ಆನ್​ಲೈನ್​ನಲ್ಲಿ ಅರಳಿದ ಪ್ರೀತಿ, ಪ್ರಿಯಕರನ ಅರಸಿ ಆಸ್ಟ್ರೇಲಿಯಾದಿಂದ ಅಮೇಜಾನ್​ ಕಾಡಿಗೆ ಹೋದ ಯುವತಿ

ಪ್ರೀತಿಗೆ ಯಾವುದೇ ಭಾಷೆ, ಧರ್ಮ, ಬಣ್ಣದ ಹಂಗಿಲ್ಲ, ಯಾರಲ್ಲಿ ಬೇಕಾದರೂ ಪ್ರೀತಿಯ ಮೊಳಕೆಯೊಡೆಯಬಹುದು, ಹಾಗೆಯೇ ಆಸ್ಟ್ರೇಲಿಯಾದ ಯುವತಿಯೊಬ್ಬಳು ಅಮೇಜಾನ್​ ಕಾಡಿನಲ್ಲಿರುವ ವ್ಯಕ್ತಿಯನ್ನು ಪ್ರೀತಿ ಮಾಡಿದ್ದು, ಉದ್ಯೋಗ ತೊರೆದು ಆಕೆ ಕಾಡಿಗೆ ಹೋಗಿರುವ ಕತೆ ಇದು.

ಆನ್​ಲೈನ್​ನಲ್ಲಿ ಅರಳಿದ ಪ್ರೀತಿ, ಪ್ರಿಯಕರನ ಅರಸಿ ಆಸ್ಟ್ರೇಲಿಯಾದಿಂದ ಅಮೇಜಾನ್​ ಕಾಡಿಗೆ ಹೋದ ಯುವತಿ
Follow us
|

Updated on:Jun 06, 2024 | 11:19 AM

ಭಾಷೆ, ಧರ್ಮ, ಅಂತಸ್ತು ಎಲ್ಲವನ್ನೂ ಮೀರಿದ್ದು ಪ್ರೀತಿ ಎಂಬುದು ಅಕ್ಷರಶಃ ಸತ್ಯ. ಆಸ್ಟ್ರೇಲಿಯಾದ ಯುವತಿಯೊಬ್ಬಳ ಆನ್​ಲೈನ್​ ಮೂಲಕ ಅರಳಿದ ಪ್ರೇಮ ಕಥೆಯು ಆಕೆಯನ್ನು ಅಮೇಜಾನ್​ ಕಾಡಿಗೆ ತಂದು ಬಿಟ್ಟಿತ್ತು. ಆಕೆ ಇನ್​ಸ್ಟಾಗ್ರಾಂ ನೋಡುತ್ತಿರುವಾಗ ಓರ್ವ ಯುವಕನ ಪ್ರೊಪೈಲ್​ ಕಣ್ಣಿಗೆ ಬಿದ್ದಿತ್ತು, ಆತ ಆಕೆಯಿಂದ ಸಾವಿರಾರು ಕಿಲೋಮೀಟರ್​ ದೂರದ ಅಮೇಜಾನ್ ಕಾಡಿನಲ್ಲಿ ವಾಸಿಸುತ್ತಿದ್ದ. ಆಕೆ ನಗರದಲ್ಲಿ ವಾಸವಿದ್ದಳು.

ಜೀವನಶೈಲಿ, ಬಾಷೆ, ಆಚಾರ ವಿಚಾರ ಎಲ್ಲವೂ ಬೇರೆ ಬೇರೆ, ಆದರೆ ಆತನನ್ನು ಆಕೆ ತುಂಬಾ ಇಷ್ಟಪಟ್ಟಳು. ಫಾಲೋ ರಿಕ್ವೆಸ್ಟ್​ ಕಳುಹಿಸಿದ ತಕ್ಷಣ ಆ ಕಡೆಯಿಂದ ಅಕ್ಸೆಪ್ಟ್​ ಆಗಿತ್ತು. ಆಕೆಯ ಖುಷಿಗೆ ಪಾರವೇ ಇರಲಿಲ್ಲ.

ಭಾಷೆ ಅರ್ಥವಾಗದ ಕಾರಣ ಅವರು ವಿಡಿಯೋ ಕಾಲ್​ ಮೂಲಕ ನೋಡಿ ಸಂಕೇತ ಭಾಷೆ ಮೂಲಕ ಮಾತನಾಡುತ್ತಿದ್ದರು. ಆಕೆಯ ಉದ್ಯೋಗವನ್ನು ಬಿಟ್ಟು ಆತನೊಂದಿಗೆ ಇರಲು ಬಯಸಿದ್ದಳು, ಇದನ್ನು ಆತನಿಗೂ ಹೇಳಿ ರಾತ್ರೋ ರಾತ್ರಿ ಹೊರಟೇ ಬಿಟ್ಟಳು.

ಮತ್ತಷ್ಟು ಓದಿ: Viral Video: ನಾಯಿ ಮರಿಗಳನ್ನು ಕಸದ ತೊಟ್ಟಿಗೆ ಬಿಸಾಕಿದ ಮಹಿಳೆ; ಸಿಸಿಟಿವಿ ದೃಶ್ಯ ಇಲ್ಲಿದೆ ನೋಡಿ

ದಿ ಸನ್​ ವೆಬ್​ಸೈಟ್​ ವರದಿ ಪ್ರಕಾರ, ಜೋರ್ಡಾನ್​ ಕ್ವೀನ್ಸ್​ಲೆಂಡ್​ನಲ್ಲಿ ಆಕೆ ವಾಸವಿದ್ದಳು, ಡಿಸೆಂಬರ್​ನಲ್ಲಿ ಅವರಿಬ್ಬರು ಪರಿಚಯವಾಗಿದ್ದು, ನಾಲ್ಕು ತಿಂಗಳಲ್ಲೇ ಆಕೆ ಅಲ್ಲಿಗೆ ಹೊರಟಿದ್ದಳು.

ಆತ ಅಮೇಜಾನ್​ ಕಾಡಿನಲ್ಲಿ ಪ್ರವಾಸಿಗರಿಗೆ ಗೈಡ್​ ಆಗಿ ಕೆಲಸ ಮಾಡುತ್ತಿದ್ದ, ಇಬ್ಬರೂ ಅರ್ಜೆಂಟೀನಾ, ಪೆರು, ಬ್ರೆಜಿಲ್ ಮೊದಲಾದ ದೇಶಗಳಿಗೆ ಭೇಟಿ ನೀಡಲು ನಿರ್ಧರಿಸಿದರು.

ಯುವಕನ ಕುಟುಂಬವು ಅವನನ್ನು ಪೂರ್ಣ ಹೃದಯದಿಂದ ಸ್ವಾಗತಿಸಿತು. ಎರಡು ವಾರಗಳ ಪ್ರವಾಸ ಮಾಡಿದರು. ಜೋರ್ಡಾನ್ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದಾಗ, ಅವಳ ಕಣ್ಣಲ್ಲಿ ನೀರು ತುಂಬಿತ್ತು. ಆಕೆ ಮತ್ತೆ ಈಕ್ವೆಡಾರ್​ಗೆ ಹಿಂದಿರುಗಿದ್ದು ಕೆಲ ಸಮಯ ಅಲ್ಲಿದ್ದು ಮತ್ತೆ ವಾಪಸಾಗಲಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:18 am, Thu, 6 June 24

‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?