Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಭೂಪಾಲದಲ್ಲಿ 18 ವಿಚ್ಛೇದಿತ ಪುರುಷರ ‘ಸ್ವಾತಂತ್ರ್ಯ’ ಸಮಾರಂಭ ಆಯೋಜನೆ

Divorce Invitation : ‘ವಿಚ್ಛೇದನಾ ಆಮಂತ್ರಣ’ ಆಮಂತ್ರಣದ ಶೀರ್ಷಿಕೆಯೇ ಹೌಹಾರುವಂತಿದೆ! ಹಮ್ಮಿಕೊಂಡ ಕಾರ್ಯಕ್ರಮಗಳು ಹುಬ್ಬೇರಿಸುವಂತಿವೆ.  ‘ಪುರುಷರ ಆತ್ಮಸಾಕ್ಷಿಯನ್ನು ಪವಿತ್ರಗೊಳಿಸುವ ಸಮಾರಂಭ’ ಅಸಲಿಯೋ ನಕಲಿಯೋ ಎಂಬ ಜಿಜ್ಞಾಸೆಗೆ ನೆಟ್ಟಿಗರು ಬಿದ್ದಿದ್ದಾರೆ.

Trending : ಭೂಪಾಲದಲ್ಲಿ 18 ವಿಚ್ಛೇದಿತ ಪುರುಷರ ‘ಸ್ವಾತಂತ್ರ್ಯ’ ಸಮಾರಂಭ ಆಯೋಜನೆ
ವಿಚ್ಛೇದನ ಆಮಂತ್ರಣ ಪತ್ರಿಕೆ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 13, 2022 | 12:27 PM

Trending : ಭೂಪಾಲದಲ್ಲಿ ಹೀಗೊಂದು ವಿಚಿತ್ರ ಸಮಾರಂಭ ಆಯೋಜನೆಗೊಂಡಿದೆ. ಬಹುಕಾಲದಿಂದ ವೈವಾಹಿಕ ವ್ಯಾಜ್ಯಗಳಲ್ಲಿ ಸಿಲುಕಿದ್ದ 18 ಪುರುಷರಿಗೆ ವಿಚ್ಛೇದನ ದೊರೆತ ಹಿನ್ನೆಲೆಯಲ್ಲಿ, ಸ್ವಯಂ ಸೇವಾ ಸಂಸ್ಥೆಯೊಂದು ಈ ಸಮಾರಂಭವನ್ನು ಆಯೋಜಿಸಿದೆ. ಟೈಮ್ಸ್ ಆಫ್​ ಇಂಡಿಯಾದ ವರದಿ ಪ್ರಕಾರ, ಈ ಎನ್​ಜಿಒದ ಸದಸ್ಯರಾದ ಝಕಿ ಅಹಮ್ಮದ್, ‘ವಿಚ್ಛೇದನ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಪುರುಷರು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಬಲಿಪಶುಗಳಾಗುತ್ತಾರೆ. ಆದರೆ ಪುರುಷರಿಗೂ ಆರ್ಥಿಕ, ಮಾನಸಿಕ, ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಅತ್ಯಗತ್ಯ. ಹಾಗಾಗಿ ಇಷ್ಟು ದಿನಗಳ ಈ ಘೋರ ಹೋರಾಟದಿಂದ ಮುಕ್ತರಾಗಿ ಈ ಕ್ಷಣಗಳನ್ನು ಪುರುಷರು ಸಂಭ್ರಮಿಸುವಂತಾಗಲಿ ಎಂಬ ಆಶಯದಿಂದ ಈ ಸಮಾರಂಭ ಆಯೋಜಿಸಲಾಗಿದೆ’ ಎಂದಿದ್ದಾರೆ.

ಆಮಂತ್ರಣದ ಶೀರ್ಷಿಕೆಯೇ ಹೌಹಾರುವಂತಿದೆ! ಹಮ್ಮಿಕೊಂಡ ಕಾರ್ಯಕ್ರಮಗಳು ಹುಬ್ಬೇರಿಸುವಂತಿವೆ. ಹೊಸ ಜೀವನಕ್ಕೆ ಪ್ರವೇಶಿಸುವ ಮುನ್ನ ಪ್ರತಿಜ್ಞಾ ವಿಧಿ ಸ್ವೀಕರಿಸುವ ವಿಷಯವಂತೂ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ;  ‘ಪುರುಷರ ಆತ್ಮಸಾಕ್ಷಿಯನ್ನು ಪವಿತ್ರಗೊಳಿಸುವ ಸಮಾರಂಭ’.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ನಮ್ಮ ಸಂಸ್ಥೆಯು, ಇಂಥ ಪ್ರಕರಣಗಳಲ್ಲಿ ಸಿಲುಕಿದ ಪುರುಷರಿಗೆ ಬೆಂಬಲ ನೀಡಿ ಈ ಪ್ರಕರಣಗಳ ವಿರುದ್ಧ ಹೋರಾಡುತ್ತ ಬಂದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ 18 ಪುರುಷರು ಕಷ್ಟದಾಯಕವಾದ ವೈವಾಹಿಕ ಜೀವನದಿಂದ ಹೊರಬಂದಿದ್ದಾರೆ. ಅವರನ್ನು ನಮ್ಮ ಸಹಾಯವಾಣಿಯ ಮೂಲಕ ಮಾನಸಿಕವಾಗಿ ಸದೃಢಗೊಳಿಸುತ್ತ ಬಂದಿದ್ದೇವೆ. ಹಾಗಾಗಿ ಈಗ ಅವರೆಲ್ಲರನ್ನೂ ಒಟ್ಟುಗೂಡಿಸಿ ಅವರ ಮುಂದಿನ ಬದುಕು ಆಶಾದಾಯಕದೆಡೆ ಹೊರಳಿಕೊಳ್ಳಲಿ ಎಂಬ ಆಶಯದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಅಲ್ಲದೆ, ಮದುವೆಯ ಹೊರತಾಗಿಯೂ ಪ್ರತಿಯೊಬ್ಬರಿಗೂ ಬದುಕಿದೆ. ಸ್ವಯಂಪ್ರೀತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಬದುಕಿನ ಬಗ್ಗೆ ಭರವಸೆ ಮೂಡಿಸಿಕೊಳ್ಳಬೇಕು ಎಂಬ ಅರಿವು ಮತ್ತು ಉತ್ಸಾಹ ತುಂಬುವ ಆಲೋಚನೆ ನಮ್ಮ ಈ ಸಮಾರಂಭದ್ದು’ ಎಂದಿದ್ದಾರೆ ಅಹಮ್ಮದ್.

ತನಗೆ ವಿಚ್ಛೇದನ ಬೇಕೆಂದು ಈ ಎನ್​ಜಿಒ ಸಹಾಯ ಕೋರಿ ಬಂದ ಜೋಡಿಯೊಂದು ಮದುವೆಯಾಗಿ ಒಂದು ದಿನ ಕಳೆದಿತ್ತಷ್ಟೆ. ಇನ್ನೊಂದು ಜೋಡಿ ಮದುವೆಯಾಗಿ ಕೇವಲ 30 ದಿನಗಳು ಕಳೆದಿದ್ದವು, ಅವರೂ ವಿಚ್ಛೇದನದ ನಿರ್ಧಾರಕ್ಕೆ ಬಂದಿದ್ದರು. ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಮತ್ತಿತರೇ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದ ಆರೋಪಗಳು ಈ ಹದಿನೆಂಟು ಜನರ ಮೇಲಿದ್ದವು. ಅಂತೂ ಅಷ್ಟೆಲ್ಲಾ ಹೋರಾಟ ಮಾಡಿ ವಿಚ್ಛೇದನ ಪಡೆದು ಬದುಕಿನಲ್ಲಿ ಬಸವಳಿದ ಈ ಪುರುಷರನ್ನು ಸೇರಿಸಿ ಸೆ. 18ರಂದು ಖಾಸಗಿಯಾಗಿ ಸಂಭ್ರಮಾಚರಣೆ ಮಾಡಬೇಕೆಂದು ಸಂಸ್ಥೆಯು ಯೋಚಿಸಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿತು. ಅಷ್ಟರಲ್ಲಿ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣವೆಂಬ ಸಾಗರದಲ್ಲಿ ಬಿದ್ದುಬಿಟ್ಟಿತು! ಮುಂದೆ ಕೇಳಬೇಕೆ?

ಕಾರ್ಯಕ್ರಮದ ಆಹ್ವಾನ ಪತ್ರಿಕೆಯು ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಭಯಂಕರ ಜಾಗ್ರತರಾಗಿದ್ದಾರೆ! ಕೆಲವರು ಇದನ್ನು ನಕಲಿ ಎಂದಿದ್ದಾರೆ. ಇನ್ನೂ ಕೆಲವರು, ವರದಕ್ಷಿಣೆ ಮತ್ತು ಕೌಟುಂಬಿಕ ಹಿಂಸಾಚಾರದ ವಿರುದ್ಧ ಇರುವ ಕಾನೂನುಗಳಿಗೆ ಭಾರತೀಯ ಪುರುಷರು ಹೇಗೆ ಬಲುಪಶುಗಳಾಗುತ್ತಿದ್ದಾರೆ ಎನ್ನುವುದರ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಈ ಆಮಂತ್ರಣವನ್ನು ಹಂಚಿಕೊಂಡ ಟ್ವಿಟರ್ ಖಾತೆದಾರರೊಬ್ಬರು, ‘ಓಹ್ ದೇವರೇ! ವಿಚ್ಚೇದನ ಸಮಾರಂಭ! ಇದು ನಿಜವಾ? ಸಂಸ್ಥೆಯ ಹೆಸರು ಬೇರೆ ಇದೆ; ‘BHAI Welfare Society’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಮದುವೆ ಎನ್ನುವುದು …. ; ಬಿಟ್ಟ ಸ್ಥಳವನ್ನು ನೀವೇ ತುಂಬಿಕೊಳ್ಳಿ!

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:08 pm, Tue, 13 September 22

ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಉಗ್ರರ ಮನಸ್ಥಿತಿ, ಉದ್ದೇಶ ಏನಾಗಿತ್ತು ಅಂತ ಈಗಲೇ ಹೇಳಲಾಗದು: ಜಾರಕಿಹೊಳಿ
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು
ಹೆಂಡತಿ, ಮಕ್ಕಳೊಂದಿಗೆ ಮಧುಸೂದನ್ ಭಾನುವಾರ ಕಾಶ್ಮೀರ ಪ್ರವಾಸ ತೆರಳಿದ್ದರು