AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರೂಮ್‌ಗೆ ಡ್ರಾಪ್ ಮಾಡಿದ ಯುವತಿಯ ಸುರಕ್ಷತೆಗಾಗಿ ಮಧ್ಯರಾತ್ರಿಯವರೆಗೆ ಕಾದು ನಿಂತ ರ್‍ಯಾಪಿಡೋ ಡ್ರೈವರ್

ಈಗಿನ ಕಾಲದಲ್ಲಿ ಹೆಣ್ಮಕ್ಕಳು ಭಯದಿಂದ ಓಡಾಡುವ ಸಂದರ್ಭವೇ ಹೆಚ್ಚು. ಈ ಆಟೋ ಅಥವಾ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಕೆಲ ಡ್ರೈವರ್‌ಗಳು ಅಸಭ್ಯವಾಗಿ ವರ್ತಿಸಿದ ಅನುಭವ ಕೆಲವರಿಗೆ ಆಗಿರುತ್ತದೆ. ಆದರೆ ಇಲ್ಲೊಬ್ಬ ಯುವತಿಯೂ ರ್‍ಯಾಪಿಡೋ ಚಾಲಕನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾಳೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು ನಡೆದ ಘಟನೆಯನ್ನು ವಿವರಿಸಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ರೂಮ್‌ಗೆ ಡ್ರಾಪ್ ಮಾಡಿದ ಯುವತಿಯ ಸುರಕ್ಷತೆಗಾಗಿ ಮಧ್ಯರಾತ್ರಿಯವರೆಗೆ ಕಾದು ನಿಂತ ರ್‍ಯಾಪಿಡೋ ಡ್ರೈವರ್
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Oct 01, 2025 | 4:23 PM

Share

ಈಗಿನ ಕಾಲದಲ್ಲಿ ಒಳ್ಳೆಯವರು ಸಿಗೋದೇ ಕಡಿಮೆ. ಅದರಲ್ಲೂ ಒಂಟಿ ಮಹಿಳೆ ಅಥವಾ ಯುವತಿ (Young woman) ಕಂಡರೆ ಅವರೊಂದಿಗೆ ಅಸಭ್ಯವಾಗಿ ವರ್ತಿಸುವ ಪುಂಡ ಪೋಕರಿಗಳನ್ನು ನೀವು ನೋಡಿರುತ್ತೀರಿ. ಕೆಲವೊಮ್ಮೆ ಇಂತಹ ಕಹಿ ಅನುಭವ ಕೂಡ ನಿಮಗೆ ಆಗಿರಬಹುದು. ಆದರೆ ರ್‍ಯಾಪಿಡೋ ಚಾಲಕ (Rapido driver) ಡ್ರಾಪ್ ನೀಡಿದ ಬಳಿಕ ಯುವತಿಯ ಪಾಲಿಗೆ ಅಣ್ಣನಾಗಿ ರಕ್ಷಣೆಗೆ ನಿಂತಿದ್ದಾನೆ. ಯುವತಿಯೂ ಸ್ವತಃ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಮಾಡಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದು ಅಷ್ಟಕ್ಕೂ ಆಗಿದ್ದೇನು ಎಂದು ಹೇಳಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ರ್‍ಯಾಪಿಡೋ ಚಾಲಕನ ಒಳ್ಳೆತನಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ರ್‍ಯಾಪಿಡೋ ಚಾಲಕನ ಒಳ್ಳೆತನವನ್ನು ಹಾಡಿ ಹೊಗಳಿದ ಯುವತಿ

laughtercolours ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಯುವತಿಯೂ ಹೀಗೆ ಹೇಳಿಕೊಂಡಿದ್ದಾಳೆ. ನಾನು ಗಾರ್ಭ ನೈಟ್‌ ಕಾರ್ಯಕ್ರಮಕ್ಕೆ ಹೋಗಿದ್ದು, ತಡವಾಗಿ ಬಂದೆ. ಆದರೆ ಹೋಗುವ ವೇಳೆ ನಾನು ಕೀ ಬಿಟ್ಟು ಹೋಗಿದೆ. ಇತ್ತ ನನ್ನ ಸ್ನೇಹಿತೆ ಲಾಕ್ ಮಾಡ್ಕೊಂಡು ಹೋಗಿದ್ದು, ಹೊರಗೆ ನಿಲ್ಲುವಂತಾಯಿತು. ಈ ವಿಚಾರ ತಿಳಿದ ರ್‍ಯಾಪಿಡೋ ಚಾಲಕ ನಿಮ್ಮ ಸ್ನೇಹಿತೆ ಬಂದು ನೀವು ಒಳಗೆ ಹೋಗುವವರೆಗೂ ನಾನು ಇಲ್ಲೇ ನಿಂತಿರುತ್ತೇನೆ ಎಂದು ಹೇಳಿದ್ದ. ಆದರೆ ಮಧ್ಯರಾತ್ರಿಯ ಸಮಯವಾಗಿತ್ತು. ಹೀಗಾಗಿ ನಾನು ಅವರಿಗೆ ಹೋಗಿ ಎಂದು ಹೇಳಿದ್ರೂ ಇಲ್ಲಿ ನನ್ನ ಸುರಕ್ಷತೆಗಾಗಿ ನಿಂತಿರುವುದನ್ನು ನೀವು ನೋಡಬಹುದು. ತುಂಬಾ ಒಳ್ಳೆಯ ವ್ಯಕ್ತಿ ಎಂದಿದ್ದಾಳೆ.

ಇದನ್ನೂ ಓದಿ
Image
ಅಗಲಿದ ಶ್ವಾನದ ಫೋಟೋವನ್ನು ಆಟೋದಲ್ಲಿ ಇರಿಸಿದ ಬೆಂಗಳೂರಿನ ಆಟೋ ಚಾಲಕ
Image
ರೈಲಿನಲ್ಲಿ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೊಡಿ ಎಂದ ಅಜ್ಜಿ
Image
ಡ್ರಾಪಿಂಗ್ ಪಾಯಿಂಟ್‌ನಲ್ಲೇ ಇಳಿಬೇಕು ಎಂದ ಚಾಲಕನ ಜೊತೆಗೆ ಜಗಳಕ್ಕಿಳಿದ ಮಹಿಳೆ
Image
ಊಬರ್ ಚಾಲಕ ಕ್ಯಾನ್ಸಲ್ ಮಾಡಿದ್ರೂ, 5 ಸ್ಟಾರ್ ರೇಟಿಂಗ್ ಕೊಟ್ಟ ಪ್ರಯಾಣಿಕ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಡ್ರಾಪಿಂಗ್ ಪಾಯಿಂಟ್‌ನಲ್ಲೇ ಇಳಿಬೇಕು ಎಂದ ಚಾಲಕನ ಜೊತೆಗೆ ಜಗಳಕ್ಕಿಳಿದ ಮಹಿಳೆ

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂತಹ ಒಳ್ಳೆಯ ವ್ಯಕ್ತಿಗಳು ಇರುವುದರಿಂದ ಕಾಲ ಕಾಲಕ್ಕೆ ಬೆಳೆ ಮಳೆ ಆಗುತ್ತಿರುತ್ತದೆ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಇವ್ರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ. ಮತ್ತೊಬ್ಬರು, ಎಲ್ಲರೂ ಕೆಟ್ಟವರು ಎಂದು ಹೇಳುವುದು ಕಷ್ಟ. ಒಳ್ಳೆಯವರು ಇದ್ದಾರೆ, ಆದರೆ ಇಂತಹ ಘಟನೆ ಗಳು ಆದಾಗ ನಮಗೆ ತಿಳಿಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Wed, 1 October 25

Follow Us
Sainandha P
Sainandha P

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?