರಕಾರ, ವಿಶ್ವನಾಥಪಲ್ಲಿ ವೀರಬಾಬು ಎಂಬ ಸ್ಥಳೀಯ ಮೀನುಗಾರನ ಬಲೆಗೆ ತಿಮಿಂಗಿಲ ಸಿಕ್ಕಿಬಿದ್ದಿದೆ. ಮೀನುಗಾರರು ಜೆಸಿಬಿ ಲೋಡರ್ ಸಹಾಯದಿಂದ ಬೃಹತ್​​​ ತಿಮಿಂಗಿಲವನ್ನು ಹೊರತೆಗೆದಿದ್ದಾರೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ವೃದ್ದೆಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಕೂರಿಸಿ ಹೊಳೆ ದಾಟಿ ಆಸ್ಪತ್ರೆಗೆ ಕರೆದುಕೊಂಡು ಬಂದ ವ್ಯಕ್ತಿ

ವಿಶ್ವನಾಥಪಲ್ಲಿ ವೀರಬಾಬು ಅವರ ಪ್ರಕಾರ, ಜುಲೈ 26, ಶುಕ್ರವಾರದಂದು ಎರಡು ಅಗಾಧ ಮೀನುಗಳನ್ನು ಅವರು ಮತ್ತು ಅವರ ತಂಡವು ಹಿಡಿದಿದ್ದು, ಅವುಗಳಲ್ಲಿ ಒಂದು ಸತ್ತಿದೆ. ಪರಿಣಾಮವಾಗಿ, ಜೀವಂತ ಮೀನನ್ನು ಮತ್ತೆ ಸಾಗರಕ್ಕೆ ಬಿಡಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:54 pm, Tue, 30 July 24

ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್
ವೇದಿಕೆಯ ಗಾಂಭೀರ್ಯತೆಯನ್ನು ಶಾಸಕರು ಅರ್ಥಮಾಡಿಕೊಳ್ಳಬೇಕು: ಶಿವಕುಮಾರ್