AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಬಾ ಕುಣಿತವನ್ನು ಹೀಗೂ ಮಾಡಬಹುದು ಅಂತ ಗುಜರಾತಿನ ಮೂವರು ಮಹಿಳೆಯರು ತೋರಿಸಿದ್ದಾರೆ!

ಹಾಗೆ ನೋಡಿದರೆ ಫಿಟ್ನೆಸ್ ಮತ್ತು ಕುಣಿತವನ್ನು ಅದ್ಭುತವಾಗಿ ಸಂಯೋಜಿಸಿರುವ ಮಹಿಳೆಯರ ಐಡಿಯಾ ಎಲ್ಲರಿಗೂ ಇಷ್ಟವಾಗಿಲ್ಲ ಮಾರಾಯ್ರೇ, ಸುರಕ್ಷತೆಯ ದೃಷ್ಟಿಯಿಂದ ಇಂಥ ಸಾಹಸಗಳಿಗೆ ಕೈ ಹಾಕುವುದು ಸಲ್ಲ ಅಂತ ಹಲವರು ತಾಕೀತು ಮಾಡಿದ್ದಾರೆ.

TV9 Web
| Edited By: |

Updated on: Jun 03, 2022 | 10:17 PM

Share

ಗರ್ಬಾ ಕುಣಿತ (Garba dance) ಗೊತ್ತಾ ಅಂತ ಕೇಳಿದರೆ ನಿಮಗೆ ಕೋಪ ಬರುತ್ತೆ, ಹೌದು ತಾನೆ? ಗುಜರಾತ್ ಸಂಸ್ಕೃತಿಯ (Gujrat’s culture) ಭಾಗವಾಗಿರುವ ಈ ನೃತ್ಯಕಲೆ ಯಾರಿಗೆ ತಾನೆ ಗೊತ್ತಿಲ್ಲ ಮಾರಾಯ್ರೇ? ಸಾಮಾನ್ಯವಾಗಿ ನವರಾತ್ರಿ (Navaratri) ಸಂದರ್ಭದಲ್ಲಿ ಗರ್ಬಾ ಕುಣಿತದ ಭರಾಟೆ ಜೋರಾಗಿರುತ್ತದೆ. ಸಿನಿಮಾಗಳಲ್ಲೂ ನಾವು ಗರ್ಬಾ ಡ್ಯಾನ್ಸ್ ಸೀಕ್ವೆನ್ಸ್ ಗಳನ್ನು ನಾವು ನೋಡುತ್ತಿರುತ್ತೇವೆ. ಆದರೆ ನಾವಿಲ್ಲಿ ತೋರಿಸುತ್ತಿರುವ ಗರ್ಬಾ ಕುಣಿತ ಈ ಮೊದಲು ನೀವು ಎಲ್ಲೂ ನೋಡಿರಲಾರಿರಿ. ಡ್ಯಾನ್ಸ್ ಅನ್ನು ವೇದಿಕೆ, ಅಂಕಣ ಅಥವಾ ದೊಡ್ಡದಾದ ಮೈದಾನದಲ್ಲಿ ಮಾಡುತ್ತಾರೆ ತಾನೆ? ಆದರೆ ಗುಜರಾತಿನ ಮಹಿಳೆಯರು ಅದನ್ನು ಎಲ್ಲಿ ಮಾಡುತ್ತಿದ್ದಾರೆ ನೋಡಿ.

ಹೌದು ಚಾಲನೆಯಲ್ಲಿರುವ ಟ್ರೆಡ್ ಮಿಲ್ ಮೇಲೆ! ಸಾಂಪ್ರದಾಯಿಕ ಉಡುಗೆಯಲ್ಲಿ ಮೂವರು ಸುಂದರ ಮಹಿಳೆಯರು ಒಂದಿಷ್ಟೂ ಹೆಜ್ಜೆ ತಪ್ಪದೆ ಭೂಮಿ ತ್ರಿವೇದಿಯವರ ಹಾಡು ‘ಗರ್ಬೆ ಕೀ ರಾತ್’ ಹಾಡಿಗೆ ಕುಣಿಯುತ್ತಿದ್ದಾರೆ. ಈ ಕುಣಿತ ನೋಡುವಾಗ ನಿಮಗೆ ‘ದಿಲ್ ಸೆ’ ಚಿತ್ರದ ‘ಛೈಯಾ ಛೈಯಾ’ ಹಾಡು ನೆನಪು ಬಂದಿರಲಿಕ್ಕೂ ಸಾಕು, ಅದನ್ನು ಚಲಿಸುವ ರೈಲಿನ ಮೇಲೆ ಸಂಯೋಜಿಸಲಾಗಿತ್ತು.

ಈ ವಿಡಿಯೋವನ್ನು ಗರ್ಬಾ ವರ್ಲ್ಡ್ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದ್ದು 30 ಲಕ್ಷಕ್ಕೂ ಹೆಚ್ಚು ಜನ ಅದನ್ನು ವೀಕ್ಷಿಸಿದ್ದಾರೆ ಮತ್ತು ಒಂದು ಲಕ್ಷ ಜನ ಲೈಕ್ ಮಾಡಿದ್ದಾರೆ.

ಹಾಗೆ ನೋಡಿದರೆ ಫಿಟ್ನೆಸ್ ಮತ್ತು ಕುಣಿತವನ್ನು ಅದ್ಭುತವಾಗಿ ಸಂಯೋಜಿಸಿರುವ ಮಹಿಳೆಯರ ಐಡಿಯಾ ಎಲ್ಲರಿಗೂ ಇಷ್ಟವಾಗಿಲ್ಲ ಮಾರಾಯ್ರೇ, ಸುರಕ್ಷತೆಯ ದೃಷ್ಟಿಯಿಂದ ಇಂಥ ಸಾಹಸಗಳಿಗೆ ಕೈ ಹಾಕುವುದು ಸಲ್ಲ ಅಂತ ಹಲವರು ತಾಕೀತು ಮಾಡಿದ್ದಾರೆ.

ಈ ಮೂವರಲ್ಲಿ ಯಾರಾದರೊಬ್ಬರಿಗೆ ಸಮನ್ವಯತೆ ಮಿಸ್ ಆದರೆ ಅಥವಾ ರಿದಮ್ ಕಳೆದುಕೊಂಡರೆ ಅದು ಅಪಾಯಕಾರಿಯಾಗಿ ಪರಿಣಮಿಸಬಹುದು ಅಂತ ಅವರು ಹೇಳಿದ್ದಾರೆ. ಇದನ್ನೇ ಅಭ್ಯಾಸ ಮಾಡಿಕೊಳ್ಳಬಾರದು ಅಂತ ಸಲಹೆಯನ್ನು ಸಹ ಅವರು ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Follow Us
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​