AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿ.ಪೂ. 5000ರ ಕುಂಭಕರ್ಣನ ಖಡ್ಗ ಶ್ರೀಲಂಕಾದ ಗುಹೆಯಲ್ಲಿ ಪತ್ತೆ!

ಶ್ರೀಲಂಕಾದಲ್ಲಿ ನಡೆದ ಉತ್ಖನನದಲ್ಲಿ ರಾವಣನ ಸಹೋದರ ಕುಂಭಕರ್ಣನ ಖಡ್ಗ ಪತ್ತೆಯಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುತ್ತಾ ಈ ರೀತಿ ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ನಾಲ್ಕು ಚಿತ್ರಗಳಿದ್ದು, ಉತ್ಖನನದ ವೇಳೆ ಸಿಕ್ಕಿದೆ ಎನ್ನಲಾದ ಬೃಹತ್ ಖಡ್ಗವನ್ನು ಕಾಣಬಹುದು. ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿ ಕುಂಭಕರ್ಣನ ಖಡ್ಗ ಎಂದು ಕರೆಯುತ್ತಿದ್ದಾರೆ.

ಕ್ರಿ.ಪೂ. 5000ರ ಕುಂಭಕರ್ಣನ ಖಡ್ಗ ಶ್ರೀಲಂಕಾದ ಗುಹೆಯಲ್ಲಿ ಪತ್ತೆ!
ಕುಂಭಕರ್ಣನ ಖಡ್ಗ
ಸುಷ್ಮಾ ಚಕ್ರೆ
|

Updated on: Oct 30, 2024 | 4:01 PM

Share

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಾಮಾಯಣದಲ್ಲಿ ವಿವರಿಸಲಾದ ಶ್ರೀಲಂಕಾದ ರಾಜ ರಾವಣನ ತಮ್ಮ ಕುಂಭಕರ್ಣನ ಖಡ್ಗವನ್ನು ಪತ್ತೆಹಚ್ಚಲಾಗಿದೆ ಎಂದು ಹೇಳಲಾಗಿದೆ. ಈ ವಿಡಿಯೋದಲ್ಲಿ ಬೃಹತ್ ಖಡ್ಗವನ್ನೂ ತೋರಿಸಲಾಗಿದೆ. ಈ ವಿಡಿಯೋವನ್ನು ಜನರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ “ಶ್ರೀಲಂಕಾದಲ್ಲಿ ಪತ್ತೆಯಾದ ಕುಂಭಕರ್ಣನ ಖಡ್ಗ, ರಾಮಾಯಣ ಪುರಾಣವಲ್ಲ ಸತ್ಯಕತೆ ಎಂಬುದಕ್ಕೆ ಇದೇ ಸಾಕ್ಷಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಸತ್ಯ ಬಹಿರಂಗವಾದದ್ದು ಹೇಗೆ?:

ಉತ್ಖನನದ ಸಮಯದಲ್ಲಿ ಕುಂಭಕರ್ಣನ ಖಡ್ಗ ಪತ್ತೆಯಾಗಿದೆ ಎಂದು ಉಲ್ಲೇಖಿಸಿರುವ ಯಾವುದೇ ಭಾರತೀಯ ಅಥವಾ ಶ್ರೀಲಂಕಾದ ಸುದ್ದಿ ವೆಬ್‌ಸೈಟ್‌ನಿಂದ ಯಾವುದೇ ವರದಿ ಕಂಡುಬಂದಿಲ್ಲ. ಈ ವೈರಲ್ ವಿಡಿಯೋದಲ್ಲಿ 4 ವಿಭಿನ್ನ ಚಿತ್ರಗಳಿವೆ.

ಇದನ್ನೂ ಓದಿ: ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್

ಭಾರತದಲ್ಲಿ ದಸರಾದಂದು ರಾವಣನನ್ನು ಸುಡುವುದು ಮತ್ತು ದೀಪಾವಳಿಯಂದು ರಾಮಲೀಲಾ ಮಾಡುವುದು ಸಾಮಾನ್ಯವಾಗಿದೆ. ಶ್ರೀಲಂಕಾದ ರಾಜ ರಾವಣನ ಕಿರಿಯ ಸಹೋದರ ಕ್ರಿಸ್ತ ಪೂರ್ವ 5000ರ ಕಾಲದ ಕುಂಭಕರ್ಣನ ಬೃಹತ್ ಖಡ್ಗ ಪತ್ತೆಯಾಗಿದೆ ಎಂದು ಹೇಳುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದು ಕುಂಭಕರ್ಣನ ಖಡ್ಗ ಎಂದು ಹೇಳಲಾಗುತ್ತದೆ. ಕುಂಭಕರ್ಣನು ಶ್ರೀಲಂಕಾದ ರಾಜ ರಾವಣನ ತಮ್ಮನಾಗಿದ್ದ. ಅವನ ವಿವರಣೆಯು ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಕಂಡುಬರುತ್ತದೆ. ಆತ ಅತ್ಯಂತ ಬಲಶಾಲಿಯಾಗಿದ್ದ, ದೈತ್ಯ ಶರೀರಿಯಾಗಿದ್ದ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊ 4 ಸ್ಲೈಡ್‌ಗಳನ್ನು ಹೊಂದಿದ್ದು, ಅದರಲ್ಲಿ ಬೃಹತ್ ಖಡ್ಗ ನೆಲದ ಮೇಲೆ ಬಿದ್ದಿದೆ. ಇದು ಸುರಂಗದ ಒಳಭಾಗದಲ್ಲಿರುವಂತೆ ತೋರುತ್ತಿದೆ, ಅದರ ಬಳಿ ಇಬ್ಬರು ರಕ್ಷಣಾ ಗೇರ್ ಧರಿಸಿ ನಿಂತಿದ್ದಾರೆ. ಮತ್ತೊಂದು ಚಿತ್ರದಲ್ಲಿ, ಮೂವರು ಪುರುಷರು ಬೃಹತ್ ಖಡ್ಗವನ್ನು ನೋಡುತ್ತಿದ್ದಾರೆ. ಅವರ ಮುಖ ಸ್ಪಷ್ಟವಾಗಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ