AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕಂದರಾಬಾದ್​​ ವಿಶಾಖಪಟ್ಟಣಂ ರೈಲು ಪ್ರಯಾಣ ಮಧ್ಯೆ ಮಹಿಳೆಗೆ ಹೆರಿಗೆಗೆ ಸಹಾಯ ಮಾಡಿದ ವೈದ್ಯಕೀಯ ವಿದ್ಯಾರ್ಥಿನಿ

ಸ್ವಾತಿ ಪ್ರಕಾರ, ಮುಂಜಾನೆ 3:30 ರ ಸುಮಾರಿಗೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಮುಂಜಾನೆ 4:40 ಕ್ಕೆ ಯಾರೋ ವೈದ್ಯರಿದ್ದಾರೆಯೇ ಎಂದು ಕೂಗಿ ಕರೆದರು. ಅಷ್ಟೊತ್ತಿಗೆ ನಾನು ಆಕೆಗೆ ಸಹಾಯ ಮಾಡಲು ಮುಂದಾದೆ.

ಸಿಕಂದರಾಬಾದ್​​ ವಿಶಾಖಪಟ್ಟಣಂ ರೈಲು ಪ್ರಯಾಣ ಮಧ್ಯೆ ಮಹಿಳೆಗೆ ಹೆರಿಗೆಗೆ ಸಹಾಯ ಮಾಡಿದ ವೈದ್ಯಕೀಯ ವಿದ್ಯಾರ್ಥಿನಿ
ಮಗು ಮತ್ತು ಬಾಣಂತಿ ಜತೆ ವೈದ್ಯಕೀಯ ವಿದ್ಯಾರ್ಥಿನಿ ಸ್ವಾತಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 15, 2022 | 12:46 PM

Share

ಮಂಗಳವಾರ ಎಕ್ಸ್‌ಪ್ರೆಸ್ ರೈಲಿನಲ್ಲಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬಳು ಹೆರಿಗೆಗೆ ಸಹಾಯ ಮಾಡಿದ್ದಾಳೆ.. ಸಿಕಂದರಾಬಾದ್-ವಿಶಾಖಪಟ್ಟಣಂ ದುರಂತೊ ಎಕ್ಸ್‌ಪ್ರೆಸ್‌ನಲ್ಲಿ (Secunderabad-Visakhapatnam Duronto Express) ಇಬ್ಬರೂ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವೈದ್ಯಕೀಯ ವಿದ್ಯಾರ್ಥಿನಿ ನರಸರಾವ್‌ಪೇಟೆಯ ಕೆ ಸ್ವಾತಿ ರೆಡ್ಡಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವಳು. ಈಕೆ ಗೀತಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಜಿಮ್ಸ್) ಎಂಬಿಬಿಎಸ್  ವ್ಯಾಸಾಂಗ ಮಾಡುತ್ತಿದ್ದಾಳೆ. ತನ್ನ ಪತಿಯೊಂದಿಗೆ ತಮ್ಮ ಹುಟ್ಟೂರಾದ ಶ್ರೀಕಾಕುಳಂಗೆ ಹೋಗುತ್ತಿದ್ದ 28 ವರ್ಷದ ಗರ್ಭಿಣಿಯ ಅದೇ ಬೋಗಿಯಲ್ಲಿ ಸ್ವಾತಿ ಪ್ರಯಾಣಿಸುತ್ತಿದ್ದಳು.

ಸ್ವಾತಿ ಪ್ರಕಾರ, ಮುಂಜಾನೆ 3:30 ರ ಸುಮಾರಿಗೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಮುಂಜಾನೆ 4:40 ಕ್ಕೆ ಯಾರೋ ವೈದ್ಯರಿದ್ದಾರೆಯೇ ಎಂದು ಕೂಗಿ ಕರೆದರು. ಅಷ್ಟೊತ್ತಿಗೆ ನಾನು ಆಕೆಗೆ ಸಹಾಯ ಮಾಡಲು ಮುಂದಾದೆ. ನಾನು ಇಷ್ಟರವರೆಗೆ ಹೆರಿಗೆ ಮಾಡಿಸಿರಲಿಲ್ಲ. ಆಸ್ಪತ್ರೆಯಲ್ಲಿ ಪ್ರೊಫೆಸರ್ ಜತೆ ಹೆರಿಗೆಗೆ ಸಹಾಯ ಮಾಡಿದ್ದೆ. ಹಾಗಾಗಿ ಹೇಗಪ್ಪಾ ಈ ಮಹಿಳೆಗೆ ಹೆರಿಗೆ ಮಾಡಿಸುವುದು ಎಂದು ಚಿಂತಿತಳಾಗಿದ್ದೆ ಎಂದು  ಸ್ವಾತಿ ಹೇಳಿದ್ದಾಳೆ.

45 ನಿಮಿಷಗಳ ಕಾಲ ಮಾಸು(placenta)  ಹೊರಬರದ ಕಾರಣ ನಾನು ಆತಂಕಗೊಂಡಿದ್ದೆ. ಹೆದರಿಕೆಯೂ ಆಯಿತು. ನ ಮಗು ಹೊರಬಂದಾಗ ನನಗೆ ಸಮಾಧಾನವಾಯಿತು ಎಂದಿದ್ದಾರೆ ಸ್ವಾತಿ.

ರೈಲು ಅಣ್ಣಾವರಂ ಸಮೀಪ ತಲುಪುತ್ತಿದ್ದಂಚೆ  ಬೆಳಗ್ಗೆ 5:35ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಲಾಯಿತು. ನವಜಾತ ಶಿಶುಗಳನ್ನು ಬೆಚ್ಚಗಿನ ಸ್ಥಿತಿಯಲ್ಲಿ ಇಡಬೇಕು. ಆದರೆ ಅವರು ಪ್ರಯಾಣಿಸುತ್ತಿದ್ದ ಕೋಚ್ ಹವಾನಿಯಂತ್ರಿತವಾಗಿತ್ತು. ನವಜಾತ ಶಿಶುಗೆ ಸಾಕಷ್ಟು ಉಷ್ಣತೆಯನ್ನು ಸಿಗುವಂತಾಗಲು ಪ್ರಯಾಣಿಕರು ಸಹಾಯವನ್ನು ಮಾಡಿದರು.  ಮಗುವನ್ನು ಬೆಚ್ಚಗಿಡಲು ತಮ್ಮ ಕಂಬಳಿಗಳನ್ನು ನೀಡಿದರು. ಅನೇಕ ಪ್ರಯಾಣಿಕರು ಹೆರಿಗೆ ವೇಳೆ  ತನಗೆ ಸಹಾಯ ಮಾಡಿದ್ದು, ನಾನು ಪ್ರಯಾಣಿಸುತ್ತಿದ್ದ ಬೋಗಿಯನ್ನು  ತಾತ್ಕಾಲಿಕ  ಡೆಲಿವರಿ ರೂಂ ಆಗಿ ಮಾಡಿದರು.

ಮಗು ಜನಿಸಿದ ನಂತರ, ರೈಲಿಗೆ ವಿಜಯವಾಡ ಮತ್ತು ವಿಶಾಖಪಟ್ಟಣಂ ನಡುವೆ ಯಾವುದೇ ನಿಲುಗಡೆ ಇಲ್ಲದ ಕಾರಣ ಒಂದೂವರೆ ಗಂಟೆಗಳ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅನಕಪಲ್ಲಿ ನಿಲ್ದಾಣ ತಲುಪಿದ ನಂತರ ಅಲ್ಲಿ ಸಿದ್ಧವಾಗಿದ್ದ ಆಂಬುಲೆನ್ಸ್‌ನಲ್ಲಿ ತಾಯಿ ಮತ್ತು ನವಜಾತ ಶಿಶುವನ್ನು ಎನ್‌ಟಿಆರ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯ ವರೆಗೂ ಮಹಿಳೆಯ ಜತೆಗೆ ಹೋಗಿದ್ದ ಸ್ವಾತಿ ಅವಧಿಪೂರ್ವ ಹೆರಿಗೆ ಬಗ್ಗೆ ಅಲ್ಲಿನ ವೈದ್ಯರಿಗೆ ತಿಳಿಸಿದ್ದಾರೆ. ಮಗುವನ್ನು ಇನ್ ಕ್ಯುಬೇಟರ್ ನಲ್ಲಿರಿಸಲಾಗಿದೆ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?