AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಡರ್ ಮಾಡಿದ್ದು ಮಟರ್ ಪನೀರ್, ಪಾರ್ಸೆಲ್​ನಲ್ಲಿ ಬಂದದ್ದು ಚಿಕನ್ ಕರಿ; ಹೊಟೇಲ್​ಗೆ 20,000 ರೂಪಾಯಿ ದಂಡ

ಸಸ್ಯಹಾರಿ ಗ್ರಾಹಕರಿಗೆ ಮಟರ್ ಪನೀರ್ ಬದಲಿಗೆ ಚಿಕನ್ ಕರಿ ವಿತರಿಸಿದ ಗ್ವಾಲಿಯರ್‌ನಲ್ಲಿರುವ ಜಿವಾಜಿ ಕ್ಲಬ್ ಎಂಬ ರೆಸ್ಟೋರೆಂಟ್​ಗೆ 20,000 ರೂಪಾಯಿ ದಂಡ ವಿಧಿಸಲಾಗಿದೆ.

ಆರ್ಡರ್ ಮಾಡಿದ್ದು ಮಟರ್ ಪನೀರ್, ಪಾರ್ಸೆಲ್​ನಲ್ಲಿ ಬಂದದ್ದು ಚಿಕನ್ ಕರಿ; ಹೊಟೇಲ್​ಗೆ 20,000 ರೂಪಾಯಿ ದಂಡ
ಮಟರ್ ಪನೀರ್ ಮತ್ತು ಚಿಕನ್ ಕರಿ
TV9 Web
| Updated By: Rakesh Nayak Manchi|

Updated on: Jul 18, 2022 | 6:54 PM

Share

ಆಹಾರ ವಿತರಣಾ ಅಪ್ಲಿಕೇಶನ್‌ಗಳು ನಮ್ಮ ಜೀವನವನ್ನು ತುಲನಾತ್ಮಕವಾಗಿ ಸುಲಭಗೊಳಿಸಿದರೂ ಕೆಲವೊಮ್ಮೆ ಆಗುವ ತಪ್ಪುಗಳು ಗಂಭೀರವಾಗಿ ಪರಿಣಮಿಸುತ್ತದೆ. ಆರ್ಡರ್ ಮಾಡುವುದು ಒಂದು, ಕೈಗೆ ತಲುಪುದು ಇನ್ನೊಂದು, ಈ ರೀತಿಯ ಘಟನೆಗಳು ಆಗಾಗೆ ನಡೆಯುತ್ತಿರುತ್ತದೆ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದ್ದು, ಪರಿಣಾಮವಾಗಿ ಹೊಟೇಲ್​ಗೆ 20ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಗ್ವಾಲಿಯರ್‌ನಲ್ಲಿರುವ ಜಿವಾಜಿ ಕ್ಲಬ್ ಎಂಬ ರೆಸ್ಟೋರೆಂಟ್​ ಸಸ್ಯಹಾರಿ ಗ್ರಾಹಕರಿಗೆ ಮಟರ್ ಪನೀರ್ ಬದಲಿಗೆ ಚಿಕನ್ ಕರಿ ವಿತರಿಸಿ ತಕ್ಷ ಶಿಕ್ಷೆಯನ್ನು ಅನುಭವಿಸಿದೆ. 

ವಕೀಲ ಸಿದ್ಧಾರ್ಥ್ ಶ್ರೀವಾಸ್ತವ ಎಂಬವರು ಜಿವಾಜಿ ಕ್ಲಬ್ ರೆಸ್ಟೋರೆಂಟ್​ನಿಂದ ಝೋಮ್ಯಾಟೊ ಮೂಲಕ ಮಟರ್ ಪನೀರ್ ಅನ್ನು ಆರ್ಡರ್ ಮಾಡಿದ್ದರು. ಅದರಂತೆ ಆರ್ಡರ್ ಬಂದು ಕೈಸೇರಿದಾಗ ಮಟರ್ ಪನೀರ್ ಬದಲಿಗೆ ಚಿಕನ್ ಕರಿಯನ್ನು ತಪ್ಪಾಗಿ ನೀಡಿರುವುದು ತಿಳಿದುಬಂದಿದೆ. ಇದರಿಂದ ಅಸಮಧಾನಗೊಂಡ ಸಿದ್ಧಾರ್ಥ್, ಗ್ರಾಹಕರ ವೇದಿಕೆಯ ಬಾಗಿಲು ತಟ್ಟಿದರು. ಕ್ಲಬ್‌ನ ಅಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಿದ್ಧಾರ್ಥ್ ಆರೋಪಿಸಿದ್ದು, ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಾಗಿದೆ.

ಘಟನೆಯಿಂದ ಕುಟುಂಬಕ್ಕೆ ಮಾನಸಿಕ ಮತ್ತು ದೈಹಿಕವಾಗಿ ತೊಂದರೆಯಾಗಿದೆ ಎಂದು ಹೇಳಿದ ಗ್ರಾಹಕರ ವೇದಿಕೆ, ದೂರುದಾರರು ಕಾನೂನು ಹೋರಾಟದ ಸಂದರ್ಭದಲ್ಲಿ ಮಾಡಿದ ವೆಚ್ಚವನ್ನು ಮರುಪಾವಿತಿಸುವಂತೆ ಸೂಚಿಸಿ 20,000 ರೂ. ದಂಡ ವಿಧಿಸಿ ನಿರ್ದೇಶನ ಹೊರಡಿಸಿದೆ.

ವೇದಿಕೆಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಫ್ರೀ ಪ್ರೆಸ್ ಜರ್ನಲ್ ವರದಿ ಮಾಡಿದ್ದು, “ಇದು ಸೇವೆಯ ಕೊರತೆಯಾಗಿದ್ದು, ನಿರ್ಲಕ್ಷ್ಯದ ಪ್ರಕರಣವೂ ಆಗಿದೆ. ದೂರುದಾರರಿಗೆ ಮಾನಸಿಕ ಮತ್ತು ದೈಹಿಕ ತೊಂದರೆಯಾಗಿದ್ದು, ದಂಡದ ಮೊತ್ತದ ಜೊತೆಗೆ ದೂರುದಾರರು ವೇದಿಕೆ ಮೂಲಕ ಮಾಡಿದ ಕಾನೂನು ಹೋರಾಟಕ್ಕೆ ವ್ಯಯಿಸಿದ ವೆಚ್ಚವನ್ನು ಸಹ ಕ್ಲಬ್ ಪಾವತಿಸಬೇಕಾಗುತ್ತದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ