AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಬ್ಬಬ್ಬಾ.. ಭಯಾನಕ ದೃಶ್ಯವಿದು! ಕೂದಲೆಳೆಯ ಅಂತರದಲ್ಲಿ ಪುಟ್ಟ ಬಾಲಕನ ಜೀವ ಉಳಿದಿದೆ; ವಿಡಿಯೋ ನೋಡಿ

ಪುಟ್ಟ ಬಾಲಕ ಬಸ್​ ಇಳಿದು ಸಾಗುವಾಗ ಟ್ರಕ್​ ಎದುರು ಬಂದು ಬಿಡುತ್ತದೆ. ಕೂದಲೆಳೆಯ ಅಂತರದಲ್ಲಿ ಪುಟ್ಟ ಬಾಲಕನ ಜೀವ ಉಳಿದಿದೆ. ವಿಡಿಯೋ ನೋಡಿ..

Viral Video: ಅಬ್ಬಬ್ಬಾ.. ಭಯಾನಕ ದೃಶ್ಯವಿದು! ಕೂದಲೆಳೆಯ ಅಂತರದಲ್ಲಿ ಪುಟ್ಟ ಬಾಲಕನ ಜೀವ ಉಳಿದಿದೆ; ವಿಡಿಯೋ ನೋಡಿ
ಪುಟ್ಟ ಬಾಲಕ ರಸ್ತೆ ದಾಟುವಾಗ ಒಮ್ಮೆಲೆ ಟ್ರಕ್​ ಎದುರು ಬಂದಿದೆ!
TV9 Web
| Edited By: |

Updated on: Jun 29, 2021 | 12:59 PM

Share

ರಸ್ತೆ ದಾಟುವಾಗ ಅಪಘಾತ ಸಂಭವಿಸಿರುವ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾತನ್ನು ಕೆಳಿಯೇ ಇರುತ್ತೇವೆ. ಆದರೂ ಸಹ ಕೆಲವು ಬಾರಿ ಗಡಿಬಿಡಿಯಿಂದ, ಭಯ  ಹುಟ್ಟಿಸುವ ಕೆಲವು ಘಟನೆಗಳು ನಡೆದು ಬಿಡುತ್ತವೆ. ಒಮ್ಮೆಲೆ ಮೈ ಜುಂ.. ಎನ್ನುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುಟ್ಟ ಬಾಲಕ ಬಸ್​ ಇಳಿದು ಸಾಗುವಾಗ ಟ್ರಕ್​ ಎದುರು ಬಂದು ಬಿಡುತ್ತದೆ. ಕೂದಲೆಳೆಯ ಅಂತರದಲ್ಲಿ ಪುಟ್ಟ ಬಾಲಕನ ಜೀವ ಉಳಿದಿದೆ.

ಅದೆಷ್ಟೇ ಬಾರಿ ಮನೆಯವರು ರಸ್ತೆ ದಾಟುವಾಗ ಎಚ್ಚರವಾಗಿರಿ ಎಂದು ಹೇಳಿ ಕಳುಹಿಸಿದರೂ ಸಹ ಕೆಲವು ಬಾರಿ ಅವಸರ ಮಾಡುತ್ತೇವೆ. ಇನ್ನು ಕೆಲವು ಬಾರಿ ಗಮನವಿದ್ದರೂ ಸಹ ಅಪಘಾತಗಳು ಸಂಭವಿಸಿಬಿಡುತ್ತವೆ. ಇಲ್ಲೋರ್ವ ಬಾಲಕ ಬಸ್​ ಇಳಿದು ರಸ್ತೆ ದಾಟುತಿದ್ದಾನೆ. ಎದುರಿಗೆ ಬರುತ್ತಿರುವ ಟ್ರಕ್​ ಆತನಿಗೆ ಕಾಣಿಸಲೆ ಇಲ್ಲ. ಹಿಂಬದಿಯಲ್ಲಿ ಆತನ ಜತೆಗೇ ಬಸ್​ ಇಳಿದ ಹುಡುಗಿಯೋರ್ವಳು ಕಿರುಚುತ್ತಿದ್ದಾಳೆ. ಕೂದಲೆಳೆಯ ಅಂತರದಲ್ಲಿ ಪುಟ್ಟ ಬಾಲಕನ ಜೀವ ಉಳಿಸಿದೆ. ಓಡಿ ಹೋಗಿ ರಸ್ತೆ ದಾಟಿದ್ದಾನೆ. ಸರಿಯಾದ ಸಮಯಕ್ಕೆ ಚಾಲಕ ಬ್ರೇಕ್​ ಹಾಕಿ ಟ್ರಕ್​ಅನ್ನು ನಿಲ್ಲಿಸಿದ್ದಾನೆ.

ವಿಡಿಯೋ ಒಮ್ಮೆಲೆ ಭಯ ಹುಟ್ಟಿಸುವುದಂತೂ ನಿಜ. ಇನ್​ಸ್ಟಾಗ್ರಾಮ್​ನಲ್ಲಿ ಮೊದಲು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ಸಮಯಪ್ರಜ್ಞೆಯಿಂದ ಬ್ರೇಕ್​ ಹಾಕಿದ ಟ್ರಕ್​ ಚಾಲಕನಿಗೆ ಶ್ಲಾಘನೆ ವ್ಯಕ್ತವಾಗಿದೆ. ರಸ್ತೆ ದಾಟುವಾಗ ಎಚ್ಚರವಾಗಿರಿ ಎಂದು ಇನ್ನು ಕೆಲವರು ಅಭಿಪ್ರಾಯ ಹೇಳಿದ್ದಾರೆ. ಸಾವಿರಕ್ಕೂ ಹೆಚ್ಚು ಜನರು ವಿಡಿಯೋ ನೋಡಿದ್ದು, ರಸ್ತೆ ದಾಟುವಾಗ ಅವಸರ ಬೇಡ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಸೀರೆ ಉಟ್ಟು ಸ್ಕೇಟಿಂಗ್ ಮಾಡುತ್ತಾರೆ 46 ವರ್ಷದ ಈ ಮಹಿಳೆ! ವಿಡಿಯೋ‌ ನೋಡಿ

Viral Video: ಫುಟ್‌ಬಾಲ್‌ ಒದ್ದಂತೆ ಸೇರು ಅಕ್ಕಿಯನ್ನು ಒದ್ದ ವಧು! ವಿಡಿಯೋ ನೋಡಿದ್ರೆ ನೀವೂ ನಗೋದು ಗ್ಯಾರಂಟಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್