AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ತೈವಾನ್​ನಲ್ಲಿ ಭೂಕಂಪ; ಆಟಿಕೆಯಂತೆ ಅಲ್ಲಾಡಿದ ರೈಲು

Earthquake : ತೈವಾನ್​ನ ರೈಲ್ವೇಸ್ಟೇಷ್​ನಲ್ಲಿ ನಿಂತಿದ್ದ ರೈಲು ಆಟಿಕೆಯಂತೆ ಅಲ್ಲಾಡಿದ ವಿಡಿಯೋ ವೈರಲ್ ಆಗಿದೆ. ಭೂಕಂಪದ ಹಿನ್ನೆಲೆಯಲ್ಲಿ ಸುನಾಮಿಯೂ ಏಳುವ ಸಾಧ್ಯತೆ ಇದೆ.

Viral Video : ತೈವಾನ್​ನಲ್ಲಿ ಭೂಕಂಪ; ಆಟಿಕೆಯಂತೆ ಅಲ್ಲಾಡಿದ ರೈಲು
ತೈವಾನ್​ನಲ್ಲಿ ಭೂಕಂಪಕ್ಕೊಳಗಾದಾಗ ಅಲ್ಲಾಡಿದ ರೈಲು
TV9 Web
| Edited By: |

Updated on:Sep 19, 2022 | 11:01 AM

Share

Viral Video : ತೈವಾನ್​ನಲ್ಲಿ ನಿನ್ನೆ ತೀವ್ರ ಭೂಕಂಪ ಸಂಭವಿಸಿದೆ. ಆಗ್ನೇಯ ಕರಾವಳಿಯಲ್ಲಿ ಸಂಭವಿಸಿದ ಈ ಭೂಕಂಪ 6.9 ತೀವ್ರತೆಯಿಂದ ಕೂಡಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ಭೂಕಂಪದ ಹಿನ್ನೆಲೆಯಲ್ಲಿ ಜಪಾನ್​ ಸುನಾಮಿಯ ಎಚ್ಚರಿಕೆಯನ್ನೂ ನೀಡಿದೆ. ಎನ್‌ಡಿಟಿವಿ ಪತ್ರಕರ್ತ ಉಮಾಶಂಕರ್ ಸಿಂಗ್ ಹಂಚಿಕೊಂಡಿರುವ ವಿಡಿಯೋದಲ್ಲಿ, ರೈಲುನಿಲ್ದಾಣದಲ್ಲಿ ನಿಂತಿರುವ ರೈಲು ಆಟಿಕೆ ಸಾಮಾನಿನಂತೆ ಅಲುಗಾಡುತ್ತಿರುವುದನ್ನು ನೋಡಬಹುದಾಗಿದೆ.

ರಾಯಿಟರ್ಸ್ ವರದಿಯ ಪ್ರಕಾರ, ಭೂಕಂಪವು ತೈತುಂಗ್​ನ ಉತ್ತರ ಭಾಗದಲ್ಲಿ ಮಧ್ಯಾಹ್ನ 2.44ಕ್ಕೆ ಸಂಭವಿಸಿದೆ. 10 ಕಿ.ಮೀ ಆಳದಿಂದ ಉಂಟಾದ ಕಂಪನವು ಸುಮಾರು 50 ಕಿ.ಮೀ. ಪ್ರದೇಶವನ್ನು ಆವರಿಸಿಕೊಂಡಿತ್ತು. ಯುಲಿ ಪ್ರದೇಶದಲ್ಲಿ ಶನಿವಾರ ಭೂಕಂಪನವು ಸಂಭವಿಸಿದ್ದು ನಂತರ ಅಲ್ಲಲ್ಲಿ ಭೂಕಂಪಗಳು  ಸಂಭವಿಸಲಾರಂಭಿಸಿದವು. ಯುಲಿಯಲ್ಲಿ ಮೊದಲ ಕಂಪನವಾದಾಗ ತೀವ್ರತೆ 6.6 ಇತ್ತು. ಆದರೆ ಭಾನುವಾರದ ಹೊತ್ತಿಗೆ ಈ ಕಂಪನ ಪ್ರಬಲವಾಗುತ್ತ ಹೋಯಿತು ಎಂದು ವರದಿಗಳು ತಿಳಿಸಿವೆ.

ಫ್ಯೂಜಿಯಾನ್, ಗುವಾಂಗ್‌ಡಾಂಗ್, ಜಿಯಾಂಗ್‌ಸು ಮತ್ತು ಶಾಂಘೈ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಕಂಪನ ಸ್ಪಷ್ಟವಾಗಿ ಕಂಡುಬಂದಿದೆ. ಈ ಎಲ್ಲ ಪರಿಣಾಮವಾಗಿ ಸುನಾಮಿ ಸಂಭವಿಸುವ ಅಪಾಯವಿದ್ದು, ಇಂದು ಸಂಜೆ ಸುಮಾರು 4 ಗಂಟೆಗೆ ಒಂದು ಮೀಟರ್‌ನಷ್ಟು ಎತ್ತರದ ಅಲೆಗಳುಂಟಾಗುವ ನಿರೀಕ್ಷೆ ಇದೆ. ಈ ಪರಿಣಾಮವಾಗಿ ಜಪಾನಿನ ಹವಾಮಾನ ಸಂಸ್ಥೆ ತೈವಾನ್ ಸುತ್ತಮುತ್ತಲಿನ ದ್ವೀಪಗಳಿಗೆ ಎಚ್ಚರಿಕೆ ಮತ್ತು ಸಲಹೆಗಳನ್ನು ನೀಡಿದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 10:59 am, Mon, 19 September 22

ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಗಾಂಜಾ ಪೆಡ್ಲರ್ ಜತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ: ಜನಾರ್ದನ ರೆಡ್ಡಿ ಆರೋಪ
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ
ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ