AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರಾಖಂಡದ ಈ ಜೈಲ್ಲಿನಲ್ಲಿ ಒಂದು ರಾತ್ರಿ ಕಳೆದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ

ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಜೈಲ್ಲಿನಲ್ಲಿ ಒಂದು ರಾತ್ರಿ ಕಳೆದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ

ಉತ್ತರಾಖಂಡದ ಈ ಜೈಲ್ಲಿನಲ್ಲಿ ಒಂದು ರಾತ್ರಿ ಕಳೆದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ
ಉತ್ತರಾಖಂಡದ ಜೈಲು
TV9 Web
| Updated By: ವಿವೇಕ ಬಿರಾದಾರ|

Updated on: Oct 01, 2022 | 7:30 AM

Share

ನಿಮಗೆ ಕಷ್ಟಗಳು ಎದುರಾದರೆ ಪರಿಹಾರ ಕಂಡುಕೊಳ್ಳಲು ಕಾಶಿ, ರಾಮೇಶ್ವರ ಅಥವಾ ಇತ್ಯಾದಿ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಹಾರ ಆಗುತ್ತದೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ಒಬ್ಬ ಜ್ಯೋತಿಷಿಯು ನಿಮ್ಮ ಕಷ್ಟಗಳು ದೂರವಾಗಬೇಕಾದರೇ ಅಥವಾ ಭವಿಷ್ಯದ ದಿನಗಳಲ್ಲಿ ನೀವು ಜೈಲಿಗೆ ಹೋಗುವ ಸನ್ನೀವೇಶ ಎದುರಾಗಲಿದ್ದರೆ ಅದನ್ನು ತಡೆಗಟ್ಟಲು ಈಗಲೇ ಜೈಲಿಗೆ ಹೋಗಿ ಎಂದು ಹೇಳುತ್ತಾರೆ. ಹೌದು ಉತ್ತರಾಖಂಡದ ಹಲ್ದ್ವಾನಿಯಲ್ಲಿರುವ ಜೈಲ್ಲಿನಲ್ಲಿ ಒಂದು ರಾತ್ರಿ ಕಳೆದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ ಮತ್ತು ಭವಿಷ್ಯದ ದಿನಗಳಲ್ಲಿ ನೀವು ಜೈಲಿಗೆ ಹೋಗುವ ಪ್ರಸಂಗ ಇದ್ದರೆ ಅದನ್ನು ತಡೆಯುತ್ತದೆ.

ನಿಮ್ಮ ಕಷ್ಟ ದೂರವಗಲು ಈ ಜೈಲಿನಲ್ಲಿ ಒಂದು ರಾತ್ರಿ ಕಳೆಯಲು 500ರೂ ನೀಡಬೇಕಾಗುತ್ತದೆ. ಈ ಜೈಲನ್ನು 1903 ರಲ್ಲಿ ನಿರ್ಮಿಸಲಾಗಿದೆ. ಈಗ ಈ ಜೈಲಿನಲ್ಲಿ ಕೈದಿಗಳನ್ನು ಹಾಕುತ್ತಿಲ್ಲ ಬದಲಾಗಿ ಕಷ್ಟ ಎಂದು ಬರುವ ಅತಿಥಿಗಳನ್ನು ಇರಿಸಲಾಗುತ್ತಿದೆ. ಈ ಜೈಲಿನಲ್ಲಿ ಕೆಲವು ಗಂಟೆಗಳಕಾಲ ಇರಿಸಲು ವ್ಯಕ್ತಿಗಳ ಹೆಸರನ್ನು ಮೇಲಿನ ಅಧಿಕಾರಿಗಳು ಶಿಪಾರಸ್ಸು ಮಾಡುತ್ತಾರೆ. ಅವರ ಶಿಪಾರಸ್ಸಿನ ಮೇರೆಗೆ ಅತಿಥಿ ಕೈದಿಗಳಿಗೆ ಜೈಲಿನ ಸಮವಸ್ತ್ರ ಮತ್ತು ಜೈಲಿನ ಅಡುಗೆಮನೆಯಲ್ಲಿ ಮಾಡಿದ ಆಹಾರವನ್ನು ನೀಡಲಾಗುತ್ತದೆ ಎಂದು ಕಾರಾಗೃಹದ ಉಪ ಜೈಲು ಅಧೀಕ್ಷಕ ಸತೀಶ್ ಸುಖಿಜಾ ಅವರು ಖಾಸಿಗಿ ಸುದ್ದಿ ಸಂಸ್ಥೆ TOI ಗೆ ಹೇಳಿದ್ದಾರೆ ಎಂದು ಇಂಡಿಯಾ ಡಾಟ್​ ಕಾಮ್​ ವರದಿ ಮಾಡಿದೆ.

ಕಾರಾಗೃಹದ ಅನುಭವವನ್ನು ಪಡೆಯಬೇಕು ಎಂದು ಬಯಸುವ ವ್ಯಕ್ತಿಗಳಿಗೆ ಈ ಜೈಲ್ಲಿನಲ್ಲಿ ಇರಲು ಅವಕಾಶ ಮಾಡಿಕೊಡಲಾಗುತ್ತದೆ. ಮತ್ತು ಜಾತಕದಲ್ಲಿ ಭವಿಷ್ಯದ ದಿನಗಳಲ್ಲಿ ಜೈಲಿಗೆ ಹೋಗುವ ಪ್ರಸಂಗ ಬರುವಂತಿದ್ದರೆ ಅದನ್ನು ತಡೆಯಲು ಈ ಜೈಲಿನಲ್ಲಿ ಸಮಯ ಕಳೆಯಲು ಜ್ಯೋತಿಷಿಗಳು ಸಲಹೆ ನೀಡುತ್ತಾರೆ.

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?