AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೂ ಧರಿಸಿ ಕಚೇರಿ ಒಳಗೆ ಬರುವಂತಿಲ್ಲ, ಸದ್ದು ಮಾಡುತ್ತಿದೆ ಅಮೆರಿಕ ಮೂಲದ ಎಐ ಸ್ಟಾರ್ಟ್ಅಪ್ ಕಂಪನಿ

ಶೂ ಧರಿಸಿ ಕಚೇರಿ ಒಳಗೆ ಬರುವಂತಿಲ್ಲ, ಇದು ಅಮೆರಿಕ ಮೂಲದ ಸ್ಟಾರ್ಟ್​​ಅಪ್ ಕಂಪನಿ(Company) ಕರ್ಸರ್​ನ ನಿಯಮ. ಸಾಮಾನ್ಯವಾಗಿ ವಿದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚು ಗಮನಕೊಡುತ್ತಾರೆ. ಆದರೂ ಕಚೇರಿಯೊಳಗೆ ಶೂ ಧರಿಸದೆ ಬರುವ ನಿಯಮವನ್ನು ಯಾಕೆ ಜಾರಿಗೆ ತಂದಿದ್ದಾರೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು ಅದಕ್ಕೆ ಇಲ್ಲಿದೆ ಉತ್ತರ.

ಶೂ ಧರಿಸಿ ಕಚೇರಿ ಒಳಗೆ ಬರುವಂತಿಲ್ಲ, ಸದ್ದು ಮಾಡುತ್ತಿದೆ ಅಮೆರಿಕ ಮೂಲದ ಎಐ ಸ್ಟಾರ್ಟ್ಅಪ್ ಕಂಪನಿ
ಶೂ
ನಯನಾ ರಾಜೀವ್
|

Updated on: Mar 02, 2026 | 11:02 AM

Share

ಶೂ ಧರಿಸಿ ಕಚೇರಿ ಒಳಗೆ ಬರುವಂತಿಲ್ಲ, ಇದು ಅಮೆರಿಕ ಮೂಲದ ಸ್ಟಾರ್ಟ್​​ಅಪ್ ಕಂಪನಿ(Company) ಕರ್ಸರ್​ನ ನಿಯಮ. ಸಾಮಾನ್ಯವಾಗಿ ವಿದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚು ಗಮನಕೊಡುತ್ತಾರೆ. ಆದರೂ ಕಚೇರಿಯೊಳಗೆ ಶೂ ಧರಿಸದೆ ಬರುವ ನಿಯಮವನ್ನು ಯಾಕೆ ಜಾರಿಗೆ ತಂದಿದ್ದಾರೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು ಅದಕ್ಕೆ ಇಲ್ಲಿದೆ ಉತ್ತರ.

ಕಂಪನಿಯ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಅತಿಥಿಗಳು ಯಾರೇ ಅಗಿರಲಿ, ಶೂ ಧರಿಸಿ ಒಳಗೆ ಹೋಗುವಂತಿಲ್ಲ, ಕಚೇರಿ ಹೊರಗೆ ಶೂ ತೆಗೆದಿಡಬೇಕು. ಕಚೇರಿಯ ಒಳಗೆ ಸಾಕ್ಸ್ ಅಥವಾ ಒಳಗೆ ಇಟ್ಟಿರುವ ಚಪ್ಪಲಿಗಳನ್ನು ಧರಿಸಿಯೇ ನಡೆಯಬೇಕು. ಈ ನೀತಿಯು ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಗಮನ ಸೆಳೆದ ಕಾರಣ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಸಿಬ್ಬಂದಿಗೆ ಇದು ಆಫೀಸ್ ಅಲ್ಲ ಮನೆಯ ವಾತಾವರಣ ಸೃಷ್ಟಿಸಬೇಕೆಂಬುದು ಉದ್ದೇಶ.

ಕರ್ಸರ್‌ನ ಬೆನ್ ಲ್ಯಾಂಗ್ ಎಂಬ ಉದ್ಯೋಗಿ ಕೂಡ ಚಿತ್ರಗಳನ್ನು ಹಂಚಿಕೊಂಡಿದ್ದು, ತಾನು ಅಲ್ಲಿ ಕೆಲಸ ಮಾಡಿರುವುದಾಗಿ, ಅಲ್ಲಿ ಉದ್ಯೋಗಿಗಳು ಕಚೇರಿ ಆವರಣದೊಳಗೆ ನಿಜವಾಗಿಯೂ ಶೂಗಳನ್ನು ಧರಿಸುತ್ತಿರಲಿಲ್ಲ ಎಂಬುದರ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಅಂತಹ ಅಭ್ಯಾಸಗಳು ಉದ್ಯೋಗಿಗಳಿಗೆ ಆರಾಮದಾಯಕ ವಾತಾವರಣವನ್ನು ಒದಗಿಸುವ ಮೂಲಕ ಅವರ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದು ಕಂಪನಿಯ ವಾದ. ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದು, ಇದು ನನಗೆ ಎಂದಿಗೂ ವಿಚಿತ್ರವೆಂದು ಅನಿಸುತ್ತಿಲ್ಲ, ಇನ್ನೊಬ್ಬರು ಕಮೆಂಟ್ ಮಾಡಿ, ಪಾದರಕ್ಷೆಗಳನ್ನು ಹೊರಗೆ ಬಿಡುವ ನಿಯಮದ ಬಗ್ಗೆ ಅಭ್ಯಂತರವಿಲ್ಲ. ಆದರೆ ಚಿತ್ರದಲ್ಲಿ ತೋರಿಸಿರುವಂತೆ ಇಡಬಾರದು ಎಂದಿದ್ದಾರೆ.

ಮತ್ತಷ್ಟು ಓದಿ: ಅಮ್ಮನಿಗೆ ಭಯ, ಆದ್ರೆ ಅದು ನನ್ನ ಕನಸು: ಕೊನೆಗೂ ತಾಯಿಯನ್ನು ಆಕಾಶದಲ್ಲಿ ಹಾರಾಡಿಸಿದ ಮಗ

ಶೂ ಧರಿಸದಿರುವ ನೀತಿಯು ಉದ್ಯೋಗಿಗಳು, ಸಿಬ್ಬಂದಿ ಸದಸ್ಯರು ಮತ್ತು ಅತಿಥಿಗಳಿಗೆ ಮಾತ್ರ ಅನುಕೂಲಕರವಾಗಿಲ್ಲ, ಆದರೆ ಇದು ಸಾಕಷ್ಟು ಪ್ರಾಯೋಗಿಕವೂ ಆಗಿದೆ. AI ಸ್ಟಾರ್ಟ್ಅಪ್‌ನ ಸಂಸ್ಥಾಪಕ ಕೋವಲ್ ಸ್ಯಾನ್ ಫ್ರಾನ್ಸಿಸ್ಕೋ ಸ್ಟ್ಯಾಂಡರ್ಡ್‌ಗೆ ನೀಡಿದ ಸಂದರ್ಶನದಲ್ಲಿ, ಹವಾಮಾನ ಬದಲಾಗುತ್ತಿರುತ್ತದೆ. ಹಾಗೆಯೇ ಕೊಳಕನ್ನು ಮೆಟ್ಟಿಕೊಂಡು ಬರುತ್ತಾರೆ, ಹಾಗಾಗಿ ಕಚೇರಿಯ ಒಳಗಿನ ಸ್ವಚ್ಛತೆಯೂ ಕೂಡ ಪ್ರಮುಖವಾದದ್ದು ಎಂದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್  ಮಾಡಿ 

Follow Us
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?
ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ?