AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಮಗನನ್ನು ಸಂಪರ್ಕಿಸಲು ವೃದ್ಧದಂಪತಿಗೆ ಸಹಾಯ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್

Swiggy Delivery Agent : ಎಷ್ಟು ಫೋನ್ ಮಾಡಿದರೂ ಪರಊರಿನಲ್ಲಿರುವ ತಮ್ಮ ಮಗ ಯಾಕೆ ಉತ್ತರಿಸುತ್ತಿಲ್ಲ ಎಂದು ವೃದ್ಧದಂಪತಿ ಕಳವಳಕ್ಕೀಡಾಗಿದ್ದಾರೆ. ಆಗ ಸ್ವಿಗ್ಗಿ ಡೆಲಿವರಿ ಏಜೆಂಟ್​ ಒಬ್ಬರು ಅವರಿಗೆ ಸಹಾಯ ಮಾಡಿದ್ದಾರೆ. ನೈಜಘಟನೆಯನ್ನು ಓದಿ.

Trending : ಮಗನನ್ನು ಸಂಪರ್ಕಿಸಲು ವೃದ್ಧದಂಪತಿಗೆ ಸಹಾಯ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Sep 14, 2022 | 5:14 PM

Share

Trending : ಆನ್​ಲೈನ್​ನಲ್ಲಿ ಆಗಾಗ ದಾಖಲಾಗುವ ಇಂಥ ಸತ್ಯಘಟನೆಗಳು, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿರುತ್ತವೆ. ಸಿಕಂದರಾಬಾದ್‌ನ ಸ್ವಿಗ್ಗಿ ಡೆಲಿವರಿ ಏಜೆಂಟ್​ ಒಬ್ಬರು ಕರ್ತವ್ಯದ ಮಧ್ಯೆ ಚೆನ್ನೈನಲ್ಲಿರುವ ವೃದ್ಧದಂಪತಿಗೆ ಸಹಾಯ ಮಾಡಿದ ಘಟನೆಯು ನೆಟ್ಟಿಗರನ್ನು ಆಪ್ತವಾಗಿ ಹಿಡಿದಿಟ್ಟಿದೆ.  ಸಾಯಿಕಿರಣ್​ ಕಣ್ಣನ್​ ಎಂಬ ಹವ್ಯಾಸಿ ಪತ್ರಕರ್ತರು ಟ್ವೀಟ್​ ಥ್ರೆಡ್​ ಮೂಲಕ ಈ ನೈಜಘಟನೆಯನ್ನು ಹಂತಹಂತವಾಗಿ ಹರವಿಟ್ಟಿದ್ದಾರೆ. ಈ ಕಥೆಯನ್ನು ಓದಿದ ನೆಟ್ಟಿಗರು ಭಾವುಕರಾಗಿದ್ದಾರೆ.

‘ನನ್ನ ತಾಯಿಯ ದೂರದ ಸಂಬಂಧಿಯು (ವೃದ್ಧದಂಪತಿ) ನಿನ್ನೆ ರಾತ್ರಿ ತಮ್ಮ ಮಗನನ್ನು (ಮಿಸ್ಟರ್​ ಎಕ್ಸ್​) ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಮಿಸ್ಟರ್ ಎಕ್ಸ್​ ಒಂಟಿಯಾಗಿ ಸಿಕಂದರಾಬಾದ್​ನಲ್ಲಿ ವಾಸಿಸುತ್ತಿರುವುದರಿಂದ ಅವರಿಗೆ ಸಹಜವಾಗಿ ಆತಂಕವಾಯಿತು. ಫೋನ್​ನಲ್ಲಿ ತಮ್ಮ ಮಗನನ್ನು ಸಂಪರ್ಕಿಸುವ ಅವರ ಪ್ರಯತ್ನ ಕೆಲ ದಿನಗಳಿಂದ ಸಾಗಿದೆ ಎನ್ನುವ ವಿಷಯ ತಿಳಿಯಿತು. ಆಗ ವೃದ್ಧದಂಪತಿಯು ಮಗನ ಮನೆಯ ವಿಳಾಸವನ್ನು  ಹಂಚಿಕೊಂಡರು.’

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನನ್ನ ತಾಯಿ ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕು ಎಂದುಕೊಂಡರು. ಮಿಸ್ಟರ್ ಎಕ್ಸ್​ಗೆ ಕೆಲ ದಿನಸಿಗಳನ್ನು ತಲುಪಿಸಲು ಆಲೋಚಿಸಿದರು. ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಮೂಲಕ ಈ ಉಪಾಯ ಫಲಿಸಬಹುದೆಂದು ಕಾರ್ಯಪ್ರವೃತ್ತರಾದರು. ಆದರೆ ಅಂದುಕೊಂಡ ಹಾಗೆ ಆಗಲೇ ಇಲ್ಲ. ವಿಳಾಸ ಪತ್ತೆ ಹಚ್ಚುವಲ್ಲಿ ಡೆಲಿವರಿ ಏಜೆಂಟ್​ ವಿಫಲರಾದರು. ಆಗ ಬೆಂಗಳೂರಿನಲ್ಲಿದ್ದುಕೊಂಡೇ ನನ್ನ ತಾಯಿ, ಚೆನ್ನೈನಲ್ಲಿರುವ ವೃದ್ಧದಂಪತಿಗೆ ಅವರ ಮಗನೊಂದಿಗೆ ಸಂಪರ್ಕ ಕಲ್ಪಿಸಲು ಮತ್ತೊಂದು ಉಪಾಯ ಹೂಡಿದರು.’

‘ಮಿಸ್ಟರ್​ ಎಕ್ಸ್​ನ ಕೆಲ ಸ್ನೇಹಿತರನ್ನು ಪತ್ತೆ ಹಚ್ಚಿ ಆತನ ಸರಿಯಾದ ವಿಳಾಸವನ್ನು ಪಡೆದುಕೊಂಡರು. ಮತ್ತೊಮ್ಮೆ ಡೆಲಿವರಿ ಏಜೆಂಟ್​ನನ್ನು ಸಂಪರ್ಕಿಸಿ ಅವನ ವಿಳಾಸಕ್ಕೆ ಭೇಟಿ ನೀಡುವಂತೆ ವಿನಂತಿಸಿಕೊಂಡರು. ಡೆಲಿವರಿ ಏಜೆಂಟ್​ ಶ್ರೀನಾಥ್ ಶ್ರೀಕಾಂತ್, ತನ್ನ ಡೆಲಿವರಿ ಕೆಲಸವನ್ನು ಮುಗಿಸಿ ಆ ವಿಳಾಸಕ್ಕೆ ಹೋಗುವುದಾಗಿ ಭರವಸೆ ನೀಡಿದರು. ಕೊನೆಗೆ ದಿನಸಿ ಸಾಮಾನುಗಳನ್ನು ಮಿಸ್ಟರ್ ಎಕ್ಸ್​ ಮನೆಗೆ ಯಶಸ್ವಿಯಾಗಿ ತಲುಪಿಸಿದರು. ಆದರೆ ಅಲ್ಲೊಂದು ಆಘಾತ ಕಾದಿತ್ತು. ಮಿಸ್ಟರ್​ ಎಕ್ಸ್​ಗೆ ಅಪಘಾತ ಸಂಭವಿಸಿದೆ ಎನ್ನುವ ವಿಷಯ ಶ್ರೀನಾಥ ಮೂಲಕ ತಿಳಿಯಿತು. ಮಿಸ್ಟರ್ ಎಕ್ಸ್​, ತನ್ನ ಈ ಪರಿಸ್ಥಿತಿಯಿಂದಾಗಿ ಪೋಷಕರು ಒತ್ತಡ ಅನುಭವಿಸಬಾರದು ಎಂಬ ಕಾರಣಕ್ಕೆ ಅವರ ಕರೆಯನ್ನು ನಿರ್ಲಕ್ಷಿಸತೊಡಗಿದ್ದೆ ಎಂಬ ವಿಷಯವನ್ನು ತಿಳಿಸಿದರು. ನಂತರ ತನ್ನ ಪೋಷಕರೊಂದಿಗೆ ಮಾತನಾಡಿದರು. ಸ್ವಿಗ್ಗಿ ಡೆಲಿವರಿ ಏಜೆಂಟ್​ರ ಈ ಸಹಾಯಕ್ಕೆ ವೃದ್ಧದಂಪತಿ ವಂದನೆ ಸಲ್ಲಿಸಿತು.’

ಈ ಘಟನೆಯನ್ನು 5,000ಕ್ಕೂ ಹೆಚ್ಚು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ನೂರಾರು ಪ್ರತಿಕ್ರಿಯೆಗಳು ಈ ಪೋಸ್ಟ್​ಗೆ ವ್ಯಕ್ತವಾಗಿವೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:06 pm, Wed, 14 September 22

ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಫಿಲಿಪೈನ್ಸ್​ನಲ್ಲಿ ಭೂಕುಸಿತ, ಬೃಹತ್ ಕಸದ ರಾಶಿ ಮೈಮೇಲೆ ಬಿದ್ದು ಓರ್ವ ಸಾವು
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
S ಅಕ್ಷರದಿಂದ ಶುರುವಾಗುವ ಹೆಸರುಗಳಿಗೆ ಈ ವರ್ಷ ಅದೃಷ್ಟವೋ ಅದೃಷ್ಟ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ