AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಟಾಕಿಯ ಸದ್ದಿಗೆ ಬೆಚ್ಚಿಬಿದ್ದು ಮದುಮಗನೊಂದಿಗೆ ಓಡಿ ಹೋದ ಕುದುರೆ!

ರಾಜಸ್ತಾನದ ಹಳ್ಳಿಯೊಂದರಲ್ಲಿ ವರನನ್ನು ಹೊತ್ತುಕೊಂಡು ಕುದುರೆಯೊಂದು ಓಡಿ ಹೋಗಿದೆ. ಜಯಂತ್ ಕಾಯ್ಕಿಣಿ ಅವರು ಬರೆದಿರುವ ‘ದಗಡು ಪರಬನ ಅಶ್ವಮೇಧ’ ಕತೆಯನ್ನು ನೆನಪಿಸುವಂತೆ ನಡೆದಿರುವ ಈ ಘಟನೆ ವಿಡಿಯೊದಲ್ಲಿ ಸೆರೆಯಾಗಿದೆ.

Viral Video: ಪಟಾಕಿಯ ಸದ್ದಿಗೆ ಬೆಚ್ಚಿಬಿದ್ದು ಮದುಮಗನೊಂದಿಗೆ ಓಡಿ ಹೋದ ಕುದುರೆ!
ಕುದುರೆಯ ಮೇಲೆ ಕೂತಿರುವ ವರ
TV9 Web
| Edited By: |

Updated on: Jul 23, 2021 | 5:30 PM

Share

ಮದುವೆಯೆಂದರೇ ಗೌಜು- ಸಂಭ್ರಮ. ಅದರಲ್ಲೂ ಉತ್ತರ ಭಾರತದಲ್ಲಿ ಮದುವೆಯ ಶಾಸ್ತ್ರ ಸಂಪ್ರದಾಯಗಳು ಬಹಳ ಅದ್ದೂರಿಯಿಂದ ನಡೆಯುತ್ತವೆ. ಮದುವೆಯಲ್ಲಿ ಮದುಮಗ ಕುದುರೆಯ ಮೇಲೇರಿ ಬರುವುದೂ ಇಂತಹ ಸಂಪ್ರದಾಯಗಳಲ್ಲೊಂದು. ಮದುವೆಯ ಸಂಭ್ರಮ ಮತ್ತಷ್ಟು ಕಳೆಗಟ್ಟಲು ಪಟಾಕಿ- ಸುಡುಮದ್ದುಗಳನ್ನೂ ಕೆಲವರು ಸಿಡಿಸುತ್ತಾರೆ. ಕೆಲವೊಮ್ಮೆ ಅದು ಎಂತಹ ಫಜೀತಿಯನ್ನು ತಂದೊಡ್ಡುತ್ತದೆ ಎಂಬುದಕ್ಕೆ ದೃಷ್ಟಾಂತವಾಗಿ ವೈರಲ್ ಆದ ವಿಡಿಯೊವೊಂದು ಇಲ್ಲಿದೆ.

ರಾಜಸ್ತಾನದ ಅಜ್ಮೇರ್ ಸಮೀಪದ ರಾಮ್​ಪುರ ಗ್ರಾಮದಲ್ಲಿ ಮದುವೆಯೊಂದು ನಡೆಯುತ್ತಿತ್ತು. ಕುದುರೆ ಏರಿ ಬಂದ ಮದುಮಗ, ಸಭಾಂಗಣಕ್ಕೆ ಪ್ರವೇಶಿಸುವ ಮೊದಲು ಶಾಸ್ತ್ರ ಪ್ರಕಾರದಂತೆ ಹೊರಗೆ ನಿಂತಿದ್ದಾನೆ. ವಿಧಿ ವಿಧಾನಗಳು ನಡೆಯುತ್ತಿರುವಾಗ ಮದುಮಗ ಬಂದ ಖುಷಿಗೆ ಯಾರೋ ಪಟಾಕಿ ಹೊಡೆದಿದ್ದಾರೆ. ಅದರಿಂದ ವಿಚಲಿತವಾದ ಕುದುರೆ ಗಾಬರಿ ಬಿದ್ದಿದೆ. ಮೊದಲಿಗೆ ಅಲ್ಲೇ ಕೊಸರಾಡಿದ ಅದು, ನಂತರ ಮದುಮಗನೊಂದಿಗೆ ಓಟ ಕಿತ್ತಿದೆ. ಕುದುರೆಯನ್ನು ಕರೆತಂದಿದ್ದ ಅದರ ಮಾಲೀಕನೂ ಕುದುರೆಯ ಹಿಂದೆ ಓಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನು ನೋಡಿರುವ ಸಾಹಿತ್ಯ ಪ್ರೇಮಿಗಳಿಗೆ ತಕ್ಷಣ ಒಂದು ಘಟನೆ ನೆನಪಾಗಿರಬಹುದು. ಜಯಂತ್ ಕಾಯ್ಕಿಣಿ ಅವರ ಒಂದು ಕತೆ ‘ದಗಡು ಪರಬನ ಅಶ್ವಮೇಧ’ದಲ್ಲೂ ಇಂಥದ್ದೇ ಪ್ರಸಂಗ ಬರುತ್ತದೆ. ಮದುಮಗ ಕುದುರೆಯಲ್ಲಿರುವಾಗ ಅಚಾನಕ್ಕಾಗಿ ಉಂಟಾದ ಶಬ್ದಕ್ಕೆ ಅದು ಹೆದರಿ ಮದುಮಗನನ್ನು ಹೊತ್ತು ಪರಾರಿಯಾಗುತ್ತದೆ. ಅಲ್ಲಿಂದ ಕತೆ ಬೇರೆ ಬೇರೆ ಹರಹು ಪಡೆದುಕೊಳ್ಳುತ್ತದೆ. ಆದರೆ, ಕತೆಯ ತುಣುಕೊಂದು ನಿಜ ಜೀವನದಲ್ಲಿ ನಡೆದಿರುವಂತೆ ಈ ವಿಡಿಯೊ ಸೆರೆಯಾಗಿದೆ.

ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೊ ಇಲ್ಲಿದೆ:

ಇದನ್ನೂ ಓದಿ:

Tokyo Olympics 2020 Opening Ceremony: ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್​ 2020ಕ್ಕೆ ಮನರಂಜನಾ ಸಮಾರಂಭದ ಮೂಲಕ ವಿದ್ಯುಕ್ತ ಚಾಲನೆ

ಚೀನಾದ ಹೆನನ್ ಪ್ರಾಂತ್ಯದಲ್ಲಿ ನಿಲ್ಲದ ಮಳೆ, ಡ್ರೋನ್ ಸೆರೆಹಿಡಿದ ದೃಶ್ಯಗಳು ದಿಗಿಲು ಹುಟ್ಟಿಸುತ್ತವೆ, ರಕ್ಷಣಾ ಕಾರ್ಯ ಜಾರಿ

ಎಮ್ಮೆಯ ಸಂದರ್ಶನ ಮಾಡಿದ ಪಾಕಿಸ್ತಾನದ ವರದಿಗಾರ! ಪ್ರಶ್ನೆಗೆ ಎಮ್ಮೆಯ ಉತ್ತರ ಏನಿತ್ತು? ವಿಡಿಯೋ ವೈರಲ್​

(Horse ran with groom: the video goes viral)

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ