AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಕ್​ ಫ್ರಂ ಹೋಂ ಮತ್ತು ವರ್ಕ್​ ಫ್ರಂ ಆಫೀಸ್​; ಪೈ ಚಾರ್ಟ್​ ಹಂಚಿಕೊಂಡ ಹರ್ಷ ಗೋಯೆಂಕಾ

WFH : ಉದ್ಯೋಗಿಯು ಕಚೇರಿಯಿಂದ ಕೆಲಸ ಮಾಡಿದಾಗ ಮತ್ತು ವರ್ಕ್​ ಫ್ರಂ ಹೋಂ ಮಾಡಿದಾಗ ಸಮಯದ ಹೂಡಿಕೆಯಲ್ಲಿ ಉಂಟಾಗುವ ವ್ಯತ್ಯಾಸವನ್ನು ಈ ಪೈ ಚಾರ್ಟ್​ಗಳು ಸೂಚಿಸುತ್ತವೆ.

ವರ್ಕ್​ ಫ್ರಂ ಹೋಂ ಮತ್ತು ವರ್ಕ್​ ಫ್ರಂ ಆಫೀಸ್​; ಪೈ ಚಾರ್ಟ್​ ಹಂಚಿಕೊಂಡ ಹರ್ಷ ಗೋಯೆಂಕಾ
ಉದ್ಯಮಿ ಹರ್ಷ ಗೋಯೆಂಕಾ
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Sep 30, 2022 | 4:34 PM

Share

Trending : ಕೊವಿಡ್​ನಿಂದ ಅಸ್ತವ್ಯಸ್ತಗೊಂಡಿದ್ದ ಜನಜೀವನ ನಿಧಾನ ಸಮಸ್ಥಿತಿಗೆ ಹೊರಳುತ್ತಿದೆ. ವರ್ಕ್​ ಫ್ರಂ ಹೋಂ ಮಾಡುತ್ತಿದ್ದ ಜನರು ಕಚೇರಿಗಳಿಗೆ ತೆರಳಿ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಕಾರ್ಗತ್ತಲೆ ಕಳೆದು ಹಳೆಯ ದಿನಚರಿಗೆ ಬರುತ್ತಿದ್ದೇವೆ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೂ ಕೆಲ ಕಂಪೆನಿಗಳು ವರ್ಕ್​​ ಫ್ರಂ ಹೋಮ್​ಗೆ ಅವಕಾಶ ಕಲ್ಪಿಸಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡ ಉದ್ಯಮಿ ಹರ್ಷ್ ಗೋಯೆಂಕಾ, ಉದ್ಯಮಿ ಹರ್ಷ ಗೋಯೆಂಕಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಎರಡು ಪೈ ಚಾರ್ಟ್​ ಅನ್ನು ಹಂಚಿಕೊಂಡಿದ್ದು, ನೆಟ್ಟಿಗರು ಈ ವಿಷಯವಾಗಿ ಈ ಚುರುಕಿನಿಂದ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ. ಉದ್ಯೋಗಿಗಳು ಕಚೇರಿಯಲ್ಲಿ ಕೆಲಸ ಮಾಡುವುದು ಉತ್ತಮ ಎನ್ನುವುದು ಈ ಕಾರಣಕ್ಕೆ ಎಂದು ಮೊದಲ ಚಾರ್ಟ್​ ಹಂಚಿಕೊಂಡಿದ್ದಾರೆ.

ವರ್ಕ್​ ಫ್ರಂ ಹೋಮ್ ಮಾಡುವ ಉದ್ಯೋಗಿ ಮತ್ತು ಕಚೇರಿಗೆ ಹೋಗಿ ಕೆಲಸ ಮಾಡುವ ಉದ್ಯೋಗಿಯ ಮಧ್ಯೆ ಸಮಯಯ ಹೂಡಿಕೆಯಲ್ಲಿ ಉಂಟಾಗುವ ವ್ಯತ್ಯಾಸದ ಕುರಿತಾಗಿ ಈ ಪೈ ಚಾಟ್​ ನಿರೂಪಿಸಲ್ಪಟ್ಟಿದೆ. ​

ಮೊದಲ ಚಾರ್ಟ್‌ನಲ್ಲಿ ಕೆಲಸಕ್ಕೆ ಆದ್ಯತೆ ನೀಡಲಾಗಿದೆ. ಎರಡನೇ ಚಾರ್ಟ್‌ನಲ್ಲಿ ಪ್ರಯಾಣ ಮತ್ತು ಚಾಟಿಂಗ್‌ನಂತಹ ಇತರೇ ವಿಷಯಗಳು ಹೇಗೆ ಅನುತ್ಪಾದಕತೆಯನ್ನು ಸೂಚಿಸುತ್ತವೆ ಎನ್ನುವುದನ್ನು ತೋರಿಸಲಾಗಿದೆ.

ಈ ಪೋಸ್ಟ್​ ಅನ್ನು 4,4,000 ಜನರು ಇಷ್ಟಪಟ್ಟಿದ್ದಾರೆ. ಕೆಲವರು ಗೋಯೆಂಕಾ ಅವರ ಅಭಿಪ್ರಾಯವನ್ನು ಬೆಂಬಲಿಸಿದರೆ, ಅನೇಕರು ವರ್ಕ್​ ಫ್ರಂ ಹೋಮ್​ ಸೂಕ್ತವಲ್ಲ ಎಂದಿದ್ದಾರೆ. ವರ್ಕ್​ ಫ್ರಂ ಹೋಂ ಮಾಡುವಾಗ ಮನೆಗೆಲಸಗಳು ಸಮಯವನ್ನು ನುಂಗುತ್ತವೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಒಬ್ಬರು, ‘ಕಚೇರಿಯ ಓಡಾಟದ ಸಮಯ ತಪ್ಪುವುದರಿಂದ ನಾನು ಯೋಗ, ಧ್ಯಾನ, ಕ್ರಿಕೆಟ್​, ಓದು, ವಾಕಿಂಗ್​ನಂಥ ಚಟುವಟಿಕೆಗೆ ತೊಡಗಿಕೊಳ್ಳುತ್ತೇನೆ’ ಎಂದಿದ್ದಾರೆ.

ನಿಮಗೇನು ಅನ್ನಿಸುತ್ತೆ ಈ ವಿಷಯವಾಗಿ?

ಮತ್ತಷ್ಟು ಟ್ರೆಂಡಿಂಗ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:32 pm, Fri, 30 September 22

Follow Us
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಅಂಗವಿಕಲನಂತೆ ನಟಿಸಿ ಮೊಬೈಲ್ ಕದಿಯುತ್ತಿದ್ದ ಉತ್ತರ ಪ್ರದೇಶದ ಭಿಕ್ಷುಕ ಸೆರೆ
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!
ಕಾವೇರಿ ವಿವಾದ ನಡುವೆಯೂ ವಿಜಯ್ ಸ್ವಾಗತಕ್ಕೆ ವಿಧಾನಸೌಧದಲ್ಲಿ ಭರದ ಸಿದ್ಧತೆ!