AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NFT ಲಾಂಚ್​ಗೆ ಮುಂದಾದ ಬಚ್ ​​ಪನ್ ​ಕಾ ಪ್ಯಾರ್​ ಖ್ಯಾತಿಯ ಸಹದೇವ್​ ದಿರ್ಡೋ

ರಾತ್ರಿ ಬೆಳಗಾಗುವಷ್ಟರಲ್ಲಿ ಇಂಟರ್​ನೆಟ್​ ಸೆನ್ಸೇಷನ್​ ಕ್ರಿಯೆಟ್​ ಮಾಡಿದ್ದ 10 ವರ್ಷದ ಬಾಲಕ ಸಹದೇವ್​ ದಿರ್ಡೋ ಇದೀಗ NFT (Non Fungible Token) ಪ್ಲಾಟ್​ಫಾರ್ಮ್​ಗೆ ಕಾಲಿಡಲು ಮುಂದಾಗಿದ್ದಾರೆ.

NFT ಲಾಂಚ್​ಗೆ ಮುಂದಾದ ಬಚ್ ​​ಪನ್ ​ಕಾ ಪ್ಯಾರ್​  ಖ್ಯಾತಿಯ ಸಹದೇವ್​ ದಿರ್ಡೋ
ಸಹದೇವ್​ ದಿರ್ಡೋ
TV9 Web
| Edited By: |

Updated on: Jan 15, 2022 | 2:12 PM

Share

ರಾತ್ರಿ ಬೆಳಗಾಗುವಷ್ಟರಲ್ಲಿ ಇಂಟರ್​ನೆಟ್​ ಸೆನ್ಸೇಷನ್​ ಕ್ರಿಯೆಟ್​ ಮಾಡಿದ್ದ 10 ವರ್ಷದ ಬಾಲಕ ಸಹದೇವ್​ ದಿರ್ಡೋ ಇದೀಗ NFT (Non Fungible Token) ಪ್ಲಾಟ್​ಫಾರ್ಮ್​ಗೆ ಕಾಲಿಡಲು ಮುಂದಾಗಿದ್ದಾರೆ. 2021ರ ಜುಲೈನಲ್ಲಿ ಬಚ್​ ಪನ್​ ಕಾ ಪ್ಯಾರ್​ ಹಾಡಿದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಹದೇವ್ ಹೊಸ​ ಟ್ರೆಂಡ್ ಕ್ರಿಯೇಟ್​ ಮಾಡಿದ್ದರು. ಇದೀಗ ತಮ್ಮ ಸಂಗೀತದ ಆಲ್ಬಂಗಳನ್ನು ಶೇಖರಿಸಿಡಲು Non Fungible Token ಅನ್ನು ಲಾಂಚ್​ ಮಾಡುತ್ತಿದ್ದಾರೆ.

ಸಹದೇವ್​ ದಿರ್ಡೋ ಹೇಳಿದ ಬಚ್​ ಪನ್​ ಕಾ ಪ್ಯಾರ್​ ಹಾಡು ಒಂದೇ ದಿನದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಬಾಲಿವುಡ್​ನ ರಾಪ್​ ಸಿಂಗರ್​ ಬಾದ್ ಷಾ ಕೂಡ ಮೆಚ್ಚಿಕೊಂಡು ಸಹದೇವ್​ ಅವರ ಹಾಡನ್ನು ರಾಪ್​ ಸಾಂಗ್​ಗೆ ಮಿಕ್ಸ್​ ಮಾಡಿ ಹಾಡಿದ್ದರು. ಈ ಹಾಡು ನೆಟ್ಟಿಗರನ್ನು ಸೆಳೆದಿತ್ತು.  ಕಳದೆ ತಿಂಗಳು ಸಹದೇವ್​ ದಿರ್ಡೋ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಬಾದ್​ ಷಾ ಸಹದೇವ್​ ಅವರ ಆರೋಗ್ಯದ ಬಗ್ಗೆ ಅಪ್ಡೇಟ್​ ನೀಡಿದ್ದರು. ಚತ್ತೀಸಗಡ ಸರ್ಕಾರ ಸಹದೇವ್​ ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸಿತ್ತು.

ಇದೀಗ ಚಿಕಿತ್ಸೆ ಪಡೆದು ಸಹದೇವ್​ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ವಿಡಿಯೋ ಮೂಲಕ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.  ಸಹದೇವ್​  ಕಳೆದ ಜುಲೈನಲ್ಲಿ ಶಾಲೆಯಲ್ಲಿ ಯುನಿಫಾರ್ಮ ಧರಿಸಿ ಶಿಕ್ಷಕರ ಎದುರು ಬಚ್​ ಪನ್​ ಕಾ ಪ್ಯಾರ್ ಹಾಡನ್ನು ಹಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಹಾಡಿನ ವಿಡಿಯೋ ಒಂದೇ ರಾತ್ರಿಯಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ Non Fungible Token ನಲ್ಲಿ ಖಾತೆ ತೆರೆಯುವ ಮೂಲಕ ತನ್ನ ಸಂಗೀತವನ್ನು ಶೇಖರಿಸಿಟ್ಟು ಜನರಿಗೆ ತಲುಪುವ ಪ್ರಯತ್ನದಲ್ಲಿದ್ದಾರೆ. nOFTEN  ಎನ್ನುವ ಮಾರ್ಕೆಟ್​ನಲ್ಲಿ NFT ಲಾಂಚ್ ಮಾಡಲು ಸಹದೇವ್​ ತಯಾರಿ ನಡೆಸಿದ್ದಾರೆ.

 ಇದನ್ನೂ ಓದಿ:

ಶೀತ ಗಾಳಿಯ ಅಬ್ಬರಕ್ಕೆ ಪ್ಲೇಟ್​ನಲ್ಲೇ ಹೆಪ್ಪುಗಟ್ಟಿದ ಪಾಸ್ತಾ: ಫೋಟೋ ವೈರಲ್​

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ