Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine's Day

Valentine's Day

ಪ್ರತಿ ವರ್ಷ ಫೆಬ್ರವರಿ 14ರಂದು ಜಗತ್ತಿನಾದ್ಯಂತ ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ವ್ಯಾಲೆಂಟೈನ್ಸ್ ಡೇ ಇತಿಹಾಸವು ಬಹಳ ಹಿಂದಿನದ್ದು. ಈ ಪ್ರೇಮಿಗಳ ದಿನಾಚರಣೆ ಈಗ ಚುಂಬನ, ಉಡುಗೊರೆಗಳು ಮತ್ತು ಡಿನ್ನರ್​ಗೆ ಜನಪ್ರಿಯವಾಗುತ್ತಿದೆ. ಪ್ರೇಮಿಗಳಿಗಾಗಿ ಇರುವ ದಿನ ಈ ವ್ಯಾಲೆಂಟೈನ್ಸ್ ಡೇ. ಈ ದಿನವನ್ನು ಪ್ರೇಮಿಗಳ ತಮ್ಮ ಪ್ರೇಮ ನಿವೇದನೆಗೆ, ಸಂಗಾತಿಗೆ ಸರ್​ಪ್ರೈಸ್ ನೀಡಲು, ಅವರೊಂದಿಗೆ ತಮ್ಮ ದಿನವನ್ನು ಕಳೆಯಲು ಬಳಸಿಕೊಳ್ಳುತ್ತಾರೆ. 5ನೇ ಶತಮಾನದ ಕೊನೆಯಲ್ಲಿ ಪೋಪ್ ಗೆಲಾಸಿಯಸ್ ಫೆಬ್ರವರಿ 14 ಸೇಂಟ್ ವ್ಯಾಲೆಂಟೈನ್ಸ್ ಡೇ ಎಂದು ಘೋಷಿಸಿದರು. ಅಂದಿನಿಂದ ಫೆಬ್ರವರಿ 14ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಇದು ಕೇವಲ ಪ್ರೇಮಿಗಳಿಗೆ ಮೀಸಲಾಗಿರುವ ದಿನವೆಂದು ಪರಿಗಣಿಸುವುದಕ್ಕಿಂತಲೂ ಪೋಷಕರು, ಸ್ನೇಹಿತರು ಎಲ್ಲರೂ ತಾವು ಪ್ರೀತಿಸುವ ಜೀವಕ್ಕೆ ಶುಭಾಶಯ ಕೋರುವ ದಿನವೆಂದು ಪರಿಗಣಿಸುವುದು ಹೆಚ್ಚು ಸೂಕ್ತ. ಈ ಪ್ರೇಮಿಗಳ ದಿನವನ್ನು ಆಚರಿಸಲು ಕರ್ನಾಟಕ ಸೇರಿದಂತೆ ಹಲವೆಡೆ ಪ್ರತಿ ವರ್ಷ ಭಾರೀ ವಿರೋಧ ವ್ಯಕ್ತವಾಗುತ್ತದೆ. ಆದರೂ ಹಲವು ರೆಸ್ಟೋರೆಂಟ್​ಗಳು, ರೆಸಾರ್ಟ್, ಪ್ರವಾಸಿ ತಾಣಗಳು, ಶಾಪಿಂಗ್ ಮಾಲ್​ಗಳು ಪ್ರೇಮಿಗಳ ದಿನಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುತ್ತವೆ.

ಇನ್ನೂ ಹೆಚ್ಚು ಓದಿ

ರಶ್ಮಿಕಾ ಮಂದಣ್ಣಗೆ ಗುಲಾಬಿ ಹೂವು ನೀಡಿದ ಪ್ರೇಮಿ: ಆ ವ್ಯಕ್ತಿ ಮೇಲೆ ಎಲ್ಲರ ಅನುಮಾನ

ರೋಸ್ ಕೊಟ್ಟಿದ್ದಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖದಲ್ಲಿ ನಗು ಮೂಡಿದೆ. ಹೂ ಗುಚ್ಛದ ಫೋಟೋವನ್ನು ರಶ್ಮಿಕಾ ಅವರು ಬಹಳ ಖುಷಿಯಿಂದ ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಈ ರೋಸ್ ನೀಡಿರಬಹುದು ಎಂಬುದು ಬಹುತೇಕರ ಅನುಮಾನ. ಯಾಕೆಂದರೆ ಅವರಿಬ್ಬರ ಬಗ್ಗೆ ಮೊದಲಿನಿಂದಲೂ ಗಾಸಿಪ್ ಇದೆ.

Viral Video: ತನ್ನ ಗೆಳೆಯನ ಜತೆ ಬೇರೆ ಹುಡುಗಿಯನ್ನು ನೋಡಿ, ಮೆಟ್ರೋ ನಿಲ್ದಾಣದಲ್ಲೇ ಜಗಳವಾಡಿದ ಯುವತಿ

ಪ್ರೇಮಿಗಳ ದಿನದಂದು ತನ್ನ ಜತೆ ಇರಬೇಕಿದ್ದ ಗೆಳೆಯ ಬೇರೆ ಹುಡುಗಿಯ ಜತೆ ಇರುವುದನ್ನು ನೋಡಿ ಸಹಿಸಲಾಗದ ಯುವತಿ ಮೆಟ್ರೋ ನಿಲ್ದಾಣದಲ್ಲಿಯೇ ಆತನಿಗೆ ಕ್ಲಾಸ್ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ. ಗೆಳೆಯನ ಬಗ್ಗೆ ಹತ್ತಾರು ಕನಸುಗಳನ್ನು ಕಂಡಿದ್ದ ಆಕೆ ತನಗೆ ಪ್ರೇಮಿಗಳ ದಿನದ ಶುಭಾಶಯ ತಿಳಿಸಬಹುದು ಎಂದು ಕಾದಿದ್ದಳು ಆದರೆ ಆತ ಬೇರೊಂದು ಹುಡುಗಿ ಜತೆ ಬ್ಯುಸಿಯಾಗಿದ್ದ. ಮೆಟ್ರೋ ನಿಲ್ದಾಣದ ಪ್ಲಾಟ್​ಫಾರಂನಲ್ಲಿ ನಿಂತಿರುವಾಗ ಆಕೆಯ ಕಣ್ಣಿಗೆ ಅಚಾನಕ್ಕಾಗಿ ಆತ ಬಿದ್ದಿದ್ದಾನೆ, ಜತೆಗೆ ಹುಡುಗಿಯೂ ಇರುವುದನ್ನು ನೋಡಿದ ಆಕೆಗೆ ಬೇಸರ ಉಂಟಾಗಿತ್ತು, ಕೂಡಲೇ ಆತನ ಬಳಿ ಹೋಗಿ ಜಗಳವಾಡಿದ್ದಾಳೆ.

ಪ್ರೇಮಿಗಳ ದಿನ: ಜೈಲಿನಿಂದಲೇ ನಟಿಗೆ ಪ್ರೈವೇಟ್ ಜೆಟ್​ ಉಡುಗೊರೆ ನೀಡಿದ ವಂಚಕ ಸುಕೇಶ್

ಸುಕೇಶ್ ಚಂದ್ರಶೇಖರ್​ ವಂಚನೆ ಕೇಸ್​ನಲ್ಲಿ ಜೈಲು ಸೇರಿದ್ದರೂ ಕೂಡ ಅಲ್ಲಿಂದಲೇ ಜಾಕ್ವೆಲಿನ್ ಫರ್ನಾಂಡಿಸ್​ಗೆ ಪತ್ರ ಬರೆಯುತ್ತಿದ್ದಾನೆ. ಪ್ರೇಮಿಗಳ ದಿನಕ್ಕೆ ಒಂದು ಸ್ಪೆಷಲ್ ಪತ್ರ ಕಳಿಸಿದ್ದಾನೆ. ಅದರಲ್ಲಿ ವಿಶೇಷವಾದ ಗಿಫ್ಟ್ ಬಗ್ಗೆ ಬರೆದಿದ್ದಾನೆ. ಜಾಕ್ವೆಲಿನ್ ಫರ್ನಾಂಡಿಸ್​ಗೆ ಪ್ರೈವೇಟ್ ಜೆಟ್ ಉಡುಗೊರೆಯಾಗಿ ನೀಡುತ್ತಿದ್ದೇನೆ ಎಂದು ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ.

ಮತ್ತೆ ಪ್ರೀತಿಯಲ್ಲಿ ಬಿದ್ದ ಸಮಂತಾ; ಪ್ರೇಮಿಗಳ ದಿನವೇ ಫೋಟೋ ಬಹಿರಂಗ

ನಟಿ ಸಮಂತಾ ರುತ್ ಪ್ರಭು ಅವರು ವಿಚ್ಛೇದನ ಪಡೆದ ಬಳಿಕ ಸಿಂಗಲ್ ಆಗಿದ್ದರು. ಆದರೆ ಈಗ ಅವರಿಗೆ ಮತ್ತೆ ಪ್ರೀತಿ ಉಂಟಾಗಿದೆ. ಪ್ರೇಮಿಗಳ ದಿನವೇ (ಫೆ.14) ಅವರು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿದರೆ ಸಮಂತಾ ಅವರು ಲವ್​ನಲ್ಲಿ ಮುಳುಗಿದ್ದಾರೆ ಎಂಬುದು ಖಚಿತ ಆಗುತ್ತಿದೆ.

ನಂದಿಗಿರಿಧಾಮದಲ್ಲಿ ಜೋಡಿ ಹಕ್ಕಿಗಳ ಕಲರವ: ಪೊಲೀಸರನ್ನ ಕಂಡು ಪೊದೆಯಿಂದ ಬಂದ ಪ್ರೇಮಿಗಳು

ಪ್ರೇಮಿಗಳು ವ್ಯಾಲೆಂಟೈನ್ಸ್ ಡೇ ಆಚರಿಸಲು ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ಭೇಟಿ ನೀಡಿದ್ದರು. ನಂದಿಗಿರಿಯ ಸುಂದರವಾದ ವಾತಾವರಣದಲ್ಲಿ ಪ್ರೇಮಿಗಳು ಸ್ವಚ್ಛಂದವಾಗಿ ತಮ್ಮ ಪ್ರೇಮವನ್ನು ವ್ಯಕ್ತಪಡಿಸಿದರು. ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರೂ, ಕೆಲವು ಜೋಡಿಗಳು ಸಾರ್ವಜನಿಕವಾಗಿಯೇ ಯಾರ ಅಂಜಿಕೆ ಅಳುಕು ಇಲ್ಲದೆ ಕಿಸ್ಸಿಂಗ್ ಮಾಡಿರುವಂತಹ ಘಟನೆ ನಡೆದಿದೆ.

ಡೇಟಿಂಗ್‌ ವೇಳೆ ಕೊಟ್ಟ ಗಿಫ್ಟ್‌ ಬಗ್ಗೆ ಕೇವಲವಾಗಿ ಮಾತನಾಡಿದ ಪ್ರೇಯಸಿ; ಕೋಪದಲ್ಲಿ ಸಂಬಂಧವನ್ನೇ ಮುರಿದುಕೊಂಡ ಯುವಕ

ಸೋಷಿಯಲ್‌ ಮೀಡಿಯಾದಲ್ಲಿ ಬಳಕೆದಾರರು ತಮ್ಮ ದೈನಿಂದಿನ ಜೀವನದಲ್ಲಿ ನಡೆಯುವ ಕೆಲವೊಂದು ಖುಷಿಯ ವಿಚಾರಗಳು ಹಾಗೂ ಬೇಸರದ ಸಂಗತಿಯ ಬಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ರು ಬಳಕೆದಾರರು ತಮ್ಮ ಬ್ರೇಕಪ್‌ ಸ್ಟೋರಿಯನ್ನು ಶೇರ್‌ ಮಾಡಿದ್ದಾರೆ. ಡೇಟಿಂಗ್‌ ಹೋದಾಗ ಕೊಟ್ಟ ಉಡುಗೊರೆಯ ಬಗ್ಗೆ ಪ್ರೇಯಸಿ ಅಸಮಾಧಾನ ವ್ಯಕ್ತಪಡಿಸಿದಳೆಂದು, ಈ ವ್ಯಕ್ತಿ ಈಕೆಯ ಸಹವಾಸವೇ ಬೇಡವೆಂದು ಬ್ರೇಕಪ್‌ ಮಾಡಿಕೊಂಡಿದ್ದು, ಈ ಕುರಿತ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ವ್ಯಾಲೆಂಟೈನ್ಸ್ ಡೇಗೆ ಬಾಡಿಗೆ ಬಾಯ್ ಫ್ರೆಂಡ್: ಬೆಂಗಳೂರಿನಲ್ಲಿ ಸಂಚನ ಮೂಡಿಸಿದ QR ಕೋಡ್​​

ಫೆಬ್ರವರಿ 14 ಇಂದು ಪ್ರೇಮಿಗಳ ದಿನ. ಪ್ರೇಮಿಗಳು ಇವತ್ತು ಪ್ರೇಮೋಲ್ಲಾಸದಲ್ಲಿದ್ದಾರೆ. ತಮ್ಮ ದಿನವನ್ನ ಸ್ವಂತವಾಗಿಸಿಕೊಳ್ಳಲು ಪ್ರೇಮ ಲೋಕಕ್ಕೆ ಜಾರಿದ್ದಾರೆ. ಇನ್ನೂ ಕೆಲವರು ಸಂಗಾತಿ ಇಲ್ಲದೇ ನಮಗೆ ಯಾರು ಬೀಳ್ತಾರೆ ಗುರು ಎಂದು ಕೊರಗುತ್ತಿದ್ದಾರೆ. ಅವರಲ್ಲಿ ಹುಡುಗ, ಹುಡುಗಿ ಇಬ್ಬರೂ ಸೇರಿದ್ದಾರೆ. ವಿಷಯ ಹೀಗಿರುವಾಗ ಬೆಂಗಳೂರಿನಲ್ಲಿ ಬಾಡಿಗೆಗೆ‌ ಬಾಯ್ ಫ್ರೆಂಡ್ ಪೋಸ್ಟ್​ರ್​ ಭಾರೀ ಸಂಚಲನ ಮೂಡಿಸಿದೆ. ಹಾಗಾದ್ರೆ, ಈ ಕ್ಯೂರ್​ ಕೋಡ್​ನ ಅಸಲಿಯತ್ತು ಏನು?

Valentines Day 2025: ಫೆ 14ರಂದೇ ಪ್ರೇಮಿಗಳ ದಿನ ಆಚರಿಸುವುದರ ಹಿಂದಿದೆ ಈ ಕಾರಣ, ಇಲ್ಲಿದೆ ಮಾಹಿತಿ

Valentine's Week 2025: ಫೆಬ್ರವರಿ 14 ಪ್ರೇಮಿಗಳ ದಿನ. ಹೌದು, ವ್ಯಾಲೆಂಟೈನ್ಸ್‌ ಡೇ ಪ್ರೇಮಿಗಳಿಗೆ ಹಬ್ಬವೇ ಸರಿ. ಇಷ್ಟ ಪಡುವ ಮನಸ್ಸನ್ನು ಖುಷಿ ಪಡಿಸಲು ಯುವಕ ಯುವತಿಯರು ಕಾಯುವ ದಿನ. ಹೆಚ್ಚಿನವರು ದುಬಾರಿ ಬೆಲೆಯ ಗಿಫ್ಟ್, ಡಿನ್ನರ್, ಟ್ರಿಪ್ ಎಂದೆಲ್ಲಾ ಪ್ಲಾನ್ ಮಾಡಿಕೊಂಡು ಪ್ರೇಮಿಗಳ ದಿನವನ್ನು ವಿಭಿನ್ನವಾಗಿ ಆಚರಿಸಿಕೊಳ್ಳುತ್ತಾರೆ. ಹಾಗಾದ್ರೆ ಪ್ರೇಮಿಗಳಿಗೆ ಮೀಸಲಾಗಿರುವ ಈ ದಿನದ ಆಚರಣೆ ಶುರುವಾದದ್ದು ಯಾವಾಗ? ಏನಿದರ ಇತಿಹಾಸ ಹಾಗೂ ಮಹತ್ವ? ಎನ್ನುವ ಮಾಹಿತಿ ಇಲ್ಲಿದೆ

Valentine’s Day Gift Ideas: ವ್ಯಾಲೆಂಟೈನ್ಸ್ ಡೇಗೆ ನಿಮ್ಮ ಸಂಗಾತಿಗೆ ಈ ರೀತಿಯ ಉಡುಗೊರೆ ನೀಡಿ

Valentine’s Week 2025: ವ್ಯಾಲೆಂಟೈನ್ಸ್ ದಿನ ನಿಮ್ಮ ಸಂಗಾತಿ ಯಾವ ರೀತಿಯ ವಸ್ತುಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಿಮ್ಮ ಬಳಿ ಇರುವ ಹಣದಲ್ಲಿ ಆ ಉಡುಗೊರೆಯನ್ನು ಕೊಂಡುಕೊಳ್ಳಬಹುದಾ ಎಂದು ಲೆಕ್ಕಾಚಾರ ಹಾಕಿಕೊಳ್ಳಿ. ಸಾಮಾನ್ಯವಾಗಿ ಹುಡುಗಿಯರಿಗೆ ಬಟ್ಟೆ, ಮೇಕಪ್ ಕಿಟ್, ವಿವಿಧ ರೀತಿಯ ಅಲಂಕಾರಿಕ ವಸ್ತುಗಳು ಇಷ್ಟವಾಗುತ್ತದೆ. ಅದೇ ರೀತಿ ಹುಡುಗರಿಗೆ ವಾಚ್, ಬಟ್ಟೆ, ಎಲೆಕ್ಟ್ರಾನಿಕ್ ಸಾಮಗ್ರಿಗಳು ಇಷ್ಟವಾಗುತ್ತದೆ. ಹಾಗಾಗಿ ನಿಮ್ಮ ಸಂಗಾತಿ ಯಾವ ರೀತಿಯ ವಸ್ತುಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಇದರ ಹೊರತಾಗಿ ಕೆಲವು ಗಿಫ್ಟ್ ಐಡಿಯಾಗಳು ಇಲ್ಲಿವೆ.

ಆ ಒಂದು ಘಟನೆಯಿಂದ ಡಾರ್ಲಿಂಗ್ ಕೃಷ್ಣ ಪ್ರೀತಿಗೆ ಓಕೆ ಎಂದಿದ್ದ ಮಿಲನಾ ನಾಗರಾಜ್

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಪ್ರೇಮಕಥೆ ಚರ್ಚಿಸೋಣ. 2012ರಲ್ಲಿ ಪರಿಚಯವಾದ ಇವರ ಮಧ್ಯೆ ಪರಿಚಯ ಆಯಿತು. 2015ರಲ್ಲಿ ಕೃಷ್ಣ ಅವರು ಪ್ರೇಮ ನಿವೇದನೆ ಮಾಡಿದರು. ಮತ್ತು 2021ರಲ್ಲಿ ವಿವಾಹವಾದರು. ಕೆಲಸದಲ್ಲಿನ ಹತ್ತಿರದ ಸಂಬಂಧ ಮತ್ತು ಪರಸ್ಪರ ಗೌರವ ಅವರ ಪ್ರೇಮದ ಬೆಳವಣಿಗೆಗೆ ಕಾರಣವಾಯಿತು.

ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ