Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಬನಾನಾ ಪಾನೀಪುರಿ; ಆಗಲೇ ಕಿವುಚಿದ ಬಾಳೆಹಣ್ಣಿನಂತಾಗೋಯ್ತಾ ನಿಮ್ಮ ಮುಖ?

Panipuri: ದಿನವಿಡೀ ಬೆರಳಿನಿಂದ ಸ್ಕ್ರೀನ್​ ದೂಡುವ ನಿಮಗೆ ವರ್ಚುವಲ್ ಬಹುಮಾನ ಕೊಟ್ಟರೆ ಹೇಗೆ? ಹೇಗಿದ್ದರೂ ನೀವು ಚಾಟ್​ಪ್ರಿಯರು. ಯಾಕೆ ಒಮ್ಮೆ ಈ ವಿಶೇಷ ತಿಂಡಿಯನ್ನು ಪ್ರಯತ್ನಿಸಬಾರದು? ಮತ್ತಿದು ಉಚಿತ, ಸೀಮಿತ ಅವಕಾಶ!

Viral Video: ಬನಾನಾ ಪಾನೀಪುರಿ; ಆಗಲೇ ಕಿವುಚಿದ ಬಾಳೆಹಣ್ಣಿನಂತಾಗೋಯ್ತಾ ನಿಮ್ಮ ಮುಖ?
ಬನಾನಾ ಪಾನೀಪುರಿ
Follow us
ಶ್ರೀದೇವಿ ಕಳಸದ
|

Updated on:Jun 26, 2023 | 4:49 PM

Banana Panipuri : ಅಯ್ಯಾ ಚಾಟ್​ವಾಲಾಗಳಿರಾ ಮತ್ತು ಫುಡ್ ವ್ಲಾಗರ್​ಗಳಿರಾ, ಭಾರತೀಯರ ಪಂಚಪ್ರಾಣವಾದ ಈ ಸ್ಟ್ರೀಟ್​ ಚಾಟ್​ಗಳನ್ನು ಅಧ್ವಾನಗೊಳಿಸಿದ ಆರೋಪದ ಮೇಲೆ ನಿಮ್ಮನ್ನು ಬಂಧಿಸಿದರೆ ಈತನಕ ಎಷ್ಟು ಪ್ರಕರಣಗಳು ದಾಖಲಾದಾವು? ಯಾಕ್ರೋ ಹೀಗೆಲ್ಲ ಹುಚ್ಚು ಪ್ರಯೋಗಗಳಿಗೆ ಬಿದ್ದಿದ್ದೀರಿ? ನೆಟ್ಟಿಗರಂತೂ ನಿಮ್ಮನ್ನು ಬಯ್ಯಲು ಪದಪುಂಜಗಳನ್ನು ಹುಡುಕಾಡಿ ಬೇಸತ್ತಿದ್ದಾರೆ. ಅವರ ಮುಂದೆ ಸ್ಕ್ರೀನ್​ ಇರುವುದರಿಂದ ನೀವೆಲ್ಲಾ ಈತನಕ ಬದುಕಿದ್ದೀರಿ ಇಲ್ಲವಾದರೆ! ಪ್ರಿಯ ನೆಟ್ಟಿಗರೇ, ಈ ಬನಾನಾ ಪಾನೀಪುರಿಯನ್ನು ಇದೊಂದು ಸಲ ಹೊಟ್ಟೆಗೆ ಹಾಕ್ಕೊಂಬಿಡಿ…

ಪ್ರಪಂಚದಾದ್ಯಂತ ಪಾನಿಪುರಿ ಪ್ರಿಯರು ಈ ವಿಡಿಯೋ ನೋಡಿ ಕೆರಳಿ ಕೆಂಡವಾಗಿದ್ದಾರೆ. ಅವರ ತಲೆಯ ಮೇಲೆ ಬಾಳೆಹಣ್ಣು ಇಟ್ಟರೆ ಅದು ಕ್ಷಣಾರ್ಧದಲ್ಲಿ ಬೆಂದರೂ ಅಚ್ಚರಿಯಾಗದು. ಟ್ವಿಟರ್​ ಖಾತೆದಾರರಾದ ಮೊಹಮ್ಮದ್ ಫ್ಯೂಚರ್‌ವಾಲಾ ಎನ್ನುವವರು ಮೇಲಿನ ವಿಡಿಯೋ ಅನ್ನು ಹಂಚಿಕೊಂಡಿದ್ದಾರೆ. ಬಾಳೆಹಣ್ಣನ್ನು ಬರೀಗೈಯಿಂದ ಕಿವುಚುವುದೇನು, ತುಂಬುವುದೇನು, ಪಾನಿಯನ್ನು ಅದ್ದಿ ಕೊಡುವುದೇನು? ಕೆಲ ನೆಟ್ಟಿಗರಿಗೆ ಪ್ರತಿಕ್ರಿಯೆ ಟೈಪ್​ ಮಾಡಲು ಬೆರಳುಗಳೇ ಚಲಿಸುತ್ತಿಲ್ಲ.

ಇದನ್ನೂ ಓದಿ : Viral: ಸೇಕ್ರೆಡ್​ ಫೈರ್; 16 ವರ್ಷಗಳ ”ದಾಸವಾಳ ಪುಷ್ಪಾ” ಕನಸು ನನಸಾದದ್ದು ಹೀಗೆ

ಕೃಪಾಲಿ ಪಟೇಲ್​ ಎಂಬ ಇನ್​​ಸ್ಟಾ ಖಾತೆದಾರ ಫುಡ್​ ಬ್ಲಾಗ್​ನಲ್ಲಿ ಮೂಲ ಪೋಸ್ಟ್ ನೋಡಬಹುದಾಗಿದೆ. ನಾಳೆ ಸಂಜೆ ಬೀದಿಬದಿಯಲ್ಲಿ ಚನ್ನಾ ಬಟುರಾ ತಿನ್ನಲು ಹೋಗೋಣ ಎಂದು ನನ್ನ ಹೆಂಡತಿ ಹೇಳಿದ್ದಳು. ಈ ವಿಡಿಯೋ ನೋಡಿ ಕ್ಯಾನ್ಸಲ್​ ಮಾಡಿದಳು. ಈಗ ನಾಳೆ ರಾತ್ರಿಯ ಅಡುಗೆ ಜವಾಬ್ದಾರಿ ನನ್ನ ತಲೆಮೇಲೆ ಎಂದಿದ್ದಾರೆ ಒಬ್ಬರು. ಇಂಥ ಪೋಸ್ಟ್​ಗಳನ್ನು ಟ್ವೀಟ್ ಮಾಡಿದರೆ ನಿಮ್ಮನ್ನು ಬ್ಲಾಕ್ ಮಾಡಬೇಕಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ಧಾರೆ

ಇದನ್ನೂ ಓದಿ : Viral Video: ಕೋಕ್​ ಸ್ಟುಡಿಯೋದ ”ಕನ ಯಾರೀ” ಹಾಡಿಗೆ ಫ್ರೀ ಸ್ಟೈಲ್​ ನೃತ್ಯ

ಇದರಲ್ಲಿ ಅತ್ಯಂತ ಶುಚಿಯಾಗಿ ಕಾಣುತ್ತಿರುವುದೆಂದರೆ ಯೂಸ್ ಅಂಡ್​ ಥ್ರೋ ಪ್ಲೇಟ್ ಮಾತ್ರ ಎಂದಿದ್ದಾರೆ ಮತ್ತೊಬ್ಬರು. ಇದು ಜೈನ್​ ಪಾನೀಪುರಿ ಎಂದು ಮಗದೊಬ್ಬರು ಹೇಳಿದ್ದಾರೆ. ಏಯ್ ಶೀ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ಧಾರೆ. ಜೈನರು ಆಲೂಗಡ್ಡೆಯನ್ನು ಬಳಸುವುದಿಲ್ಲ. ಮಧುಮೇಹ ರೋಗಿಗಳು ಆಲೂಗಡ್ಡೆ ಬಳಸಬಾರದು. ಜೈನರು ಬಾಳೆಕಾಯಿಯನ್ನು ಆಲೂಗಡ್ಡೆಯ ಬದಲಾಗಿ ಬಳಸುತ್ತಾರೆ. ಇದು ಉತ್ತಮ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ ಎಂದಿದ್ದಾರೆ ಮತ್ತೊಬ್ಬರು. ಎಲ್ಲ ಸರಿ ಆದರೆ ಪಾನಿಪುರಿಯಲ್ಲಿ ಬಾಳೆಹಣ್ಣು!? ಎಂದು ಜನ ಮುಖ ಕಿವುಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಇಂಥ ವಿಚಿತ್ರ ಚಾಟ್​ಪ್ರಯೋಗಗಳನ್ನು ನೋಡಿದರೆ ನಿಮಗೆ ಏನೆನ್ನಿಸುತ್ತದೆ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:43 pm, Mon, 26 June 23

ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್