AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಳ್ಳಿ ಕಳ್ಳಿ’ ಪಾಕಿಸ್ತಾನಿ ಸಚಿವೆ ಮರಿಯಮ್ ಔರಂಗಜೇಬ್​ರನ್ನು ಲಂಡನ್​ನಲ್ಲಿ ಸಾರ್ವಜನಿಕವಾಗಿ ನಿಂದಿಸಿರುವ ವಿಡಿಯೋ ವೈರಲ್

Maryam Aurangzeb : ‘ಪಾಕಿಸ್ತಾನದ ಸಚಿವೆ ಮರಿಯಮ್ ಔರಂಗಜೇಬ್​ ಈಕೆ. ಪಾಕಿಸ್ತಾನದ ಜನರ ಹಣ ನುಂಗಿ, ರಕ್ತವನ್ನು ಹೀರಿ ಲಂಡನ್ ಸುತ್ತಲು ಬಂದಿದ್ದಾಳೆ’.

‘ಕಳ್ಳಿ ಕಳ್ಳಿ’ ಪಾಕಿಸ್ತಾನಿ ಸಚಿವೆ ಮರಿಯಮ್ ಔರಂಗಜೇಬ್​ರನ್ನು ಲಂಡನ್​ನಲ್ಲಿ ಸಾರ್ವಜನಿಕವಾಗಿ ನಿಂದಿಸಿರುವ ವಿಡಿಯೋ ವೈರಲ್
ಪಾಕಿಸ್ತಾನಿ ಸಚಿವೆ ಮರಿಯಮ್​ ಔರಂಗಜೇಬ್​ ಲಂಡನ್ನಿನ ಬೀದಿಯಲ್ಲಿ
ಶ್ರೀದೇವಿ ಕಳಸದ
|

Updated on:Sep 29, 2022 | 12:14 PM

Share

Viral video : ಪಾಕಿಸ್ತಾನದ ಮಾಹಿತಿ ಸಚಿವೆ ಮರಿಯಮ್ ಔರಂಗಜೇಬ್ ಅವರು ಲಂಡನ್ನಿನ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸ್ಥಳೀಯ ಪಾಕಿಸ್ತಾನಿ ಪ್ರಜೆಗಳು ಸಾರ್ವಜನಿಕವಾಗಿ ಅವರನ್ನು ಮುತ್ತಿಗೆ ಹಾಕಿ ನಿಂದಿಸಿದ ವಿಡಿಯೋ ವೈರಲ್ ಆಗಿದೆ. ಮರಿಯಮ್​ ಅವರನ್ನು ಚೋರ್ನಿ ಚೋರ್ನಿ- ಕಳ್ಳಿ ಕಳ್ಳಿ ಎಂದು ಕೂಗುತ್ತ ಅವರನ್ನು ಸುತ್ತುವರಿದ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಅನಿರೀಕ್ಷಿತ ಘಟನೆಯಾಗಿದ್ದು ನೆಟ್ಟಿಗರಲ್ಲಿ ಕುತೂಹಲ ಹುಟ್ಟಿಸಿದೆ.

ಟ್ವಿಟರ್​ನಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಲಂಡನ್​ನ ಫುಟ್​ಪಾತ್ ಮೇಲೆ ಮರಿಯಮ್ ನಡೆದುಕೊಂಡು ಹೋಗುತ್ತಿದ್ದಾರೆ. ಅವರನ್ನು ಹಿಂಬಾಲಿಸುತ್ತಿರುವ ಜನರು ಧ್ವನಿವರ್ಧಕದ ಮೂಲಕ ಅವರನ್ನು ಕಳ್ಳಿ ಕಳ್ಳಿ ಎಂದು ಕೂಗುತ್ತಿದ್ದಾರೆ. ಹಿನ್ನೆಲೆಯಲ್ಲಿ ಒಬ್ಬ ಮಹಿಳೆಯ ಆಕ್ರೋಶಭರಿತ ಧ್ವನಿಯೂ ಕೇಳಿಬರುತ್ತದೆ. ‘ಪಾಕಿಸ್ತಾನದ ಸಚಿವೆ ಮರಿಯಮ್ ಔರಂಗಜೇಬ್​ ಈಕೆ. ಪಾಕಿಸ್ತಾನದ ಜನರ ಹಣ ನುಂಗಿ, ರಕ್ತವನ್ನು ಹೀರಿ ಲಂಡನ್ ಸುತ್ತಲು ಬಂದಿದ್ದಾಳೆ’.

ಉಳಿದ ಜನರು ಒಂದೇ ಸಮ ಮರಿಯಮ್​ರನ್ನು ಚೋರ್ನಿ ಚೋರ್ನಿ ಎಂದು ಆವೇಶಭರಿತರಾಗಿ ಕೂಗುತ್ತಿದ್ದಾರೆ.  ಮರಿಯಮ್ ಮಾತ್ರ ಮೌನವಾಗಿ ಹೆಜ್ಜೆ ಹಾಕುತ್ತಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:04 pm, Thu, 29 September 22

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!