ಫೆಬ್ರವರಿ 14ರಂದು ವಿಶ್ವದಾದ್ಯಂದ ಪ್ರೇಮಿಗಳ ದಿನ(Valentine’s Day) ವನ್ನಾಗಿ ಆಚರಿಸಲಾಗುತ್ತದೆ. ಆದರೆ ಪ್ರೇಮಿಗಳ ದಿನದ ಬದಲು ಹುತಾತ್ಮ ಯೋಧರ ಸ್ಮರಣ ದಿನ (Pulwama attack) ವನ್ನಾಗಿ ಆಚರಿಸಬೇಕೆಂದು ಆಗ್ರಹಿಸಿ ಪ್ರತಿ ವರ್ಷ ಸೈಕಲ್ ಯಾತ್ರೆಯನ್ನು ಆಂಧ್ರಪ್ರದೇಶದ ಒಂಗೋಲೆಯ ಯುವಕ ಕೀರ್ತಿನಾಯ್ಡು ಮುಂದುವರಿಸುತ್ತಾ ಬಂದಿದ್ದಾರ. ಈ ವರ್ಷ ಒಂಗೋಲ್ ನಿಂದ ಕನ್ಯಾಕುಮಾರಿಗೆ ಇಂದಿನಿಂದ(ಫೆ.06) ಸೈಕಲ್ ಯಾತ್ರೆ ಆರಂಭಿಸಿದ್ದು, ಫೆಬ್ರವರಿ 14 ರೊಳಗೆ ಕನ್ಯಾಕುಮಾರಿ ತಲುಪಿ ಭಾರತದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸೈಕಲ್ ಸವಾರಿ ಮಾಡುತ್ತಾನೆ. 14 ಫೆಬ್ರವರಿ 2019 ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮಡಿದ ಭಾರತೀಯ ಸೈನಿಕರ ಗೌರವಾರ್ಥ ಈ ಯಾತ್ರೆ ಮಾಡುತ್ತಿದ್ದೇನೆ ಎಂದು ಕೀರ್ತಿ ನಾಯ್ಡು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನೋಡಲು ತುಕ್ಕು ಹಿಡಿದಂತಿರುವ ಈ ಬೆಲ್ಟ್ನ ಬೆಲೆ ಕೇಳಿದ್ರೆ ನೀವು ಶಾಕ್ ಆಗುವುದಂತೂ ಖಂಡಿತಾ!
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Tue, 6 February 24