AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಆಪಲ್‌ ಕಂಪನಿಯ ತಾಕತ್ತು: 3 ದಿನ ಮಣ್ಣಿನಲ್ಲಿ ಹೂತುಹೋಗಿದ್ರೂ ಕೆಲಸ ಮಾಡ್ತಿದೆ ಐಫೋನ್ 17 ಪ್ರೊ

ಫಿಲಿಪೈನ್ಸ್‌ನಲ್ಲಿ ಭೀಕರ ಚಂಡಮಾರುತದ ನಡುವೆಯೂ, ಮಣ್ಣಿನಲ್ಲಿ ಹೂತುಹೋಗಿದ್ದ ಐಫೋನ್ 17 ಪ್ರೊ ಮತ್ತೆ ಕೆಲಸ ಮಾಡಿದೆ. ತಮ್ಮ ಐಫೋನ್ ಬದುಕುಳಿದ ಬಗ್ಗೆ ಚಂಡಮಾರುತದಿಂದ ಪಾರಾದ ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ವೈರಲ್ ಆಗಿದ್ದು, ಆಪಲ್‌ನ ಬಾಳಿಕೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಚಂಡಮಾರುತದ ಅನಾಹುತಗಳ ನಡುವೆ ಈ ಐಫೋನ್ ಕೆಲಸ ಮಾಡಿರುವುದು ಪವಾಡ ಎಂದು ಹಲವು ಜನ ಕಮೆಂಟ್​​ ಮಾಡಿದ್ದಾರೆ.

ಇದು ಆಪಲ್‌ ಕಂಪನಿಯ ತಾಕತ್ತು: 3 ದಿನ ಮಣ್ಣಿನಲ್ಲಿ ಹೂತುಹೋಗಿದ್ರೂ ಕೆಲಸ ಮಾಡ್ತಿದೆ ಐಫೋನ್ 17 ಪ್ರೊ
ವೈರಲ್​​ ಪೋಸ್ಟ್​
ಅಕ್ಷಯ್​ ಪಲ್ಲಮಜಲು​​
|

Updated on:Nov 12, 2025 | 11:02 AM

Share

ಫಿಲಿಪೈನ್ಸ್‌ನಲ್ಲಿ (Philippines) ಭಾರೀ ಚಂಡಮಾರುತ ಉಂಟಾಗಿ ಮೂಕಸೌಕರ್ಯಗಳು ನಾಶವಾಗಿದೆ. ಹಲವು ಜನ ಸಾವನ್ನಪ್ಪಿದ್ದಾರೆ. ಆದರೆ ಇದರ ನಡುವೆ ಚಂಡಮಾರುತಕ್ಕೆ ತಂತ್ರಜ್ಞಾನವೊಂದು ಸೆಡ್ಡು ಹೊಡೆದು ನಿಂತಿದೆ. ಇದೀಗ ಘಟನೆ ಭಾರೀ ವೈರಲ್​​ ಆಗಿದೆ. ವಿನಾಶಕಾರಿ ಚಂಡಮಾರುತದಿಂದ ಬದುಕುಳಿದ ವ್ಯಕ್ತಿಯೊಬ್ಬರ ಐಫೋನ್ 17 ಪ್ರೊ (iPhone 17 Pro) ಮಣ್ಣಿನಲ್ಲಿ ಹೂತುಹೋಗಿದ್ದರೂ ಮತ್ತೆ ಅದು ಕೆಲಸ ಮಾಡುತ್ತಿದೆ. ಇದನ್ನು ಅವರು ರೆಡ್ಡಿಟರ್​​ನಲ್ಲಿ ಹಂಚಿಕೊಂಡಿದ್ದು, ನೆಟ್ಟಗರು ಆಪಲ್‌ ಕಂಪನಿಯನ್ನು ಶ್ಲಾಘಿಸಿದ್ದಾರೆ. ಭಾರೀ ಚಂಡಮಾರುತದಿಂದ ಫಿಲಿಪೈನ್ಸ್‌ ತತ್ತರಿಸಿ ಹೋಗಿದೆ. ಮೂಲಸೌಕರ್ಯಗಳು ನಾಶವಾಗಿದ್ದರು, ಐಫೋನ್ 17 ಪ್ರೊ ವರ್ಕ್​​ ಮಾಡುತ್ತಿದೆ ಎಂದರೆ ನಂಬಲು ಸಾಧ್ಯವೇ ಎಂದು ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ.

ಚಂಡಮಾರುತದಿಂದ ಬದುಕುಳಿದ ವ್ಯಕ್ತಿ ರೆಡ್ಡಿಟರ್​​ನಲ್ಲಿ ಬಗ್ಗೆ ವಿವರಿಸಿದ್ದಾರೆ. ” ಫಿಲಿಪೈನ್ಸ್‌ ಚಂಡಮಾರುತದಿಂದ ಎಲ್ಲವನ್ನು ಕಳೆದುಕೊಂಡಿದೆ. ಜನರು ತಮ್ಮವರನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಸುಂದರ ಜೀವನ ನಡೆಸುತ್ತಿದ್ದ ಅದೆಷ್ಟೋ ಜೀವಗಳು ಮಣ್ಣು ಸೇರಿದೆ. ನಾನು ಕೂಡ ಚಂಡಮಾರುತದಿಂದ ನನ್ನ ಕುಟುಂಬದ ಸದಸ್ಯರನ್ನು ಕಳೆದುಕೊಂಡಿದ್ದೇನೆ. ಚಂಡಮಾರುತದಿಂದ ನನ್ನ ಮನೆಯೊಳಗೆ ನೀರು ಬಂದು ಮುಳುಗಿ ಹೋಗಿದೆ. ಇದರಿಂದ ತಪ್ಪಿಸಿಕೊಳ್ಳಲು ಮನೆಯ ಛಾವಣಿ ಮೇಲೆ ಏರಬೇಕಾದ ಪರಿಸ್ಥಿತಿ ಬಂತು. ವೇಳೆ ಕಾಲು ಜಾರಿ ಛಾವಣಿಯಿಂದ ನೀರಿಗೆ ಬಿದ್ದೆ, 15 ನಿಮಿಷಗಳ ಕಾಲ ನೀರಿನಲ್ಲಿ ಒದ್ದಾಡಿ, ಹೇಗೋ ಮೇಲೆ ಬಂದೆ, ಆದರೆ ವೇಳೆ ನನ್ನ ಕೈಯಲ್ಲಿದ್ದ ಐಫೋನ್ 17 ಪ್ರೊ ನೀರಿಗೆ ಬಿದ್ದಿದೆ. ಫೋನ್​​​​ ನೀರಿಗೆ ಬಿದ್ದದ್ದು ನನಗೆ ಗೊತ್ತೆ ಆಗಿಲ್ಲ. 3 ದಿನಗಳ ನಂತರ ನನ್ನ ಮನೆ ಬಳಿ ಹೋದೇ ಎಲ್ಲವೂ ನೀರು ಪಾಲಾಗಿತ್ತು. ಆದರೆ ಮನೆಯ ಒಂದು ಮೂಲೆಯಲ್ಲಿ ನನ್ನ ಐಫೋನ್ 17 ಪ್ರೊ ಮಣ್ಣಿನಲ್ಲಿ ಅರ್ಧ ಹೂತುಹೋಗಿತ್ತು. ಅದನ್ನು ಸ್ವಲ್ಪ ಸ್ವಚ್ಛ ಮಾಡಿ, ಚಾರ್ಜ್​​​ಗೆ ಹಾಕಿದೆ, ತಕ್ಷಣ ಅದು ಆನ್ ಆಯಿತು. ಯಾವುದೇ ಗೀರುಗಳಿಲ್ಲ, ಯಾವುದೇ ಸಮಸ್ಯೆಗಳಿಲ್ಲಎಂದು ಹೇಳಿದ್ದಾರೆ.

ಇದನ್ನೂ ಓದಿ: ರಸ್ತೆ ಮಧ್ಯೆ ಪ್ಯಾಂಟ್‌ ಬಿಚ್ಚಿ ಗುಪ್ತಾಂಗ ತೋರಿಸಿದ ಯುವಕನಿಗೆ ಪೊರಕೆಯಿಂದ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

I almost drowned and died from a flash food. My whole house was destroyed and everything in it. my phone survived being in mud for 3 days byu/bricksandcanvas iniphone

ಆಪಲ್‌ ಕಂಪನಿಯನ್ನು ಶ್ಲಾಘಿಸಿದ ನೆಟ್ಟಿಗರು:

ನಿಮ್ಮ ಫೋನ್​​​​​​​ ಅದ್ಭುತವಾಗಿದೆ. ಮತ್ತೆ ವರ್ಕ್​​ ಮಾಡುತ್ತಿದೆ ಎಂದರೆ ಅಚ್ಚರಿ ಪಡುವ ಸಂಗತಿ ಎಂದು ಒಬ್ಬರು ಹೇಳಿದ್ದಾರೆ. ಮೊಬೈಲ್ ಫೋನ್‌ಗಳು ಬಾಳಿಕೆಯ ವಿಷಯದಲ್ಲಿ ಎಷ್ಟು ಮುಂದುವರೆದಿವೆ ಎಂಬುದು ಇದರಲ್ಲಿ ಅರ್ಥವಾಗುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇತ್ತಿಚೇಗಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಹೆಚ್ಚು ಬಾಳಿಕೆ ಹಾಗೂ ನಂಬಿಕೆಯನ್ನು ಉಳಿಸಿಕೊಂಡಿಲ್ಲ. ಆದರೆ ಐಫೋನ್ 17 ಪ್ರೊ ತುಂಬಾ ಅದ್ಭುತವಾಗಿದೆ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:59 am, Wed, 12 November 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ