AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತದಲ್ಲಿ ಗಾಯಗೊಂಡ ಮಾಲೀಕನನ್ನು ರಕ್ಷಿಸಿದ ಜರ್ಮನ್​ ಶೆಫರ್ಡ್ ನಾಯಿ: ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು

ಜರ್ಮನ್​ ಶೆಫರ್ಡ್ ನಾಯಿಯೊಂದು ತನ್ನ ಮಾಲೀಕನ ಕಾರು ಅಪಘಾತವಾದ ಸಂದರ್ಭದಲ್ಲಿ ಪೊಲೀಸರ ಬಳಿ ತೆರಳಿ ಅವರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಇಬ್ಬರ ಪ್ರಾಣ ಉಳಿಸಿದೆ.

ಅಪಘಾತದಲ್ಲಿ ಗಾಯಗೊಂಡ ಮಾಲೀಕನನ್ನು ರಕ್ಷಿಸಿದ ಜರ್ಮನ್​ ಶೆಫರ್ಡ್ ನಾಯಿ: ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು
ಜರ್ಮನ್​ ಶೆಫರ್ಡ್​ ನಾಯಿ
Follow us
TV9 Web
| Updated By: Pavitra Bhat Jigalemane

Updated on:Jan 06, 2022 | 10:57 AM

ಸಾಮಾನ್ಯವಾಗಿ ನಾಯಿಗಳು ತನ್ನನ್ನು ಸಾಕಿದ ಮಾಲೀಕನಿಗೆ ಋಣಿಯಾಗಿರುತ್ತವೆ. ಎಂಥಹದ್ದೆ ಕಷ್ಟಗಳು ಎದುರಾದರೂ ಮಾಲೀಕನ ಸಹಾಯಕ್ಕೆ ನಿಂತು ತನ್ನ ನಿಷ್ಠೆಯನ್ನು ಸಾಬೀತುಪಡಿಸುತ್ತವೆ. ಅಂತಹ ಗುಣಗಳನ್ನು ಜರ್ಮನ್​ ಶೆಫರ್ಡ್​ ನಾಯಿಗಳಲ್ಲಿ ಅತಿ ಹೆಚ್ಚು ಕಾಣಬಹುದು. ಜರ್ಮನ್​ ಶೆಫರ್ಡ್ ನಾಯಿಗಳು ಹೆಚ್ಚು ಚಾಣಾಕ್ಷತೆಯನ್ನು ಹೊಂದಿರುತ್ತವೆ. ತಮ್ಮ ಮಾಲೀಕನ ರಕ್ಷಣೆಗೆ ಸದಾ ಸಿದ್ಧವಾಗಿರುತ್ತವೆ. ಒಡೆಯನ ಕಷ್ಟಕ್ಕೆ ಸದಾ ಹೆಗಲಾಗಿರುವ ಜರ್ಮನ್​ ಶೆಫರ್ಡ್ ನಾಯಿಗಳು ಒಂದು ಬಾರಿ ತನ್ನ ಮಾಲೀಕನನ್ನು ಪರಿಚಯಿಸಿಕೊಂಡ ಮೇಲೆ ಜೀವಿತಾವಧಿಯಲ್ಲಿ ಅವರನ್ನು ಮರೆಯುವುದಿಲ್ಲ. ಇಲ್ಲೊಂದು ಅಪರೂಪದ ಸಾಹಸ ಜರ್ಮನ್​ ಶೆಫರ್ಡ್ ನಾಯಿಂದ ನಡೆದಿದೆ. ಹೌದು, ಜರ್ಮನ್​ ಶೆಫರ್ಡ್ ನಾಯಿಯೊಂದು ತನ್ನ ಮಾಲೀಕನ ಕಾರು ಅಪಘಾತವಾದ ಸಂದರ್ಭದಲ್ಲಿ ಪೊಲೀಸರ ಬಳಿ ತೆರಳಿ ಅವರನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಇಬ್ಬರ ಪ್ರಾಣ ಉಳಿಸಿದೆ.

ಈ ಘಟನೆ ಲೆಬನಾನ್​ನಲ್ಲಿ ನಡೆದಿದೆ.  ಈ ಜರ್ಮನ್​ ಶೆಫರ್ಡ್ ನಾಯಿಯ ಹೆಸರು ಟಿನ್ಸ್ಲೇ ಎಂದಾಗಿದೆ. ಟಿನ್ಸ್ಲೇ ಮಾಲೀಕರ ಕುಟುಂಬದೊಂದಿಗೆ ಕಾರಿನಲ್ಲಿ ತೆರಳತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ವೇಳೆ ನಾಯಿಯು ನುಜ್ಜುಗುಜ್ಜಾದ ಕಾರಿನಿಂದ ಹೊರಬಂದು ಪೋಲೀಸರ ಬಳಿ ತೆರಳಿದೆ. ಟಿನ್ಸ್ಲೇಯನ್ನು ನೋಡಿ ಪೋಲೀಸರು ಮೊದಲು ನಾಯಿ ತಪ್ಪಿಸಿಕೊಂಡಿದೆ ಎಂದುಕೊಂಡರು. ಆದರೆ ಅದರ ಸನ್ನೆಯನ್ನು ನೋಡಿ ಹಿಂಬಾಲಿಸಿಕೊಂಡು ಹೋದರು. ಟಿನ್ಸ್ಲೇ ನೇರವಾಗಿ ಅಪಘಾತವಾದ ಸ್ಥಳಕ್ಕೆ ಅವರನ್ನು ಕರೆತಂದಿತ್ತು. ಅಪಘಾತವಾದ ಸ್ಥಳದಲ್ಲಿ ಹಿಮದ ಮಧ್ಯೆ ಸಿಲುಕಿದ ಕಾರಿನಲ್ಲಿ ಇಬ್ಬರು  ವ್ಯಕ್ತಿಗಳು ಗಾಯಗೊಂಡು ಬಿದ್ದಿರುವುದನ್ನು ನೋಡಿ ಪೋಲೀಸರು ಕೂಡಲೇ  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು.

ಪೋಲೀಸರು ಸ್ಥಳದಲ್ಲಿ ನಡೆದ ಘಟನೆಯ ಮಾಹಿತಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಜರ್ಮನ್​ ಶೆಫರ್ಡ್ ಜಾತಿಗೆ ಸೇರಿದ ಟಿನ್ಸ್ಲೇಯ ಬುದ್ಧಿವಂತಿಕೆ, ಸಮಯಕ್ಷಮತೆಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಸಾಕಿದ ಕೋಳಿಯ ಎರಡನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಕುಟುಂಬ: ವಿಡಿಯೋ ವೈರಲ್​

Published On - 10:54 am, Thu, 6 January 22

ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೋನು ನಿಗಂ ಮೇಲೆ ನಿಷೇಧ ಹೇರಿ: ರೂಪೇಶ್ ರಾಜಣ್ಣ ಒತ್ತಾಯ
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ಸೀಟ್​​ ಸಿಗದಿದ್ದಕ್ಕೆ ಬಸ್​ ಮುಂದೆ ಮಲಗಿದ ವೃದ್ಧ: ಮುಂದೇನಾಯ್ತು?
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ತಮ್ಮ ಬೀಗ ಬೈರತಿ ಸುರೇಶ್​ಗೂ ಖಡ್ಗ ನೀಡಿ ಗೌರವಿಸಿದ ವಿಶ್ವನಾಥ್
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಅಶ್ರಫ್ ಕೊಲೆ ಪ್ರಕರಣಕ್ಕೆ ನ್ಯಾಯ ಕೇಳಿದ ಮುಸ್ಲಿಂ ಮುಖಂಡರು
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಕನ್ನಡ ಚಿತ್ರರಂಗದಿಂದ ಸೋನು ನಿಗಂಗೆ ನಿಷೇಧ: ಉಮೇಶ್ ಬಣಕಾರ್ ಹೇಳಿದ್ದೇನು?
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಪ್ರವಾದಿ ಮೊಹಮ್ಮದ್ ವಿಷಯದಲ್ಲಿ ಯತ್ನಾಳ್ ಮಾತಾಡಿದ್ದು ತಪ್ಪು: ಎಂಬಿ ಪಾಟೀಲ್
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಐಪಿಎಲ್ ಧಡೂತಿ ಲೀಗ್​ ಆಗಿ ಬದಲಾದ್ರೆ ಹೇಗಿರುತ್ತೆ? ಇಲ್ಲಿದೆ ವಿಡಿಯೋ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ಚಿಕ್ಕಮಗಳೂರಿನಲ್ಲಿ ಬಿಗಿ ಬಂದೋಬಸ್ತ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಬನಸಗೌಡ ಯತ್ನಾಳ್ ಮಾಧ್ಯಮದವರ ಕೈಗೆ ಸಿಗುತ್ತಿಲ್ಲವಂತಲ್ಲ? ಜಮೀರ್ ಅಹ್ಮದ್
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ
ಮೇ 6ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ