AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NFT ಲಾಂಚ್​ಗೆ ಮುಂದಾದ ಬಚ್ ​​ಪನ್ ​ಕಾ ಪ್ಯಾರ್​ ಖ್ಯಾತಿಯ ಸಹದೇವ್​ ದಿರ್ಡೋ

ರಾತ್ರಿ ಬೆಳಗಾಗುವಷ್ಟರಲ್ಲಿ ಇಂಟರ್​ನೆಟ್​ ಸೆನ್ಸೇಷನ್​ ಕ್ರಿಯೆಟ್​ ಮಾಡಿದ್ದ 10 ವರ್ಷದ ಬಾಲಕ ಸಹದೇವ್​ ದಿರ್ಡೋ ಇದೀಗ NFT (Non Fungible Token) ಪ್ಲಾಟ್​ಫಾರ್ಮ್​ಗೆ ಕಾಲಿಡಲು ಮುಂದಾಗಿದ್ದಾರೆ.

NFT ಲಾಂಚ್​ಗೆ ಮುಂದಾದ ಬಚ್ ​​ಪನ್ ​ಕಾ ಪ್ಯಾರ್​  ಖ್ಯಾತಿಯ ಸಹದೇವ್​ ದಿರ್ಡೋ
ಸಹದೇವ್​ ದಿರ್ಡೋ
TV9 Web
| Edited By: |

Updated on: Jan 15, 2022 | 2:12 PM

Share

ರಾತ್ರಿ ಬೆಳಗಾಗುವಷ್ಟರಲ್ಲಿ ಇಂಟರ್​ನೆಟ್​ ಸೆನ್ಸೇಷನ್​ ಕ್ರಿಯೆಟ್​ ಮಾಡಿದ್ದ 10 ವರ್ಷದ ಬಾಲಕ ಸಹದೇವ್​ ದಿರ್ಡೋ ಇದೀಗ NFT (Non Fungible Token) ಪ್ಲಾಟ್​ಫಾರ್ಮ್​ಗೆ ಕಾಲಿಡಲು ಮುಂದಾಗಿದ್ದಾರೆ. 2021ರ ಜುಲೈನಲ್ಲಿ ಬಚ್​ ಪನ್​ ಕಾ ಪ್ಯಾರ್​ ಹಾಡಿದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಹದೇವ್ ಹೊಸ​ ಟ್ರೆಂಡ್ ಕ್ರಿಯೇಟ್​ ಮಾಡಿದ್ದರು. ಇದೀಗ ತಮ್ಮ ಸಂಗೀತದ ಆಲ್ಬಂಗಳನ್ನು ಶೇಖರಿಸಿಡಲು Non Fungible Token ಅನ್ನು ಲಾಂಚ್​ ಮಾಡುತ್ತಿದ್ದಾರೆ.

ಸಹದೇವ್​ ದಿರ್ಡೋ ಹೇಳಿದ ಬಚ್​ ಪನ್​ ಕಾ ಪ್ಯಾರ್​ ಹಾಡು ಒಂದೇ ದಿನದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಬಾಲಿವುಡ್​ನ ರಾಪ್​ ಸಿಂಗರ್​ ಬಾದ್ ಷಾ ಕೂಡ ಮೆಚ್ಚಿಕೊಂಡು ಸಹದೇವ್​ ಅವರ ಹಾಡನ್ನು ರಾಪ್​ ಸಾಂಗ್​ಗೆ ಮಿಕ್ಸ್​ ಮಾಡಿ ಹಾಡಿದ್ದರು. ಈ ಹಾಡು ನೆಟ್ಟಿಗರನ್ನು ಸೆಳೆದಿತ್ತು.  ಕಳದೆ ತಿಂಗಳು ಸಹದೇವ್​ ದಿರ್ಡೋ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಬಾದ್​ ಷಾ ಸಹದೇವ್​ ಅವರ ಆರೋಗ್ಯದ ಬಗ್ಗೆ ಅಪ್ಡೇಟ್​ ನೀಡಿದ್ದರು. ಚತ್ತೀಸಗಡ ಸರ್ಕಾರ ಸಹದೇವ್​ ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸಿತ್ತು.

ಇದೀಗ ಚಿಕಿತ್ಸೆ ಪಡೆದು ಸಹದೇವ್​ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ವಿಡಿಯೋ ಮೂಲಕ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.  ಸಹದೇವ್​  ಕಳೆದ ಜುಲೈನಲ್ಲಿ ಶಾಲೆಯಲ್ಲಿ ಯುನಿಫಾರ್ಮ ಧರಿಸಿ ಶಿಕ್ಷಕರ ಎದುರು ಬಚ್​ ಪನ್​ ಕಾ ಪ್ಯಾರ್ ಹಾಡನ್ನು ಹಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಹಾಡಿನ ವಿಡಿಯೋ ಒಂದೇ ರಾತ್ರಿಯಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ Non Fungible Token ನಲ್ಲಿ ಖಾತೆ ತೆರೆಯುವ ಮೂಲಕ ತನ್ನ ಸಂಗೀತವನ್ನು ಶೇಖರಿಸಿಟ್ಟು ಜನರಿಗೆ ತಲುಪುವ ಪ್ರಯತ್ನದಲ್ಲಿದ್ದಾರೆ. nOFTEN  ಎನ್ನುವ ಮಾರ್ಕೆಟ್​ನಲ್ಲಿ NFT ಲಾಂಚ್ ಮಾಡಲು ಸಹದೇವ್​ ತಯಾರಿ ನಡೆಸಿದ್ದಾರೆ.

 ಇದನ್ನೂ ಓದಿ:

ಶೀತ ಗಾಳಿಯ ಅಬ್ಬರಕ್ಕೆ ಪ್ಲೇಟ್​ನಲ್ಲೇ ಹೆಪ್ಪುಗಟ್ಟಿದ ಪಾಸ್ತಾ: ಫೋಟೋ ವೈರಲ್​

ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ಲಕ್ಕುಂಡಿ ನಿಧಿ ಹೆಸರಲ್ಲಿ ರೈತರಿಗೆ ಮೋಸ ಮಾಡಿದ್ದ ಮುಸ್ಲಿಂ ಮೌಲ್ವಿ ಅರೆಸ್ಟ್
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ​ ದೇಶದ್ರೋಹಿಗಳು: ಸಂಬಿತ್ ಪಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ!
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
AI ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಇದೆಂಥಾ ಸ್ಥಿತಿ: ಯಾರು ಹೊಣೆ?
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು
ವೇಗವಾಗಿ ಬಂದು ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದ ಕಾರು