Viral Video: ಎಲ್ಲಿಯ ಉಡುಪಿ ಎಲ್ಲಿಯ ಚಿಕ್ಕಬಳ್ಳಾಪುರ; ಇಲ್ಲಿದೆ ಗಣೇಶ್ ಮತ್ತು ಶ್ರೀವಿದ್ಯಾ ಕಲಾಹೂರಣ

|

Updated on: Jun 24, 2023 | 4:01 PM

Kannada Comedy: ಬದುಕಿನ ಏಕತಾನತೆಯನ್ನು ಮುರಿಯಲು ಸೃಜನಾತ್ಮಕವಾಗಿ ಹೇಗೆ ತೊಡಗಿಕೊಳ್ಳಬೇಕು ಎನ್ನುವುದಕ್ಕೆ ಇವರು ಉತ್ತಮ ಉದಾಹರಣೆ. ಸಾಫ್ಟ್​ವೇರ್​ ಎಂಜನಿಯರುಗಳಾದ ಇವರು ಜೊತೆಯಾಗಿದ್ದು ಹೇಗೆ ಎನ್ನುವ ಕಥೆ ಇಲ್ಲಿದೆ.

Viral Video: ಎಲ್ಲಿಯ ಉಡುಪಿ ಎಲ್ಲಿಯ ಚಿಕ್ಕಬಳ್ಳಾಪುರ; ಇಲ್ಲಿದೆ ಗಣೇಶ್ ಮತ್ತು ಶ್ರೀವಿದ್ಯಾ ಕಲಾಹೂರಣ
ಕಲಾವಿದರಾದ ಗಣೇಶ ಕಾರಂತ ಮತ್ತು ಶ್ರೀವಿದ್ಯಾ ಸುರೇಶ
Follow us on

Tere Hawale : ಕೊರೊನಾ ಸಮಯದಲ್ಲಿ ಏನು ಉಸಿರಾಡಿದರೂ ಸಾಮಾಜಿಕ ಜಾಲತಾಣಗಳ ಮೂಲಕವೇ. ನೋವು ಸಾವುಗಳ ಮಧ್ಯೆ ನಿತ್ಯಜೀವನ ಸಾಗಬೇಕೆಂದರೆ ಮನರಂಜನೆಯೂ ಬೇಕಿತ್ತು. ಈ ಸಂದರ್ಭದಲ್ಲಿಯೇ ಸಾವಿರಾರು ಮನರಂಜನಾಕಾರರು ಹುಟ್ಟಿಕೊಂಡರೇನೋ ನಿಜ. ಆದರೆ ಬೆರಳೆಣಿಕೆಯಷ್ಟು ರೀಲಿಗರು ಮಾತ್ರ ಇಂದಿಗೂ ತಮ್ಮ ಸೃಜನಶೀಲತೆಯ ಒರತೆಯನ್ನು ಬತ್ತದಂತೆ ಕಾಪಾಡಿಕೊಳ್ಳುತ್ತಿದ್ದಾರೆ. ಇಂಥವರಲ್ಲಿ ಗಣೇಶ ಕಾರಂತ ಮತ್ತು ಶ್ರೀವಿದ್ಯಾ ಸುರೇಶ ಜೋಡಿ (Ganesh Karanth and Shreevidya Suresh) ಗಮನಾರ್ಹರು. ನಮ್ಮನಿಮ್ಮ ಮನೆಯ ಸಂಗತಿ ಇವರಿಗೆ ಹೇಗೆ ತಲುಪಿತು? ಎನ್ನುವಷ್ಟು ಸಹಜವಾದ ಕಂಟೆಂಟ್,  ಮತ್ತೆಮತ್ತೆ ಆ ರೀಲ್ ನೋಡಬೇಕೆನ್ನಿಸುವಂಥ ನವಿರು ಹಾಸ್ಯದ ಲೇಪ. ಗಾಯಕರೂ ಆಗಿರುವ ಗಣೇಶ ಇತ್ತೀಚೆಗೆ ಹಾಡಿದ ಈ ಹಾಡನ್ನು ನೀವು ಕೇಳಲೇಬೇಕು.

ಗಣೇಶ್ ಹಾಡಿರುವ ಈ ಸುಶ್ರಾವ್ಯ ಗೀತೆ ‘ಲಾಲ್​ ಸಿಂಗ್​ ಛಡ್ಡಾ’ (Lal Singh Chadda) ಸಿನೆಮಾದ್ದು. ಗಣೇಶ್ ಮತ್ತು ಶ್ರೀವಿದ್ಯಾ ತಮ್ಮಲ್ಲಿರುವ ಸಮಾನ ಆಸಕ್ತಿಗಳನ್ನು ಪರಸ್ಪರ ಪೋಷಿಸಿಕೊಳ್ಳುತ್ತ ಜೀವನವನ್ನು ರಸವತ್ತಾಗಿಸಿಕೊಳ್ಳುತ್ತಿದ್ದಾರೆ. ಇವರ ಅನ್ಯೋನ್ನತೆಯನ್ನು ಕಂಡ ನೆಟ್ಟಿಗರು ಸಾಕಷ್ಟು ಸಲ ಇವರನ್ನು, ನಿಮ್ಮಿಬ್ಬರದು ಲವ್​ ಮ್ಯಾರೇಜ್​? ಎಂದು ಕೇಳಿರುವುದುಂಟು. ಅದಕ್ಕೆ ಗಣೇಶ್​, ‘To be honest we two were super tensed during our marriage. ಭೇಟಿ ಆಗುವ ತನಕ ನಾನು ಯಾರು ಎಂದೇ ಅವಳಿಗೆ ಗೊತ್ತಿರಲಿಲ್ಲ. ನನಗೂ ಕೂಡ ಅವಳು ಒಬ್ಬ ಅಪರಿಚಿತ ವ್ಯಕ್ತಿ. Mutual friends ಅಂತೂ ಇಲ್ಲವೇ ಇಲ್ಲ. ಬರೀ shaadi.com profile ನೋಡಿ ಏನೋ ಒಂದು blind belief ಇಂದ ಮದುವೆಯ ಮಾತುಕತೆ ಶುರುವಾಗಿ ಕೊನೆಗೆ ಮದುವೆಯೂ ನಡೆದು ಹೋಯಿತು.”

ಇದನ್ನೂ ಓದಿ : Viral Video: 6ಮಿಲಿಯನ್​ ಮಂದಿ ಕಣ್ಣಿಗೆ ಬಿದ್ದ ಈ ಬೆಣಚುಬೆಕ್ಕು; ಜಸ್ಟಿನ್​ ಬತ್ತಳಿಕೆಯಲ್ಲಿ ಗಾಂಧೀಜಿ, ರಮಣ ಮಹರ್ಷಿ ಇನ್ನೂ ಯಾರೆಲ್ಲ?

”ಎಲ್ಲಿಯ ಚಿಕ್ಕಬಳ್ಳಾಪುರ ಎಲ್ಲಿಯ ಉಡುಪಿ. ಆಹಾರ ಪದ್ದತಿ ಒಂದೇ ಆದರೂ ಇಬ್ಬರ ಆಚಾರ ವಿಚಾರಗಳು ಬೇರೆ. ಅವಳಿಗೆ ದೇವರೇ ಪ್ರಪಂಚ. ನನಗೆ hmmm ಬೇಡ ಬಿಡಿ. ಇಬ್ಬರ ಮಾತೃಭಾಷೆ ಕನ್ನಡ ಆಗಿದ್ದರೂ ಅವರ ಮನೆಯಲ್ಲಿ ಮಾತಾಡೋದು ಬೆಂಗಳೂರು ಕನ್ನಡ, ನಮ್ಮ ಮನೆಯಲ್ಲಿ ಅಪ್ಪಟ ಕರಾವಳಿ ಕನ್ನಡ. ನಾನು ಮುಂಗೋಪಿ ಆದರೆ ಅವಳು oh sorry ಅವಳೂ ಮುಂಗೋಪಿ.” ಎಂದಿದ್ದಾರೆ. ಈ ಮುಂಗೋಪವನ್ನೇ ಕೇಂದ್ರೀಕರಿಸಿ ಮಾಡಿದ ರೀಲ್​ ಈ ಕೆಳಗಿದೆ.

ಗಣೇಶ ಆಗಾಗ ‘ಬಿಯರ್ಡ್​ ಬಾಲಕ’ನಾಗಿ ರೀಲುಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಷ್ಟೇ ಯಾಕೆ ತನ್ನ ಅಮ್ಮನನ್ನೂ ರೀಲುಗಳಲ್ಲಿ ಒಳಗೊಳ್ಳುವಂತೆ ಮಾಡುತ್ತಿರುತ್ತಾರೆ. ತಮ್ಮನ್ನು ತಾವು ಹೀಗೆ ಸೃಜನಾತ್ಮಕವಾಗಿ ಇರಿಸಿಕೊಳ್ಳುವ ಹಾದಿಯನ್ನು ಕಂಡುಕೊಂಡರೆ ಬಹುಶಃ ಬದುಕಿನ ಎಷ್ಟೋ ಸಮಸ್ಯೆಗಳು ಮಾಯವಾಗಿರುತ್ತವೆ! ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:49 pm, Sat, 24 June 23