AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dhoni: ಧೋನಿ ಎಕಾನಾಮಿ ಕ್ಲಾಸ್​ನಲ್ಲಿ ರಾಂಚಿಗೆ ಪ್ರಯಾಣ, ವಿಡಿಯೋ ವೈರಲ್

Ranchi : ಬಗೆಬಗೆಯ ಚಾಕೋಲೇಟ್​ನೊಂದಿಗೆ ಧೋನಿ ಮುಂದೆ ನಿಲ್ಲುತ್ತಾಳೆ ಗಗನಸಖಿ. ಸುತ್ತಲಿನವರೆಲ್ಲ ಇಷ್ಟೊಂದು ಚಾಕೋಲೇಟ್​ ಈ ವ್ಯಕ್ತಿಗೆ ಮಾತ್ರ! ಎಂದು ಅಚ್ಚರಿಯಾಗುತ್ತಾರೆ ವಿನಾ ಆ ವ್ಯಕ್ತಿ ಯಾರೆಂದು ತಲೆಕೆಡಿಸಿಕೊಳ್ಳುವುದೇ ಇಲ್ಲ.

Dhoni: ಧೋನಿ ಎಕಾನಾಮಿ ಕ್ಲಾಸ್​ನಲ್ಲಿ ರಾಂಚಿಗೆ ಪ್ರಯಾಣ, ವಿಡಿಯೋ ವೈರಲ್
ಎಕಾನಾಮಿ ಕ್ಲಾಸ್​ನಲ್ಲಿ ರಾಂಚಿಗೆ ಪ್ರಯಾಣಿಸುತ್ತಿರುವ ಕ್ರಿಕೆಟ್​ ಆಟಗಾರ ಎಂ ಎಸ್​ ಧೋನಿ.
ಶ್ರೀದೇವಿ ಕಳಸದ
|

Updated on:Jun 27, 2023 | 10:50 AM

Share

Economy Class : ಅರೆ ಓ ಧೋನಿ! (M S Dhoni) ನನ್ನ ಪಕ್ಕದಲ್ಲಿಯೇ ಕುಳಿತಿದ್ದಾರೆ. ನನ್ನ ಮುಂದಿನ ಸೀಟಿನಲ್ಲಿದ್ದಾರೆ. ನನ್ನ ಹಿಂದಿನ ಸೀಟಿನಲ್ಲಿದ್ದಾರೆ. ನಿಮ್ಮದೊಂದು ಆಟೋಗ್ರಾಫ್​ ಬೇಕು. ಒಂದು ಸೆಲ್ಫೀ ಸರ್ಜೀ… ಹೀಗೆಲ್ಲ ಯಾವ ಧ್ವನಿಗಳೂ ಅಲ್ಲ ಕೇಳಿಬರಲಿಲ್ಲ. ನೂಕುನುಗ್ಗಲು ಉಂಟಾಗಲಿಲ್ಲ. ಎಲ್ಲರೂ ಅವರವರ ಪಾಡಿಗೆ ಕುಳಿತಿದ್ದರು. ಹಾಗೆಯೇ ಧೋನಿ ಕೂಡ. ಮೊದಲ ಸಾಲಿನಲ್ಲಿ ಅಲ್ಲ ಮತ್ತೆ! 3F ನಲ್ಲಿ. ಅಚ್ಚರಿಯಾಗುತ್ತಿದೆಯಾ? ಹೌದು ಇದು ನಡೆದಿದ್ದು ರಾಂಚಿ ಬಜೆಟ್​ ಫ್ಲೈಟ್​ನಲ್ಲಿ. ಗಗನಸಖಿ ತಟ್ಟೆತುಂಬ ಥರಾವರಿ ಚಾಕೋಲೇಟ್ ತಂದುಕೊಟ್ಟಾಗ ಹಿಂದಿನ ಸೀಟಿನಲ್ಲಿರುವ ಮಹಿಳೆ, ಅರೆ ನನಗ್ಯಾಕೆ ಚಾಕೊಲೇಟ್ ತಂದುಕೊಟ್ಟಿಲ್ಲ ಎಂದು ನೋಡುತ್ತಿರುವಂತೆ ತೋರುತ್ತಿಲ್ಲವೆ?

ರಾಂಚಿಯು ಕೇವಲ ಬಜೆಟ್​ ಫ್ಲೈಟ್​ ಅನ್ನು ಹೊಂದಿದೆ ಎಂದು ಗಬ್ಬರ್​ ಎನ್ನುವವರು ಈ ವಿಡಿಯೋ ಟ್ವೀಟ್​ ಮಾಡಿದ ಬೆನ್ನಲ್ಲಿ ನೆಟ್ಟಿಗರೆಲ್ಲರೂ ರಾಂಚಿಗೆ ಇರುವ ವಿಮಾನ ಸೌಲಭ್ಯದ ಬಗ್ಗೆ ಚರ್ಚಿಸಿದ್ದಾರೆ. ರಾಂಚಿಗೆ ಏರ್ ಇಂಡಿಯಾ ಮತ್ತು ವಿಸ್ತಾರಾ ಎರಡೂ ವಿಮಾನ ಸೌಲಭ್ಯ ಇವೆ. ಆದರೆ ರಾಂಚಿಗೆ ವಿಸ್ತಾರಾ ನೇರ ಸಂಪರ್ಕ ಹೊಂದಿಲ್ಲದ ಕಾರಣ ಧೋನಿ ಹೀಗೆ ಪ್ರಯಾಣಿಸಿದ್ದಾರೆ. ಬಿಝಿನೆಸ್​ ಕ್ಲಾಸ್​ ಬಗ್ಗೆ ಯೋಚಿಸದ ಅವರ ಸರಳತೆಯನ್ನು ಗಮನಿಸಿ ಎಂದಿದ್ದಾರೆ.

ಇದನ್ನೂ ಓದಿ : Viral: ಸೇಕ್ರೆಡ್​ ಫೈರ್; 16 ವರ್ಷಗಳ ”ದಾಸವಾಳ ಪುಷ್ಪಾ” ಕನಸು ನನಸಾದದ್ದು ಹೀಗೆ

ಏರ್ ಇಂಡಿಯಾ, ಏರ್ ಏಷ್ಯಾ ಇಂಡಿಯಾ, ಗೋ ಏರ್, ಇಂಡಿಗೊ, ವಿಸ್ತಾರಾ ಈ ಎಲ್ಲ ಕನೆಕ್ಟೆಡ್​ ಫ್ಲೈಟ್​ಗಳು ರಾಂಚಿಗೆ ಲಭ್ಯ ಎಂದ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ರಾಂಚಿಗೆ ಪ್ರಯಾಣಿಸಲು ಇಂಡಿಗೋ ವಿಮಾನ ಉತ್ತಮ ಎಂದು ಇನ್ನೊಬ್ಬರು ಹೇಳಿದ್ದಾರೆ. ಎಲ್ಲಾ ಸರಿ ಮಧ್ಯದ ಸೀಟ್ ಯಾಕೆ ಖಾಲೀ ಇದೆ ಎಂದು ಮಗದೊಬ್ಬರು ಪ್ರಶ್ನಿಸಿದ್ದಾರೆ. ಅರೆರೆ! ಧೋನಿ ಕ್ಯಾಂಡಿ ಕ್ರಷ್ ಆಡುತ್ತಿದ್ದಾರೆ ಎಂದಿದ್ದಾರೆ ಕೆಲವರು. ಧೋನಿಯವರ ಸರಳತೆಗೆ ಸುಧಾ ಮೂರ್ತಿ ಹೆಮ್ಮೆ ಪಡಬಹುದು ಎಂದಿದ್ದಾರೆ ಒಬ್ಬರೇ ಒಬ್ಬರು!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:44 am, Tue, 27 June 23

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್