AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಕಾರ್ ರಿಪೇರಿ ಮಾಡುತ್ತಿದ್ದ ಈ ವ್ಯಕ್ತಿ ಕ್ಷಣದಲ್ಲೇ ನುಜ್ಜುಗುಜ್ಜು

Accident : ಇದ್ದಕ್ಕಿದ್ದಂತೆ ಕಾರ್ ಮುಂದೆ ಚಲಿಸಿಬಿಡುತ್ತದೆ. ಹಿಂದೆ ಶಟರ್, ಮುಂದೆ ಕಾರ್, ನಡುವೆ ಈ ವ್ಯಕ್ತಿ. 8 ಮಿಲಿಯನ್ ಜನರು ವೀಕ್ಷಿಸಿದ ಈ ವಿಡಿಯೋ ಎಲ್ಲರಲ್ಲೂ ಎಚ್ಚರಿಕೆ ಹುಟ್ಟಿಸುವಂಥದ್ದು.

Viral Video : ಕಾರ್ ರಿಪೇರಿ ಮಾಡುತ್ತಿದ್ದ ಈ ವ್ಯಕ್ತಿ ಕ್ಷಣದಲ್ಲೇ ನುಜ್ಜುಗುಜ್ಜು
ಕಾರ್ ಮತ್ತು ಶಟರ್​ ಮಧ್ಯೆ ಅಪ್ಪಚ್ಚಿಯಾದ ವ್ಯಕ್ತಿ
TV9 Web
| Edited By: |

Updated on:Sep 15, 2022 | 11:57 AM

Share

Viral Video : ರಿಪೇರಿ ಎನ್ನುವುದು ತಾಂತ್ರಿಕ ಪರಿಣತಿಯನ್ನು ನಿರೀಕ್ಷಿಸುತ್ತದೆ. ಅದರಲ್ಲೂ ವಾಹನಗಳನ್ನು ಸ್ವತಃ ರಿಪೇರಿ ಮಾಡಲು ಸಾಕಷ್ಟು ತಿಳಿವಳಿಕೆ ಇರಬೇಕಾಗುತ್ತದೆ. ಇಲ್ಲವಾದಲ್ಲಿ ಈ ವಿಡಿಯೋದಲ್ಲಿ ಆದ ಗತಿ ಉಂಟಾಗುತ್ತದೆ. ಇಲ್ಲೊಂದು ಕಾರ್​ ಸಮಸ್ಯೆಯಾಗಿದೆ. ಕಾರ್​ ಶುರು ಮಾಡಿಟ್ಟು ಬಾನೆಟ್​ ಓಪನ್ ಮಾಡಿದ್ದಾರೆ ಈ ವ್ಯಕ್ತಿ. ಕೆಲ ಕ್ಷಣಗಳಲ್ಲಿಯೇ ಕಾರ್ ಮುಂದಕ್ಕೆ ಚಲಿಸಿ ಹಿಂದಿದ್ದ ಶಟರ್​ಗೆ ಢಿಕ್ಕಿ ಹೊಡೆದಿದೆ, ಶಟರ್ ಮತ್ತು ಕಾರಿನ ಮಧ್ಯೆ ಈ ಮನುಷ್ಯ ನುಜ್ಜುಗುಜ್ಜಾಗಿ ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡಿದ ಎಲ್ಲರಲ್ಲೂ ಭೀತಿ ಹುಟ್ಟಿಸಿದೆ. ಈ ವ್ಯಕ್ತಿ ಮೆಕ್ಯಾನಿಕ್​ ಹೌದೋ ಅಲ್ಲವೋ ಎಂಬ ಬಗ್ಗೆ ನೆಟ್ಟಿಗರಿಗೆ ಅನುಮಾನ ಉಂಟಾಗಿದೆ. ಆದರೆ ನಡೆದ ಘಟನೆಯನ್ನು ಅವಲೋಕಿಸಿದಾಗ ಈ ಮೆಕ್ಯಾನಿಕ್​ ಇರಲಿಕ್ಕಿಲ್ಲ ಎಂದೆನ್ನಿಸುತ್ತದೆ. ಈ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಸಾಧ್ಯತೆ ಖಂಡಿತ ಇದೆ.

ದೀಪಕ್ ಪ್ರಭು ಎಂಬುವವರ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿದೆ. ‘ಆಟೋಮ್ಯಾಟಿಕ್​ ಕಾರ್ ಕೆಟ್ಟುಹೋದಾಗ ಅದರ ಮುಂದೆ ದಯವಿಟ್ಟು ನಿಲ್ಲಬೇಡಿ. ಈ ಬಗ್ಗೆ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳಿಗೆ ಎಚ್ಚರಿಕೆ ನೀಡಿ, ಈ ಘಟನೆಯನ್ನು ಉದಾಹರಿಸಿ’ ಎಂದಿದ್ದಾರೆ ಪ್ರಭು. ಸುಮಾರು 8 ಮಿಲಿಯನ್​ ವೀಕ್ಷಕರು ಈ ವಿಡಿಯೋ ನೋಡಿದ್ದಾರೆ. ರೀಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಒಬ್ಬ ಟ್ವಿಟರ್ ಖಾತೆದಾರರು, ‘ಈ ಕಾರು ಆಟೋಮ್ಯಾಟಿಕ್ ಅಲ್ಲ, ಮ್ಯಾನುಯೆಲ್. ಅನೇಕರು ಮ್ಯಾನುಯೆಲ್ ಕಾರುಗಳನ್ನು ಒಂದನೇ ಗೇರ್​ನಲ್ಲಿಟ್ಟು ಹ್ಯಾಂಡ್​ ಬ್ರೇಕ್​ ಹಾಕದೆ ಹಾಗೇ ನಿಲ್ಲಿಸಿರುತ್ತಾರೆ. ನಂತರ ಕಾರು ಗೇರ್​ನಲ್ಲಿದೆ ಎಂಬುದನ್ನು ಮರೆತು ಕಾರ್​ ಸ್ಟಾರ್ಟ್​ ಮಾಡಲು ಪ್ರಯತ್ನಿಸುತ್ತಾರೆ. ಆಗ ಇಂಥ ಅವಘಡ ಸಂಭವಿಸುತ್ತದೆ. ಇನ್ನು ಎಲ್ಲಾ ಆಧುನಿಕ ಆಟೋಮ್ಯಾಟಿಕ್​ ಕಾರುಗಳಲ್ಲಿ ಇಂಥ ದುರ್ಘಟನೆಗಳು ಉಂಟಾಗದಂಥ ತಾಂತ್ರಿಕ ವ್ಯವಸ್ಥೆಯನ್ನು ರೂಪಿಸಲಾಗಿರುತ್ತದೆ’ ಎಂದಿದ್ದಾರೆ.

ಈ ಅಪಘಾತಕ್ಕೆ ಕಾರಣವಾಗಿರುವ ತಾಂತ್ರಿಕ ಸಮಸ್ಯೆಗಳ ಸಾಧ್ಯತೆಗಳ ಬಗ್ಗೆ ವಿಮರ್ಶಿಸುತ್ತಾ, ತಮ್ಮ ಅಭಿಪ್ರಾಯಗಳನ್ನು ಅನೇಕರು ಹಂಚಿಕೊಂಡಿದ್ದಾರೆ.

ನೂರಾರು ಆಲೋಚನೆಗಳನ್ನು ತಲೆಯಲ್ಲಿ ತುಂಬಿಕೊಂಡು ಓಡಾಡುವ ಇಂದಿನ ಕಾಲದವರು ಇಂಥ ವಿಷಯವಾಗಿ ಬಹಳೇ ಎಚ್ಚರಿಕೆಯಿಂದ ಇರಬೇಕು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 11:55 am, Thu, 15 September 22

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ