AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಜ್ಜಿಯ ನೆನಪಿನಲ್ಲಿ ಸ್ವರ್ಗಕ್ಕೆ ಏಣಿ ಹಾಕಿದ ಕಲಾವಿದ

ಅಜ್ಜಿಯ ನೆನಪಿನಲ್ಲಿ ಕಲಾವಿದರೊಬ್ಬರು ಸ್ವರ್ಗಕ್ಕೆ ಏಣಿ ಹಾಕಿದ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗಿದೆ. ನಿಮಗೆಲ್ಲರಿಗೂ ಇದನ್ನು ಕೇಳಿ ಆಶ್ಚರ್ಯವಾಗಬಹುದು. ಆದರೆ ಚೀನಾದ ಕಲಾವಿದರೊಬ್ಬರು ಪಟಾಕಿಗಳಿಂದ ಮಾಡಿದ ಏಣಿಯನ್ನು ಅಜ್ಜಿಯ ನೆನಪಿಗಾಗಿ ಆಗಸದಲ್ಲಿ ತೇಲಿಬಿಟ್ಟಿದ್ದು, ಅಕ್ಷರಶಃ ಸ್ವರ್ಗಕ್ಕೆ ಏಣಿಹಾಕಿದಂತೆಯೇ ಕಾಣುತ್ತಿತ್ತು.

ಅಜ್ಜಿಯ ನೆನಪಿನಲ್ಲಿ ಸ್ವರ್ಗಕ್ಕೆ ಏಣಿ ಹಾಕಿದ ಕಲಾವಿದ
ನಯನಾ ರಾಜೀವ್
|

Updated on:May 16, 2024 | 2:48 PM

Share

ಸ್ವರ್ಗಕ್ಕೆ ಏಣಿ ಹಾಕುವುದೆಂದರೇನು ಮನುಷ್ಯನಿಂದಾಗುವ ಮಾತೇ ಎಂದು ಯೋಚಿಸುತ್ತಿರಬಹುದು. ಪಟಾಕಿ(Fire Crackers) ಸಹಾಯದಿಂದ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಇದೊಂದು ನಿದರ್ಶನ, ಕೆಲವರು ಪಟಾಕಿ ಸಹಾಯದಿಂದ ತಮ್ಮ ಸಂಗಾತಿಯ ಹೆಸರು ಅಥವಾ ಹುಟ್ಟುಹಬ್ಬದ ಸಂದೇಶ ಅಥವಾ ಪ್ರೇಮ ನಿವೇದನೆಯನ್ನು ಆಗಸದಲ್ಲಿ ಮಾಡುವುದು ನೀವು ನೋಡಿರಬಹುದು. ಆದರೆ ಇದು ಸ್ವಲ್ಪ ವಿಭಿನ್ನ ಪ್ರಯತ್ನವಾಗಿದೆ.

ಅಜ್ಜಿಯ ನೆನಪಿನಲ್ಲಿ ಕಲಾವಿದರೊಬ್ಬರು ಸ್ವರ್ಗಕ್ಕೆ ಏಣಿ ಹಾಕಿದ ಸುದ್ದಿ ಇದೀಗ ಎಲ್ಲೆಡೆ ವೈರಲ್ ಆಗಿದೆ. ನಿಮಗೆಲ್ಲರಿಗೂ ಇದನ್ನು ಕೇಳಿ ಆಶ್ಚರ್ಯವಾಗಬಹುದು. ಆದರೆ ಚೀನಾದ ಕಲಾವಿದರೊಬ್ಬರು ಪಟಾಕಿಗಳಿಂದ ಮಾಡಿದ ಏಣಿಯನ್ನು ಅಜ್ಜಿಯ ನೆನಪಿಗಾಗಿ ಆಗಸದಲ್ಲಿ ತೇಲಿಬಿಟ್ಟಿದ್ದು, ಅಕ್ಷರಶಃ ಸ್ವರ್ಗಕ್ಕೆ ಏಣಿಹಾಕಿದಂತೆಯೇ ಕಾಣುತ್ತಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಪ್ರಕಾಶಮಾನವಾದ ದೀಪಗಳನ್ನು ಹೊಂದಿರುವ ಏಣಿಯು ಆಕಾಶದ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು. ವಿಡಿಯೋವನ್ನು ಹಂಚಿಕೊಂಡಿರುವವರು ಸ್ವರ್ಗಕ್ಕೆ ಮೆಟ್ಟಿಲು ಎಂದು ಶೀರ್ಷಿಕೆ ನೀಡಿದ್ದಾರೆ. ಇದು ಚೀನಾದ ಕಲಾವಿದನ ಕೈಯಿಂದ ಮೂಡಿಬಂದ ಕಲೆಯಾಗಿದೆ.

ಮತ್ತಷ್ಟು ಓದಿ: ಈ ವ್ಯಕ್ತಿ ಕಾರು ಓಡಿಸುವಾಗಲೂ ಹೆಲ್ಮೆಟ್ ಧರಿಸುತ್ತಾರೆ; ಇಲ್ಲಿದೆ ಕಾರಣ

39 ಸೆಕೆಂಡುಗಳ ವಿಡಿಯೋ ಇದಾಗಿದ್ದು, ಈ ಪಟಾಕಿಯನ್ನು ಚೀನಾದ ಪಟಾಕಿ ತಜ್ಞ ಕೈ ಗುವೋ-ಕಿಯಾಂಗ್ ತಯಾರಿಸಿದ್ದಾರೆ. ಕಿಯಾಂಗ್ ಕಲಾವಿದನಾಗುವ ತನ್ನ ಕನಸನ್ನು ಯಾವಾಗಲೂ ಬೆಂಬಲಿಸುತ್ತಿದ್ದ ತನ್ನ ಅಜ್ಜಿಗೆ ಗೌರವ ಸಲ್ಲಿಸಿದ್ದಾರೆ. ವಿಯರ್ಡ್ ಅಂಡ್ ಟೆರಿಫೈಯಿಂಗ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ಹಳೆಯ ವೀಡಿಯೊ ಪ್ರಕಾರ, ಅದರ ಎತ್ತರ 1650 ಅಡಿಗಳು.

ವಿಡಿಯೋ

ಇದುವರೆಗೆ 1 ಕೋಟಿ 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, 1 ಲಕ್ಷ 34 ಸಾವಿರ ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇದಕ್ಕಿಂತ ಶ್ರದ್ಧಾಂಜಲಿ ಬೇರೇನಿಲ್ಲ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:45 pm, Thu, 16 May 24

Follow Us
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ
ಚಾರ್ಮಾಡಿ ಘಾಟ್, ಕೊಟ್ಟಿಗೆಹಾರದಲ್ಲಿ ಧಾರಾಕಾರ ಮಳೆ