AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Friendship Day 2024: ಜತೆಗೆ UPSC ಪರೀಕ್ಷೆ ಬರೆದು ಐಎಎಸ್-ಐಪಿಎಸ್‌ ಅಧಿಕಾರಿಗಳಾದ ಮೂವರು ಪ್ರಾಣ ಸ್ನೇಹಿತರು

Friends success story: ಸ್ನೇಹ ಎಂಬುದು ಅದ್ಭುತ ಸಂಪತ್ತು, ಬದುಕಿಗೊಂದು ಧೈರ್ಯ ಮತ್ತು ಶಕ್ತಿ ಅಂತಾನೇ ಹೇಳಬಹುದು. ನಮ್ಮ ಜೊತೆ ಉತ್ತಮ ಸ್ನೇಹಿತರಿದ್ದರೆ ಖಂಡಿತವಾಗಿಯೂ ಜೀವನದಲ್ಲಿ ಏನನ್ನೂ ಬೇಕಾದರೂ ಜಯಿಸಬಹುದು. ಈ ಮಾತನ್ನು ನಿಜವೆಂದು ಸಾಬೀತು ಮಾಡಿದವರು ಈ ಮೂವರು ಸ್ನೇಹಿತರು. ಕಾಲೇಜು ದಿನಗಳಿಂದಲೂ ಜೊತೆಯಾಗಿದ್ದ ಈ ಸ್ನೇಹಿತರು 2017 ರಲ್ಲಿ UPSC ಪರೀಕ್ಷೆ ಬರೆದು, ಈ ಪರೀಕ್ಷೆಯನ್ನು ರ್ಯಾಂಕ್‌ ಪಡೆದು, ಇದೀಗ ಒಬ್ಬ ಸ್ನೇಹಿತ ಐಪಿಎಸ್‌ ಮತ್ತು ಇನ್ನಿಬ್ಬರು ಐಎಎಸ್‌ ಅಧಿಕಾರಿಗಳಾಗಿದ್ದಾರೆ. ಇವರ ಈ ಸ್ನೇಹ ನಮಗೆಲ್ಲರಿಗೂ ಪ್ರೇರಣೆ.

Friendship Day 2024: ಜತೆಗೆ UPSC ಪರೀಕ್ಷೆ ಬರೆದು ಐಎಎಸ್-ಐಪಿಎಸ್‌ ಅಧಿಕಾರಿಗಳಾದ ಮೂವರು ಪ್ರಾಣ ಸ್ನೇಹಿತರು
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 02, 2024 | 6:30 PM

ಸ್ನೇಹ ಎಂಬುದು ಒಂದು ಅಮೂಲ್ಯ ಸಂಪತ್ತು. ಪ್ರತಿಯೊಬ್ಬರ ಬದುಕಿನಲ್ಲೂ ಒಂದೊಳ್ಳೆ ಸ್ನೇಹಿತ ಬಹು ದೊಡ್ಡ ಪಾತ್ರವನ್ನು ಹೊಂದಿರುತ್ತಾನೆ. ಇಂತಹ ಸ್ನೇಹಿತ ಬದುಕಿಗೊಂದು ಧೈರ್ಯ ಮತ್ತು ಶಕ್ತಿ ಮತ್ತು ಸಾಧನೆಗೆ ಬೆನ್ನೆಲುಬು ಅಂತಾನೇ ಹೇಳಬಹುದು. ಹೀಗೆ ನಮ್ಮ ಜೊತೆ ಉತ್ತಮ ಸ್ನೇಹಿತರಿದ್ದರೆ ಖಂಡಿತವಾಗಿಯೂ ನಾವು ಜೀವನದಲ್ಲಿ ಏನೂ ಬೇಕಾದರೂ ಸಾಧಿಸಬಹುದು. ಇದಕ್ಕೆ ಉತ್ತಮ ನಿದರ್ಶನ ಈ ಮೂವರು ಸ್ನೇಹಿತರು. ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂದು ಪಣ ತೊಟ್ಟ ಈ ಸ್ನೇಹಿತರು ಬಂದಂತಹ ಕಷ್ಟಗಳನ್ನೆಲ್ಲಾ ಎದುರಿಸಿ, ಜೊತೆಯಾಗಿ UPSC ಪರೀಕ್ಷೆ ಬರೆದು, ಅದರಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಇಂದು ಐಎಎಸ್‌-ಐಪಿಎಸ್‌ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂವರು ಸ್ನೇಹಿತರ ಈ ಯಶಸ್ಸಿನ ಕಥೆ ನಿಜಕ್ಕೂ ನಮಗೆಲ್ಲರಿಗೂ ಪ್ರೇರಣೆ.

ಮೂವರು ಸ್ನೇಹಿತರ ಯಶಸ್ಸಿನ ಯಶೋಗಾಥೆ:

ಈ ಯಶೋಗಾಥೆಯು ಮೂವರು ಗೆಳೆಯರಾದ ಐಎಎಸ್‌ ವಿಶಾಲ್‌ ಮಿಶ್ರಾ, ಐಎಎಸ್‌ ಗೌರವ್‌ ವಿಜಯರಾಮ್‌ ಕುಮಾರ್‌ ಮತ್ತು ಐಪಿಎಸ್‌ ಸಾದ್‌ ಮಿಯಾನ್‌ ಖಾನ್‌ ಅವರದು. ಈ ಮೂವರು ಸ್ನೇಹಿತರು 2017 ರಲ್ಲಿ UPSC ಸಿವಿಲ್‌ ಸರ್ವೀಸ್‌ ಪರೀಕ್ಷೆ ಬರೆದು ಐಎಎಸ್-ಐಪಿಎಸ್‌ ಅಧಿಕಾರಿಗಳಾಗುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪರೀಕ್ಷೆಯಲ್ಲಿ ಸಾದ್‌ ಖಾನ್‌ 25 ನೇ ರ್ಯಾಂಕ್‌, ಗೌರವ್‌ 34 ನೇ ರ್ಯಾಂಕ್‌ ಮತ್ತು ವಿಶಾಲ್‌ 49 ನೇ ರ್ಯಾಂಕ್‌ ಪಡೆದಿದ್ದಾರೆ.

ಇವರ ಸ್ನೇಹ ಆರಂಭವಾದದ್ದು ಹೇಗೆ:

ಉತ್ತರ ಪ್ರದೇಶದ ಬಿಜ್ನೋರ್‌ ನಿವಾಸಿಯಾದ ಸಾದ್‌ ಮಿಯಾ ಖಾನ್‌ ಅವರು ತಾವು ಬಿ.ಟೆಕ್‌ ಓದುವ ಸಮಯದಲ್ಲಿ ವಿಶಾಲ್ ಮಿಶ್ರಾ ಅವರನ್ನು ಕಾನ್ಪುರದ ಹಾರ್ಕೋರ್ಟ್‌ ಬಟ್ಲರ್‌ ಟೆಕ್ನಾಲಜಿಕಲ್‌ ಯೂನಿವರ್ಸಿಟಿಯಲ್ಲಿ ಭೇಟಿಯಾದರು. ಹೀಗೆ ಪರಿಚಯವಾಗಿ ಈ ಇಬ್ಬರು ಬೆಸ್ಟ್‌ ಫ್ರೆಂಡ್ಸ್‌ ಆದ್ರು. ಬಿ.ಟೆಕ್‌ ಪದವಿ ಮುಗಿಸಿ ಈ ಇಬ್ಬರೂ ಕಾನ್ಪುರದ ಐಐಟಿಯಲ್ಲಿ ಎಂ.ಟೆಕ್‌ ಪದವಿಯನ್ನು ಪಡೆಯುತ್ತಾರೆ. ಈ ಸಮಯದಲ್ಲಿ ವಿಶಾಲ್‌ ಮತ್ತು ಸಾದ್‌ ಇಬ್ಬರೂ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಬೇಕೆಂದು ನಿರ್ಧರಿಸಿದರು ಮತ್ತು ಪರೀಕ್ಷೆಯ ತಯಾರಿಗಾಗಿ ದೆಹಲಿಗೆ ತೆರಳಿದರು.

ಇದನ್ನೂ ಓದಿ: ಇಬ್ಬರೂ ಸ್ನೇಹಿತರ ಪರಿಶ್ರಮದ ಫಲವೇ ಭಾರತದ ನಂಬರ್ ಒನ್ ಇಂಡಿಗೋ ಏರ್ ಲೈನ್ಸ್

ಇಲ್ಲಿ ಇವರಿಗೆ ಚಂಡೀಘಡದ ಪಿಇಸಿ ಯೂನಿರ್ವಸಿಟಿ ಆಫ್‌ ಟೆಕ್ನಾಲಜಿ ಕಾಲೇಜ್‌ನಲ್ಲಿ ಬಿ.ಇ ಪದವಿಯನ್ನು ಮುಗಿಸಿ ಬಂದ ಗೌರವ್‌ ಅವರ ಪರಿಚಯವಾಗುತ್ತದೆ. ನಂತರ ಈ ಮೂವರು ಸ್ನೇಹಿತರು ಜೊತೆಯಾಗಿ UPSC ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಾರೆ. ಹೀಗೆ ಸತತ ಪ್ರಯತ್ನಗಳ ಬಳಿಕ ಈ ಮೂವರು ಸ್ನೇಹಿತರು 2017 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪರೀಕ್ಷೆಯಲ್ಲಿ ಸಾದ್‌ ಖಾನ್‌ 25 ನೇ ರ್ಯಾಂಕ್‌, ಗೌರವ್‌ 34 ನೇ ರ್ಯಾಂಕ್‌ ಮತ್ತು ವಿಶಾಲ್‌ 49 ನೇ ರ್ಯಾಂಕ್‌ ಪಡೆಯುತ್ತಾರೆ. ಪ್ರಸ್ತುತ ಈ ಮೂವರು ಸ್ನೇಹಿತರು ವಿವಿಧ ಸ್ಥಳಗಳಲ್ಲಿ ಸೇವೆಯಲ್ಲಿದ್ದಾರೆ. ಈ ಸ್ನೇಹಿತರ ಯಶಸ್ಸಿನನ ಕಥೆ ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
‘ಆಡಿಯೋ ಮೂಲಕ ನನ್ನ ನಾಶ ಮಾಡಿದರು’; ಜೈಲಿನಿಂದ ಹೊರ ಬಂದ ಮನು ರಿಯಾಕ್ಷನ್
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
ಪರಿಹಾರಕ್ಕಾಗಿ ವಿಶೇಷ ಪ್ರಕರಣವೆಂದು ಸರ್ಕಾರ ಪರಿಗಣಿಸಲಿ: ಕುಮಾರಸ್ವಾಮಿ
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
‘ಸರಿಗಮಪ’ ಫಿನಾಲೆಯಲ್ಲಿ ಹೇಗಿತ್ತು ಬಾಳು ಬೆಳಗುಂದಿ ಪರ್ಫಾರ್ಮೆನ್ಸ್?
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಕಾಲ್ತುಳಿತ ಸಂಭವಿಸಿದಾಗ ಬಚಾವಾಗೋದು ಹೇಗೆ, ಏನು ಮಾಡಬೇಕು? ಇಲ್ಲಿದೆ ಟಿಪ್ಸ್
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಪ್ರಿಯಕರನೊಂದಿಗೆ ಬದುಕಿಕೋ ಎಂದು ಪತ್ನಿಯನ್ನು ಕಳಿಸಿದ್ದ ಪತಿ
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
ಅಪಘಾತದ ನಂತರ ರಸ್ತೆಬದಿ ಹೋಟೆಲ್​​ಗೆ ನುಗ್ಗಿದ ಒಂದು ಟಿಪ್ಪರ್
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Devotional: ಕಷ್ಟಕಾಲದಲ್ಲಿ ಮಾಡಿದ ಸಹಾಯದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವ ಯೋಗವಿದೆ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಗಂಗಾ ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿ ಅದೃಷ್ಟವಶಾತ್ ಪಾರಾದ ವಿಡಿಯೋ ನೋಡಿ
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?
ಒಂದೇ ದಿನ ಪ್ರೇಮಿ ಮತ್ತು ವಿಲನ್ ಆದ ಶ್ರೀನಗರ ಕಿಟ್ಟಿ; ಹೇಗಿದೆ ರೆಸ್ಪಾನ್ಸ್?