AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆಗೂ ಜೆಸಿಬಿ ವಾಹನಕ್ಕೂ ಫೈಟ್ ಗೆದ್ದೋರ್ಯಾರು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ (viral video)

ಕಾಡಾನೆಯೊಂದು ಜೆಸಿಬಿ ವಾಹನದೊಂದಿಗೆ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆನೆಗೂ ಜೆಸಿಬಿ ವಾಹನಕ್ಕೂ ಫೈಟ್ ಗೆದ್ದೋರ್ಯಾರು ಗೊತ್ತಾ..? ಇಲ್ಲಿದೆ ವೈರಲ್ ವಿಡಿಯೋ (viral video)
ಜೆಸಿಬಿಯೊಂದಿಗೆ ಕಾದಾಡುತ್ತಿರುವ ಆನೆ
TV9 Web
| Edited By: |

Updated on: Feb 05, 2022 | 6:34 PM

Share

(viral video) ಆನೆಗಳು ನೋಡೋಕೆ ತುಂಬಾ ಮುದ್ದಾಗಿ ಕಾಣುತ್ತವೆ. ಪ್ರೀತಿ ಮತ್ತು ನಿಷ್ಠಾವಂತ ಪ್ರಾಣಿಗಳಲ್ಲಿ ಇದು ಒಂದು. ದೈತ್ಯವಾಗಿ ಕಂಡರು ಮೃದು ಮನಸ್ಸಿನ ಪ್ರಾಣಿ. ಕೆಲವೊಮ್ಮೆ ಅವು ಕ್ರೂರವಾಗಿ ಕೂಡ ವರ್ತಿಸುತ್ತವೆ. ಅಂತಹದೆ ಒಂದು ವಿಡಿಯೋ ಈಗ ವೈರಲ್ ಆಗಿದೆ. ಕಾಡಾನೆಯೊಂದು ಜೆಸಿಬಿ ವಾಹನದೊಂದಿಗೆ ಕಾದಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ತೆರೆದ ಮೈದಾನದಲ್ಲಿ ಭಾರೀ ಪ್ರಮಾಣದ ಜೆಸಿಬಿ (JCB vehicle) ವಾಹನ ಮತ್ತು ಕಾಡು ಆನೆಯನ್ನು ಕಾಣಬಹುವುದಾಗಿದೆ. ಸ್ಕೂಪರ್‌ನಲ್ಲಿ ಚೂಪಾದ ಹಲ್ಲುಗಳನ್ನು ಹೊಂದಿರುವ ಜೆಸಿಬಿ ಯಂತ್ರವು ಆನೆಯನ್ನು ಪುನಹ ತನ್ನ ವಾಸಸ್ಥಾನಕ್ಕೆ ಹೋಗುವಂತೆ ತಳ್ಳುವುದನ್ನು ನೋಡಬಹುದು.

ಆನೆ ಕೂಡ ತನ್ನೆಲ್ಲ ಶಕ್ತಿಯಿಂದ ಸ್ಕೂಪರ್‌ಗೆ ಮುಖ ಹಾಕಿ ಯಂತ್ರವನ್ನು ತಳ್ಳಿತು. ಇದರಿಂದ ಜೆಸಿಬಿ ಸ್ವಲ್ಪ ಹಿಂದೆ ಹೋಗಿದೆ. ಜೆಸಿಬಿ ವಾಹನದಿಂದ ತಳ್ಳುವುದರಿಂದ ಆನೆಗೆ ಅಪಾಯಕಾರಿಯಾಗುವುದು ಎಂದು ತಿಳಿದ ಜೆಸಿಬಿ ಚಾಲಕ ಸುಮ್ಮನಾಗುತ್ತಾನೆ. ಆದರೆ ಆನೆ ಮಾತ್ರ ಗಂಭೀರವಾಗಿ ಗಾಯಗೊಂಡರೂ ಸಹ ಕಾದಾಡುವುದರಿಂದ ಹಿಂದೆ ಸರಿಯಲಿಲ್ಲ. ಈ ಜೆಸಿಬಿ ಮತ್ತು ಆನೆಯ ಕಾದಾಟದ ಹಿಂದಿರುವ ಕಾರಣ ಅಸ್ಪಷ್ಟವಾಗಿದ್ದರೂ, ತಮ್ಮ ತಮ್ಮ ರಕ್ಷಣೆಗಾಗಿ ಕಾದಾಡುತ್ತಿರುವುದು ತಿಳಿದು ಬರುತ್ತದೆ.

ಇನ್ನೂ ಈ ವಿಡಿಯೋವನ್ನು ವೈಲ್ಡ್ ಅನಿಮಲ್ ಕ್ರೀಯೆಶನ್ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ನಿನ್ನೆ ಅಪ್‌ಲೋಡ್ ಮಾಡಲಾದ ಈ ವಿಡಿಯೋ ಇದುವರೆಗೂ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದುಕೊಂಡಿದೆ.  ವೀಡಿಯೋ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಆನೆಯನ್ನು ನಾವು ದೂಷಿಸುವುದಿಲ್ಲ, ಆದರೆ ಜೆಸಿಬಿ ಚಾಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿ;

Viral News: ಚಿರತೆಯೊಂದಿಗೆ ಸೆಣಸಾಡಿ 6 ವರ್ಷದ ಮಗಳನ್ನು ಸಾವಿನ ದವಡೆಯಿಂದ ಕಾಪಾಡಿದ ಮಹಿಳೆ!

Follow Us
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು