AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾದಲ್ಲಿ ನ್ಯೂ ಇಯರ್​ ಸಂಭ್ರಮ: ಚಾಕೋಲೇಟ್​ ಹುಲಿ ತಯಾರಿಸಿ ಶುಭ ಕೋರಿದ ಪೇಸ್ಟ್ರಿ ವಿನ್ಯಾಸಕಾರ

ಫೆಬ್ರವರಿ 1 ರಂದು ಚೀನಾ ಹೊಸ ವರ್ಷವನ್ನು ಸ್ವಾಗತಿಸಿದೆ. ಈ ಹಿನ್ನಲೆಯಲ್ಲಿ ಅಮೊರಿ ಗುಯಿಚನ್ ವಿಶೇಷ ಚಾಕೋಲೇಟ್​ನ ಹುಲಿಯ ಕಲಾಕೃತಿ ತಯಾರಿಸಿದ್ದಾರೆ.

ಚೀನಾದಲ್ಲಿ ನ್ಯೂ ಇಯರ್​ ಸಂಭ್ರಮ: ಚಾಕೋಲೇಟ್​ ಹುಲಿ ತಯಾರಿಸಿ ಶುಭ ಕೋರಿದ ಪೇಸ್ಟ್ರಿ ವಿನ್ಯಾಸಕಾರ
ಚಾಕೋಲೇಟ್​ನಿಂದ ತಯಾರಾದ ಹುಲಿ
TV9 Web
| Updated By: Pavitra Bhat Jigalemane|

Updated on:Feb 02, 2022 | 5:40 PM

Share

ಖ್ಯಾತ ಪೇಸ್ಟ್ರಿ ಬಾಣಸಿಗ(Pastry Chef )ಅಮೊರಿ ಗುಯಿಚನ್ (Amaury Guichon) ಈ ಬಾರಿ ಚಾಕೋಲೇಟ್​ನಲ್ಲಿ​ ಹುಲಿಯನ್ನು ತಯಾರಿಸಿದ್ದಾರೆ. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸಖತ್​ ವೈರಲ್​ ಆಗಿದೆ. ಇವರು ಈಗಾಗಲೇ ವಿವಿಧ ಪ್ರಾಣಿ, ಮನುಷ್ಯರ ರೀತಿ ಚಾಕೋಲೇಟ್​ನಲ್ಲಿ ಆಕೃತಿಯನ್ನು ನಿರ್ಮಿಸಿ ಖ್ಯಾತಿಗಳಿಸಿದ್ದಾರೆ. ಇದೀಗ ಚೀನಾದ ಹೊಸ ವರ್ಷದ ಹಿನ್ನಲೆ ಹೊಸ ವರ್ಷದ ಶುಭಾಷಯಗಳನ್ನು ತಿಳಿಸಲು ಚಾಕೋಲೇಟ್​ನಲ್ಲಿ ಹುಲಿಯನ್ನು ತಯಾರಿಸಿದ್ದಾರೆ. ಫೆಬ್ರವರಿ 1 ರಂದು ಚೀನಾ ಹೊಸ ವರ್ಷವನ್ನು (China New Year) ಸ್ವಾಗತಿಸಿದೆ. ಈ ಹಿನ್ನಲೆಯಲ್ಲಿ ಅಮೊರಿ ಗುಯಿಚನ್ ವಿಶೇಷ ಕಲಾಕೃತಿ ತಯಾರಿಸಿದ್ದಾರೆ.  ಚಾಕೋಲೇಟ್​ ಹುಲಿದ ತಯಾರಿಕೆಯ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಮೊದಲು ಚಾಕೋಲೇಟ್​ಅನ್ನು ಹುಲಿಯ ವಿವಿಧ ಭಾಗಗಳ ಆಕೃತಿಯಲ್ಲಿ ತಯಾರಿಸಿಕೊಳ್ಳುತ್ತಾರೆ. ನಂತರ ಅದನ್ನು ಒಂದೊಂದಾಗಿ ಜೋಡಿಸಿ, ಬಣ್ಣವನ್ನು ಹಚ್ಚುತ್ತಾರೆ. ಹುಲಿಯ ಎಲ್ಲಾ ಭಾಗಗಳಲ್ಲಿ ಬೇಕಾದ ಬಣ್ಣವನ್ನು ಸ್ಪ್ರೇ ಮಾಡುತ್ತಾರೆ. ಕಣ್ಣು, ಹುಲಿಯ ಮೈಮೇಲಿನ ಪಟ್ಟೆಗಳು, ಮೀಸೆ ಎಲ್ಲವನ್ನೂ ತಮ್ಮ ಕೈಚಳಕದ ಮೂಲಕ ಮೂಡಿಸುತ್ತಾರೆ. ಇದೇನು ಮೊದಲ ಬಾರಿಯಲ್ಲ ಈ ಹಿಂದೆಯೂ ಅಮೊರಿ ಗುಯಿಚನ್ ಅನೇಕ ಆಕೃತಿಗಳನ್ನು ತಯಾರಿಸಿ ಜಗತ್ತಿನಾದ್ಯಂತ ಖ್ಯಾತಿ ಗಳಿಸಿದ್ದಾರೆ.

ಇದೀಗ ಚೀನಾದ ನ್ಯೂ ಇಯರ್​ ಸಂಭ್ರಮಕ್ಕೆ ಚಾಕಲೋಟ್​ಹುಲಿಯ ಆಕೃತಿ ತಯಾರಿಸಿದ ಅಮೊರಿ ಗುಯಿಚನ್ ಅದರೊಂದಿಗೆ ನಿಂತು ಪೋಸ್​ ನೀಡಿದ್ದಾರೆ. ಫೆ.1 ರಂದು ಹಂಚಿಕೊಂಡ ವಿಡಿಯೋ 4.7 ಲಕ್ಷ ಲೈಕ್ಸ್​ ಪಡೆದಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಇದನ್ನೂ ಓದಿ:

Viral Video; ಮೃಗಾಲಯದಲ್ಲಿದ್ದ ಕರಡಿ ಬೋನ್​ಗೆ 3 ವರ್ಷದ ಮಗುವನ್ನು ಎಸೆದ ಮಹಿಳೆ

Published On - 5:40 pm, Wed, 2 February 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ