AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀತ ಗಾಳಿಯ ಅಬ್ಬರಕ್ಕೆ ಪ್ಲೇಟ್​ನಲ್ಲೇ ಹೆಪ್ಪುಗಟ್ಟಿದ ಪಾಸ್ತಾ: ಫೋಟೋ ವೈರಲ್​

ಮೌಂಟ್ ವಾಷಿಂಗ್ಟನ್ ಅಬ್ಸರ್ವೇಟರಿ ಪ್ರಕಾರ ಸ್ಥಳೀಯರೊಬ್ಬರು ಮನೆಯಿಂದ ಹೊರಗೆ ಬಂದು ಪಾಸ್ತಾವನ್ನು ತಿನ್ನಲು ಯತ್ನಿಸಿದ್ದಾರೆ. ಆದರೆ ಕೇವಲ 15 ಸೆಕೆಂಡ್​ಗಳಲ್ಲಿ ಶೀತ ಗಾಳಿಯ ಅಬ್ಬರಕ್ಕೆ ಪೋರ್ಕ್​ಗೆ ಅಂಟಿಕೊಂಡಿದ್ದ ಪಾಸ್ತಾ ಗಟ್ಟಿಯಾಗಿದೆ.

ಶೀತ ಗಾಳಿಯ ಅಬ್ಬರಕ್ಕೆ ಪ್ಲೇಟ್​ನಲ್ಲೇ ಹೆಪ್ಪುಗಟ್ಟಿದ ಪಾಸ್ತಾ: ಫೋಟೋ ವೈರಲ್​
ಹೆಪ್ಪುಗಟ್ಟಿದ ಆಹಾರ
TV9 Web
| Edited By: |

Updated on: Jan 15, 2022 | 12:54 PM

Share

ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಮೈಕೊರೆಯುವ ಚಳಿ ಆರಂಭವಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಹಿಮಪಾತವೂ ಸಂಭವಿಸುತ್ತಿದ್ದು ಜನ ಮೈ ನಡುಗುವ ಚಳಿಗೆ ಹೆದರಿದ್ದಾರೆ. ಈ ನಡುವೆ ನ್ಯೂ ಹ್ಯಾಂಪ್‌ಶೈರ್‌ನ ಮೌಂಟ್ ವಾಷಿಂಗ್ಟನಲ್ಲಿ ಮೈನಸ್​ 34 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ. ಇದರಿಂದ ಆಹಾರ ಪದಾರ್ಥಗಳೆಲ್ಲವೂ ಗಟ್ಟಿಯಾಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಪ್ಲೇಟ್​ನಲ್ಲಿ ಹಾಕಿದ ಆಹಾರವು ಪೋರ್ಕ್​​ ಚಮಚಕ್ಕೆ ಸಿಲುಕಿ ಗಟ್ಟಿಯಾಗಿರುವ ಫೋಟೋ ವೈರಲ್​ ಆಗಿದೆ.  ಮೌಂಟ್ ವಾಷಿಂಗ್ಟನ್ ಅಬ್ಸರ್ವೇಟರಿ (Mount Washington Observatory) ಎನ್ನುವ ಖಾಸಗಿ ವೈಜ್ಞಾನಿಕ ಮತ್ತು ಶಿಕ್ಷಣ ಸಂಸ್ಥೆ ಇದರ ಫೊಟೋ ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗಿದೆ.

ಮೌಂಟ್ ವಾಷಿಂಗ್ಟನ್ ಅಬ್ಸರ್ವೇಟರಿ ಪ್ರಕಾರ ಸ್ಥಳೀಯರೊಬ್ಬರು ಮನೆಯಿಂದ ಹೊರಗೆ ಬಂದು ಪಾಸ್ತಾವನ್ನು ತಿನ್ನಲು ಯತ್ನಿಸಿದ್ದಾರೆ. ಆದರೆ ಕೇವಲ 15 ಸೆಕೆಂಡ್​ಗಳಲ್ಲಿ ಶೀತ ಗಾಳಿಯ ಅಬ್ಬರಕ್ಕೆ ಪೋರ್ಕ್​ಗೆ ಅಂಟಿಕೊಂಡಿದ್ದ ಪಾಸ್ತಾ ಹೆಪ್ಪುಗಟ್ಟಿದೆ. ಸದ್ಯ ಇಲ್ಲಿಯ ತಾಪಮಾನ ಮೈನಸ್​ 30 ಡಿಗ್ರಿ ಸೆಲ್ಸಿಯಸ್​ ಇದೆ. ಜತೆಗೆ ಗಾಳಿಯು 65 mph ಇದೆ ಎಂದು ಮಾಹಿತಿ ನೀಡಿ ಪಾಸ್ತಾ ಪೋರ್ಕ್​ಗೆ ಅಂಟಿಕೊಂಡು ಹೆಪ್ಪುಗಟ್ಟಿದ ಫೋಟೋವನ್ನು ಶೇರ್​ ಮಾಡಲಾಗಿದೆ.

ಈ ಬಗ್ಗೆ ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದು ಕಳೆದ ಎರಡು ದಿನಗಳ ಹಿಂದೆ 65mph  ಹೆಚ್ಚು ಗಾಳಿಯ ವೇಗವಿದ್ದು ಮೈನಸ್​ 34 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ ಎಂದು ತಿಳಿಸಿದ್ದಾರೆ.  ಸದ್ಯ ಸಾಮಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ.

ಇದನ್ನೂ ಓದಿ:

ತಂದೆಗೆ ವ್ಯಾಕ್ಸಿನ್​​ ಕೊಡಿಸಲು 6 ಗಂಟೆಗಳ ಕಾಲ ಬೆನ್ನಿನ ಮೇಲೆ ಹೊತ್ತೊಯ್ದ ಯುವಕ: ಆಧುನಿಕ ಶ್ರವಣಕುಮಾರ ಎಂದ ನೆಟ್ಟಿಗರು

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ