AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhoni: ಧೋನಿ ಎಕಾನಾಮಿ ಕ್ಲಾಸ್​ನಲ್ಲಿ ರಾಂಚಿಗೆ ಪ್ರಯಾಣ, ವಿಡಿಯೋ ವೈರಲ್

Ranchi : ಬಗೆಬಗೆಯ ಚಾಕೋಲೇಟ್​ನೊಂದಿಗೆ ಧೋನಿ ಮುಂದೆ ನಿಲ್ಲುತ್ತಾಳೆ ಗಗನಸಖಿ. ಸುತ್ತಲಿನವರೆಲ್ಲ ಇಷ್ಟೊಂದು ಚಾಕೋಲೇಟ್​ ಈ ವ್ಯಕ್ತಿಗೆ ಮಾತ್ರ! ಎಂದು ಅಚ್ಚರಿಯಾಗುತ್ತಾರೆ ವಿನಾ ಆ ವ್ಯಕ್ತಿ ಯಾರೆಂದು ತಲೆಕೆಡಿಸಿಕೊಳ್ಳುವುದೇ ಇಲ್ಲ.

Dhoni: ಧೋನಿ ಎಕಾನಾಮಿ ಕ್ಲಾಸ್​ನಲ್ಲಿ ರಾಂಚಿಗೆ ಪ್ರಯಾಣ, ವಿಡಿಯೋ ವೈರಲ್
ಎಕಾನಾಮಿ ಕ್ಲಾಸ್​ನಲ್ಲಿ ರಾಂಚಿಗೆ ಪ್ರಯಾಣಿಸುತ್ತಿರುವ ಕ್ರಿಕೆಟ್​ ಆಟಗಾರ ಎಂ ಎಸ್​ ಧೋನಿ.
ಶ್ರೀದೇವಿ ಕಳಸದ
ಶ್ರೀದೇವಿ ಕಳಸದ|

Updated on:Jun 27, 2023 | 10:50 AM

Share

Economy Class : ಅರೆ ಓ ಧೋನಿ! (M S Dhoni) ನನ್ನ ಪಕ್ಕದಲ್ಲಿಯೇ ಕುಳಿತಿದ್ದಾರೆ. ನನ್ನ ಮುಂದಿನ ಸೀಟಿನಲ್ಲಿದ್ದಾರೆ. ನನ್ನ ಹಿಂದಿನ ಸೀಟಿನಲ್ಲಿದ್ದಾರೆ. ನಿಮ್ಮದೊಂದು ಆಟೋಗ್ರಾಫ್​ ಬೇಕು. ಒಂದು ಸೆಲ್ಫೀ ಸರ್ಜೀ… ಹೀಗೆಲ್ಲ ಯಾವ ಧ್ವನಿಗಳೂ ಅಲ್ಲ ಕೇಳಿಬರಲಿಲ್ಲ. ನೂಕುನುಗ್ಗಲು ಉಂಟಾಗಲಿಲ್ಲ. ಎಲ್ಲರೂ ಅವರವರ ಪಾಡಿಗೆ ಕುಳಿತಿದ್ದರು. ಹಾಗೆಯೇ ಧೋನಿ ಕೂಡ. ಮೊದಲ ಸಾಲಿನಲ್ಲಿ ಅಲ್ಲ ಮತ್ತೆ! 3F ನಲ್ಲಿ. ಅಚ್ಚರಿಯಾಗುತ್ತಿದೆಯಾ? ಹೌದು ಇದು ನಡೆದಿದ್ದು ರಾಂಚಿ ಬಜೆಟ್​ ಫ್ಲೈಟ್​ನಲ್ಲಿ. ಗಗನಸಖಿ ತಟ್ಟೆತುಂಬ ಥರಾವರಿ ಚಾಕೋಲೇಟ್ ತಂದುಕೊಟ್ಟಾಗ ಹಿಂದಿನ ಸೀಟಿನಲ್ಲಿರುವ ಮಹಿಳೆ, ಅರೆ ನನಗ್ಯಾಕೆ ಚಾಕೊಲೇಟ್ ತಂದುಕೊಟ್ಟಿಲ್ಲ ಎಂದು ನೋಡುತ್ತಿರುವಂತೆ ತೋರುತ್ತಿಲ್ಲವೆ?

ರಾಂಚಿಯು ಕೇವಲ ಬಜೆಟ್​ ಫ್ಲೈಟ್​ ಅನ್ನು ಹೊಂದಿದೆ ಎಂದು ಗಬ್ಬರ್​ ಎನ್ನುವವರು ಈ ವಿಡಿಯೋ ಟ್ವೀಟ್​ ಮಾಡಿದ ಬೆನ್ನಲ್ಲಿ ನೆಟ್ಟಿಗರೆಲ್ಲರೂ ರಾಂಚಿಗೆ ಇರುವ ವಿಮಾನ ಸೌಲಭ್ಯದ ಬಗ್ಗೆ ಚರ್ಚಿಸಿದ್ದಾರೆ. ರಾಂಚಿಗೆ ಏರ್ ಇಂಡಿಯಾ ಮತ್ತು ವಿಸ್ತಾರಾ ಎರಡೂ ವಿಮಾನ ಸೌಲಭ್ಯ ಇವೆ. ಆದರೆ ರಾಂಚಿಗೆ ವಿಸ್ತಾರಾ ನೇರ ಸಂಪರ್ಕ ಹೊಂದಿಲ್ಲದ ಕಾರಣ ಧೋನಿ ಹೀಗೆ ಪ್ರಯಾಣಿಸಿದ್ದಾರೆ. ಬಿಝಿನೆಸ್​ ಕ್ಲಾಸ್​ ಬಗ್ಗೆ ಯೋಚಿಸದ ಅವರ ಸರಳತೆಯನ್ನು ಗಮನಿಸಿ ಎಂದಿದ್ದಾರೆ.

ಇದನ್ನೂ ಓದಿ : Viral: ಸೇಕ್ರೆಡ್​ ಫೈರ್; 16 ವರ್ಷಗಳ ”ದಾಸವಾಳ ಪುಷ್ಪಾ” ಕನಸು ನನಸಾದದ್ದು ಹೀಗೆ

ಏರ್ ಇಂಡಿಯಾ, ಏರ್ ಏಷ್ಯಾ ಇಂಡಿಯಾ, ಗೋ ಏರ್, ಇಂಡಿಗೊ, ವಿಸ್ತಾರಾ ಈ ಎಲ್ಲ ಕನೆಕ್ಟೆಡ್​ ಫ್ಲೈಟ್​ಗಳು ರಾಂಚಿಗೆ ಲಭ್ಯ ಎಂದ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ರಾಂಚಿಗೆ ಪ್ರಯಾಣಿಸಲು ಇಂಡಿಗೋ ವಿಮಾನ ಉತ್ತಮ ಎಂದು ಇನ್ನೊಬ್ಬರು ಹೇಳಿದ್ದಾರೆ. ಎಲ್ಲಾ ಸರಿ ಮಧ್ಯದ ಸೀಟ್ ಯಾಕೆ ಖಾಲೀ ಇದೆ ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ. ಅರೆರೆ! ಧೋನಿ ಕ್ಯಾಂಡಿ ಕ್ರಷ್ ಆಡುತ್ತಿದ್ದಾರೆ ಎಂದಿದ್ದಾರೆ ಕೆಲವರು. ಧೋನಿಯವರ ಸರಳತೆಗೆ ಸುಧಾ ಮೂರ್ತಿ ಹೆಮ್ಮೆ ಪಡಬಹುದು ಎಂದಿದ್ದಾರೆ ಒಬ್ಬರೇ ಒಬ್ಬರು!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:44 am, Tue, 27 June 23

Follow Us
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ