ತನ್ನ ಮನೆಯ ಬಾಲ್ಕನಿಯನ್ನು ಬಾಡಿಗೆಗೆ ನೀಡಿದ ವ್ಯಕ್ತಿ, ಬಾಡಿಗೆ ಕೇಳಿದರೆ ಶಾಕ್​​ ಆಗುವುದಂತೂ ಖಂಡಿತಾ!

ಬಾಲ್ಕನಿಯಲ್ಲಿ ಒಂದೇ ಒಂದು ಹಾಸಿಗೆಯನ್ನು ಹಾಕಿದ್ದು, ಬಾಲ್ಕನಿಯಲ್ಲಿ ವಾಸ ಮಾಡುವವರ ಸಂಚಾರಕ್ಕೆ ಸ್ಲೈಡಿಂಗ್ ಗ್ಲಾಸ್ ಡೋರ್ ಅಳವಡಿಸಲಾಗಿದ್ದು, ಮಳೆ ಬಂದರೂ ನೀರು ಒಳಗೆ ಬರದಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ ಇದರ ಬಾಡಿಗೆ ಕೇಳಿ ನೆಟ್ಟಿಗರು ಶಾಕ್​​ ಆಗಿದ್ದಾರೆ.

ತನ್ನ ಮನೆಯ ಬಾಲ್ಕನಿಯನ್ನು ಬಾಡಿಗೆಗೆ ನೀಡಿದ ವ್ಯಕ್ತಿ, ಬಾಡಿಗೆ ಕೇಳಿದರೆ ಶಾಕ್​​ ಆಗುವುದಂತೂ ಖಂಡಿತಾ!
Follow us
|

Updated on: Jul 07, 2024 | 3:11 PM

ಬಾಡಿಗೆ ಕೊಡಲು ಕಷ್ಟವಾಗುವುದಕ್ಕೆ ವ್ಯಕ್ತಿಯೊಬ್ಬ ತನ್ನ ಮನೆಯ ಬಾಲ್ಕನಿಯನ್ನೇ ಬಾಡಿಗೆಗೆ ನೀಡಿರುವ ಘಟನೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ. ತನ್ನ 2BHK ಮನೆಯ ಬಾಲ್ಕನಿಯಲ್ಲಿ ಹಾಸಿಗೆಯನ್ನು ಇರಿಸಿ ಬಾಡಿಗೆಗೆ ನೀಡುವುದಾಗಿ ಜಾಹೀರಾತು ನೀಡಿದ್ದಾನೆ. ಸದ್ಯ ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗುತ್ತಿದೆ. ಇದಲ್ಲದೇ ಇದರ ಬಾಡಿಗೆ ಕೇಳಿ ನೆಟ್ಟಿಗರು ಶಾಕ್​​ ಆಗಿದ್ದಾರೆ.

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈ ಬಾಲ್ಕನಿಯನ್ನು ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್ ಪಟ್ಟಿಯಲ್ಲಿ ಬಾಡಿಗೆಗೆ ನೀಡುವುದಾಗಿ ಬರೆಯಲಾಗಿದೆ. ಕುತೂಹಲಕಾರಿ ವಿಷಯವೆಂದರೆ, ಈ ಬಾಲ್ಕನಿಯನ್ನು ಸೂರ್ಯನ ಬೆಳಕಿನ ಕೋಣೆ ಎಂದು ವಿವರಿಸಲಾಗಿದೆ. ವಾಸ್ತವವಾಗಿ, ಬಾಲ್ಕನಿಯಲ್ಲಿ ಒಂದೇ ಒಂದು ಹಾಸಿಗೆಯನ್ನು ಹಾಕಿದ್ದು, ಇದರ ಬೆಲೆಯನ್ನು ಹಾಕಲಾಗಿದೆ. ಈ ಪುಟ್ಟ ಬಾಲ್ಕನಿಯ ತಿಂಗಳ ಬಾಡಿಗೆ ಬರೋಬ್ಬರಿ 969 ಡಾಲರ್​ ಅಂದರೆ ತಿಂಗಳಿಗೆ ಸುಮಾರು 80,889 ರೂ. ಈ ಕೊಠಡಿಯು ಒಬ್ಬ ವ್ಯಕ್ತಿ ವಾಸಿಸುವಷ್ಟು ದೊಡ್ಡದಾಗಿದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಹಾಡು ಹಗಲೇ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಸರ ಕಿತ್ತು ಪರಾರಿಯಾದ ಖದೀಮರು

ವರದಿಗಳ ಪ್ರಕಾರ, ಬಾಲ್ಕನಿಯನ್ನು ಮುಚ್ಚಿದ ಕೋಣೆಯಂತೆ ಕಾಣುವಂತೆ, ಅದರಲ್ಲಿ ಕನ್ನಡಿ ಮತ್ತು ಪರದೆಯನ್ನು ಸಹ ಅಳವಡಿಸಿದ್ದಾರೆ. ಅಷ್ಟೇ ಅಲ್ಲ ಬಾಲ್ಕನಿಯಲ್ಲಿ ವಾಸ ಮಾಡುವವರ ಸಂಚಾರಕ್ಕೆ ಸ್ಲೈಡಿಂಗ್ ಗ್ಲಾಸ್ ಡೋರ್ ಅಳವಡಿಸಲಾಗಿದ್ದು, ಮಳೆ ಬಂದರೂ ನೀರು ಒಳಗೆ ಬರದಂತೆ ಬಾಲ್ಕನಿ ಸುತ್ತಲೂ ಗಾಜಿನ ಗೋಡೆ ಹಾಕಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ