AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Audio: ಹಲೋ ಸರ್​​​ ನನ್ ಹುಡುಗಿಗೆ ಮೆಸೇಜ್ ಮಾಡ್ಬೇಕು, ಪ್ಲೀಸ್​​​​ ಕರೆಂಟ್ ಕೊಡಿ ಸರ್: ಗೋಳಾಡಿದ ಪ್ರೇಮಿ

ಈ ಪ್ರೇಮಿಗಳಿಗೆ 24 ಗಂಟೆಯೂ ಅವರ ಪ್ರೀತಿದೇ ಚಿಂತೆ. ಊಟ ನಿದ್ದೆ ಬೇಕಾದರೂ ಬಿಟ್ಟು ಬಿಡುವರು, ಆದರೆ ತಮ್ಮ ಪ್ರೇಮಿಯೊಂದಿಗೆ ಮಾತನಾಡದೆ ಮಾತ್ರ ಇರಲಾರರು. ಅದಕ್ಕೆ ಸೂಕ್ತ ಉದಾಹರಣೆಯೆಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಅಮರ ಪ್ರೇಮಿಯೊಬ್ಬ, ಕೆ.ಇ.ಬಿ ಆಫೀಸರ್ ಗೆ ಕರೆ ಮಾಡಿ, ಸರ್ ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ,  ನನ್ನ ಹುಡುಗಿಗೆ ಮೆಸೇಜ್ ಮಾಡ್ಬೇಕು, ಅದೇನಾದರೂ ಮಾಡಿ ಬೇಗ ಕರೆಂಟ್ ಕೊಡಿ  ಸರ್…  ಎಂದು ತಲೆ ತಿಂದಿದ್ದಾನೆ. 

Viral Audio: ಹಲೋ ಸರ್​​​ ನನ್ ಹುಡುಗಿಗೆ ಮೆಸೇಜ್ ಮಾಡ್ಬೇಕು, ಪ್ಲೀಸ್​​​​ ಕರೆಂಟ್ ಕೊಡಿ ಸರ್: ಗೋಳಾಡಿದ ಪ್ರೇಮಿ
ಮಾಲಾಶ್ರೀ ಅಂಚನ್​
| Edited By: |

Updated on: Mar 27, 2024 | 2:00 PM

Share

ಪ್ರೀತಿಯಲ್ಲಿ ಬಿದ್ದವರಿಗೆ ಈ  ಲೋಕದ ಅರಿವೇ ಇರೊಲ್ಲ, ಪ್ರೇಮಪಕ್ಷಿಗಳಾಗಿ ತಮ್ಮ ಪ್ರೀತಿಯ ಲೋಕದಲ್ಲಿಯೇ ತೇಳುತ್ತಿರುತ್ತಾರೆ. ದಿನದ 24 ಗಂಟೆಯೂ ತಮ್ಮ ಪ್ರೇಮಿಯ ಬಗ್ಗೆಯೇ ಜಪ ಮಾಡುತ್ತಿರುತ್ತಾರೆ.  ಈ ಅಮರ ಪ್ರೇಮಿಗಳು ಊಟ ನಿದ್ದೆ ಬೇಕಾದರೂ ಬಿಡಬಹುದು, ಆದರೆ ತಮ್ಮ ಪ್ರೇಮಿಯೊಂದಿಗೆ ಮಾತನಾಡದೆ ಒಂದು ಕ್ಷಣವೂ ಇರಲಾರರು. ಹೀಗೆ ಈ ಪ್ರೇಮಪಕ್ಷಿಗಳು ತಮ್ಮ ಪ್ರೇಮಿಗಳಿಗಾಗಿ ಎಂತಹ ಸಾಹಸಕ್ಕೂ ಬೇಕಾದರೂ ತಯಾರಿರುತ್ತಾರೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದೆ. ಅಮರ ಪ್ರೇಮಿಯೊಬ್ಬ  ಕೆ.ಇ.ಬಿ ಆಫೀಸರ್ಗೆ ಕರೆ ಮಾಡಿ, ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ, ನನ್  ಹುಡುಗಿಗೆ ಮೆಸೇಜ್ ಮಾಡ್ಬೇಕು, ಬೇಗ ಕರೆಂಟ್ ಕೊಡಿ  ಸರ್…. ಎಂದು ತಲೆ ತಿಂದಿದ್ದಾನೆ. ಇವರಿಬ್ಬರ ನಡುವಿನ ಮಾತುಕತೆಯ ಹಾಸ್ಯಮಯ ಆಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ.

@shetty_b_1994 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ  ಅಮರ ಪ್ರೇಮಿ ಹಾಗೂ ಕೆ.ಇ.ಬಿ ಆಫೀಸರ್ ನಡುವಿನ ಹಾಸ್ಯಮಯ ಮಾತುಕತೆಯನ್ನು   ಕಾಣಬಹುದು. ಈ ಆಡಿಯೋದಲ್ಲಿ ಯುವಕನೊಬ್ಬ ಕೆ.ಇ.ಬಿ ಆಫೀಸರ್ ಗೆ ಕರೆ ಮಾಡಿ, ಸರ್  ಆದಷ್ಟು ಬೇಗ ಕರೆಂಟ್ ಕೊಡಿ, ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ.  ನನ್ ಹುಡುಗಿಗೆ ಮೆಸೇಜ್ ಮಾಡ್ಬೇಕು…  ಏನೋ ಅಪರೂಪಕ್ಕೆ ಲವ್ ಮಾಡಿದ್ದೀನಿ ಸರ್ ಎಂದು  ಹೇಳುತ್ತಾನೆ.  ಈತನ ಈ ಮಾತನ್ನು  ತಾಳ್ಮೆಯಿಂದ ಕೇಳಿಸಿಕೊಂಡು ಯಾರ್ಯಾರಿಗೆ ಎಂತೆಂತಹ  ಕಷ್ಟ ಇರುತ್ತಲ್ವಾ ಯಪ್ಪಾ… ಎಂದು ನಗುತ್ತಲೇ  ಕೆ.ಇ.ಬಿ ಆಫೀಸರ್ ಉತ್ತರಿಸುತ್ತಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ;

ಬಳಿಕ ಆ ಯುವಕ ಬೇಗ  ಕರೆಂಟ್ ಕೊಡಣ್ಣೋ ಇಲ್ದಿದ್ರೆ ಲವ್ ಬ್ರೇಕಪ್ ಆಗ್ಬಿಡುತ್ತೆ, ಇವಾಗ 29 ವರ್ಷ, ಏನೋ  ಈಗ ಅಪರೂಪಕ್ಕೆ ಲವ್ ಮಾಡಿದ್ದೀನಿ.  ಸ್ವಲ್ಪ ಕಷ್ಟ ಅರ್ಥ ಮಾಡ್ಕೊಳ್ಳಿ ಸರ್,  ಬೇಗ ಕರೆಂಟ್ ಕೊಡಿ.  ಎಂದು ಕೇಳಿಕೊಳ್ಳುತ್ತಾನೆ. ಈ ಅಮರ ಪ್ರೇಮಿಯ ಕಾಟ ತಾಳಲಾರದೆ ಕೆ.ಇ.ಬಿ ಆಫೀಸರ್ ಆಯ್ತಪ್ಪಾ ಹೇಗಾದ್ರೂ ಮಾಡಿ ಕರೆಂಟ್ ಕೊಡಿಸ್ತೀನಿ ಎಂದು ಹೇಳುತ್ತಾರೆ. ಅದಕ್ಕೆ ಈ ಭೂಪ ಒಂದು ಜನರೇಟರ್ ವ್ಯವಸ್ಥೆ ಮಾಡಿಕೊಡಿ ಅಂತಾ ಕೇಳೋದಾ… ಇವರಿಬ್ಬರ ನಡುವಿನ ಈ ಹಾಸ್ಯಮಯ ಸಂಭಾಷನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: ಟ್ರೈನ್ ಚಕ್ರಗಳಿ​ಗೆ ರಬ್ಬರ್ ಟೈರ್ ಹಾಕಿದರೆ ಅದು ಸರಾಗವಾಗಿ ಚಲಿಸುತ್ತದಾ? ಈ ವೈರಲ್ ವೀಡಿಯೊ ನೋಡಿ

ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ 6.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ  408 ಸಾವಿರ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಅನೇಕ ಕಮೆಂಟ್​​ ಕೂಡ ಮಾಡಿದ್ದಾರೆ.  ಒಬ್ಬ ಬಳಕೆದಾರರು ʼಕೆ.ಇ.ಬಿ ಆಫೀಸರ್ಗೆ ನನ್ನ ಕಡೆಯಿಂದ ಧನ್ಯವಾದಗಳು… ಅವರ ತಾಳ್ಮೆ ಮತ್ತು ಸಹನೆಯನ್ನು ಮೆಚ್ಚಲೇಬೇಕುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಯಪ್ಪಾ ನಮ್ ಜನರಿಗೆ ಎಂತೆಂತಹ ಕಷ್ಟಗಳು ಬರ್ತವೆ ನೋಡಿʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ.  ಮತ್ತೊಬ್ಬ ಬಳಕೆದಾರರು ʼಪಾಪ ಆ ಹುಡುಗ ಅಪರೂಪಕ್ಕೆ ಲವ್ ಮಾಡವ್ನೆ ಕೊಟ್ ಬಿಡ್ರೋ ಕರೆಂಟ್ʼ ಎಂದು ಹೇಳಿದ್ದಾರೆ. ಇನ್ನು ಹಲವರು ಕೆ.ಇ.ಬಿ ಆಫೀಸರ್  ಆ ಯುವಕನ ಜೊತೆಗೆ ತಾಳ್ಮೆಯಿಂದ ಮಾತನಾಡಿದ ರೀತಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!