Trending: ಅರುಣಾಚಲ ಪ್ರದೇಶ ಮತ್ತು ಲಡಾಖ್​ಗೆ ಐಎಎಸ್ ದಂಪತಿ ವರ್ಗಾವಣೆ, ಶ್ವಾನದ ಪಯಣ ಯಾವ ಕಡೆ? ಇಲ್ಲಿದೆ ಟ್ರೋಲ್ಸ್

ಕ್ರೀಡಾಂಗಣವನ್ನು ಮುಚ್ಚಿಸಿ ಅದರೊಳಗೆ ಸಾಕು ನಾಯಿಯೊಂದಿಗೆ ವಾಕಿಂಗ್ ಮಾಡಿದ ಐಎಎಸ್ ದಂಪತಿಗಳು ಲಡಾಖ್ ಮತ್ತು ಅರುಣಾಚಲ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿದೆ. ಇದೀಗ ಅವರ ಸಾಕು ನಾಯಿಯ ಭವಿಷ್ಯದ ಬಗ್ಗೆ ಸಖತ್ ಟ್ರೋಲ್ ಆಗುತ್ತಿದೆ.

Trending: ಅರುಣಾಚಲ ಪ್ರದೇಶ ಮತ್ತು ಲಡಾಖ್​ಗೆ ಐಎಎಸ್ ದಂಪತಿ ವರ್ಗಾವಣೆ, ಶ್ವಾನದ ಪಯಣ ಯಾವ ಕಡೆ? ಇಲ್ಲಿದೆ ಟ್ರೋಲ್ಸ್
ನಾಯಿ ಜೊತೆ ಐಎಎಸ್ ದಂಪತಿಗಲ ವಾಕಿಂಕ್
Updated By: Rakesh Nayak Manchi

Updated on: May 27, 2022 | 11:35 AM

ಹಿರಿಯ ಐಎಎಸ್​ ಅಧಿಕಾರಿ (IAS Officer) ಸಂಜೀವ್ ಖಿರ್ವಾರ್ ಮತ್ತು ಇವರ ಪತ್ನಿಯೂ ಆಗಿರುವ ಐಎಎಸ್ ಅಧಿಕಾರಿ ರಿಂಕು ದುಗ್ಗಾ ಅವರನ್ನು ಕ್ರಮವಾಗಿ ಲಡಾಖ್ (Ladakh)​ಗೆ ಹಾಗೂ ಅರುಣಾಚಲ ಪ್ರದೇಶ (Arunachal Pradesh)ಕ್ಕೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಕಾರಣವೆಂದರೆ, ದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿರುವುದು. ಸಾಮಾನ್ಯ ಸಮಯಕ್ಕಿಂತ ಮುಂಚಿತವಾಗಿ ರಾತ್ರಿ 7 ಗಂಟೆಗೆ ಕ್ರೀಡಾಂಗಣವನ್ನು ಮುಚ್ಚಿಸಿ ದಂಪತಿಗಳು ಅದರೊಳಗೆ ತಮ್ಮ ಸಾಕು ನಾಯಿಯೊಂದಿಗೆ ವಾಕಿಂಗ್ ಮಾಡುತ್ತಿದ್ದರು. ಇದರಿಂದ ಕ್ರೀಡಾಪಟುಗಳಿಗೆ ಅಡಚಣೆಯಾಗುತ್ತಿತ್ತು. ಅಧಿಕಾರಿಗಳ ನಡೆ ಪ್ರಶ್ನೆಗೆ ಗ್ರಾಸವಾಗಿ ಸುದ್ದಿಗಳು ಪ್ರಸಾರವಾದವು.

ಇದನ್ನೂ ಓದಿ: Trending: ಚೆಂಡು ಕಳೆದುಕೊಂಡು ದುಃಖಿತವಾಗಿರುವ ಮುದ್ದಿನ ಶ್ವಾನವನ್ನು ಸಮಾಧಾನ ಮಾಡುತ್ತಿರುವ ವಿಡಿಯೋ ವೈರಲ್

1994ರ ಐಎಎಸ್ ಬ್ಯಾಚ್​ನವರಾಗಿರುವ ಇವರು ಸದ್ಯ ಲಡಾಖ್​ ಹಾಗೂ ಅರುಣಾಚಲ ಪ್ರದೇಶಕ್ಕೆ ವರ್ಗಾವಣೆಯಾಗಿದ್ದು, ಈಗ ನೆಟ್ಟಿಗರನ್ನು ಕಾಡಿದ ಕಟ್ಟಕಡೇಯ ಪ್ರಶ್ನೆ ನಾಯಿಯ ಪಯಣ ಯಾವ ಕಡೆ? ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಟ್ರೋಲ್ ಕೂಡ ಆಗುತ್ತಿವೆ. ಅವುಗಳು ಈ ಕೆಳಗಿನಂತಿವೆ.

ಇದನ್ನೂ ಓದಿ: Trending: ಕಾಫಿ ಬೀಜಗಳ ಮೇಲೆ ಎಚ್ಚರಿಕೆಯಿಂದ ಕಣ್ಣಾಡಿಸಿ, ಈಗ ನೀವು ಏನನ್ನು ಗುರುತಿಸಿದ್ದೀರಾ?

ಇದನ್ನೂ ಓದಿ: Viral Video: ಸೆಲ್ಫಿ ವಿಡಿಯೋ ಮಾಡುವಾಗ ಬಂದು ಸ್ಕರ್ಟ್​ ಎತ್ತಿ ನೋಡುವುದೇ? ಛಿ! ನಾಟಿ ಮಂಕಿ

ಕ್ರೀಡಾಂಗಣದ ಸಮಯದ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೆಹಲಿಯ ಸರ್ಕಾರಿ ಕ್ರೀಡಾಂಗಣಗಳನ್ನು ಸಂಜೆ 7 ಗಂಟಗೆ ಮುಚ್ಚಲಾಗುತ್ತದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಎಲ್ಲಾ ಕ್ರೀಡಾಂಗಣಗಳು ರಾತ್ರಿ 10 ಗಂಟೆಯವರೆಗೆ ತೆರೆದಿರುತ್ತದೆ. ಕ್ರೀಡಾಪಟುಗಳು ಕ್ರೀಡಾಭ್ಯಾಸ ಮಾಡಬಹುದು ಎಂದು ಸೂಚಿಸಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:35 am, Fri, 27 May 22