Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಮಗನನ್ನು ಸಂಪರ್ಕಿಸಲು ವೃದ್ಧದಂಪತಿಗೆ ಸಹಾಯ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್

Swiggy Delivery Agent : ಎಷ್ಟು ಫೋನ್ ಮಾಡಿದರೂ ಪರಊರಿನಲ್ಲಿರುವ ತಮ್ಮ ಮಗ ಯಾಕೆ ಉತ್ತರಿಸುತ್ತಿಲ್ಲ ಎಂದು ವೃದ್ಧದಂಪತಿ ಕಳವಳಕ್ಕೀಡಾಗಿದ್ದಾರೆ. ಆಗ ಸ್ವಿಗ್ಗಿ ಡೆಲಿವರಿ ಏಜೆಂಟ್​ ಒಬ್ಬರು ಅವರಿಗೆ ಸಹಾಯ ಮಾಡಿದ್ದಾರೆ. ನೈಜಘಟನೆಯನ್ನು ಓದಿ.

Trending : ಮಗನನ್ನು ಸಂಪರ್ಕಿಸಲು ವೃದ್ಧದಂಪತಿಗೆ ಸಹಾಯ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 14, 2022 | 5:14 PM

Trending : ಆನ್​ಲೈನ್​ನಲ್ಲಿ ಆಗಾಗ ದಾಖಲಾಗುವ ಇಂಥ ಸತ್ಯಘಟನೆಗಳು, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿರುತ್ತವೆ. ಸಿಕಂದರಾಬಾದ್‌ನ ಸ್ವಿಗ್ಗಿ ಡೆಲಿವರಿ ಏಜೆಂಟ್​ ಒಬ್ಬರು ಕರ್ತವ್ಯದ ಮಧ್ಯೆ ಚೆನ್ನೈನಲ್ಲಿರುವ ವೃದ್ಧದಂಪತಿಗೆ ಸಹಾಯ ಮಾಡಿದ ಘಟನೆಯು ನೆಟ್ಟಿಗರನ್ನು ಆಪ್ತವಾಗಿ ಹಿಡಿದಿಟ್ಟಿದೆ.  ಸಾಯಿಕಿರಣ್​ ಕಣ್ಣನ್​ ಎಂಬ ಹವ್ಯಾಸಿ ಪತ್ರಕರ್ತರು ಟ್ವೀಟ್​ ಥ್ರೆಡ್​ ಮೂಲಕ ಈ ನೈಜಘಟನೆಯನ್ನು ಹಂತಹಂತವಾಗಿ ಹರವಿಟ್ಟಿದ್ದಾರೆ. ಈ ಕಥೆಯನ್ನು ಓದಿದ ನೆಟ್ಟಿಗರು ಭಾವುಕರಾಗಿದ್ದಾರೆ.

‘ನನ್ನ ತಾಯಿಯ ದೂರದ ಸಂಬಂಧಿಯು (ವೃದ್ಧದಂಪತಿ) ನಿನ್ನೆ ರಾತ್ರಿ ತಮ್ಮ ಮಗನನ್ನು (ಮಿಸ್ಟರ್​ ಎಕ್ಸ್​) ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಮಿಸ್ಟರ್ ಎಕ್ಸ್​ ಒಂಟಿಯಾಗಿ ಸಿಕಂದರಾಬಾದ್​ನಲ್ಲಿ ವಾಸಿಸುತ್ತಿರುವುದರಿಂದ ಅವರಿಗೆ ಸಹಜವಾಗಿ ಆತಂಕವಾಯಿತು. ಫೋನ್​ನಲ್ಲಿ ತಮ್ಮ ಮಗನನ್ನು ಸಂಪರ್ಕಿಸುವ ಅವರ ಪ್ರಯತ್ನ ಕೆಲ ದಿನಗಳಿಂದ ಸಾಗಿದೆ ಎನ್ನುವ ವಿಷಯ ತಿಳಿಯಿತು. ಆಗ ವೃದ್ಧದಂಪತಿಯು ಮಗನ ಮನೆಯ ವಿಳಾಸವನ್ನು  ಹಂಚಿಕೊಂಡರು.’

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನನ್ನ ತಾಯಿ ಈ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಇದಕ್ಕೊಂದು ಪರಿಹಾರ ಕಂಡುಹಿಡಿಯಬೇಕು ಎಂದುಕೊಂಡರು. ಮಿಸ್ಟರ್ ಎಕ್ಸ್​ಗೆ ಕೆಲ ದಿನಸಿಗಳನ್ನು ತಲುಪಿಸಲು ಆಲೋಚಿಸಿದರು. ಸ್ವಿಗ್ಗಿ ಇನ್​ಸ್ಟಾಮಾರ್ಟ್​ ಮೂಲಕ ಈ ಉಪಾಯ ಫಲಿಸಬಹುದೆಂದು ಕಾರ್ಯಪ್ರವೃತ್ತರಾದರು. ಆದರೆ ಅಂದುಕೊಂಡ ಹಾಗೆ ಆಗಲೇ ಇಲ್ಲ. ವಿಳಾಸ ಪತ್ತೆ ಹಚ್ಚುವಲ್ಲಿ ಡೆಲಿವರಿ ಏಜೆಂಟ್​ ವಿಫಲರಾದರು. ಆಗ ಬೆಂಗಳೂರಿನಲ್ಲಿದ್ದುಕೊಂಡೇ ನನ್ನ ತಾಯಿ, ಚೆನ್ನೈನಲ್ಲಿರುವ ವೃದ್ಧದಂಪತಿಗೆ ಅವರ ಮಗನೊಂದಿಗೆ ಸಂಪರ್ಕ ಕಲ್ಪಿಸಲು ಮತ್ತೊಂದು ಉಪಾಯ ಹೂಡಿದರು.’

‘ಮಿಸ್ಟರ್​ ಎಕ್ಸ್​ನ ಕೆಲ ಸ್ನೇಹಿತರನ್ನು ಪತ್ತೆ ಹಚ್ಚಿ ಆತನ ಸರಿಯಾದ ವಿಳಾಸವನ್ನು ಪಡೆದುಕೊಂಡರು. ಮತ್ತೊಮ್ಮೆ ಡೆಲಿವರಿ ಏಜೆಂಟ್​ನನ್ನು ಸಂಪರ್ಕಿಸಿ ಅವನ ವಿಳಾಸಕ್ಕೆ ಭೇಟಿ ನೀಡುವಂತೆ ವಿನಂತಿಸಿಕೊಂಡರು. ಡೆಲಿವರಿ ಏಜೆಂಟ್​ ಶ್ರೀನಾಥ್ ಶ್ರೀಕಾಂತ್, ತನ್ನ ಡೆಲಿವರಿ ಕೆಲಸವನ್ನು ಮುಗಿಸಿ ಆ ವಿಳಾಸಕ್ಕೆ ಹೋಗುವುದಾಗಿ ಭರವಸೆ ನೀಡಿದರು. ಕೊನೆಗೆ ದಿನಸಿ ಸಾಮಾನುಗಳನ್ನು ಮಿಸ್ಟರ್ ಎಕ್ಸ್​ ಮನೆಗೆ ಯಶಸ್ವಿಯಾಗಿ ತಲುಪಿಸಿದರು. ಆದರೆ ಅಲ್ಲೊಂದು ಆಘಾತ ಕಾದಿತ್ತು. ಮಿಸ್ಟರ್​ ಎಕ್ಸ್​ಗೆ ಅಪಘಾತ ಸಂಭವಿಸಿದೆ ಎನ್ನುವ ವಿಷಯ ಶ್ರೀನಾಥ ಮೂಲಕ ತಿಳಿಯಿತು. ಮಿಸ್ಟರ್ ಎಕ್ಸ್​, ತನ್ನ ಈ ಪರಿಸ್ಥಿತಿಯಿಂದಾಗಿ ಪೋಷಕರು ಒತ್ತಡ ಅನುಭವಿಸಬಾರದು ಎಂಬ ಕಾರಣಕ್ಕೆ ಅವರ ಕರೆಯನ್ನು ನಿರ್ಲಕ್ಷಿಸತೊಡಗಿದ್ದೆ ಎಂಬ ವಿಷಯವನ್ನು ತಿಳಿಸಿದರು. ನಂತರ ತನ್ನ ಪೋಷಕರೊಂದಿಗೆ ಮಾತನಾಡಿದರು. ಸ್ವಿಗ್ಗಿ ಡೆಲಿವರಿ ಏಜೆಂಟ್​ರ ಈ ಸಹಾಯಕ್ಕೆ ವೃದ್ಧದಂಪತಿ ವಂದನೆ ಸಲ್ಲಿಸಿತು.’

ಈ ಘಟನೆಯನ್ನು 5,000ಕ್ಕೂ ಹೆಚ್ಚು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ನೂರಾರು ಪ್ರತಿಕ್ರಿಯೆಗಳು ಈ ಪೋಸ್ಟ್​ಗೆ ವ್ಯಕ್ತವಾಗಿವೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:06 pm, Wed, 14 September 22

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ