ನವಜಾತ ಶಿಶುವನ್ನು ಬಿಸಿಲಿನಲ್ಲಿ ಮಲಗಿಸಿ, ಹಾಲು ನೀಡದೆ, ಉಸಿರುಚೆಲ್ಲುವಂತೆ ಮಾಡಿದ ತಂದೆ

Viral News: ಈಗಷ್ಟೇ ಹುಟ್ಟಿದ ಮಗುವಿಗೆ ಹಾಲು ಕೊಡದೆ ಬಿಸಿಲಲ್ಲ ಮಲಗಿಸಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಷ್ಯಾದ ನ್ಯಾಯಾಲಯವು ಮ್ಯಾಕ್ಸಿಮ್ ಲ್ಯುಟಿ ಎಂಬಾತನಿಗೆ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಗುವಿನ ತಾಯಿ ಒಕ್ಸಾನಾ ಮಿರೊನೊವಾ ಮಾತನಾಡಿ, ಹೆರಿಗೆ ಆಸ್ಪತ್ರೆಗೆ ಕರೆದೊಯ್ಯುವಂತೆ ಎಷ್ಟೇ ಮನವಿ ಮಾಡಿದರೂ ಲ್ಯೂಟಿ ಒಪ್ಪಿರಲಿಲ್ಲ ಹಾಗಾಗಿ ಮಗು ಮನೆಯಲ್ಲೇ ಜನಿಸಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ನವಜಾತ ಶಿಶುವನ್ನು ಬಿಸಿಲಿನಲ್ಲಿ ಮಲಗಿಸಿ, ಹಾಲು ನೀಡದೆ, ಉಸಿರುಚೆಲ್ಲುವಂತೆ ಮಾಡಿದ ತಂದೆ
ಮಗು
Follow us
|

Updated on: Apr 17, 2024 | 11:36 AM

ಮ್ಯಾಕ್ಸಿಮ್ ಲ್ಯುಟಿ ಎಂಬಾತನ ಮಡದಿಗೆ ಮುದ್ದಾದ ಗಂಡು ಮಗು ಹುಟ್ಟಿತ್ತು. ಮಗು(Baby)ವಿಗೆ ಸೂರ್ಯನ ಕಿರಣಗಳು ತಾಕಿದರೆ ಅತಿಮಾನುಷ ಸಾಮರ್ಥ್ಯ ಆತನಿಗೆ ಬರುತ್ತದೆ ಎಂದು ನಂಬಿ ಹಾಲು ಕೊಡದೆ ಹಸುಗೂಸಿನ ಸಾವಿಗೆ ಕಾರಣವಾದ ವ್ಯಕ್ತಿಗೆ ನ್ಯಾಯಾಲಯವು 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ರಷ್ಯಾ(Russia)ದಲ್ಲಿ ನಡೆದ ಘಟನೆ ಇದಾಗಿದೆ, ಸಾಮಾನ್ಯವಾಗಿ ಚಳಿಗಾಲದಲ್ಲಿ ಅಥವಾ ಯಾವುದೇ ಸಂದರ್ಭದಲ್ಲಿ ಬೆಳಗ್ಗೆಯ ಎಳೆ ಬಿಸಿಲು ಮಗುವಿನ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಆದರೆ ಇಡೀ ದಿನ ಮಗುವನ್ನು ಬಿಸಿಲಿಗೊಡ್ಡಿ ಜೀವ ತೆಗೆಯುವುದು ಎಂಥಾ ಮೂಡನಂಬಿಕೆ.

ದುರಂತವೆಂದರೆ ಮಗು ಅಪೌಷ್ಠಿಕತೆ ಮತ್ತು ನ್ಯುಮೋನಿಯಾದಿಂದ ಬಳಲುತ್ತಿತ್ತು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದೆ. ಆತ ಉದ್ದೇಶಪೂರ್ವಕವಾಗಿಯೇ ಗಂಭೀರವಾದ ದೈಹಿಕ ಹಾನಿಯನ್ನು ಮಾಡಿದ್ದಾನೆ ಎಂದು ನ್ಯಾಯಾಲಯವು ಎಂಟು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಮಗುವಿನ ತಾಯಿ ಒಕ್ಸಾನಾ ಮಿರೊನೊವಾ ಮಾತನಾಡಿ, ಹೆರಿಗೆ ಆಸ್ಪತ್ರೆಗೆ ಕರೆದೊಯ್ಯುವಂತೆ ಎಷ್ಟೇ ಮನವಿ ಮಾಡಿದರೂ ಲ್ಯೂಟಿ ಒಪ್ಪಿರಲಿಲ್ಲ ಹಾಗಾಗಿ ಮಗು ಮನೆಯಲ್ಲೇ ಜನಿಸಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.

ಹುಟ್ಟಿದ ಮಗುವಿಗೆ ಹಾಲು ನೀಡುವ ಬದಲು ಬಿಸಿಲಲ್ಲಿ ಮಲಗಿಸಿದ, ಶಿಶುವಿಗೆ ಹಣ್ಣುಗಳನ್ನು ತಿನ್ನಿಸಿದ್ದ. ಒಕ್ಸಾನಾ ಗಂಡನ ಕಣ್ಣು ತಪ್ಪಿಸಿ ಮಗುವಿಗೆ ಎದೆಹಾಲುಣಿಸಲು ಪ್ರಯತ್ನಿಸುತ್ತಿದ್ದಳು ಆದರೆ ಕೊನೆಗೆ ಆತನಿಗೆ ಹೆದರಿ ಹಿಂದೆ ಸರಿಯುತ್ತಿದ್ದಳು.

ಮತ್ತಷ್ಟು ಓದಿ: Video Viral: ಮಾನವನ ಮುಖವನ್ನು ಹೋಳುವ ಜೇಡ ಪತ್ತೆ; ವಿಡಿಯೋ ವೈರಲ್​​​​ ಅನೇಕ ಬಾರಿ ಒಕ್ಸಾನಾ ಗಂಡನನ್ನು ತೊರೆಯ ಬಯಸಿದ್ದಳು, ಈ ವಾರ ಶಿಕ್ಷೆಗೆ ಮುನ್ನ ತನ್ನ ಅಂತಿಮ ನ್ಯಾಯಾಲಯದ ವಿಚಾರಣೆಗೆ ಹಾಜರಾದಾಗ ಪ್ರಭಾವಿ ಅಂತಿಮವಾಗಿ ತನ್ನ ಮಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು