AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 6ಮಿಲಿಯನ್​ ಮಂದಿ ಕಣ್ಣಿಗೆ ಬಿದ್ದ ಈ ಬೆಣಚುಬೆಕ್ಕು; ಜಸ್ಟಿನ್​ ಬತ್ತಳಿಕೆಯಲ್ಲಿ ಗಾಂಧೀಜಿ, ರಮಣ ಮಹರ್ಷಿ ಇನ್ನೂ ಯಾರೆಲ್ಲ?

Pebble Art : ''ಕಾರ್​ಪಾರ್ಕಿಂಗ್​ನಲ್ಲಿ ಅಕಸ್ಮಾತ್ ಆಗಿ ಈ ಬೀದಿಬೆಕ್ಕನ್ನು ಕಂಡೆ. ಗಾಯಗೊಂಡ ಅವನ ಮೈ ಅವನ ಹೋರಾಟದ ಕಥೆಯನ್ನು ಹೇಳುತ್ತಿತ್ತು. ಕ್ರಮೇಣ ವಿಶ್ವಾಸವನ್ನು ಗಳಿಸಿ ಹೀಗೆ ಬೆಣಚುಕಲ್ಲುಗಳಲ್ಲಿ ಹಿಡಿದಿಟ್ಟೆ.''

Viral Video: 6ಮಿಲಿಯನ್​ ಮಂದಿ ಕಣ್ಣಿಗೆ ಬಿದ್ದ ಈ ಬೆಣಚುಬೆಕ್ಕು; ಜಸ್ಟಿನ್​ ಬತ್ತಳಿಕೆಯಲ್ಲಿ ಗಾಂಧೀಜಿ, ರಮಣ ಮಹರ್ಷಿ ಇನ್ನೂ ಯಾರೆಲ್ಲ?
ಜಸ್ಟಿನ್​ ಬಟೇಮನ್​ ಬೆಣಚುಕಲ್ಲಿನಲ್ಲಿ ರಚಿಸಿದ ಗಾಂಧೀಜಿ ಮತ್ತು ಬೆಕ್ಕು
ಶ್ರೀದೇವಿ ಕಳಸದ
|

Updated on:Jun 23, 2023 | 12:59 PM

Share

Pebble Art : ನಿರಾಕಾರದಿಂದ ಆಕಾರ ಸೃಷ್ಟಿಸುವುದೇ ಕಲಾವಿದನ ಕೆಲಸ. ಇಂಥ ವಸ್ತುಗಳೇ ಬೇಕಂತಿಲ್ಲ. ಕಲ್ಲು, ಮಣ್ಣು, ಕಟ್ಟಿಗೆ, ಬಟ್ಟೆಬರೆ ಹೀಗೆ ಯಾವುದಕ್ಕೂ ಆತ ತನ್ನ ಸೃಜನಾತ್ಮಕ ಚಿಕಿತ್ಸೆ ಕೊಡಬಲ್ಲ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಬೆಣಚುಕಲ್ಲುಗಳೊಳಗೆ ಮೂಡಿಸಿದ ಈ ಬೆಕ್ಕಿನ ಪೋರ್ಟ್ರೇಟ್​ ಅನ್ನು ಈತನಕ 6 ಮಿಲಿಯನ್​ಗಿಂತಲೂ ಹೆಚ್ಚು ಜನ ನೋಡಿದ್ದಾರೆ. ಜಸ್ಟಿನ್ ಬಟೇಮನ್​ ​ (Justin Bateman)​ ಎಂಬ ಕಲಾವಿದರ ಇನ್​ಸ್ಟಾ ಪ್ರೊಫೈಲಿಗೆ ಹೋದರೆ Pebbles are my Pixels ಎಂಬ ಒಕ್ಕಣೆ ಅವರ ಪ್ರೊಫೈಲಿನಲ್ಲಿ ಗಮನ ಸೆಳೆಯುತ್ತದೆ. ಬರೀ ಬೆಣಚುಕಲ್ಲುಗಳಿಂದ ಮಾತ್ರ ಸೃಷ್ಟಿಸಿದ ನೂರಾರು ಪ್ರಸಿದ್ಧ ವ್ಯಕ್ತಿಗಳ ಪೋರ್ಟ್ರೇಟ್​ಗಳು ನಿಮ್ಮನ್ನು ಸ್ವಾಗತಿಸುತ್ತವೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Justin Bateman (@pebblepicassos)

”ಬೆಕ್ಕುಗಳೊಂದಿಗೆ ಕಳೆದ ಸಮಯ ಎಂದಿಗೂ ವ್ಯರ್ಥವಾಗಲಾರದು ಎಂದು ಸಿಗ್ಮಂಡ್​ ಫ್ರಾಯ್ಡ್​ ಹೇಳಿದ್ದಾನೆ. ಈಜಿಪ್ಟ್​ನಲ್ಲಿ ಇವುಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಥೈಲ್ಯಾಂಡ್​ನ ಚಿಯಾಂಗ್​ ಮಾಯ್​ನ ಪ್ರತೀ ಮನೆಗಳಲ್ಲಿಯೂ ಬೆಕ್ಕುಗಳನ್ನು ಕಾಣಬಹುದಾಗಿದೆ. ಸ್ಥಳೀಯ ಸರೋವರಗಳಲ್ಲಿ ಬೆಕ್ಕುಗಳೊಂದಿಗೆ ಇಲ್ಲಿಯ ಜನರು ವಾಯುವಿಹಾರಕ್ಕೆ ಬರುತ್ತಾರೆ. ಸಾಮಾಜಿಕ ಏಕೀಕರಣವನ್ನು ಅನುಭವಿಸುತ್ತಾರೆ. ನಾನಿಲ್ಲಿ ಅಕಸ್ಮಾತ್ ಆಗಿ ಭೇಟಿ ನೀಡಿದೆ. ಇಲ್ಲಿರುವ ಬೀದಿಬೆಕ್ಕುಗಳು, ಅವುಗಳ ಹೆಜ್ಜೆ ಗುರುತುಗಳು ನಿತ್ಯಹೋರಾಟದ ಕಥೆಯನ್ನು, ಸಾಹಸವನ್ನು ಹೇಳುತ್ತವೆ.”

ಇದನ್ನೂ ಓದಿ : Viral: ಮೃತ ಅಜ್ಜಿಯೇ ಇವರ ಕಾಫಿ ಟೇಬಲ್!? ಇಲ್ಲಿದೆ ​ಫ್ಯಾಕ್ಟ್ ಚೆಕ್

”ಕಾರ್​ಪಾರ್ಕಿಂಗ್​ ​ ಸ್ಥಳದಲ್ಲಿ ಸಿಕ್ಕ ಈ ಬೀದಿಬೆಕ್ಕಿನ ಮೈಮೇಲಾದ ಗಾಯಗಳೇ ಅದರ ಸಾಹಸೀ ವರ್ಚಸ್ಸನ್ನು ಬಿಂಬಿಸುತ್ತಿತದ್ದವು. ಆರಂಭದಲ್ಲಿ ಇದು ಹಿಂಜರಿಕೆ ತೋರಿತು. ನಂತರ ವಿಶ್ವಾಸವನ್ನು ಗಳಿಸಿದೆ. ಹೀಗಿಲ್ಲಿ ಬೆಣಚುಕಲ್ಲುಗಳಲ್ಲಿ ಇದನ್ನು ಹಿಡಿದಿಟ್ಟೆ. ನಿಜಕ್ಕೂ ಬೆಕ್ಕುಗಳು ಅಸಾಧಾರಣ ವ್ಯಕ್ತಿತ್ವ ಉಳ್ಳಂಥವು. ಸ್ವತಂತ್ರ ಮತ್ತು ಅತೀಂದ್ರೀಯ ಶಕ್ತಿಯನ್ನು ಹೊಂದಿದಂಥವು. ಅವುಗಳು ಆರೋಗ್ಯದಿಂದ ಕೂಡಿರಬೇಕು. ಸ್ಥಳೀಯ ಸಂಸ್ಥೆಗಳಿಗೆ ನೀವು ಕೈಲಾದ ಕಾಣಿಕೆಯನ್ನು ನೀಡಿ” ಎಂದಿದ್ದಾರೆ ಜಸ್ಟಿನ್​ ಬಟೇಮನ್​.

ಮೇಲಿನ ಚಿತ್ರದಲ್ಲಿರುವವರು ಶ್ರೀ ರಮಣ ಮಹರ್ಷಿಗಳು. ಜಸ್ಟಿನ್​ ಅವರ ಇನ್​ಸ್ಟಾ ಗೋಡೆಯ ಮೇಲೆ ಮರ್ಲಿನ್​ ಮನ್ರೋ, ಶೇಕ್ಸ್​ಪಿಯರ್, ನೆಪ್ಚೂನ್​ ಮತ್ತು ಅನೇಕ ಪ್ರಭಾವಿ ವ್ಯಕ್ತಿಗಳ ಪೋರ್ಟ್ರೇಟ್ ಕಾಣಬಹುದಾಗಿದೆ. ಈ ಕಲಾವಿದರು ಆಯ್ಕೆ ಮಾಡಿಕೊಂಡ ವ್ಯಕ್ತಿಗಳ ಎಲ್ಲಾ ಪೋರ್ಟ್ರೇಟ್​ ಗಮನಿಸಿ. ಅತ್ಯಂತ ವಿಶೇಷವಾಗಿದೆ.

ಕಲೆ ಎಂದರೆ ಚಿತ್ತೈಸು. ಹೀಗೆ ಚಿತ್ತೈಸಿದರೆ ಏನೂ ಸೃಷ್ಟಿಯಾಗಬಲ್ಲುದು! ಏನಂತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:42 pm, Fri, 23 June 23

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ