Valentine's Day

Valentine's Day

ಪ್ರತಿ ವರ್ಷ ಫೆಬ್ರವರಿ 14ರಂದು ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್ ಡೇ ಇತಿಹಾಸವು ಬಹಳ ಹಿಂದಿನದ್ದು. ಈ ಪ್ರೇಮಿಗಳ ದಿನಾಚರಣೆ ಈಗ ಚುಂಬನ, ಉಡುಗೊರೆಗಳು ಮತ್ತು ಡಿನ್ನರ್​ಗೆ ಜನಪ್ರಿಯವಾಗುತ್ತಿದೆ. ಪ್ರೇಮಿಗಳಿಗಾಗಿ ಇರುವ ದಿನ ಈ ವ್ಯಾಲೆಂಟೈನ್ಸ್ ಡೇ. ಈ ದಿನವನ್ನು ಪ್ರೇಮಿಗಳ ತಮ್ಮ ಪ್ರೇಮ ನಿವೇದನೆಗೆ, ಸಂಗಾತಿಗೆ ಸರ್​ಪ್ರೈಸ್ ನೀಡಲು, ಅವರೊಂದಿಗೆ ತಮ್ಮ ದಿನವನ್ನು ಕಳೆಯಲು ಬಳಸಿಕೊಳ್ಳುತ್ತಾರೆ. 5ನೇ ಶತಮಾನದ ಕೊನೆಯಲ್ಲಿ ಪೋಪ್ ಗೆಲಾಸಿಯಸ್ ಫೆಬ್ರವರಿ 14 ಸೇಂಟ್ ವ್ಯಾಲೆಂಟೈನ್ಸ್ ಡೇ ಎಂದು ಘೋಷಿಸಿದರು. ಅಂದಿನಿಂದ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಇದು ಕೇವಲ ಪ್ರೇಮಿಗಳಿಗೆ ಮೀಸಲಾಗಿರುವ ದಿನವೆಂದು ಪರಿಗಣಿಸುವುದಕ್ಕಿಂತಲೂ ಪೋಷಕರು, ಸ್ನೇಹಿತರು ಎಲ್ಲರೂ ತಾವು ಪ್ರೀತಿಸುವ ಜೀವಕ್ಕೆ ಶುಭಾಶಯ ಕೋರುವ ದಿನವೆಂದು ಪರಿಗಣಿಸುವುದು ಹೆಚ್ಚು ಸೂಕ್ತ. ಈ ಪ್ರೇಮಿಗಳ ದಿನವನ್ನು ಆಚರಿಸಲು ಕರ್ನಾಟಕ ಸೇರಿದಂತೆ ಹಲವೆಡೆ ಪ್ರತಿ ವರ್ಷ ಭಾರೀ ವಿರೋಧ ವ್ಯಕ್ತವಾಗುತ್ತದೆ. ಆದರೂ ಹಲವು ರೆಸ್ಟೋರೆಂಟ್​ಗಳು, ರೆಸಾರ್ಟ್, ಪ್ರವಾಸಿ ತಾಣಗಳು, ಶಾಪಿಂಗ್ ಮಾಲ್​ಗಳು ಪ್ರೇಮಿಗಳ ದಿನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುತ್ತವೆ.

ಇನ್ನೂ ಹೆಚ್ಚು ಓದಿ

ಇನ್ನು ಮುಂದೆ ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನ ಅಲ್ಲವಂತೆ! ಮತ್ತಿನ್ನೇನು ಗೊತ್ತಾ?

ಗೋವುಗಳ ಉಚ್ಚ್ವಾಸ -ನಿಚ್ಛ್ವಾಸ ನಮ್ಮ ಶ್ವಾಸಕ್ಕೆ ತಂಗಾಳಿಯಾಗಿ ಸಂಗಾತಿಯಾದರೆ .. ನಮ್ಮ ಉಸಿರಿನ ಮೂಲಕ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿ ಹೋಗಲಾಡಿಸುತ್ತದೆ, ಮನಸ್ಸು ಶಾಂತವಾಗಿರುತ್ತದೆ ಎಂದು ‘ಅಖಿಲ ಭಾರತ ಗೋ ಸೇವಾ ಪ್ರತಿಷ್ಠಾನ’ ಸಂಸ್ಥೆಯ ಬಾಲಕೃಷ್ಣಗೌಡ ಹೇಳಿದರು.

Anti-Valentine’s Week 2024: ಕಪಾಳಮೋಕ್ಷದ ದಿನದಿಂದ ಬ್ರೇಕಪ್ ದಿನದವರೆಗೆ; ಪ್ರೇಮವಿರೋಧಿ ವಾರವಿದು

ಫೆಬ್ರವರಿ ಪ್ರೀತಿಯ ತಿಂಗಳು. ಈ ಫೆಬ್ರವರಿಯಲ್ಲಿ 7ನೇ ತಾರೀಖಿನಿಂದ 14ರವರೆಗೆ ಪ್ರೇಮಿಗಳ ವಾರವೆಂದೇ ಆಚರಿಸಲಾಗುತ್ತದೆ. ಆದರೆ, ಫೆ. 14ರಂದು ಪ್ರೇಮಿಗಳ ದಿನಾಚರಣೆ ಮುಗಿದ ತಕ್ಷಣ ಪ್ರೇಮ ವಿರೋಧಿ ವಾರ ಶುರುವಾಗುತ್ತದೆ. ಯಾಕೆ ಈ ಆಚರಣೆ? ಯಾವ್ಯಾವ ದಿನ ಏನನ್ನು ಆಚರಿಸುತ್ತಾರೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಹೇಗಿತ್ತು ರಾಧಿಕಾ ಪಂಡಿತ್ ವ್ಯಾಲೆಂಟೈನ್ಸ್ ಡೇ? ಫೋಟೋಗಳಲ್ಲಿ ವಿವರಿಸಿದ ನಟಿ

ವಿಶೇಷ ದಿನಗಳಲ್ಲಿ ಪತಿ ಯಶ್ ಜೊತೆ ಇರೋಕೆ ಬಯಸುತ್ತಾರೆ ರಾಧಿಕಾ ಪಂಡಿತ್. ಅದೇ ರೀತಿ ಅವರು ವ್ಯಾಲೆಂಟೈನ್ಸ್​ ಡೇ ದಿನ ಪತಿ ಹಾಗೂ ಮಕ್ಕಳ ಜೊತೆ ಮಧ್ಯಾಹ್ನದ ಊಟಕ್ಕೆ ತೆರಳಿದ್ದಾರೆ. ಈ ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ. ರಾತ್ರಿಯೂ ಸೆಲೆಬ್ರೇಷನ್ ನಡೆದಿದೆ.

Viral Video: ಪ್ರೇಮಿಗಳ ದಿನದಂದು ಮಧುವಣಗಿತ್ತಿಯಂತೆ ಸಿಂಗಾರಗೊಂಡ ಓಯೋ…

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವು ದೃಶ್ಯಗಳು ಭಾವನಾತ್ಮಕವಾಗಿದ್ದರೆ, ಇನ್ನೂ ಕೆಲವು ವಿಡಿಯೋಗಳು ಹಾಸ್ಯಮಯವಾಗಿರುತ್ತದೆ. ಸದ್ಯ ಇದೇ ರೀತಿ ಇಲ್ಲೊಂದು ವಿಡಿಯೋ ಹರಿದಾಡುತ್ತಿದ್ದು, ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಂಡ ಓಯೋ ರೂಮ್ ಒಂದರ ವಿಡಿಯೋ ತುಣುಕನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

ಪ್ರೇಮಿಗಳ ದಿನಕ್ಕೆ ಸಾಯಿ ಪಲ್ಲವಿ, ನಾಗ ಚೈತನ್ಯ ವಿಶೇಷ ವಿಡಿಯೋ; ಮದುವೆ ಆಗಲು ಫ್ಯಾನ್ಸ್​ ಒತ್ತಾಯ

ಎರಡನೇ ಬಾರಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಅವರು ಜೋಡಿಯಾಗಿ ನಟಿಸುತ್ತಿದ್ದಾರೆ. ರಿಯಲ್​ ಲೈಫ್​ನಲ್ಲಿಯೂ ಅವರು ಜೋಡಿಯಾಗಬೇಕು ಎಂಬುದು ಅಭಿಮಾನಿಗಳ ಆಸೆ. ಫ್ಯಾನ್ಸ್ ಆಸೆಗೆ ನೀರೆರೆಯುವ ರೀತಿಯಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಅವರು ಪ್ರೇಮಿಗಳ ದಿನದಂದು ವಿಶೇಷವಾದ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

Valentine’s day 2024: ಪ್ರೀತಿಯ ಜಲಧಾರೆ ನೀನು, ನಮ್ಮ ಪ್ರೀತಿ ಶುರುವಾಗಿ ಇಂದಿಗೆ ಆರು ವರ್ಷ

ಒಂಥರಾ ಮುಂಗಾರು ಮಳೆಯಂತೆ ನಮ್ಮ ಪ್ರೀತಿ ಒಮ್ಮೆ ಖುಷಿಯಾಗಿ ಹೃದಯ ಹೂವಾದರೆ, ಮತ್ತೊಮ್ಮೆ ಅತ್ತು ಕಲ್ಲಾಗುತ್ತೆ ನೆನಪುಗಳು ಕಾಡಿ ಬೇಡಿದರೂ ಕೊನೆಗೇ ಕಣ್ಣಿರಾಗಿ ಮೌನದಿಂದ ಮುಕ್ತಾಯವಾಗುತ್ತವೆ. ಆದರೂ ಬರೆದೆ ನಾನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ.

21 ವರ್ಷದ ಹಿಂದೆ ಪ್ರಿಯಕರ ಕೊಟ್ಟ ಹೂವು​ ಜೆನಿಲಿಯಾ ಬಳಿ ಇನ್ನೂ ಹೇಗಿದೆ ನೋಡಿ..

ಪ್ರೇಮಿಗಳ ದಿನದ ಈ ಸಂದರ್ಭದಲ್ಲಿ ಸಿನಿಮಾ ತಾರೆಯರ ಪ್ರೀತಿ-ಪ್ರೇಮದ ಬಗ್ಗೆ ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಜೆನಿಲಿಯಾ ಡಿಸೋಜಾ ಮತ್ತು ರಿತೇಶ್​ ದೇಶಮುಖ್​ ಅವರ ಲವ್​​ಸ್ಟೋರಿಯನ್ನೂ ನೆನಪಿಸಿಕೊಳ್ಳಲಾಗುತ್ತಿದೆ. ಜೆನಿಲಿಯಾಗೆ 21 ವರ್ಷಗಳ ಹಿಂದೆ ರಿತೇಶ್​ ಅವರು ನೀಡಿದ್ದ ಅತ್ಯಮೂಲ್ಯವಾದ ಗಿಫ್ಟ್​ನ ಫೋಟೋ ಈಗ ಮತ್ತೆ ವೈರಲ್​ ಆಗುತ್ತಿದೆ.

ಉಡುಪಿ ನಾಲ್ವರ ಹತ್ಯೆ ಪ್ರಕರಣ: ಹತ್ಯೆಗೆ ನಿಖರ ಕಾರಣ ಬಿಚ್ಚಿಟ್ಟ ಹಂತಕ ಪ್ರವೀಣ, ಭಯಾನಕ ಸಂಗತಿಗಳು ಬಹಿರಂಗ

ಇಂದು ಪ್ರೇಮಿಗಳ ದಿನ ಉಡುಪಿಯಲ್ಲಿ ನಡೆದ ಬರ್ಬರ ಹತ್ಯೆ ಪ್ರಕರಣ ಬಗ್ಗೆ ಅನೇಕ ಭಯಾನಕ ಅಂಶ ಬಯಲಿಗೆ ಬಂದಿವೆ. ಅಯ್ನಾಜ್ ಜೊತೆ ಪ್ರವೀಣನಿಗೆ ಇದ್ದ ಸಂಬಂಧ ಸಹೋದರಿ ಅಫ್ನಾನ್ ಗೆ ಗೊತ್ತಿತ್ತು. ಹಾಗಾಗಿ ಅವರಿಬ್ಬರನ್ನೂ ಕೊಲೆ ಮಾಡಲು ಪ್ಲಾನ್ ಹಾಕಿಕೊಂಡು ಬಂದಿದ್ದ ಪ್ರವೀಣ್ ಚೌಗುಲೆ. ಆರೋಪಿ ಪ್ರವೀಣ್ ಚೌಗುಲೆ ಸ್ನ್ಯಾಪ್ ಚಾಟ್ ಮೂಲಕ ಅಯ್ನಾಜ್ ಮನೆಯ ವಿಳಾಸ ತಿಳಿದುಕೊಂಡು ಸೀದಾ ಆಕೆಯ ಮನಗೆ ಎಂಟ್ರಿ ಕೊಟ್ಟಿದ್ದ. ಮೊಬೈಲ್ flight modeಗೆ ಹಾಕಿ ತನ್ನ ಮನೆಯಲ್ಲಿಟ್ಟು ಅಯ್ನಾಜ್​​ ಮನೆಗೆ ಬಂದಿದ್ದ.

Valentine’s day 2024: ಜಾತಿ, ಅಂತಸ್ತು ನನ್ನ ಪ್ರೀತಿಗೆ ಮುಳುವಾಯ್ತು

ಪ್ರೀತಿ ಪ್ರೇಮ ಅನ್ನೋದು ಸಿನಿಮಾಗಷ್ಟೇ ಸರಿ ಅನ್ನೋದನ್ನ ತಿಳಿಸೋಕೆ ಬದುಕಿನಲ್ಲಿ ಬಹುದೊಡ್ಡ ಬೆಲೆನೇ ತರುವಂತೆ ಮಾಡಿದ್ಯ. ನನಗೆ ಗೊತ್ತಿದೆ ಈ ಪತ್ರ ನೀನು ಓದಲ್ಲ ಅಂತಾ, ಮನದಲ್ಲೇ ಉಳಿದ ಮಾತುಗಳು ಹೇಳದೆ ಹೋದ್ರೆ, ಅದರ ನೋವು ಕೂಡ ನನಗೇನೆ. ಮುಂದೆ ಹೇಳೋದು ಏನಿಲ್ಲ ಲೋಕದ ಎಲ್ಲ ಸಿಹಿಯನ್ನ ನೀನೇ ಅನುಭವಿಸು.

Valentineʼs day 2024: ರಾಧೆ ಮತ್ತು ಕೃಷ್ಣನ ನಡುವೆ ಪ್ರೇಮಾಂಕುರವಾಗಿದ್ದು ಹೇಗೆ? ಅವರ ಪ್ರೇಮವೇ ಮನುಕುಲಕ್ಕೆ ಸ್ಪೂರ್ತಿ

Radha Krishna: ಕೃಷ್ಣನಿಗೆ ಅನೇಕ ಗೋಪಿಯರು ಮತ್ತು ಹೆಂಡತಿಯರಿದ್ದರು, ಆದರೆ ಅವರೆಲ್ಲರ ಪೈಕಿ ರಾಧೆ ಕೃಷ್ಣನ ಮನದರಸಿ, ಆತನ ಹೃದಯದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡವಳು. ಪ್ರೀತಿ ದೈಹಿಕವಾಗಿರುವುದಕ್ಕಿಂತ ಶುದ್ಧ ಮತ್ತು ನಿಸ್ವಾರ್ಥ ಮನಸ್ಸಿನಲ್ಲಿರಬೇಕೆಂದು ಅವರು ನಂಬಿದ್ದರು. ಪ್ರೇಮದ ಮೇಲಿನ ಬದ್ಧತೆಯನ್ನು ಜಗತ್ತಿಗೆ ಸಂವಹನ ಮಾಡಿದರು. ಇಂತಹ ಪ್ರೀತಿಯೇ ಯುವ ಜನರಿಗೆ ಪ್ರೇರಣೆಯಾಗಬೇಕು.

ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ