AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಪ್ರವಾಹ ಟೀಕೆಗಳ ನಂತರ ಟ್ರೋಲ್​ಗೆ ಗುರಿಯಾದ ‘ಬೆಂಗಳೂರು ನಗರದ ಸ್ಥಿತಿ’

ಬೆಂಗಳೂರು ನಗರ ಪ್ರವಾಹವನ್ನು ಎದುರಿಸಿದ ನಂತರ ಅರಂಭವಾದ ಟೀಕೆಗಳ ಬೆನ್ನಲ್ಲೆ ಮೀಮ್​ಗಳು ಆರಂಭಗೊಂಡಿವೆ. ಮೀಮ್​ ವಿಡಿಯೋ ಇಲ್ಲಿದೆ ನೋಡಿ..

Viral: ಪ್ರವಾಹ ಟೀಕೆಗಳ ನಂತರ ಟ್ರೋಲ್​ಗೆ ಗುರಿಯಾದ 'ಬೆಂಗಳೂರು ನಗರದ ಸ್ಥಿತಿ'
ಬೆಂಗಳೂರು ಸ್ಥಿತಿಗತಿ ಬಗ್ಗೆ ಮೀಮ್​
TV9 Web
| Edited By: |

Updated on:Sep 14, 2022 | 7:59 PM

Share

ಬೆಂಗಳೂರು: ಸುರಿದ ಅಬ್ಬದ ಮಳೆಗೆ ಇಡೀ ನಗರದ ಜನರು ತತ್ತರಿಸಿದ್ದು, ಒಂದಷ್ಟು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿತ್ತು. ಈ ಘಟನೆಗೆ ರಾಜಕಾಲವೆ, ಕೆರೆಗೆಳ ಒತ್ತುವರಿಯೇ ಕಾರಣ ಎಂಬ ಟೀಕೆಗಳ ನಡುವೆ ನಗರದ ಸದ್ಯದ ಪರಿಸ್ಥಿತಿ ಬಗ್ಗೆ ಟ್ರೋಲ್​ಗಳು ಆಗಲು ಪ್ರಾರಂಭವಾಗಿವೆ. ‘ಬೆಂಗಳೂರಿನಲ್ಲಿ ಒಂದು ದಿನ’ ಎಂದು ಬರೆದು ಎಡಿಟ್ ಮಾಡಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನಿಮಗೆ ಸಾಕಷ್ಟು ನಗು ತರಲಿದ್ದು, ಒಂದಷ್ಟು ಮಂದಿ ಕಾಮೆಂಟ್​ಗಳನ್ನು ಕೂಡ ಮಾಡಿದ್ದಾರೆ.

firki07 ಎಂಬ ಟ್ವಿಟರ್ ಖಾತೆಯಲ್ಲಿ ಈ ಉಲ್ಲಾಸದ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಬೆಂಗಳೂರಿನ ಜನರಿಗಾಗಿ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಮೊದಲನೆಯ ವಿಡಿಯೋದಲ್ಲಿ ಚಿಂಪಾಂಜಿಯು ಕಾರನ್ನು ಚಲಾಯಿಸುತ್ತಿರುವುದನ್ನು ತೋರಿಸುತ್ತದೆ, ಅದರಲ್ಲಿ “ಕೇವಲ ನಾಲ್ಕು ಕಿಲೋಮೀಟರ್‌ಗಳನ್ನು ತಲುಪಲು ಮೂರು ಗಂಟೆ ಮುಂಚಿತವಾಗಿ ಮನೆಯಿಂದ ಹೊರಟೆ” ಎಂದು ಶೀರ್ಷಿಕೆ ಬರೆಯಲಾಗಿದೆ.

ಎರಡನೆಯದು ಒರಾಂಗುಟಾನ್ ತನ್ನ ತಲೆಯನ್ನು ಅಲ್ಲಾಡಿಸುವುದನ್ನು ತೋರಿಸಲಾಗಿದೆ, ಅದರಲ್ಲಿ “ಇನ್ನೊಬ್ಬ ಬೆಂಗಳೂರಿನ ವ್ಯಕ್ತಿ ತನ್ನ ಸ್ಟಾರ್ಟ್-ಅಪ್ ಯೋಜನೆಯನ್ನು ವಿವರಿಸುತ್ತಾನೆ” ಎಂದು ಶೀರ್ಷಿಕೆ ಬರೆಯಲಾಗಿದೆ, ಮೂರನೆಯ ವಿಡಿಯೋದಲ್ಲಿ ಕೋತಿಯೊಂದು ಲ್ಯಾಪ್​ಟಾಪ್​ ಒತ್ತುವುದನ್ನು ಕಾಣಬಹುದು. ಇದರಲ್ಲಿ “ಕಚೇರಿ ಫೈಲ್‌ನಲ್ಲಿ ಕನ್ನಡದ ಬದಲಾಗಿ Kannad ಎಂದು ಟೈಪ್ ಮಾಡಿದ ಬೆಂಗಳೂರಲ್ಲದ ವ್ಯಕ್ತಿ” ಎಂದು ಶೀರ್ಷಿಕೆ ನೀಡಲಾಗಿದೆ.

ವಿಡಿಯೋಗೆ ಪ್ರತಿಕ್ರಿಯೆ ನೀಡಿದ ನೆಟ್ಟಿಗರೊಬ್ಬರು, “ಈ ದಿನಗಳಲ್ಲಿ ಮೀಮ್‌ಗಳು ಏಕೆ ತುಂಬಾ ಸಂಬಂಧಿತವಾಗಿವೆ?” ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, “ಬೆಂಗಳೂರು ಜನರು ತಮ್ಮ ಮಕ್ಕಳಿಗೆ ಪ್ರತಿದಿನ ಕಚೇರಿಗೆ ಹೋಗಲು ನದಿಯನ್ನು ಹೇಗೆ ದಾಟುತ್ತಿದ್ದರು ಎಂದು ಹೇಳಲಿದ್ದಾರೆ” ಎಂದಿದ್ದಾರೆ. ಮಗದೊಬ್ಬರು, “ಬೆಂಗಳೂರಿನಲ್ಲಿ ಕೆಲಸ ಪಡೆಯಲು ಕೋಡಿಂಗ್ ಸಾಕಾಗುವುದಿಲ್ಲ. ಈಜು ಗೊತ್ತಿರಬೇಕು” ಎಂದರೆ ಚೇಂಜ್‌ಮೇಕರ್ಸ್ ಆಫ್ ಕನಕಪುರ ರೋಡ್ ಎಂಬ ಟ್ವಿಟರ್ ಪುಟದಿಂದ ಟೈಟಾನಿಕ್ ಸಿನಿಮಾದ ತುಣಕನ್ನು ಎಡಿಟ್ ಮಾಡಿ ಹಂಚಕೊಳ್ಳಲಾಗಿದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:56 pm, Wed, 14 September 22

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ