AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ವೈದ್ಯರ ಈ ಔಷಧಿಚೀಟಿ ಯಾಕೆ ವೈರಲ್ ಆಗುತ್ತಿದೆ ಊಹಿಸಿ

Prescription : ‘ನನ್ನ ಸೋದರಿ ನಾಲ್ಕು ಗೆರೆಯ ನೋಟ್​ಬುಕ್ಕಿನಲ್ಲಿ ಅಚ್ಚುಕಟ್ಟಾಗಿ ಬರೆಯಲು ಅಭ್ಯಾಸ ಮಾಡಿಸಿದ್ದೇ ಇದರ ಹಿಂದಿರುವ ಗುಟ್ಟು’ ಎಂದಿದ್ದಾರೆ ವೈದ್ಯರು.  

ಕೇರಳದ ವೈದ್ಯರ ಈ ಔಷಧಿಚೀಟಿ ಯಾಕೆ ವೈರಲ್ ಆಗುತ್ತಿದೆ ಊಹಿಸಿ
ಕೇರಳದ ವೈದ್ಯರು ಬರೆದ ಔಷಧಿಚೀಟಿ
TV9 Web
| Edited By: |

Updated on:Sep 29, 2022 | 10:29 AM

Share

Kerala : ಯಾರು ಬರೆದದ್ದನ್ನೂ ಓದಬಹುದು. ಆದರೆ ಈ ವೈದ್ಯರು ಬರೆದದ್ದನ್ನು ಆ ಬ್ರಹ್ಮನೂ ಓದಲು ಸಾಧ್ಯವಿಲ್ಲ! ಅದಕ್ಕೇ ವೈದ್ಯರ ಔಷಧಿಚೀಟಿಗೆ ಬ್ರಹ್ಮಲಿಪಿ ಎಂದೇ ತಮಾಷೆ ಮಾಡುವುದುಂಟು. ನೀವೂ ಸಾಕಷ್ಟು ಸಲ ಆ ಚೀಟಿ ಓದಲು ಹೋಗಿ ಸೋತಿರುತ್ತೀರಿ. ಕೊನೆಗೆ ವೈದ್ಯರ ಲಿಪಿ ಅರ್ಥವಾಗುವುದು ಔಷಧಿ ಅಂಗಡಿಯವರಿಗೆ ಮಾತ್ರ ಎಂಬ ತೀರ್ಮಾನಕ್ಕೆ ಸುಮ್ಮನೆ ಚೀಟಿ ಮಡಿಚಿ ಜೇಬಿನಲ್ಲಿಟ್ಟುಕೊಂಡಿರುತ್ತೀರಿ. ಆದರೂ ಒಂದಿಲ್ಲಾ ಒಂದು ಬಾರಿ ನಿಮ್ಮ ಮನಸ್ಸಿನಲ್ಲಿ ಈ ಲಿಪಿ ಕಾಡಿಯೇ ಕಾಡಿರುತ್ತದೆ. ಆದರೆ ಕೇರಳದ ವೈದ್ಯರೊಬ್ಬರು ಬರೆಯುವ ಔಷಧಿ ಚೀಟಿ ಮಾತ್ರ ಈ ಯಾವ ಗೊಂದಲಗಳನ್ನೂ ಹುಟ್ಟುಕಾಕುವುದಿಲ್ಲ. ಅಷ್ಟೊಂದು ಅಚ್ಚುಕಟ್ಟಾದ ಕೈಬರಹ ಅವರದು. ಅದಕ್ಕೇ ಈಗ ಇದು ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಡಾ. ನಿತಿನ್ ನಾರಾಯಣನ್ ಕೇರಳದ ಪಾಲಕ್ಕಾಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಕ್ಕಳ ವೈದ್ಯರಾಗಿದ್ದಾರೆ. ಅವರೇ ಈ ಔಷಧಿ ಚೀಟಿ ಬರೆದವರು. ಒಂದೊಂದು ಅಕ್ಷರವನ್ನೂ ಬಿಡಿಬಿಡಿಸಿ, ಕ್ಯಾಪಿಟಲ್​ ಲೆಟರ್ಸ್​ನಲ್ಲಿ ಬರೆಯುವ ಇವರ ತಾಳ್ಮೆ, ಕೌಶಲ ಅಹುದಹುದು ಎನ್ನುವಂತಿದೆ. ಇವರ ಈ ಸುಂದರವಾದ ಕೈಬರಹವನ್ನು ನೋಡಿ ಅಚ್ಚರಿಗೊಂಡ ಬೆನ್ಸಿ ಎಸ್​.ಡಿ. ಎಂಬುವವರು ಫೇಸ್‌ಬುಕ್‌ನಲ್ಲಿ ಈ ಔಷಧಿಚೀಟಿ ಹಂಚಿಕೊಂಡಿದ್ದಾರೆ. ಯಾರೂ ಕೂಡ ಸರಳವಾಗಿ ಓದಲು ಸಾಧ್ಯವಾಗುವಂಥ ಈ ಕೈಬಹದ ಬಗ್ಗೆ ಬೆನ್ಸಿ ಅವರಿಗೆ ಕುತೂಹಲ ಉಂಟಾಗಿ ವೈದ್ಯರಿಗೆ ಈ ಕುರಿತು ಪ್ರಶ್ನಿಸಿಯೇ ಬಿಟ್ಟಿದ್ದಾರೆ. ಆಗ ವೈದ್ಯರು, ‘ನನ್ನ ಸೋದರಿ ನಾಲ್ಕು ಗೆರೆಯ ನೋಟ್​ಬುಕ್ಕಿನಲ್ಲಿ ಅಚ್ಚುಕಟ್ಟಾಗಿ ಬರೆಯಲು ಅಭ್ಯಾಸ ಮಾಡಿಸಿದ್ದೇ ಇದರ ಹಿಂದಿರುವ ಗುಟ್ಟು’ ಎಂದಿದ್ದಾರೆ.

ಈ ದಸರಾಗೆ ನಿಮ್ಮ ನಿಮ್ಮ ವೈದ್ಯರಿಗೆ ನಾಲ್ಕು ಗೆರೆಯ ನೋಟ್​ಬುಕ್​ ಉಡುಗೊರೆಯಾಗಿ ಕೊಡುವ ಆಲೋಚನೆ ನಿಮಗೀಗ ಬರುತ್ತಿದೆಯಾ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:26 am, Thu, 29 September 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ