AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ವೈದ್ಯರ ಈ ಔಷಧಿಚೀಟಿ ಯಾಕೆ ವೈರಲ್ ಆಗುತ್ತಿದೆ ಊಹಿಸಿ

Prescription : ‘ನನ್ನ ಸೋದರಿ ನಾಲ್ಕು ಗೆರೆಯ ನೋಟ್​ಬುಕ್ಕಿನಲ್ಲಿ ಅಚ್ಚುಕಟ್ಟಾಗಿ ಬರೆಯಲು ಅಭ್ಯಾಸ ಮಾಡಿಸಿದ್ದೇ ಇದರ ಹಿಂದಿರುವ ಗುಟ್ಟು’ ಎಂದಿದ್ದಾರೆ ವೈದ್ಯರು.  

ಕೇರಳದ ವೈದ್ಯರ ಈ ಔಷಧಿಚೀಟಿ ಯಾಕೆ ವೈರಲ್ ಆಗುತ್ತಿದೆ ಊಹಿಸಿ
ಕೇರಳದ ವೈದ್ಯರು ಬರೆದ ಔಷಧಿಚೀಟಿ
TV9 Web
| Edited By: ಶ್ರೀದೇವಿ ಕಳಸದ|

Updated on:Sep 29, 2022 | 10:29 AM

Share

Kerala : ಯಾರು ಬರೆದದ್ದನ್ನೂ ಓದಬಹುದು. ಆದರೆ ಈ ವೈದ್ಯರು ಬರೆದದ್ದನ್ನು ಆ ಬ್ರಹ್ಮನೂ ಓದಲು ಸಾಧ್ಯವಿಲ್ಲ! ಅದಕ್ಕೇ ವೈದ್ಯರ ಔಷಧಿಚೀಟಿಗೆ ಬ್ರಹ್ಮಲಿಪಿ ಎಂದೇ ತಮಾಷೆ ಮಾಡುವುದುಂಟು. ನೀವೂ ಸಾಕಷ್ಟು ಸಲ ಆ ಚೀಟಿ ಓದಲು ಹೋಗಿ ಸೋತಿರುತ್ತೀರಿ. ಕೊನೆಗೆ ವೈದ್ಯರ ಲಿಪಿ ಅರ್ಥವಾಗುವುದು ಔಷಧಿ ಅಂಗಡಿಯವರಿಗೆ ಮಾತ್ರ ಎಂಬ ತೀರ್ಮಾನಕ್ಕೆ ಸುಮ್ಮನೆ ಚೀಟಿ ಮಡಿಚಿ ಜೇಬಿನಲ್ಲಿಟ್ಟುಕೊಂಡಿರುತ್ತೀರಿ. ಆದರೂ ಒಂದಿಲ್ಲಾ ಒಂದು ಬಾರಿ ನಿಮ್ಮ ಮನಸ್ಸಿನಲ್ಲಿ ಈ ಲಿಪಿ ಕಾಡಿಯೇ ಕಾಡಿರುತ್ತದೆ. ಆದರೆ ಕೇರಳದ ವೈದ್ಯರೊಬ್ಬರು ಬರೆಯುವ ಔಷಧಿ ಚೀಟಿ ಮಾತ್ರ ಈ ಯಾವ ಗೊಂದಲಗಳನ್ನೂ ಹುಟ್ಟುಕಾಕುವುದಿಲ್ಲ. ಅಷ್ಟೊಂದು ಅಚ್ಚುಕಟ್ಟಾದ ಕೈಬರಹ ಅವರದು. ಅದಕ್ಕೇ ಈಗ ಇದು ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಡಾ. ನಿತಿನ್ ನಾರಾಯಣನ್ ಕೇರಳದ ಪಾಲಕ್ಕಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ವೈದ್ಯರಾಗಿದ್ದಾರೆ. ಅವರೇ ಈ ಔಷಧಿ ಚೀಟಿ ಬರೆದವರು. ಒಂದೊಂದು ಅಕ್ಷರವನ್ನೂ ಬಿಡಿಬಿಡಿಸಿ, ಕ್ಯಾಪಿಟಲ್​ ಲೆಟರ್ಸ್​ನಲ್ಲಿ ಬರೆಯುವ ಇವರ ತಾಳ್ಮೆ, ಕೌಶಲ ಅಹುದಹುದು ಎನ್ನುವಂತಿದೆ. ಇವರ ಈ ಸುಂದರವಾದ ಕೈಬರಹವನ್ನು ನೋಡಿ ಅಚ್ಚರಿಗೊಂಡ ಬೆನ್ಸಿ ಎಸ್​.ಡಿ. ಎಂಬುವವರು ಫೇಸ್‌ಬುಕ್‌ನಲ್ಲಿ ಈ ಔಷಧಿಚೀಟಿ ಹಂಚಿಕೊಂಡಿದ್ದಾರೆ. ಯಾರೂ ಕೂಡ ಸರಳವಾಗಿ ಓದಲು ಸಾಧ್ಯವಾಗುವಂಥ ಈ ಕೈಬಹದ ಬಗ್ಗೆ ಬೆನ್ಸಿ ಅವರಿಗೆ ಕುತೂಹಲ ಉಂಟಾಗಿ ವೈದ್ಯರಿಗೆ ಈ ಕುರಿತು ಪ್ರಶ್ನಿಸಿಯೇ ಬಿಟ್ಟಿದ್ದಾರೆ. ಆಗ ವೈದ್ಯರು, ‘ನನ್ನ ಸೋದರಿ ನಾಲ್ಕು ಗೆರೆಯ ನೋಟ್​ಬುಕ್ಕಿನಲ್ಲಿ ಅಚ್ಚುಕಟ್ಟಾಗಿ ಬರೆಯಲು ಅಭ್ಯಾಸ ಮಾಡಿಸಿದ್ದೇ ಇದರ ಹಿಂದಿರುವ ಗುಟ್ಟು’ ಎಂದಿದ್ದಾರೆ.

ಈ ದಸರಾಗೆ ನಿಮ್ಮ ನಿಮ್ಮ ವೈದ್ಯರಿಗೆ ನಾಲ್ಕು ಗೆರೆಯ ನೋಟ್​ಬುಕ್​ ಉಡುಗೊರೆಯಾಗಿ ಕೊಡುವ ಆಲೋಚನೆ ನಿಮಗೀಗ ಬರುತ್ತಿದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:26 am, Thu, 29 September 22

Follow Us
Web contact
Web contact

TV9 Kannada

Read More
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ