AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನು ಇಂಧನದ ಚಿಂತೆ ಬಿಡಿ, ಸಿದ್ಧವಾಯ್ತು ಸಂಪೂರ್ಣ ಸ್ವಯಂಚಾಲಿತ ಸೋಲಾರ್ ಕಾರು!

ಸುಮಾರು 11 ವರ್ಷಗಳ ಕಠಿಣ ಪರಿಶ್ರಮದ ಮೂಲಕ ಕಾಶ್ಮೀರದ ಶಿಕ್ಷಕರೊಬ್ಬರು ಇಂಧನದ ಪರ್ಯಾಯವಾಗಿ ಸೋಲಾರ್ ಕಾರನ್ನು ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ. ಈ ಕಾರಿಗೆ ಎಷ್ಟು ಖರ್ಚು ಮಾಡಿದ್ದಾರೆ ಗೊತ್ತಾ?

ಇನ್ನು ಇಂಧನದ ಚಿಂತೆ ಬಿಡಿ, ಸಿದ್ಧವಾಯ್ತು ಸಂಪೂರ್ಣ ಸ್ವಯಂಚಾಲಿತ ಸೋಲಾರ್ ಕಾರು!
ಸೋಲಾರ್ ಕಾರು
TV9 Web
| Edited By: Rakesh Nayak Manchi|

Updated on:Jun 24, 2022 | 10:08 AM

Share

ಪ್ರಸ್ತುತ ಇಂಧನಗಳ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆ ಜನಸಾಮಾನ್ಯರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಈ ನಡುವೆ ಕಾಶ್ಮೀರಿ ಶಿಕ್ಷಕರೊಬ್ಬರು ಸತತ 11 ವರ್ಷಗಳ ಕಠಿಣ ಪರಿಶ್ರಮದೊಂದಿಗೆ ಸಂಪೂರ್ಣ ಸ್ವಯಂಚಾಲಿತ ಸೋಲಾರ್ ಕಾರ್‌ (Fully-Automatic Solar Car) ಅನ್ನು ಸಿದ್ಧಪಡಿಸಿ ವ್ಯಾಪಕ ಪ್ರಶಂಸೆಗೆ ಕಾರಣರಾಗಿದ್ದಾರೆ.

ಶ್ರೀನಗರದ ಗಣಿತ ಶಿಕ್ಷಕ ಬಿಲಾಲ್ ಅಹ್ಮದ್ ಅವರು ಅಭಿವೃದ್ಧಿಪಡಿಸಿದ ಕಾರು ನೋಡಲು ಸಣ್ಣದಾಗಿದ್ದರೂ ಐಷಾರಾಮಿ ಕಾರುಗಳಂತೆ ಕಾಣುತ್ತಿರುವುದು ವಿಶೇಷವಾಗಿದೆ. ಆರಂಭದಲ್ಲಿ ಅವರು ಅಂಗವಿಕಲರಿಗೆ ವಾಹನ ಸಿದ್ಧಪಡಿಸಲು ಯೋಜಿಸಿದ್ದರು. ಆದರೆ ಹಣದ ಕೊರತೆ ಎದುರಾದ ಹಿನ್ನೆಲೆ ಸೌರಶಕ್ತಿಯಿಂದ ಚಲಿಸುವ ಕಾರನ್ನು ಪರಿವರ್ತಿಸುವ ಯೋಜನೆಯನ್ನು ಕೈಗೊಂಡು ಯಶಸ್ವಿಯಾದರು.

ಇದನ್ನೂ ಓದಿ: Viral Video: ವೇಗವಾಗಿ ಬರುತ್ತಿದ್ದ ರೈಲಿನೆದುರು ಬಿದ್ದಿದ್ದ ವ್ಯಕ್ತಿಯ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ; ಶಾಕಿಂಗ್ ವಿಡಿಯೋ ವೈರಲ್

ಸೋಲಾರ್ ಕಾರು ಐಷಾರಾಮಿ ಕಾರಿನಂತೆ ಇದ್ದು, ಬಾಗಿಲುಗಳನ್ನು ಮೇಲಕ್ಕೆ ತೆರೆಯುವ ವ್ಯವಸ್ಥೆ ನೋಡುಗರನ್ನು ಅಚ್ಚರಿಗೊಳಿಸಿದೆ. ಇದರ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆನ್‌ಲೈನ್‌ನಲ್ಲಿ ಮಾತ್ರವಲ್ಲದೆ ರಾಜಕೀಯ ವ್ಯಕ್ತಿಗಳಿಂದಲೂ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ಚಿತ್ರಗಳು ಕಾರಿನ ಮೇಲ್ಮೈಗಳಲ್ಲಿ ಬಾನೆಟ್‌ನಿಂದ ಹಿಂದಿನ ವಿಂಡ್‌ಶೀಲ್ಡ್‌ವರೆಗೆ ಸೋಲಾರ್ ಫಲಕಗಳನ್ನು ತೋರಿಸುತ್ತವೆ.

ಈ ಕಾರು ಆನ್‌ಲೈನ್‌ನಲ್ಲಿ ಕುತೂಹಲ ಕೆರಳಿಸಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಯೋಜನೆಯಲ್ಲಿ ಕೆಲಸ ಮಾಡಿದ ಅಹ್ಮದ್ ಅವರು ತಮ್ಮ ಕನಸನ್ನು ಈಡೇರಿಸಿಕೊಂಡಿದ್ದು, ಈ ಕಾರನ್ನು ಸಾಮಾನ್ಯ ಜನರಿಗೆ ಕೈಗೆಟುಕುವ ಆವೃತ್ತಿಯನ್ನಾಗಿ ಮಾಡಲು ಬಯಸುತ್ತಿದ್ದಾರೆ. ಈ ಬಗ್ಗೆ ರೈಸಿಂಗ್ ಕಾಶ್ಮೀರದ ಜೊತೆ ಮಾತನಾಡಿದ ಅಹ್ಮದ್, “ಮರ್ಸಿಡಿಸ್, ಫೆರಾರಿ, ಬಿಎಂಡಬ್ಲ್ಯು ಕಾರುಗಳು ಸಾಮಾನ್ಯ ವ್ಯಕ್ತಿಗೆ ಕೇವಲ ಕನಸು. ಸಾಮಾನ್ಯ ಜನರಿಗೆ ಐಷಾರಾಮಿ ಅನುಭವವನ್ನು ನೀಡಲು ನಾನು ಏನನ್ನಾದರೂ ಯೋಚಿಸಬೇಕೆಂದು ಈ ರೀತಿಯ ಕಾರನ್ನು ಸಿದ್ಧಪಡಿಸಿದ್ದೇನೆ” ಎಂದರು.

ಇದನ್ನೂ ಓದಿ: Automobile: ಜೂನ್ 30 ರಂದು ಹೊಸ ಮಾರುತಿ ಬ್ರೆಝಾ ಬಿಡುಗಡೆ, ಬುಕ್ಕಿಂಗ್, ಫೀಚರ್ಸ್ ಇತ್ಯಾದಿ ಮಾಹಿತಿ ಇಲ್ಲಿದೆ ನೋಡಿ

“ತಮ್ಮ ವಾಹನಕ್ಕೆ ಕಡಿಮೆ ಸೌರಶಕ್ತಿಯಿಂದ ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಮೊನೊಕ್ರಿಸ್ಟಲಿನ್ ಸೌರ ಫಲಕಗಳನ್ನು ಬಳಸಲಾಗಿದೆ.  ಇವುಗಳು ಹೆಚ್ಚು ಪರಿಣಾಮಕಾರಿಯಾಗಿದೆ” ಎಂದು ಡೈಲಿ ಎಕ್ಸೆಲ್ಸಿಯರ್‌ನೊಂದಿಗೆ ಅಹ್ಮದ್ ಮಾಹಿತಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸ್ಪೋರ್ಟ್ಸ್ ಕಾರುಗಳು ಕೇವಲ ಎರಡರ ಆಸನ ಸಾಮರ್ಥ್ಯವನ್ನು ಹೊಂದಿದ್ದರೂ ಇದರ ಬೆಲೆ ದುಬಾರಿಯಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಅವರು ನಾಲ್ಕು ಜನರಿಗೆ ಅವಕಾಶ ಕಲ್ಪಿಸಲು ತಮ್ಮ ವಾಹನವನ್ನು ಸಿದ್ಧಪಡಿಸಿದ್ದಾರೆ. ಈ ಕಾರನ್ನು ಅಹ್ಮದ್ ಅವರು ಯಾವುದೇ ವಲಯದಿಂದ ಆರ್ಥಿಕ ಸಹಾಯ ಇಲ್ಲದೆ ಒಟ್ಟು 15 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಿದ್ದಾರೆ. ನನಗೆ ಅಗತ್ಯವಾದ ಬೆಂಬಲ ಸಿಕ್ಕಿದ್ದಿದ್ದರೆ ಬಹುಶಃ ನಾನು ಭಾರತದ ಎಲೋನ್ ಮಸ್ಕ್ ಆಗುತ್ತಿದ್ದೆ ಎಂದು ಅಹ್ಮದ್ ಹೇಳುತ್ತಾರೆ.

ಇದನ್ನೂ ಓದಿ: ನಾಲ್ಕು ವರ್ಷದ ಮಗುವಿಗೆ ಕಚ್ಚಿದ 30 ಸೆಕೆಂಡ್​ಗಳಲ್ಲಿ ಸಾವನ್ನಪ್ಪಿದ ಹಾವು! ಇದು ಸಾಧ್ಯವೇ? ಇಲ್ಲಿದೆ ಮಾಹಿತಿ

Published On - 10:04 am, Fri, 24 June 22

Follow Us
TV9 Web
TV9 Web

TV9 Kannada

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ