Viral Video: ಕೊವಿಡ್​ ನಿರ್ಬಂಧಗಳನ್ನು ತಪ್ಪಿಸಲು ವಿಮಾನದಲ್ಲಿ ಮದುವೆಯಾದ ಜೋಡಿ

ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದ್ದಾಗಲೂ ಸಹ ಮದುವೆಗೆ ಸಾಕಷ್ಟು ಜನರು ಬರಬೇಕು ಎಂಬ ಉದ್ದೇಶದಿಂದ ಇಲ್ಲೊಂಡು ಜೋಡಿ ವಿಮಾನದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ.

Viral Video: ಕೊವಿಡ್​ ನಿರ್ಬಂಧಗಳನ್ನು ತಪ್ಪಿಸಲು ವಿಮಾನದಲ್ಲಿ ಮದುವೆಯಾದ ಜೋಡಿ
ವಿಮಾನದಲ್ಲಿ ಮದುವೆಯಾದ ಜೋಡಿ
Follow us
|

Updated on:May 24, 2021 | 12:17 PM

ಮದುವೆ ಅಂದಾಕ್ಷಣ ಜನರು ಕೂಡಿರಬೇಕು. ಅದ್ದೂರಿಯಾಗಿರಬೇಕು. ಅಲ್ಲಲ್ಲಿ ಓಡಾಡುತ್ತಿರುವ ಮಕ್ಕಳು, ರಂಗುರಂಗಿನ ಅಲಂಕಾರ, ಹೊಸ ಬಟ್ಟೆ, ಚಿನ್ನದ ಆಭರಣ ವಿಜೃಂಭಣೆಯ ಅಲಂಕಾರ. ಆದರೀಗ ಕೊರೊನಾ ಮಹಾಮಾರಿ ವ್ಯಾಪಕವಾಗಿ ಜನರ ಆಸೆಗಳನ್ನು ಕಿತ್ತುಕೊಳ್ಳುತ್ತಿದೆ. ಬಹುಬೇಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುವಂತೆ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದೆ. ಅವುಗಳಲ್ಲಿ ಮದುವೆ ಸಮಾರಂಭಕ್ಕೆ ಕಡಿಮೆ ಜನ ಸೇರುವುದೂ ಕೂಡಾ ಒಂದು.

ಇಂತಹ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದ್ದಾಗ ಮದುವೆಗೆ ಸಾಕಷ್ಟು ಜನರು ಬರಬೇಕು ಎಂಬ ಉದ್ದೇಶದಿಂದ ಇಲ್ಲೊಂಡು ಜೋಡಿ ವಿಮಾನದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಮಧುರೈನಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ತಮಗಾಗಿಯೇ ಕಾಯ್ದಿರಿಸಿಕೊಂಡು ವಿಮಾನವು ಮುಧುರೈನ ಮೀನಾಕ್ಷಿ ಅಮ್ಮನ್​ ದೇವಾಲಯದ ಮೇಲೆ ಹಾರಿದಾಗ ವರ ಮಧುವಿಗೆ ತಾಳಿ ಕಟ್ಟಿರುವ ವಿಡಿಯೋ ಸೆರೆಯಾಗಿದೆ. ವಿಮಾನದಲ್ಲಿ ಒಟ್ಟು 161 ಜನರು ಇದ್ದರು. ಅವರಷ್ಟರೂ ಕೂಡಾ ಮದುವೆಗೆಂದು ವಿಮಾನ ಹಾರಾಟದಲ್ಲಿ ಪಾಲ್ಗೊಂಡಿದ್ದರು ಎಂಬುದನ್ನು ವರದಿಯೊಂದು ತಿಳಿಸಿದೆ.

ತಮಿಳುನಾಡಿನಲ್ಲಿ ಕೊರೊನಾ ವೈರಸ್​ ಸೋಂಕಿನ ತೀವ್ರತೆಯಿಂದಾಗಿ ಕರ್ಫ್ಯೂ ಜಾರಿಯಲ್ಲಿದೆ. ಹಾಗೂ ಮದುವೆ ಸಮಾರಂಭಗಳಿಗೆ ಇರುವ ನಿರ್ಬಂಧನೆಗಳನ್ನು ತಪ್ಪಿಸಲು ಮಧುರೈನ ನಿವಾಸಿಗಳಾದ ರಾಕೇಶ್​ ಮತ್ತು ದಕ್ಷಿಣಾ ದಂಪತಿಗಳಿಬ್ಬರು ವಿಮಾನದಲ್ಲಿ ಮದುವೆ ಆಗಲು ನಿರ್ಧರಿಸಿ ಎರಡು ಗಂಟೆಗಳ ಕಾಲ ಆಕಾಶದಲ್ಲೇ ಹಾರಾಡುವಂತೆ ವಿಮಾನವನ್ನು ಬಾಡಿಗೆಗೆ ಖರೀದಿಸಿದ್ದಾರೆ.

‘ಮಧುರೈನ ರಾಕೇಶ್​-ದಕ್ಷಿಣಾ, ಎರಡು ಗಂಟೆಗಳ ಕಾಲ ವಿಮಾನವನ್ನು ಬಾಡಿಗೆಗೆ ಪಡೆದು ಆಕಾಶದಲ್ಲಿ ಮದುವೆಯಾದರು’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಟ್ವಿಟರ್​​ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಗಮನಿಸಿದಂತೆ ಎಲ್ಲರೂ ಕೂಡಾ ಮದುವೆಯ ಸಡಗರದಲ್ಲಿದ್ದರು. ಹೂವಿನ ದಳಗಳಿಂದ ಮಧು-ವರರಿಗೆ ಸ್ವಾಗತ ಕೋರಿದರು. ಆ ಬಳಿಕ ವರ, ಮಧುವಿನ ಕುತ್ತಿಗೆಗೆ ತಾಳಿ ಕಟ್ಟುವ ವಿಡಿಯೋ ಸೆರೆಯಾಗಿದೆ. ವೈರಲ್​ ಆಗುತ್ತಿರುವ ಪೋಸ್ಟ್​ ಇದುವರೆಗೆ 1.6 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ:

 ತನ್ನ ಗರ್ಲ್​​ಫ್ರೆಂಡ್ ಮದುವೆ ನಿಲ್ಲಿಸಲು, ಮುಖ್ಯಮಂತ್ರಿಗೇ ಐಡಿಯಾ ಕೊಟ್ಟ..; ವೈರಲ್​ ಆಯ್ತು ಟ್ವೀಟ್​

ವೈರಲ್​ ವಿಡಿಯೋ; ಕೊರೊನಾ ವೈರಾಣುವಿಗೆ ವಿದಾಯ ಹೇಳುವುದು ಹೇಗೆ? ಇಲ್ಲಿದೆ ನೋಡಿ ತಮಾಷೆ ದೃಶ್ಯ

Published On - 12:14 pm, Mon, 24 May 21

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ