AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕಂದರಾಬಾದ್​​ ವಿಶಾಖಪಟ್ಟಣಂ ರೈಲು ಪ್ರಯಾಣ ಮಧ್ಯೆ ಮಹಿಳೆಗೆ ಹೆರಿಗೆಗೆ ಸಹಾಯ ಮಾಡಿದ ವೈದ್ಯಕೀಯ ವಿದ್ಯಾರ್ಥಿನಿ

ಸ್ವಾತಿ ಪ್ರಕಾರ, ಮುಂಜಾನೆ 3:30 ರ ಸುಮಾರಿಗೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಮುಂಜಾನೆ 4:40 ಕ್ಕೆ ಯಾರೋ ವೈದ್ಯರಿದ್ದಾರೆಯೇ ಎಂದು ಕೂಗಿ ಕರೆದರು. ಅಷ್ಟೊತ್ತಿಗೆ ನಾನು ಆಕೆಗೆ ಸಹಾಯ ಮಾಡಲು ಮುಂದಾದೆ.

ಸಿಕಂದರಾಬಾದ್​​ ವಿಶಾಖಪಟ್ಟಣಂ ರೈಲು ಪ್ರಯಾಣ ಮಧ್ಯೆ ಮಹಿಳೆಗೆ ಹೆರಿಗೆಗೆ ಸಹಾಯ ಮಾಡಿದ ವೈದ್ಯಕೀಯ ವಿದ್ಯಾರ್ಥಿನಿ
ಮಗು ಮತ್ತು ಬಾಣಂತಿ ಜತೆ ವೈದ್ಯಕೀಯ ವಿದ್ಯಾರ್ಥಿನಿ ಸ್ವಾತಿ
TV9 Web
| Edited By: |

Updated on: Sep 15, 2022 | 12:46 PM

Share

ಮಂಗಳವಾರ ಎಕ್ಸ್‌ಪ್ರೆಸ್ ರೈಲಿನಲ್ಲಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯೊಬ್ಬಳು ಹೆರಿಗೆಗೆ ಸಹಾಯ ಮಾಡಿದ್ದಾಳೆ.. ಸಿಕಂದರಾಬಾದ್-ವಿಶಾಖಪಟ್ಟಣಂ ದುರಂತೊ ಎಕ್ಸ್‌ಪ್ರೆಸ್‌ನಲ್ಲಿ (Secunderabad-Visakhapatnam Duronto Express) ಇಬ್ಬರೂ ಪ್ರಯಾಣಿಸುತ್ತಿದ್ದಾಗ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ವೈದ್ಯಕೀಯ ವಿದ್ಯಾರ್ಥಿನಿ ನರಸರಾವ್‌ಪೇಟೆಯ ಕೆ ಸ್ವಾತಿ ರೆಡ್ಡಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವಳು. ಈಕೆ ಗೀತಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ (ಜಿಮ್ಸ್) ಎಂಬಿಬಿಎಸ್  ವ್ಯಾಸಾಂಗ ಮಾಡುತ್ತಿದ್ದಾಳೆ. ತನ್ನ ಪತಿಯೊಂದಿಗೆ ತಮ್ಮ ಹುಟ್ಟೂರಾದ ಶ್ರೀಕಾಕುಳಂಗೆ ಹೋಗುತ್ತಿದ್ದ 28 ವರ್ಷದ ಗರ್ಭಿಣಿಯ ಅದೇ ಬೋಗಿಯಲ್ಲಿ ಸ್ವಾತಿ ಪ್ರಯಾಣಿಸುತ್ತಿದ್ದಳು.

ಸ್ವಾತಿ ಪ್ರಕಾರ, ಮುಂಜಾನೆ 3:30 ರ ಸುಮಾರಿಗೆ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಮುಂಜಾನೆ 4:40 ಕ್ಕೆ ಯಾರೋ ವೈದ್ಯರಿದ್ದಾರೆಯೇ ಎಂದು ಕೂಗಿ ಕರೆದರು. ಅಷ್ಟೊತ್ತಿಗೆ ನಾನು ಆಕೆಗೆ ಸಹಾಯ ಮಾಡಲು ಮುಂದಾದೆ. ನಾನು ಇಷ್ಟರವರೆಗೆ ಹೆರಿಗೆ ಮಾಡಿಸಿರಲಿಲ್ಲ. ಆಸ್ಪತ್ರೆಯಲ್ಲಿ ಪ್ರೊಫೆಸರ್ ಜತೆ ಹೆರಿಗೆಗೆ ಸಹಾಯ ಮಾಡಿದ್ದೆ. ಹಾಗಾಗಿ ಹೇಗಪ್ಪಾ ಈ ಮಹಿಳೆಗೆ ಹೆರಿಗೆ ಮಾಡಿಸುವುದು ಎಂದು ಚಿಂತಿತಳಾಗಿದ್ದೆ ಎಂದು  ಸ್ವಾತಿ ಹೇಳಿದ್ದಾಳೆ.

45 ನಿಮಿಷಗಳ ಕಾಲ ಮಾಸು(placenta)  ಹೊರಬರದ ಕಾರಣ ನಾನು ಆತಂಕಗೊಂಡಿದ್ದೆ. ಹೆದರಿಕೆಯೂ ಆಯಿತು. ನ ಮಗು ಹೊರಬಂದಾಗ ನನಗೆ ಸಮಾಧಾನವಾಯಿತು ಎಂದಿದ್ದಾರೆ ಸ್ವಾತಿ.

ರೈಲು ಅಣ್ಣಾವರಂ ಸಮೀಪ ತಲುಪುತ್ತಿದ್ದಂಚೆ  ಬೆಳಗ್ಗೆ 5:35ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಲಾಯಿತು. ನವಜಾತ ಶಿಶುಗಳನ್ನು ಬೆಚ್ಚಗಿನ ಸ್ಥಿತಿಯಲ್ಲಿ ಇಡಬೇಕು. ಆದರೆ ಅವರು ಪ್ರಯಾಣಿಸುತ್ತಿದ್ದ ಕೋಚ್ ಹವಾನಿಯಂತ್ರಿತವಾಗಿತ್ತು. ನವಜಾತ ಶಿಶುಗೆ ಸಾಕಷ್ಟು ಉಷ್ಣತೆಯನ್ನು ಸಿಗುವಂತಾಗಲು ಪ್ರಯಾಣಿಕರು ಸಹಾಯವನ್ನು ಮಾಡಿದರು.  ಮಗುವನ್ನು ಬೆಚ್ಚಗಿಡಲು ತಮ್ಮ ಕಂಬಳಿಗಳನ್ನು ನೀಡಿದರು. ಅನೇಕ ಪ್ರಯಾಣಿಕರು ಹೆರಿಗೆ ವೇಳೆ  ತನಗೆ ಸಹಾಯ ಮಾಡಿದ್ದು, ನಾನು ಪ್ರಯಾಣಿಸುತ್ತಿದ್ದ ಬೋಗಿಯನ್ನು  ತಾತ್ಕಾಲಿಕ  ಡೆಲಿವರಿ ರೂಂ ಆಗಿ ಮಾಡಿದರು.

ಮಗು ಜನಿಸಿದ ನಂತರ, ರೈಲಿಗೆ ವಿಜಯವಾಡ ಮತ್ತು ವಿಶಾಖಪಟ್ಟಣಂ ನಡುವೆ ಯಾವುದೇ ನಿಲುಗಡೆ ಇಲ್ಲದ ಕಾರಣ ಒಂದೂವರೆ ಗಂಟೆಗಳ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅನಕಪಲ್ಲಿ ನಿಲ್ದಾಣ ತಲುಪಿದ ನಂತರ ಅಲ್ಲಿ ಸಿದ್ಧವಾಗಿದ್ದ ಆಂಬುಲೆನ್ಸ್‌ನಲ್ಲಿ ತಾಯಿ ಮತ್ತು ನವಜಾತ ಶಿಶುವನ್ನು ಎನ್‌ಟಿಆರ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯ ವರೆಗೂ ಮಹಿಳೆಯ ಜತೆಗೆ ಹೋಗಿದ್ದ ಸ್ವಾತಿ ಅವಧಿಪೂರ್ವ ಹೆರಿಗೆ ಬಗ್ಗೆ ಅಲ್ಲಿನ ವೈದ್ಯರಿಗೆ ತಿಳಿಸಿದ್ದಾರೆ. ಮಗುವನ್ನು ಇನ್ ಕ್ಯುಬೇಟರ್ ನಲ್ಲಿರಿಸಲಾಗಿದೆ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್