AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಕಾರ್ ರಿಪೇರಿ ಮಾಡುತ್ತಿದ್ದ ಈ ವ್ಯಕ್ತಿ ಕ್ಷಣದಲ್ಲೇ ನುಜ್ಜುಗುಜ್ಜು

Accident : ಇದ್ದಕ್ಕಿದ್ದಂತೆ ಕಾರ್ ಮುಂದೆ ಚಲಿಸಿಬಿಡುತ್ತದೆ. ಹಿಂದೆ ಶಟರ್, ಮುಂದೆ ಕಾರ್, ನಡುವೆ ಈ ವ್ಯಕ್ತಿ. 8 ಮಿಲಿಯನ್ ಜನರು ವೀಕ್ಷಿಸಿದ ಈ ವಿಡಿಯೋ ಎಲ್ಲರಲ್ಲೂ ಎಚ್ಚರಿಕೆ ಹುಟ್ಟಿಸುವಂಥದ್ದು.

Viral Video : ಕಾರ್ ರಿಪೇರಿ ಮಾಡುತ್ತಿದ್ದ ಈ ವ್ಯಕ್ತಿ ಕ್ಷಣದಲ್ಲೇ ನುಜ್ಜುಗುಜ್ಜು
ಕಾರ್ ಮತ್ತು ಶಟರ್​ ಮಧ್ಯೆ ಅಪ್ಪಚ್ಚಿಯಾದ ವ್ಯಕ್ತಿ
TV9 Web
| Updated By: ಶ್ರೀದೇವಿ ಕಳಸದ|

Updated on:Sep 15, 2022 | 11:57 AM

Share

Viral Video : ರಿಪೇರಿ ಎನ್ನುವುದು ತಾಂತ್ರಿಕ ಪರಿಣತಿಯನ್ನು ನಿರೀಕ್ಷಿಸುತ್ತದೆ. ಅದರಲ್ಲೂ ವಾಹನಗಳನ್ನು ಸ್ವತಃ ರಿಪೇರಿ ಮಾಡಲು ಸಾಕಷ್ಟು ತಿಳಿವಳಿಕೆ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಈ ವಿಡಿಯೋದಲ್ಲಿ ಆದ ಗತಿ ಉಂಟಾಗುತ್ತದೆ. ಇಲ್ಲೊಂದು ಕಾರ್​ ಸಮಸ್ಯೆಯಾಗಿದೆ. ಕಾರ್​ ಶುರು ಮಾಡಿಟ್ಟು ಬಾನೆಟ್​ ಓಪನ್ ಮಾಡಿದ್ದಾರೆ ಈ ವ್ಯಕ್ತಿ. ಕೆಲ ಕ್ಷಣಗಳಲ್ಲಿಯೇ ಕಾರ್ ಮುಂದಕ್ಕೆ ಚಲಿಸಿ ಹಿಂದಿದ್ದ ಶಟರ್​ಗೆ ಢಿಕ್ಕಿ ಹೊಡೆದಿದೆ, ಶಟರ್ ಮತ್ತು ಕಾರಿನ ಮಧ್ಯೆ ಈ ಮನುಷ್ಯ ನುಜ್ಜುಗುಜ್ಜಾಗಿ ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡಿದ ಎಲ್ಲರಲ್ಲೂ ಭೀತಿ ಹುಟ್ಟಿಸಿದೆ. ಈ ವ್ಯಕ್ತಿ ಮೆಕ್ಯಾನಿಕ್​ ಹೌದೋ ಅಲ್ಲವೋ ಎಂಬ ಬಗ್ಗೆ ನೆಟ್ಟಿಗರಿಗೆ ಅನುಮಾನ ಉಂಟಾಗಿದೆ. ಆದರೆ ನಡೆದ ಘಟನೆಯನ್ನು ಅವಲೋಕಿಸಿದಾಗ ಈ ಮೆಕ್ಯಾನಿಕ್​ ಇರಲಿಕ್ಕಿಲ್ಲ ಎಂದೆನ್ನಿಸುತ್ತದೆ. ಈ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಸಾಧ್ಯತೆ ಖಂಡಿತ ಇದೆ.

ದೀಪಕ್ ಪ್ರಭು ಎಂಬುವವರ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ‘ಆಟೋಮ್ಯಾಟಿಕ್​ ಕಾರ್ ಕೆಟ್ಟುಹೋದಾಗ ಅದರ ಮುಂದೆ ದಯವಿಟ್ಟು ನಿಲ್ಲಬೇಡಿ. ಈ ಬಗ್ಗೆ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳಿಗೆ ಎಚ್ಚರಿಕೆ ನೀಡಿ, ಈ ಘಟನೆಯನ್ನು ಉದಾಹರಿಸಿ’ ಎಂದಿದ್ದಾರೆ ಪ್ರಭು. ಸುಮಾರು 8 ಮಿಲಿಯನ್​ ವೀಕ್ಷಕರು ಈ ವಿಡಿಯೋ ನೋಡಿದ್ದಾರೆ. ರೀಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಬ್ಬ ಟ್ವಿಟರ್ ಖಾತೆದಾರರು, ‘ಈ ಕಾರು ಆಟೋಮ್ಯಾಟಿಕ್ ಅಲ್ಲ, ಮ್ಯಾನುಯೆಲ್. ಅನೇಕರು ಮ್ಯಾನುಯೆಲ್ ಕಾರುಗಳನ್ನು ಒಂದನೇ ಗೇರ್​ನಲ್ಲಿಟ್ಟು ಹ್ಯಾಂಡ್​ ಬ್ರೇಕ್​ ಹಾಕದೆ ಹಾಗೇ ನಿಲ್ಲಿಸಿರುತ್ತಾರೆ. ನಂತರ ಕಾರು ಗೇರ್​ನಲ್ಲಿದೆ ಎಂಬುದನ್ನು ಮರೆತು ಕಾರ್​ ಸ್ಟಾರ್ಟ್​ ಮಾಡಲು ಪ್ರಯತ್ನಿಸುತ್ತಾರೆ. ಆಗ ಇಂಥ ಅವಘಡ ಸಂಭವಿಸುತ್ತದೆ. ಇನ್ನು ಎಲ್ಲಾ ಆಧುನಿಕ ಆಟೋಮ್ಯಾಟಿಕ್​ ಕಾರುಗಳಲ್ಲಿ ಇಂಥ ದುರ್ಘಟನೆಗಳು ಉಂಟಾಗದಂಥ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸಲಾಗಿರುತ್ತದೆ’ ಎಂದಿದ್ದಾರೆ.

ಈ ಅಪಘಾತಕ್ಕೆ ಕಾರಣವಾಗಿರುವ ತಾಂತ್ರಿಕ ಸಮಸ್ಯೆಗಳ ಸಾಧ್ಯತೆಗಳ ಬಗ್ಗೆ ವಿಮರ್ಶಿಸುತ್ತಾ, ತಮ್ಮ ಅಭಿಪ್ರಾಯಗಳನ್ನು ಅನೇಕರು ಹಂಚಿಕೊಂಡಿದ್ದಾರೆ.

ನೂರಾರು ಆಲೋಚನೆಗಳನ್ನು ತಲೆಯಲ್ಲಿ ತುಂಬಿಕೊಂಡು ಓಡಾಡುವ ಇಂದಿನ ಕಾಲದವರು ಇಂಥ ವಿಷಯವಾಗಿ ಬಹಳೇ ಎಚ್ಚರಿಕೆಯಿಂದ ಇರಬೇಕು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 11:55 am, Thu, 15 September 22

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್