AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಸುರಿಯುವ ಮಳೆಯಲ್ಲಿಯೂ ‘ಅರ್ಥ’ಪೂರ್ಣ ಮಾರ್ಗ ಕಂಡುಕೊಂಡ ಈ ವ್ಯಕ್ತಿ

Earning Sense : ಮಳೆ ಬರುತ್ತಿದೆ ಎಂದು ಎಲ್ಲೋ ಒಂದು ಕಡೆ ಕೈಕಟ್ಟಿ ನಿಲ್ಲಬಹುದಿತ್ತಿಲ್ಲವೆ? ಆದರೆ ಹಾಗೆ ಮಾಡದೆ ಆ ಸಮಯವನ್ನೂ ಹಣಗಳಿಕೆಯ ಉಪಾಯದಂತೆ ಪರಿವರ್ತಿಸಿಕೊಂಡಿದ್ದಾರೆ ಈ ವ್ಯಕ್ತಿ. ವಿಡಿಯೋ ನೋಡಿ.

Viral Video : ಸುರಿಯುವ ಮಳೆಯಲ್ಲಿಯೂ ‘ಅರ್ಥ’ಪೂರ್ಣ ಮಾರ್ಗ ಕಂಡುಕೊಂಡ ಈ ವ್ಯಕ್ತಿ
ಹೇಗಿದೆ ಈ ಉಪಾಯ?
TV9 Web
| Edited By: |

Updated on:Sep 17, 2022 | 1:10 PM

Share

Viral Video : ಇತ್ತೀಚೆಗೆ ಬೆಂಗಳೂರು ಮಳೆಯಿಂದಾಗಿ ಜಲಾವೃತಗೊಂಡಾಗ ಜನರು ಬೀದಿಯಿಂದ ಬೀದಿಗೆ ಸಂಚರಿಸಲು ಟ್ರ್ಯಾಕ್ಟರ್, ಬುಲ್ಡೋಜರ್​ಗಳ ಮೊರೆ ಹೋಗಿರುವ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೀರಿ. ಮಳೆ ಎನ್ನುವುದು ಏನೆಲ್ಲ ಅಪಾಯ, ಉಪಾಯಕ್ಕೆ ನಾಂದಿ ಹಾಡುತ್ತದೆ ಅಲ್ಲವೆ? ಈಗಿಲ್ಲಿ ಈ ವಿಡಿಯೋದಲ್ಲಿರುವ ವ್ಯಕ್ತಿ, ನಿಂತಲ್ಲೇ ಹೀಗೊಂದು ‘ಅರ್ಥ’ಪೂರ್ಣ ಉಪಾಯ ಕಂಡುಕೊಂಡಿದ್ದಾರೆ. ಪಾದಚಾರಿ ಮಹಿಳೆಯರಿಬ್ಬರು ರಸ್ತೆ ದಾಟಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ವ್ಯಕ್ತಿ ಮರದಗಾಡಿಯೊಂದನ್ನು ತರುತ್ತಾರೆ. ಆಗ ಅವರಿಬ್ಬರೂ ಅದರ ಮೇಲೆ ಏರಿ ನಿಲ್ಲುತ್ತಾರೆ. ವ್ಯಕ್ತಿ ಗಾಡಿಯನ್ನು ತಳ್ಳಿ ಅವರನ್ನು ರಸ್ತೆ ದಾಟಿಸಿ, ಅವರಿಂದ ಹಣ ಪಡೆಯುತ್ತಾರೆ. ಇದನ್ನು ನೋಡಿದ ಉಳಿದ ಪಾದಚಾರಿಗಳೂ ಈ ವ್ಯಕ್ತಿಯ ಸಹಾಯ ಪಡೆಯುತ್ತಾ ಹೋಗುತ್ತಾರೆ; ಅನಿವಾರ್ಯತೆಗೆ ತಕ್ಕಂತೆ ಆಲೋಚಿಸುತ್ತಾ ಹೋದಾಗ ಇಂಥ ಕ್ರಿಯಾತ್ಮಕ ಉಪಾಯಗಳು ಖಂಡಿತ ಹೊಳೆಯುತ್ತವೆ ಎನ್ನುವುದಕ್ಕೆ ಮಾದರಿ ಈ ವಿಡಿಯೋ.

To earn money during inconvenience . from Damnthatsinteresting

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಗುರುವಾರದಂದು ಸಾಮಾಜಿಕ ಮಾಧ್ಯಮ, ರೆಡ್ಡಿಟ್‌ನಲ್ಲಿ BAlfonzo ಎಂಬ ಖಾತೆದಾರರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಹರಿಯುವ ನೀರಿನಲ್ಲಿ ಬರಿಗಾಲಿನಲ್ಲಿ ಓಡುತ್ತ ಪಾದಚಾರಿಗಳನ್ನು ಆ ಬದಿಗೆ ತಲುಪಿಸುತ್ತಾರೆ ಈ ವ್ಯಕ್ತಿ. ಪಡೆದ ಹಣವನ್ನಿಟ್ಟುಕೊಳ್ಳಲು ಈತ ಮಾಡಿದ ಉಪಾಯ ಗಮನಿಸಿದಿರಾ?; ಪ್ಲಾಸ್ಟಿಕ್ ಬಾಟಲಿ!

ಈ ವಿಡಿಯೋ ಒಂದು ದಿನದಲ್ಲಿ 55,000 ಕ್ಕೂ ಹೆಚ್ಚು ಮತಗಳನ್ನು ಪಡೆದಿದೆ. 800 ಕ್ಕೂ ಹೆಚ್ಚು ರೆಡ್ಡಿಟ್ ಖಾತೆದಾರರು ಈ ವಿಡಿಯೋ ಮೆಚ್ಚಿಕೊಂಡು ಪ್ರತಿಕ್ರಿಯಿಸಿದ್ದಾರೆ.

‘ವ್ಯವಹಾರದ ಮೊದಲ ನಿಯಮ; ಅಗತ್ಯವನ್ನು ಕಂಡುಕೊಂಡು ಅದರಲ್ಲಿ ತೊಡಗಿಕೊಳ್ಳಿ’ ಎಂದು ಒಬ್ಬರು ಪ್ರತಿಕ್ರಿಯಿಸಿದ್ಧಾರೆ. ಅದಕ್ಕೆ ಪ್ರತಿಯಾಗಿ ಇನ್ನೊಬ್ಬರು, ‘ವ್ಯವಹಾರದ ಎರಡನೇ ನಿಯಮ; ಸಮಸ್ಯೆಯನ್ನು ಸೃಷ್ಟಿಸಿ, ಪರಿಹಾರವನ್ನು ಮಾರಾಟರೂಪಕ್ಕೆ ತಿರುಗಿಸಿಕೊಳ್ಳಿ (ಈ ಪರಿಸ್ಥಿತಿಗೆ ಇದು ಅನ್ವಯಿಸುವುದಿಲ್ಲ)’ ಎಂದಿದ್ದಾರೆ. ಹೀಗೆ ಅನೇಕರು ವ್ಯವಹಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಪ್ರತಿಕ್ರಿಯೆಗಳ ಮೂಲಕ ಪ್ರಸ್ತಾಪಿಸುತ್ತಾ ಚರ್ಚಿಸಿರುವುದು ಆಸಕ್ತಿಕರವಾಗಿದೆ.

ಮೈಚಳಿಬಿಟ್ಟರೆ ಬದುಕಲು ನೂರೆಂಟು ಉಪಾಯಗಳು!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:05 pm, Sat, 17 September 22

ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್